• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಉತ್ತರಾಖಂಡ: 13 ಮಿಲಿಯನ್ ವರ್ಷ ಹಳೆಯ ಏಪ್ ಪಳೆಯುಳಿಕೆ ಪತ್ತೆ

by
September 10, 2020
in ದೇಶ
0
ಉತ್ತರಾಖಂಡ: 13 ಮಿಲಿಯನ್ ವರ್ಷ ಹಳೆಯ ಏಪ್ ಪಳೆಯುಳಿಕೆ ಪತ್ತೆ
Share on WhatsAppShare on FacebookShare on Telegram

ಉತ್ತರಾಖಂಡದಲ್ಲಿ 13 ದಶಲಕ್ಷ ವರ್ಷಗಳಷ್ಟು ಹಳೆಯದಾದ ಏಪ್‌ ಪಳೆಯುಳಿಕೆಯನ್ನು ಅಂತರಾಷ್ಟ್ರೀಯ ಸಂಶೋಧಕರ ತಂಡ ಕಂಡುಹಿಡಿದಿದೆ. ಪತ್ತೆಯಾಗಿರುವ ಪಳೆಯುಳಿಕೆ ಆಧುನಿಕ ಗಿಬ್ಬನ್‌ ವಾನರ ಪ್ರಭೇಧದ ಪೂರ್ವಜ ಎಂದು ಸಂಶೋಧಕರು ತಿಳಿಸಿದ್ದಾರೆ. ‘ಪ್ರೊಸೀಡಿಂಗ್ಸ್ ಆಫ್ ದಿ ರಾಯಲ್ ಸೊಸೈಟಿ ಬಿ’ ಜರ್ನಲ್‌ನಲ್ಲಿ ಪ್ರಕಟವಾದ ಈ ಸಂಶೋಧನೆಯು, ಇಂದಿನ ಗಿಬ್ಬನ್‌ನ ಪೂರ್ವಜರು ಆಫ್ರಿಕಾದಿಂದ ಏಷ್ಯಾಕ್ಕೆ ವಲಸೆ ಬಂದ ಕುರಿತಾದ ಪ್ರಮುಖ ಹೊಸ ಪುರಾವೆಗಳನ್ನು ಒದಗಿಸುತ್ತದೆ. ಹಾಗಾಗಿ ಈ ಸಂಶೋಧನೆಯು ಏಪ್ ಪಳೆಯುಳಿಕೆ ದಾಖಲೆಯಲ್ಲಿ ಒಂದು ಪ್ರಮುಖ ಅನೂರ್ಜಿತತೆಯನ್ನು ತುಂಬುತ್ತದೆ. ಈ ಸಂಶೋಧನೆ ಜೀವ ಪ್ರಭೇದದ ಪ್ರಮುಖ ಕೊಂಡಿಯ ಅಧ್ಯಯನಕ್ಕೆ ಸಹಾಯಕಾರಿ ಎಂದು ವಿಶ್ಲೇಷಿಸಲಾಗಿದೆ.

ADVERTISEMENT

ಸದ್ಯ ಕಂಡು ಬಂದಿರುವ ಪಳೆಯುಳಿಕೆಯ ಕೆಳ ದವಡೆಯು, ಈ ಹಿಂದೆ ಪತ್ತೆಯಾದ ಅಪರಿಚಿತ ತಳಿಗಳಿಗೆ ಸೇರುತ್ತದೆ. ಹಾಗೂ ಈ ಹಿಂದೆ ರಾಮನಗರ್‌ನಲ್ಲಿ ಪತ್ತೆಯಾದ ಮೊದಲ ಪಳೆಯುಳಿಕೆಯನ್ನು ಹೋಲುತ್ತದೆ. ಅಮೆರಿಕಾ ಮೂಲದ ಅರಿಝೋನಾ ಸ್ಟೇಟ್‌ ಯುನಿವರ್ಸಿಟಿ ಹಾಗೂ ಚಂಢೀಗಡ್‌ನ ಪಂಜಾಬ್‌ ಯುನಿವರ್ಸಿಟಿಯ ಸಂಶೋಧಕರಿಗೆ ವರ್ಷದ ಹಿಂದೆ ಈ ದವಡೆ ಪಳೆಯುಳಿಕೆ ಪತ್ತೆಯಾಗಿತ್ತು.

ಗಿಬ್ಬನ್

ತಂಡವು ಅಲ್ಪ ವಿಶ್ರಾಂತಿ ವಿರಾಮ ಪಡೆಯುತ್ತಿರುವಾಗ, ನೆಲದ ಮೇಲಿನ ಸಣ್ಣ ಕೊಳೆಯ ರಾಶಿಯಲ್ಲಿ ಹೊಳೆಯುವ ವಸ್ತುವನ್ನು ಗುರುತಿಸಿತು. “ಇದು ಪ್ರೈಮೇಟ್ ಹಲ್ಲು ಎಂದು ನಮಗೆ ತಕ್ಷಣ ತಿಳಿದಿತ್ತು, ಆದರೆ ಇದು ಈ ಪ್ರದೇಶದಲ್ಲಿ ಹಿಂದೆ ಕಂಡುಬಂದ ಯಾವುದೇ ಸಸ್ತನಿಗಳ ಹಲ್ಲಿನಂತೆ ಕಾಣಲಿಲ್ಲ. ಈವರೆಗೂ ಗೊತ್ತಿರುವ ಯಾವುದೇ ವಾನರ ಪ್ರಭೇದೊಂದಿಗೆ ಈ ಪಳಿಯುಳಿಕೆ ಹೋಲಿಕೆಯಾಗುವುದಿಲ್ಲ ” ಎಂದು ಅಮೆರಿಕಾ ನ್ಯೂಯಾರ್ಕ್ ಸಿಟಿ ಯೂನಿವರ್ಸಿಟಿಯ ಕ್ರಿಸ್ಟೋಫರ್ ಸಿ. ಗಿಲ್ಬರ್ಟ್ ಹೇಳಿದ್ದಾರೆ.

ಪತ್ತೆಯಾದ ಪಳೆಯುಳಿಕೆಯ ಗಾತ್ರ ಹಾಗೂ ಆಕಾರವನ್ನು ಗಮನಿಸಿ ಇದು ಪ್ರಸ್ತುತ ಇರುವ ಗಿಬ್ಬನ್‌ನ ಪೂರ್ವಜ ಎಂದು ಆರಂಭಿಕ ಊಹೆಗೆ ಬಂದಿದ್ದೇವೆ. ಅದು ನಿಜವೆಂದು ತೋರುತ್ತದೆ. ಸಿಕ್ಕಿರುವ ಪಳೆಯುಳಿಕೆಯ ಏಪ್‌ಗಳು ವಾಸ್ತವಿಕವಾಗಿ ಈಗ ಅಸ್ತಿತ್ವದಲ್ಲಿಲ್ಲ ಎಂದು ಗಿಲ್ಬರ್ಟ್‌ ಹೇಳಿದ್ದಾರೆ. ರಾಮನಗರದಲ್ಲಿ ಬೇರೆ ಬೇರೆ ಏಪ್ ಜಾತಿಗೆ ಸೇರಿದ ತಳಿಗಳ ಪಳೆಯುಳಿಕೆ ಪತ್ತೆಯಾಗಿದೆ. ಆದರೆ ಗಿಬ್ಬನ್‌ನ ಪಳೆಯುಳಿಕೆಗಳು ಇದುವರೆಗೂ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪತ್ತೆಯಾಗಿರುವ ಪಳೆಯುಳಿಕೆಯ ಛಾಯಾಚಿತ್ರ ತೆಗೆದು ಸಿಟಿ-ಸ್ಕ್ಯಾನ್‌ ನಡೆಸಲಾಗಿದೆ. ಹಲ್ಲಿನ ಅಂಗರಚನಾಶಾಸ್ತ್ರದಲ್ಲಿನ ಪ್ರಮುಖ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ಹಾಗೂ ಅಳಿದಿರುವ ಹಾಗೂ ಅಸ್ತಿತ್ವದಲ್ಲಿರುವ ಹಲವು ಮಾದರಿಯ ತಳಿಗಳೊಂದಿಗೆ ತುಲನಾತ್ಮಕ ಮಾದರಿಗಳನ್ನು ಪರೀಕ್ಷಿಸಲಾಯಿತು ಎಂದು ಅವರು ಹೇಳಿದರು.

“ನಾವು ಕಂಡುಕೊಂಡದ್ದು ಏನೆಂದರೆ ಗಿಬ್ಬನ್‌ಗಳೊಂದಿಗೆ 13 ದಶಲಕ್ಷ ವರ್ಷಗಳಷ್ಟು ಹಳೆಯದಾದ ಹಲ್ಲಿನ ನಿಕಟ ಸಂಬಂಧಗಳನ್ನು ನಿರಾಕರಿಸಲಾಗದು, ಹಾಗೂ ಸಂಬಂಧ ಸಾಕಷ್ಟು ಬಲವಾದದ್ದು ” ಎಂದು ಸಂಶೋಧನಾ ತಂಡದ ಭಾಗವಾಗಿರುವ ಅರಿಝೋನಾ ಸ್ಟೇಟ್ ಯೂನಿವರ್ಸಿಟಿಯ ಅಲೆಜಾಂಡ್ರಾ ಒರ್ಟಿಜ಼್ ಹೇಳಿದ್ದಾರೆ.

ಈಗ, ನಮ್ಮಲ್ಲಿ ಕೇವಲ ಒಂದು ಹಲ್ಲು ಮಾತ್ರ ಇದ್ದರೂ, ಇದು ಒಂದು ಅನನ್ಯ ಆವಿಷ್ಕಾರವಾಗಿದೆ. ಇದು ಗಿಬ್ಬನ್‌ಗಳ ಹಳೆಯ ಪಳೆಯುಳಿಕೆ ದಾಖಲೆಯನ್ನು ಕನಿಷ್ಠ ಐದು ದಶಲಕ್ಷ ವರ್ಷಗಳ ಹಿಂದಕ್ಕೆ ತಳ್ಳುತ್ತದೆ, ಅವುಗಳ ವಿಕಸನೀಯ ಇತಿಹಾಸದ ಆರಂಭಿಕ ಹಂತಗಳಲ್ಲಿ ಹೆಚ್ಚು ಅಗತ್ಯವಿರುವ ನೋಟವನ್ನು ಒದಗಿಸುತ್ತದೆ “ಎಂದು ಒರ್ಟಿಜ್ ತಿಳಿಸಿದ್ದಾರೆ.

ಒರಾಂಗಟುನ್

ಸುಮಾರು 13 ದಶಲಕ್ಷ ವರ್ಷಗಳಷ್ಟು ಹಳೆಯದಾದ ಪಳೆಯುಳಿಕೆಯ ವಯಸ್ಸು ಈಗಾಗಲೇ ಲಭ್ಯವಿರುವ ಪ್ರಸಿದ್ಧ ಏಪ್‌ಗಳ ಪಳೆಯುಳಿಕೆಗಳೊಂದಿಗೆ ಸಮಕಾಲೀನವಾಗಿದೆ ಎಂಬುವುದನ್ನು ಸಂಶೋಧಕರು ಗಮನಿಸಿದ್ದಾರೆ. ಲಭಿಸಿರುವ ಸಾಕ್ಷ್ಯವು, ಏಪ್‌ಗಳು ಆಫ್ರಿಕಾದಿಂದ ಏಷಿಯಾ ಖಂಡಕ್ಕೆ ವಲಸೆ ಬಂದ ವಾದವನ್ನು ಪುಷ್ಟೀಕರಿಸುತ್ತದೆ.

“ಈ ಜೈವಿಕ-ಭೌಗೋಳಿಕ ಘಟಕವು ನಿಜವಾಗಿಯೂ ಆಸಕ್ತಿದಾಯಕವಾಗಿದೆ ಎಂದು ನಾನು ಕಂಡುಕೊಂಡಿದ್ದೇನೆ” ಎಂದು ಅರಿಝೋನಾ ಸ್ಟೇಟ್ ಯೂನಿವರ್ಸಿಟಿಯ ಕ್ರಿಸ್ ಕ್ಯಾಂಪಿಸಾನೊ ಹೇಳಿದ್ದಾರೆ. “ಇಂದು, ಆಗ್ನೇಯ ಏಷ್ಯಾದ ಸುಮಾತ್ರಾ ಮತ್ತು ಬೊರ್ನಿಯೊದಲ್ಲಿ ಗಿಬ್ಬನ್ ಮತ್ತು ಒರಾಂಗುಟಾನ್ ಎರಡನ್ನೂ ಕಾಣಬಹುದು, ಮತ್ತು ಕಂಡುಕೊಂಡಿರುವ ಅತ್ಯಂತ ಹಳೆಯ ಪಳೆಯುಳಿಕೆಯ ಏಪ್‌ಗಳು ಆಫ್ರಿಕಾದಿಂದ ಬಂದವು. ಇವು ಏಷ್ಯಾದಾದ್ಯಂತ ಇದೇ ರೀತಿಯ ವಲಸೆ ಇತಿಹಾಸವನ್ನು ಹೊಂದಿದೆ. ಹಾಗಾಗಿ ಇಂದಿನ ಗಿಬ್ಬನ್‌ನ ಪೂರ್ವಜರು ಆಫ್ರಿಕಾದಿಂದ ಏಷ್ಯಾಕ್ಕೆ ವಲಸೆ ಬಂದ ಇತಿಹಾಸದ ಮೇಲೆ ಈ ಸಂಶೋಧನೆ ಬೆಳಕು ಚೆಲ್ಲಲಿದೆ ” ಎಂದು ಅವರು ತಿಳಿಸಿದ್ದಾರೆ.

Tags: ‌ ಉತ್ತರಾಖಂಡಏಪ್‌ಜೀವ ಪ್ರಭೇದಜೀವ ವೈವಿದ್ಯತೆಸಂಶೋಧನೆ
Previous Post

ಕರ್ನಾಟಕ: 24 ಗಂಟೆಗಳಲ್ಲಿ 9540 ಹೊಸ ಕೋವಿಡ್‌ ಪ್ರಕರಣ ದಾಖಲು

Next Post

ಎಲ್ಲಾ ದುರಂತಗಳಿಗೂ ಈ ಸಮಾಜ ಅರ್ಹ: ನಿರ್ದೇಶಕ ಜಯತೀರ್ಥರನ್ನು ಕಾಡಿದ ನೋವು..!

Related Posts

Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
0

ಭದ್ರಾ ಮೇಲ್ದಂಡೆ ಯೋಜನೆಗೂ ಪರಿಷ್ಕೃತ ಅನುದಾನ ಕೇಳಿದ್ದೇವೆಸರಕಾರದ ಖಾತೆಗೆ ಹಣ ಬಂದಾಗಲೇ ಖಾತರಿ “ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ಒಟ್ಟು ₹11,122.76 ಕೋಟಿ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೇವೆ....

Read moreDetails

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025

CM, DCM: ಸಿಎಂ, ಡಿಸಿಎಂ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ: ಜನರಿಗೆ ಯಾಮಾರಿಸಿದ್ದ ಮಹಿಳೆ ಅರೆಸ್ಟ್‌

July 9, 2025

Gujarath: ಗುಜರಾತ್‌ನಲ್ಲಿ ಮತ್ತೊಮ್ಮೆ ನದಿಗೆ ಬಿದ್ದ ವಾಹನಗಳು..

July 9, 2025
Next Post
ಎಲ್ಲಾ ದುರಂತಗಳಿಗೂ ಈ ಸಮಾಜ ಅರ್ಹ: ನಿರ್ದೇಶಕ ಜಯತೀರ್ಥರನ್ನು ಕಾಡಿದ ನೋವು..!

ಎಲ್ಲಾ ದುರಂತಗಳಿಗೂ ಈ ಸಮಾಜ ಅರ್ಹ: ನಿರ್ದೇಶಕ ಜಯತೀರ್ಥರನ್ನು ಕಾಡಿದ ನೋವು..!

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada