
ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನ ಕೊಲೆ ಕೇಸ್ನಲ್ಲಿ ಬಂಧನ ಆಗಿರುವ ನಟ ದರ್ಶನ್ ರಕ್ಷಣೆಗೆ ರಾಜಕಾರಣಿಗಳು ಪ್ರಯತ್ನ ಮಾಡಿದ್ದಾರೆ ಅನ್ನೋ ಮಾತುಗಳು ಚರ್ಚೆಗೆ ಬಂದಿವೆ. ನಿನ್ನೆ ಮೈಸೂರಿನಲ್ಲಿ ಬಂಧನ ಆದ ಬಳಿಕ ಪೊಲೀಸ್ರು ಕೋರ್ಟ್ಗೆ ಹಾಜರು ಮಾಡಿ ವಶಕ್ಕೆ ಪಡೆದಿದ್ದಾರೆ. 6 ದಿನಗಳ ಕಾಲ ಸಾಕ್ಷ್ಯ ಸಂಗ್ರಹ ಜೊತೆಗೆ ಸ್ಥಳ ಮಹಜರು ಮಾಡಲು ಪೊಲೀಸ್ರು ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ರಾಜಕಾರಣಿಗಳು ನಟ ದರ್ಶನ್ ರಕ್ಷಣೆ ಮಾಡಲು ಪ್ರಯತ್ನ ನಡೆದಿದ್ದು, ಪೊಲೀಸ್ರ ತನಿಖೆ ಮೇಲೆ ಪ್ರಭಾವ ಬೀರುವುದಕ್ಕೆ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಬೆಂಗಳೂರು ಹಾಗು ಹಳೇ ಮೈಸೂರು ಭಾಗದ ಇಬ್ಬರು ಸಚಿವರು ಸಿಎಂ ಸಿದ್ದರಾಮಯ್ಯ ಮೂಲಕವೇ ಪೊಲೀಸ್ರ ಮೇಲೆ ಒತ್ತಡ ಹಾಕುತ್ತಿದ್ದಾರೆ ಅನ್ನೋ ಮಾಹಿತಿ ಹರಿದಾಡ್ತಿದೆ.

ಅನಾಮಿಕ ವ್ಯಕ್ತಿಯ ಶವ ಸಿಕ್ಕಿದೆ ಎಂದು ಮೊದಲು ಪೊಲೀಸ್ರು ಎಫ್ಐಆರ್ ಮಾಡಿಕೊಂಡಿದ್ದರು. ಇದೀಗ ಅನಾಥ ಶವದ ಕೇಸ್ನಲ್ಲಿಯೇ ತನಿಖೆ ಮುಂದುವರಿಸಿದ್ದಾರೆ. ದರ್ಶನ್ ಸೇರಿದಂತೆ ಬಂಧಿತ ಆರೋಪಿಗಳ ಮೇಲೆ ಪ್ರತ್ಯೇಕ FIR ಮಾಡಿಲ್ಲ. ಅನಾಮಿಕ ಶವದ ಎಫ್ಐಆರ್ನಲ್ಲೇ ತನಿಖೆ ನಡೆದಿದ್ದು, ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸುವ ವೇಳೆ A1, A2… ಮಾಡಲಾಗುವುದು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಆದರೆ ಅಷ್ಟರಲ್ಲಿ ಆರೋಪಿಗಳು ಪೊಲೀಸ್ರ ಜೊತೆಗೆ ಮಸಲತ್ತು ಮಾಡಿ ಕೆಲವೊಂದಿಷ್ಟು ಜನರನ್ನು ಸಿಲುಕಿಸಿ ಉಳಿದವರು ಪಾರಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ನಿವೃತ್ತ ಪೊಲೀಸರು.

ನಟ ದರ್ಶನ್ನನ್ನು ಕೇಸ್ನಲ್ಲಿ ಸಿಲುಕಿಸ ಬಾರದು ಅನ್ನೋದೇ ಪೊಲೀಸ್ರ ಉದ್ದೇಶ ಆಗಿದ್ದರೆ, ಬಂಧನ ಮಾಡದೆಯೇ ಪೊಲೀಸ್ರು ಕೇಸ್ ಮುಚ್ಚಿ ಹಾಕಬಹುದಿತ್ತು. ಆದರೆ ಕರ್ನಾಟಕ ಪೊಲೀಸ್ ದೊಡ್ಡ ಸಿನಿಮಾ ಸ್ಟಾರ್ ಅನ್ನೋದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಸಾಕ್ಷಿಗಳನ್ನು ಆಧರಿಸಿ ಬಂಧನ ಮಾಡಿದ್ದಾರೆ ಎಂದರೆ ಈ ರೀತಿಯ ಒತ್ತಡಗಳಿಗೆ ಮಣಿಯುವುದಿಲ್ಲ ಅನ್ನೋ ಮಾತುಗಳೂ ಕೂಡ ಕೇಳಿ ಬರುತ್ತಿವೆ. ಆದರೂ ಹಣವಂತರಿಗೆ ಕಾನೂನು ಶಿಕ್ಷೆ ಕೊಡುವುದು ಅಷ್ಟೊಂದು ಸರಳ ಅಲ್ಲ ಅನ್ನೋ ಮಾತನ್ನೂ ನಾವು ಜ್ಞಾಪಕ ಮಾಡಿಕೊಳ್ಳುವಂತಾಗಿದೆ. ಕಾನೂನಿನ ಯಾವುದೋ ಒಂದು ಸಣ್ಣ ಲೋಪವನ್ನೇ ದೊಡ್ಡದು ಮಾಡಿಕೊಂಡು ಪಾರಾಗ್ತಾರಾ..? ಅನ್ನೋ ಶಂಕೆಯೂ ಕಾಡ್ತಿದೆ.

ಸಾಮಾನ್ಯ ವ್ಯಕ್ತಿಯೊಬ್ಬ ಕೊಲೆ ಮಾಡಿದರೆ ಅದು ಕೊಲೆಯಷ್ಟೆ. ಆತ ಜೈಲಿನಲ್ಲಿ ಶಿಕ್ಷೆ ಅನುಭವಿಸ್ತಾನೆ. ಅಲ್ಲಿ ತನ್ನ ತಪ್ಪಿನ ಅರಿವಾಗಿ ಜೀವನದಲ್ಲಿ ಬುದ್ಧಿ ಕಲಿಯುತ್ತಾನೆ. ಕೆಳ ಮಟ್ಟದ ಕೋರ್ಟ್ ಆದೇಶವನ್ನು ಪ್ರಶ್ನೆ ಮಾಡದೆ ತುಂಬಾ ಜನರು ಶಿಕ್ಷೆ ಅನುಭವಿಸಿ ಬರುವುದೂ ಉಂಟು. ಆದರೆ ನಟ ದರ್ಶನ್ ಸಾಮಾನ್ಯ ವ್ಯಕ್ತಿಯಲ್ಲ. ಆತನ ಬಳಿ ಹಣಬಲ, ರಾಜಕೀಯ ಬಲ ಸೇರಿದಂತೆ ಎಲ್ಲಾ ರೀತಿಯಲ್ಲೂ ಬಲಾಢ್ಯ. ಹೀಗಾಗಿ ತನಿಖಾ ಹಂತದಲ್ಲೇ ಸೂಕ್ತ ಸಾಕ್ಷ್ಯಗಳನ್ನು ಸಂಗ್ರಹ ಮಾಡಬೇಕಿದೆ. ಇನ್ನು ಪೊಲೀಸ್ರು ತನಿಖೆ ಮತ್ತು ಅಂತಿಮ ವರದಿ Chanrge Sheet ಸಲ್ಲಿಸುವಾಗ ಸೂಕ್ಷ್ಮಮತಿಗಳಾಗಿ, ಕಾನೂನು ತಜ್ಞರ ಸಲಹೆ ಪಡೆದು ವರದಿ ಸಿದ್ಧಪಡಿಸಬೇಕಿದೆ. ದರ್ಶನ್ಗೆ ಶಿಕ್ಷೆಯಾದರೆ ಸಮಾಜಕ್ಕೆ ಮಾದರಿ ಆಗಲಿದೆ. ಕೊಲೆ ಮಾಡೋದು, ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು ಅನ್ನೋ ಸಂದೇಶ ಕೊಟ್ಟಂತಾಗುತ್ತದೆ.
