• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕೃಷಿ ಸುಧಾರಣಾ ಕಾಯ್ದೆಯ ಬಗ್ಗೆ ತಪ್ಪು ಮಾಹಿತಿ ಎಂದ ಮೋದಿ; ವಾಸ್ತವಾಂಶವೇನು?

by
September 20, 2020
in ದೇಶ
0
ಕೃಷಿ ಸುಧಾರಣಾ ಕಾಯ್ದೆಯ ಬಗ್ಗೆ ತಪ್ಪು ಮಾಹಿತಿ ಎಂದ ಮೋದಿ; ವಾಸ್ತವಾಂಶವೇನು?
Share on WhatsAppShare on FacebookShare on Telegram

ಇಂದು ದೇಶದಲ್ಲಿ ಅತೀ ಹೆಚ್ಚು ಚರ್ಚಿತವಾಗುತ್ತಿರುವ ವಿಷಯ ಎಂದರೆ ಕೇಂದ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರವು ತರಲು ಉದ್ದೇಶಿಸಿರುವ ಕೃಷಿ ಸುಧಾರಣಾ ಕಾಯ್ದೆ. ಇದಕ್ಕೆ ದೇಶಾದ್ಯಂತ ಅನೇಕ ಕಡೆಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ರೈತರ ಬದುಕು ಇನ್ನಷ್ಟು ಸಂಕಷ್ಟಮಯ ಆಗಲಿದೆ ಎಂದು ವಿರೋಧ ಪಕ್ಷಗಳು ಬೊಬ್ಬೆ ಹೊಡೆಯುತ್ತಿವೆ. ಪ್ರಧಾನಿ ಮೋದಿ ಅವರ ಸಹೋದ್ಯೋಗಿ ಕೃಷಿ ಸಚಿವೆ ಈ ಉದ್ದೇಶಿತ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರಾಜೀನಾಮೆಯನ್ನೂ ನೀಡಿದ್ದಾರೆ. ಆದರೆ ಮೋದಿ ಅವರು ತಮ್ಮ ಸರ್ಕಾರ ತರಲು ಹೊರಟಿರುವ ಶುಕ್ರವಾರ, ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತದ ರೈತರಿಗೆ ಭರವಸೆ ನೀಡಿ ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುವುದಿಲ್ಲ ಎಂಬ ‘ತಪ್ಪು ಮಾಹಿತಿಯಿಂದ’ ತತ್ತರಿಸಬೇಡಿ ಎಂದು ಮನವಿ ಮಾಡಿದ್ದಾರೆ. ಕಳೆದ ಕೆಲವು ವಾರಗಳಿಂದ – ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ ರೈತರು ಈ ವರ್ಷದ ಮೇ ತಿಂಗಳಲ್ಲಿ ಜಾರಿಗೆ ತರಲಾದ ಮೂರು ಕೃಷಿ ಸುಗ್ರೀವಾಜ್ಞೆಗಳನ್ನು ಪ್ರತಿಭಟಿಸುತ್ತಿದ್ದಾರೆ ಮತ್ತು ಭಾರತೀಯ ಜನತಾ ಪಕ್ಷದ ಮಿತ್ರ ಪಕ್ಷ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳ ವಿರೋಧದ ನಡುವೆ ಮಂಗಳವಾರ ಲೋಕಸಭೆ ಕೃಷಿ ಸುಧಾರಣಾ ಕಾಯ್ದೆಗಳನ್ನು ಅಂಗೀಕರಿಸಿದೆ. ಶಿರೋಮಣಿ ಅಕಾಲಿ ದಳ (ಎಸ್‌ಎಡಿ). ನಾಯಕಿ ಹರ್ಸಿಮ್ರತ್ ಕೌರ್ ಬಾದಲ್ ಅವರು ಮೂರು ಕೃಷಿ ಮಸೂದೆಗಳನ್ನು ‘ರೈತ ವಿರೋಧಿ’ ಎಂದು ಬಣ್ಣಿಸಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ADVERTISEMENT

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹಾಗಾದರೆ, ಮೂರು ಕೃಷಿ ಕಾಯ್ದೆಗಳ ವಿಷಯ ಏಕೆ ವಿವಾದಾಸ್ಪದವಾಗಿದೆ?

ಕಾಯ್ದೆಯು ಈ ಮೂರು ಇದರ ಗುರಿಯನ್ನು ಹೊಂದಿದೆ ಎಂದು ಸರ್ಕಾರವು ಹೇಳುತ್ತಿದೆ.

1) ಅಗತ್ಯವೆಂದು ಪರಿಗಣಿಸಲಾದ ಕೆಲವು ಸರಕುಗಳ ಬೆಲೆಗಳು ಮತ್ತು ಪ್ರಮಾಣವನ್ನು ನಿಯಂತ್ರಿಸಲು ಅಗತ್ಯ ಸರಕುಗಳ ಕಾಯ್ದೆಗೆ ತಿದ್ದುಪಡಿ ಮಾಡುವುದು,

2) ಗುತ್ತಿಗೆ ಕೃಷಿಗೆ ಅವಕಾಶ ಮತ್ತು ಅನುಕೂಲ

3) ‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಮಂಡಿಗಳ ಗಡಿಯ ಹೊರಗೆ ಖಾಸಗಿ ಮಾರುಕಟ್ಟೆಗಳನ್ನು ಸ್ಥಾಪಿಸಲು ಅವಕಾಶ ನೀಡುವುದು.

ಮುಖ್ಯವಾಗಿ ಮೂರನೇ ಅಂಶವು ರೈತರನ್ನು ಕೆರಳಿಸಿದೆ. ಎಪಿಎಂಸಿಯ ಚಾಲ್ತಿಯಲ್ಲಿರುವ ಪ್ರಾಬಲ್ಯ ಕುಸಿದ ನಂತರ, ಖಾಸಗಿ ಸಂಸ್ಥೆಗಳು/ವ್ಯಾಪಾರಿಗಳು/ದಳ್ಳಾಳಿಗಳು ಬೆಲೆಯನ್ನು ನಿರ್ಧರಿಸುತ್ತಾರೆ ಎಂಬುದು ರೈತರ ಅತಂಕಕ್ಕೆ ಕಾರಣವಾಗಿದೆ. ಅದರೆ ಈಗಾಗಲೇ ಅನೇಕ ರಾಜ್ಯಗಳಲ್ಲಿ ಕೃಷಿ ಸರಕುಗಳು ಎಪಿಎಂಸಿ ವ್ಯಾಪ್ತಿಯ ಹೊರಗೆ ಮಾರಾಟ ಆಗುತ್ತಿರುವುದು ಸತ್ಯವೇ ಆಗಿದೆ. ಎಪಿಎಂಸಿಗಳ ಹೊರಗೆ ಒಮ್ಮೆ ಖಾಸಗಿ ಮಾರುಕಟ್ಟೆಗಳನ್ನು ಸ್ಥಾಪಿಸಿದರೆ, ಎಪಿಎಂಸಿಯಲ್ಲಿ ಖರೀದಿದಾರರು ಕಡಿಮೆ ಆಗುತ್ತಾರೆ ಎಂದು ರೈತರು ಮತ್ತು ರೈತ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.

ಏಕೆಂದರೆ ಹೊಸ ಶಾಸನದ ಪ್ರಮುಖ ಲಕ್ಷಣವೆಂದರೆ ‘ವ್ಯಾಪಾರ ಪ್ರದೇಶಗಳಲ್ಲಿ’ ಹೊಸ ಮಾರುಕಟ್ಟೆಗಳಲ್ಲಿ ಯಾವುದೇ ಮಾರುಕಟ್ಟೆ ಶುಲ್ಕ, ಸೆಸ್ ಅಥವಾ ಲೆವಿಗಳನ್ನು ರೈತ ಅಥವಾ ವ್ಯಾಪಾರಿಗಳಿಗೆ ವಿಧಿಸಲಾಗುವುದಿಲ್ಲ. ಅದರೆ ಹಳೆಯ ವ್ಯವಸ್ಥೆಯಡಿಯಲ್ಲಿ, ಈ ಶುಲ್ಕಗಳು ವಹಿವಾಟಿನ ಗಮನಾರ್ಹ ಪ್ರಮಾಣವನ್ನು ಹೊಂದಿವೆ. ಪಂಜಾಬ್‌ನಲ್ಲಿ ಈ ಶುಲ್ಕ 8.5% ರಷ್ಟು ಇದೆ. ಆದ್ದರಿಂದ, ಹೊಸ ಕಾಯ್ದೆಯು ವ್ಯಾಪಾರಿಗಳು ಸ್ಥಾಪಿಸಿದ ಖಾಸಗಿ ಮಾರುಕಟ್ಟೆಗಳ ಪರವಾಗಿ ನಿಲುವು ಹೊಂದಿದೆ. ಎಂದು ಎಂದು ಸಾಮಾಜಿಕ ವಿಜ್ಞಾನಿ ಮತ್ತು ರಾಜಕಾರಣಿ ಯೋಗೇಂದ್ರ ಯಾದವ್ ಹೇಳುತ್ತಾರೆ, ಅವರು ಕಳೆದ ಕೆಲವು ವರ್ಷಗಳಿಂದ ರೈತ ಚಳುವಳಿಗಳ ನಾಯಕರಾಗಿ ದುಡಿಯುತಿದ್ದಾರೆ. ಎಪಿಎಂಸಿಯ ಹೊರಗೆ ಯಾವುದೇ ತೆರಿಗೆಗಳಿಲ್ಲದಿದ್ದರೆ ಯಾರೂ ಕೂಡ ಎಪಿಎಂಸಿಗಳಿಗೆ ಹೋಗುವುದಿಲ್ಲ. ವ್ಯಾಪಾರಿಗಳು ಹೊರಗೆ ಖರೀದಿಸಲು ಅಗ್ಗವಾಗುತ್ತಾರೆ. ಎಪಿಎಂಸಿಗಳ ಹೊರಗೆ ಆಮಿಷವೊಡ್ಡಲು ಅವರು ತಮ್ಮ ಲಾಭದ ಪ್ರಮಾಣವನ್ನು ಸಹ ರೈತರಿಗೆ ನೀಡಬಹುದು ಮತ್ತು ಎರಡು ಮೂರು ವರ್ಷಗಳಲ್ಲಿ ಎಪಿಎಂಸಿ ಗಳು ಸಂಪೂರ್ಣ ನೆಲ ಕಚ್ಚುತ್ತವೆ ಎಂದು ಅವರು ಹೇಳುತ್ತಾರೆ.

Also Read: ಕೃಷಿ ಸುಗ್ರೀವಾಜ್ಞೆ; ಟ್ರ್ಯಾಕ್ಟರ್‌ ಬೀದಿಗಿಳಿಸಿ ಪ್ರತಿಭಟಿಸಿದ ಸಾವಿರಾರು ರೈತರು

ಎಪಿಎಂಸಿಗಳು ಮುಚ್ಚಿದ ನಂತರ ‘ಮುಕ್ತ ಮಾರುಕಟ್ಟೆಗಳು’ ವ್ಯಾಪಾರಿಗಳ ತಾಳಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತವೆ, ಅಲ್ಲಿ ವ್ಯಾಪಾರಿಗಳು ಗುಂಪು ಮಾಡಿಕೊಂಡು ಬೆಲೆಯನ್ನು ನಿಗದಿಪಡಿಸಲು ಒಗ್ಗೂಡುತ್ತಾರೆ. ಖಾಸಗಿ ಮಾರುಕಟ್ಟೆಗಳು ಪ್ರವರ್ಧಮಾನಕ್ಕೆ ಬರಲು ಅನುವು ಮಾಡಿಕೊಡುವ ಪರವಾದ ವಾದವೆಂದರೆ, ಇದು ಅಂತಿಮವಾಗಿ ರೈತರಿಗೆ ಪ್ರಯೋಜನವಿದೆ ಏಕೆಂದರೆ ‘ಮುಕ್ತ ವ್ಯಾಪಾರ’ ನಡೆಯುತ್ತದೆ ಮತ್ತು ಮಾರುಕಟ್ಟೆ ಪೂರ್ಣ ಸ್ಪರ್ಧೆಗೆ ಹತ್ತಿರವಾಗುವುದರಿಂದ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತದೆ ಎಂದು ಖಚಿತಪಡಿಸುತ್ತದೆ.ಈ ಮಸೂದೆಗಳು ಸ್ಪರ್ಧೆಯನ್ನು ಹೆಚ್ಚಿಸುತ್ತದೆ ಮತ್ತು ಖಾಸಗಿ ಹೂಡಿಕೆಯನ್ನು ಉತ್ತೇಜಿಸುತ್ತದೆ, ಇದು ಕೃಷಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಮತ್ತು ಉದ್ಯೋಗವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಕೃಷಿ ಸಚಿವ ನರೇಂದ್ರ ತೋಮರ್ ಇತ್ತೀಚೆಗೆ ಹೇಳಿದರು. ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸಿದ ದೇಶದ ಏಕೈಕ ರಾಜ್ಯ ಬಿಹಾರ ಅಗಿದ್ದು ಅಲ್ಲಿ 2006 ರಲ್ಲಿಯೇ ಎಪಿಎಂಸಿಯನ್ನು ರದ್ದುಪಡಿಸಿ ಖಾಸಗಿ ಮಾರುಕಟ್ಟೆಗೆ ಅನುವು ಮಾಡಿಕೊಡಲಾಯಿತು. ಎಪಿಎಂಸಿಯಲ್ಲಿ ಪಾರದರ್ಶಕ ಹರಾಜು ಮೂಲಕ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುತಿತ್ತು. ಅದರೆ ಖಾಸಗೀ ಮಂಡಿಗಳಲ್ಲಿ ಹರಾಜು ಅಸ್ತಿತ್ವದಲ್ಲಿಲ್ಲ, ಇದು ರೈತರಿಗೆ ಕಡಿಮೆ ಬೆಲೆ ದೊರೆಯಲು ಕಾರಣವಾಗುತ್ತದೆ ಎನ್ನಲಾಗುತ್ತಿದೆ. ಉದಾಹರಣೆಗೆ, ಬಿಹಾರದಲ್ಲಿ ಮೆಕ್ಕೆಜೋಳದ ಬೆಲೆ ಕಳೆದ ವರ್ಷ ಕ್ವಿಂಟಲ್‌ಗೆ ಸುಮಾರು 2,200 ರೂ.ಗಳಿಂದ ಈ ವರ್ಷ ಕ್ವಿಂಟಲ್‌ಗೆ 1,300 ಕ್ಕೆ ಇಳಿದಿದೆ.

Also Read: ಸರ್ಕಾರ ಕೃಷಿ ವಲಯ ಬಲಪಡಿಸಿದರೆ ಮಾತ್ರ ದೇಶ ಸದೃಢಗೊಳ್ಳಬಹುದು

ಕೃಷಿ ಮತ್ತು ಆಹಾರ ನೀತಿ ತಜ್ಞ ದೇವಿಂದರ್ ಶರ್ಮಾ ಗಮನಿಸಿದಂತೆ, ಬಿಹಾರ ಪ್ರಯೋಗವು ರೈತರ ಪರವಾಗಿ ಕೆಲಸ ಮಾಡಿಲ್ಲ ಎಂದು ಪುರಾವೆಗಳು ಸೂಚಿಸುತ್ತವೆ. ಮಾರುಕಟ್ಟೆ ಮೂಲಸೌಕರ್ಯದಲ್ಲಿ ಖಾಸಗಿ ವಲಯದ ಹೂಡಿಕೆಗಳನ್ನು ಆಕರ್ಷಿಸುವುದು ಇದರ ಉದ್ದೇಶವಾಗಿತ್ತು, ಅಲ್ಲಿ ಉತ್ತಮ ಮಾರುಕಟ್ಟೆಗಳು ಉತ್ತಮ ಬೆಲೆ ಆವಿಷ್ಕಾರಕ್ಕಾಗಿ ಒದಗಿಸುತ್ತವೆ ಎಂದು ನಿರೀಕ್ಷಿಸಲಾಗಿದೆ. ದುರದೃಷ್ಟವಶಾತ್, ಅಂತಹ ಏನೂ ಸಂಭವಿಸಲಿಲ್ಲ ಎಂದು ಅವರು ಹೇಳಿದ್ದಾರೆ. ರೈತ ಮತ್ತು ರೈತ ಮುಖಂಡರಿಗೆ ಇರುವ ಮತ್ತೊಂದು ಭಯವೆಂದರೆ, ಹೊಸ ಶಾಸನವು ಕನಿಷ್ಟ ಬೆಂಬಲ ಬೆಲೆಯಲ್ಲಿ ಖರೀದಿಯ ಪ್ರಮಾಣವನ್ನು ಕಡಿಮೆ ಮಾಡಲು ದಾರಿ ಮಾಡಿಕೊಡುತ್ತದೆ.

ಸದ್ಯಕ್ಕೆ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಇರಲಿದೆ ಎಂದು ಕೇಂದ್ರವು ರೈತರಿಗೆ ಭರವಸೆ ನೀಡಿದೆ. ಎಂಎಸ್‌ಪಿ ಉಳಿಯುತ್ತದೆ, ನಿಮ್ಮೆಲ್ಲರಿಗೂ ಭರವಸೆ ನೀಡಲು ನಾನು ಬಯಸುತ್ತೇನೆ ಎಂದು ಕೃಷಿ ಸಚಿವ ನರೇಂದ್ರ ತೋಮರ್ ಹೇಳಿದ್ದಾರೆ. ಈ ವಿಷಯದ ಬಗ್ಗೆ ಕೇಂದ್ರ ಸಚಿವ ಸ್ಥಾನದಿಂದ ಹೊರಬಂದ ಬಿಜೆಪಿ ಮಿತ್ರ ಬಾದಲ್ ಅವರ ಪ್ರಕಾರ ರೈತರು ಪಂಜಾಬ್‌ನಲ್ಲಿ ಮಾತ್ರವಲ್ಲದೆ ಹರಿಯಾಣ, ರಾಜಸ್ಥಾನ, ಯುಪಿ, ಮಹಾರಾಷ್ಟ್ರದಲ್ಲೂ ಆಂದೋಲನ ನಡೆಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ವಿರೋಧವಿದೆ, ಎಂದು ಅವರು ಹೇಳಿದರು. ಇತರ ರಾಜ್ಯಗಳಲ್ಲಿ ಕೂಡ ಪ್ರತಿಭಟನೆ ನಡೆದಿದೆ ಎಂದು ಯಾದವ್ ಹೇಳುತ್ತಾರೆ. ಆದರೆ ಪಂಜಾಬ್‌ ಮತ್ತು ಹರ್ಯಾಣ ಪ್ರತಿಭಟನೆಯನ್ನು ಮುನ್ನಡೆಸುತ್ತಿವೆ. ಮತ್ತೊಂದು ಪ್ರಮುಖ ಅಂಶವೆಂದರೆ, ಈ ಎರಡು ರಾಜ್ಯಗಳಲ್ಲಿ ಎಂಎಸ್‌ಪಿಯಲ್ಲಿ ರಾಜ್ಯ ಖರೀದಿ ವಿಶೇಷವಾಗಿ ಪ್ರಬಲವಾಗಿದೆ. ಪಂಜಾಬ್ ಮತ್ತು ಹರಿಯಾಣದ ಮಾರುಕಟ್ಟೆಗಳಲ್ಲಿ ಮಾರಾಟವಾಗುವ 85% ಮತ್ತು 90% ಗೋಧಿ ಮತ್ತು ಭತ್ತವನ್ನು ಸರ್ಕಾರಿ ಸಂಸ್ಥೆಗಳು ಸಂಗ್ರಹಿಸುತ್ತವೆ.

ದೇಶಾಧ್ಯಂತ ನಡೆದಿರುವ ಪ್ರತಿಭಟನೆ ನಿಲ್ಲಲು ಎಂಎಸ್‌ಪಿಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲಾಗುವುದು ಎಂಬ ಮಸೂದೆಗೆ ಒಂದು ಷರತ್ತು ಸೇರಿಸಿ ಎಂದು ಯಾದವ್ ಹೇಳಿದರು. ಇದು ದೀರ್ಘಕಾಲದ ಬೇಡಿಕೆಯಾಗಿದ್ದು, ಇದನ್ನು ಸರ್ಕಾರದ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗವು (ಸಿಎಸಿಪಿ) 2018 ರ ಹಿಂದೆಯೇ ಸೂಚಿಸಿದೆ. ಹೆಚ್ಚಿನ ರೈತರು ಎಂಎಸ್‌ಪಿಯಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ರೈತರು ಎಂಎಸ್‌ಪಿಗಿಂತ ಕಡಿಮೆ ಮಾರಾಟ ಮಾಡಲು ಒತ್ತಾಯಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಶಾಸನವನ್ನು ಜಾರಿಗೆ ತರಬೇಕು ಎಂದು ರೈತ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ. ಆದರೆ ರೈತ ಸಂಘಟನೆಗಳ ಈ ಬೇಡಿಕೆಗೆ ಈವರೆಗೆ ಸರ್ಕಾರ ಸ್ಪಂದಿಸಿಲ್ಲ.

Previous Post

ವಿವಾದಿತ ಮೂರು ಕೃಷಿ ಮಸೂದೆ: ರಾಜ್ಯಸಭೆಯ ಬಲಾಬಲದ ಲೆಕ್ಕಾಚಾರವೇನು?

Next Post

ಕೃಷಿ ಮಸೂದೆ: ಬಿಜೆಪಿ ಜೊತೆ ಮೈತ್ರಿ ಕಡಿದುಕೊಳ್ಳುವಂತೆ ಜೆಜೆಪಿ ಮೇಲೆ ಒತ್ತಡ

Related Posts

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..
Top Story

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

by ಪ್ರತಿಧ್ವನಿ
April 16, 2026
0

ನವದೆಹಲಿ :  ಕೇಂದ್ರ ಸರ್ಕಾರ ಕರೆದಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂದು ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಲಾಗಿದೆ. ವಿಪಕ್ಷಗಳ ಗದ್ದಲ ಹಾಗೂ ಕೋಲಾಹಲದ ನಡುವೆಯೇ ಕೇಂದ್ರ ಸಚಿವ ಅರ್ಜುನ್‌...

Read moreDetails
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
Next Post
ಕೃಷಿ ಮಸೂದೆ: ಬಿಜೆಪಿ ಜೊತೆ ಮೈತ್ರಿ ಕಡಿದುಕೊಳ್ಳುವಂತೆ ಜೆಜೆಪಿ ಮೇಲೆ ಒತ್ತಡ

ಕೃಷಿ ಮಸೂದೆ: ಬಿಜೆಪಿ ಜೊತೆ ಮೈತ್ರಿ ಕಡಿದುಕೊಳ್ಳುವಂತೆ ಜೆಜೆಪಿ ಮೇಲೆ ಒತ್ತಡ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada