ಗುಜರಾತ್ ಕುರಿತಾಗಿ ಬ್ರಿಟಿಷ್ ಬರಹಗಾರ ಫಿಲಿಪ್ ಸ್ಪ್ರಾಟ್ ಬರೆದಿದ್ದ ಸಾಲೊಂದನ್ನ ಟ್ವೀಟ್ ಮಾಡುವ ಮೂಲಕ ಇತಿಹಾಸಕಾರ ರಾಮಚಂದ್ರ ಗುಹಾ ಗುಜರಾತಿಗರ ಹಾಗೂ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾದರು. ಜೂನ್ 11 ರ ಗುರುವಾರ ಬೆಳಿಗ್ಗೆ ರಾಮಚಂದ್ರ ಗುಹಾ ಮಾಡಿದ್ದ ಟ್ವೀಟ್ ನಲ್ಲಿ, “ಗುಜರಾತ್ ಆರ್ಥಿಕವಾಗಿ ಮುಂದುವರೆದಿರಬಹುದು, ಆದರೆ ಸಾಂಸ್ಕೃತಿಕವಾಗಿ ಹಿಂದುಳಿದ ಪ್ರದೇಶವಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಬಂಗಾಳವಿದ್ದು, ಅದು ಆರ್ಥಿಕವಾಗಿ ಹಿಂದುಳಿದಿದೆ, ಆದರೆ ಸಾಂಸ್ಕೃತಿಕವಾಗಿ ಮುಂದುವರೆದಿದೆ” ಎಂದು ಉಲ್ಲೇಖಿಸಿದ್ದರು.
“Gujarat, though economically advanced, is culturally a backward province… . Bengal in contrast is economically backward but culturally advanced”.
Philip Spratt, writing in 1939.— Ramachandra Guha (@Ram_Guha) June 11, 2020
ಇದನ್ನ ರಾಷ್ಟ್ರೀಯ ಸುದ್ದಿ ವಾಹಿನಿ ʼಟೈಮ್ಸ್ ನೌʼ ಅದ್ಯಾವಾಗ ಸುದ್ದಿ ಮಾಡಿತೋ, ಆಗಲೇ ರಾಜಕೀಯ ಬಣ್ಣ ಪಡೆಯಿತು. ಜೊತೆಗೆ ಪ್ರಾಂತ್ಯೀಯ ವಿರೋಧಗಳು ವ್ಯಕ್ತವಾದವು. ಅದರಲ್ಲೂ ʼಟೈಮ್ಸ್ ನೌʼ ಗುಜರಾತಿಗರನ್ನ ಅವಮಾನಿಸಲಾಗಿದೆ ಅಂತಾ ಸುದ್ದಿ ಮಾಡಿದ್ದೇ ಹೆಚ್ಚು ಸದ್ದು ಮಾಡುವಂತೆ ಮಾಡಿತು.
Historian Ramachandra Guha (@Ram_Guha) insults Gujaratis by tweeting an offensive quote on Gujarat. | #GuhaDividesIndia pic.twitter.com/Ky8Z0vVMnP
— TIMES NOW (@TimesNow) June 11, 2020
ಆ ಬಳಿಕ ಇದು ರಾಜಕೀಯವಾಗಿಯೂ, ಇನ್ನೊಂದೆಡೆ ಗುಜರಾತಿಗರ ಕೆಂಗಣ್ಣಿಗೂ ಗುರಿಯಾಯಿತು. ಸ್ವತಃ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತರಾಮನ್ ಹಾಗೂ ಗುಜರಾತ್ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಮೊದಲಾದವರು ಟ್ವೀಟ್ ಮಾಡಿ ರಾಮಚಂದ್ರ ಗುಹಾ ಹೇಳಿಕೆಯನ್ನ ತರಾಟೆಗೆ ತೆಗೆದುಕೊಂಡರು.
“ ಮೊದಲು ಬ್ರಿಟಿಷರು ಭಾರತವನ್ನ ಒಡೆದು ಆಳುವ ನೀತಿ ಅನುಸರಿಸಿದರು. ಈಗ ಕೆಲವೊಂದು ಗುಂಪು ಭಾರತವನ್ನ ಒಡೆದು ಆಳಲು ಯತ್ನಿಸುತ್ತಿದೆ. ಭಾರತ ಯಾವತ್ತೂ ಇಂತಹ ತಂತ್ರಗಾರಿಕೆ ಸಿಲುಕಿದ್ದೇ ಇಲ್ಲ. ಗುಜರಾತ್ ಉತ್ತಮವಾಗಿದೆ, ಬಂಗಾಳ ಉತ್ತಮವಾಗಿದೆ.. ಒಟ್ಟಿನಲ್ಲಿ ಭಾರತವೇ ಒಂದಾಗಿದೆ” ಅಂತಾ ರಾಮಚಂದ್ರ ಗುಹಾ ಅವರಿಗೆ ತಿರುಗೇಟು ನೀಡಿದ್ದಾರೆ.
Earlier it was the British who tried to divide and rule. Now it is a group of elites who want to divide Indians.
Indians won’t fall for such tricks.
Gujarat is great, Bengal is great…India is united.
Our cultural foundations are strong, our economic aspirations are high. https://t.co/9mCuqCt7d1
— Vijay Rupani (@vijayrupanibjp) June 11, 2020
ಮಾತ್ರವಲ್ಲದೇ ಇದರ ಬೆನ್ನಿಗೆ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತರಾಮನ್ ಕೂಡಾ ಗುಹಾ ಟ್ವೀಟ್ ನ್ನು ರೀಟ್ವೀಟ್ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಗಮನಸೆಳೆಯುವಂತೆ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ರಾಮಚಂದ್ರ ಗುಹಾ ಮತ್ತೆ ರೀಟ್ವೀಟ್ ಮಾಡಿ ಇದು ಕೇವಲ ಗುಜರಾತ್ ಸಿಎಂ ಅವರಿಗೆ ಮಾತ್ರ ಸೀಮಿತವಾಗದೇ, “ಇತಿಹಾಸಕಾರನ ಬಗ್ಗೆ ಗೀಳು ತೋರುವ ಆತುರತೆ ಕೇಂದ್ರ ಆರ್ಥಿಕ ಸಚಿವರಿಗೂ ತಲುಪಿದೆ. ಖಂಡಿತಾವಾಗಿಯೂ ಆರ್ಥಿಕತೆ ಸುರಕ್ಷಿತರ ಕೈಯಲ್ಲಿದೆ” ಎಂದು ರೀಟ್ವೀಟ್ ಮೂಲಕ ಮತ್ತೆ ಬೆಚ್ಚಗೆ ಇರಿಸುವಂತೆ ಮಾಡಿದ್ದಾರೆ.
In 1939, when Philip Spratt, from Britain, belonging to the Communist International wrote, (who @Ram_Guha quotes) this was what was happening in Gujarat: Jamnagar…Maharaja Jam Saheb Digvijaysinhji Jadeja…saved 1000 Polish children #Culture https://t.co/5XsY2cL1WZ
— Nirmala Sitharaman (@nsitharaman) June 11, 2020
I thought it was only the Gujarat CM, but now it seems even the FM is obsessing about a humdrum historian's tweets. The economy is surely in safe hands. https://t.co/bBpcK85Hel
— Ramachandra Guha (@Ram_Guha) June 11, 2020
ಆ ಬಳಿಕ ಅದಕ್ಕೆ ಮತ್ತೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತರಾಮನ್, ಹೌದು, “ಆರ್ಥಿಕತೆಯು ಸುರಕ್ಷಿತರ ಕೈಯಲ್ಲಿದೆ. ಅದರ ಬಗ್ಗೆ ಯಾವುದೇ ಚಿಂತೆ ಬೇಡ ಮಿಸ್ಟರ್ ಗುಹಾ. ರಾಷ್ಟ್ರೀಯ ವಿಚಾರಗಳ ತಿಳುವಳಿಕೆ ಹಾಗೂ ನನ್ನ ಜವಾಬ್ದಾರಿ ಎರಡೂ ಪ್ರತ್ಯೇಕವಲ್ಲ. ಇತಿಹಾಸದ ಅರಿವು ಕೂಡಾ ಒಂದು ಪ್ಲಸ್ ಆಗಿದೆ. ಇದನ್ನ ನೀವು ತಿಳಿದಿರಬೇಕಿದೆ” ಅಂತಾ ತಿರುಗೇಟು ನೀಡಿದ್ದಾರೆ.
The economy is very much in safe hands; worry not, Mr. Guha. Taking cognisance of thoughts in current national discourse+responsibly doing my job aren’t mutually exclusive. Either way, an interest in history is a plus. Surely an intellectual such as yourself should know that . https://t.co/speBC2bggv
— Nirmala Sitharaman (@nsitharaman) June 11, 2020
ಇನ್ನು ಗುಜರಾತ್ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಕೂಡಾ ರಾಮಚಂದ್ರ ಗುಹಾ ಅವರ ಈ ಹೇಳಿಕೆಗೆ ತರಾಟೆಗೆ ತೆಗೆದುಕೊಂಡರು. “ಇದೊಂದು ಕೆಟ್ಟ ಮಾಹಿತಿಯುಳ್ಳ ಹೇಳಿಕೆಯಾಗಿದೆ. ಕಚ್ಛ್ ನಿಂದ ವಾಪಿ, ಶ್ಯಾಮಲಾಜಿ ಯಿಂದ ದ್ವಾರಕೆ ಗುಜರಾತ್ ಸಂಸ್ಕೃತಿ ವೈವಿಧ್ಯತೆಯಿಂದ ಕೂಡಿದೆ” ಎಂದು ಟ್ವೀಟ್ ಮಾಡಿದ್ದಾರೆ.
This is an ill informed statement
From Kutch to Vapi & from Shyamlaji to Dwarka,Gujarat’s culture is built on striking diversity but united through indomitable entrepreneurial spirit
Every culture has it’s unique greatness,backwardness is our failure to understand this fact https://t.co/IKCLOnf85I
— Ahmed Patel (@ahmedpatel) June 11, 2020
ಇದು ಮಾತ್ರವಲ್ಲದೇ ಟ್ವೀಟರ್ ನಲ್ಲಿ ಹಲವು ಗುಜರಾತ್ ರಾಜಕೀಯ ನಾಯಕರು, ಬಿಜೆಪಿ ಕಾರ್ಯಕರ್ತರು ರಾಮಚಂದ್ರ ಗುಹಾ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಬಹುತೇಕ ಮಂದಿ ಫಿಲಿಪ್ ಸ್ಪ್ರಾಟ್ ಈ ರೀತಿ ಯಾವುದೇ ಉಲ್ಲೇಖವನ್ನ 1939 ರಲ್ಲಿ ನಡೆಸಿಲ್ಲ ಅಂತಾ ಹೇಳಿದ್ದಾರೆ. ಅಲ್ಲದೇ 1960 ರವರೆಗೆ ಗುಜರಾತ್ ಅನ್ನೋ ಹೆಸರೇ ಇರಲಿಲ್ಲ, ಆಗಿದ್ದೂ ಅವರು 1939ರಲ್ಲಿ ಆ ರೀತಿಯಾಗಿ ಉಲ್ಲೇಖಿಸಲು ಅಸಾಧ್ಯ ಅನ್ನೋದು ಇನ್ನೂ ಕೆಲವರ ವಾದ.
ಆದ್ದರಿಂದ ಕೇವಲ ಈ ಎರಡು ವಿಚಾರಗಳಿಗೇ ಸೀಮಿತವಾಗಿ AltNews.in ತನ್ನ ʼಫ್ಯಾಕ್ಟ್ ಚೆಕ್ʼ ಮೂಲಕ ಮಾಹಿತಿ ಕಲೆ ಹಾಕಿದ್ದು, 1939 ರಲ್ಲಿ ಫಿಲಿಪ್ ಸ್ಪ್ರಾಟ್ ಬರೆದಿರುವ 516 ಪುಟಗಳ ʼಗಾಂಧಿಸಂʼ ಪುಸ್ತಕದ ಪುಟ ಸಂಖ್ಯೆ 2 ರಲ್ಲಿ ರಾಮಚಂದ್ರ ಗುಹಾ ತಿಳಿಸಿದಂತೆ ಫಿಲಿಪ್ ಸ್ಪ್ರಾಟ್, “ಗುಜರಾತ್ ಆರ್ಥಿಕವಾಗಿ ಮುಂದುವರೆದಿದ್ದು, ಸಾಂಸ್ಕೃತಿಕವಾಗಿ ಹಿಂದುಳಿದಿದೆ” ಎಂದು ಬರೆದಿದ್ದಾರೆ. ಅದೇ ಪುಸ್ತಕದ ಪುಟ ಸಂಖ್ಯೆ 32 ರಲ್ಲಿ ಬಂಗಾಳವನ್ನ ಉಲ್ಲೇಖಿಸಿ ಬರೆದಿರುವ ಅವರು “ಬಂಗಾಳ ಆರ್ಥಿಕವಾಗಿ ಹಿಂದುಳಿದಿದೆ, ಆದರೆ ಸಾಂಸ್ಕೃತಿಕವಾಗಿ ಮುಂದುವರೆದಿದೆ” ಎಂದೂ ಉಲ್ಲೇಖಿಸಿದ್ದಾರೆ.

ಇದನ್ನೇ ಮತ್ತೆ ಟ್ವೀಟ್ ಮೂಲಕ ರಾಮಚಂದ್ರ ಗುಹಾ ಉಲ್ಲೇಖಿಸಿ ತನ್ನ ವಿರುದ್ಧ ಮುಗಿಬಿದ್ದವರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. “ನನ್ನ ಶೋಧನೆ ಮೇಲೆ ನಾನು ಕಂಡುಕೊಂಡಿರುವ ಬೇರೆಯವರ ಹೇಳಿಕೆಯನ್ನಷ್ಟೇ ಉಲ್ಲೇಖಿಸಿದ್ದೇನೆ” ಎಂದಿದ್ದಾರೆ.
Statutory warning; when I post quotes by others found in the course of my research, I do so because I find them arresting in some way. I may (or may not) endorse, in part or in whole, what I am quoting. Reserve your praise or your anger for the ghost of the person being quoted.
— Ramachandra Guha (@Ram_Guha) June 11, 2020
ಇನ್ನು ಎರಡನೇ ವಿಚಾರಕ್ಕೆ ಬರೋದಾದರೆ, 1960 ಕ್ಕೂ ಮುನ್ನ ಗುಜರಾತ್ ರಾಜ್ಯ ಅಸ್ತಿತ್ವಕ್ಕೇ ಬಂದಿರಲಿಲ್ಲ. ಆಗಿದ್ದ ಮೇಲೆ ʼಗುಜರಾತ್ʼ ಅನ್ನೋ ಹೆಸರು ಉಲ್ಲೇಖಿಸಿದ್ದಾದರೂ ಹೇಗೆ? ಅನ್ನೋದು. ಆದರೆ ಇದೊಂದು ತಿಳುವಳಿಕೆ ಕೊರತೆ ಪ್ರಶ್ನೆಯೇ ಸರಿ. ಕಾರಣ, 1911 ರಲ್ಲಿ ರವೀಂದ್ರ ನಾಥ ಟಾಗೋರರು ಬರೆದ “ಜನ ಗಣ ಮನ ಅಧಿನಾಯಕ ಜಯಹೇ..” ಈ ಗೀತೆಯಲ್ಲೂ ʼಗುಜರಾತʼ (ಪಂಜಾಬ ಸಿಂಧು ಗುಜರಾತ ಮರಾಠ..) ಅನ್ನೋ ಶಬ್ದವನ್ನ ಬಳಸಲಾಗಿದೆ. ಮುಂದೆ ಇದನ್ನೇ ರಾಷ್ಟ್ರಗೀತೆಯಾಗಿಯೂ ಅಂಗೀಕರಿಸಲಾಯಿತು.
ಮಾತ್ರವಲ್ಲದೇ 1921 ರಲ್ಲಿ ಸರ್ದಾರ ವಲ್ಲಭಭಾಯಿ ಅವರಿಗೆ ಮಹಾತ್ಮಾ ಗಾಂಧಿ ಅವರು ಬರೆದಿರುವ ಪತ್ರದಲ್ಲೂ ಗುಜರಾತ್ ಪ್ರಾಂತ್ಯ ಎಂದೇ ಬರೆದಿರುವ ದಾಖಲೆಯೂ ಇದೆ ಎಂದು AltNews.in ತನ್ನ ʼಫ್ಯಾಕ್ಟ್ ಚೆಕ್ʼ ನಲ್ಲಿ ತಿಳಿಸಿದೆ.

ಒಟ್ಟಿನಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ, ಫಿಲಿಪ್ ಸ್ಪ್ರಾಟ್ ಅವರು ಬರೆದಿರುವ ಪುಸ್ತಕದ ಸಾಲೊಂದನ್ನ ಉಲ್ಲೇಖಿಸಿದ್ದನ್ನೇ ಮುಂದಿಟ್ಟುಕೊಂಡು ಆಳುವ ಸರಕಾರದ ಮಂತ್ರಿ-ಮಹೋದಯರು ಟ್ವೀಟ್ ಮೂಲಕವೇ ಉತ್ತರ ಕೊಡಲು ಆತುರತೆ ಮೆರೆದಿದ್ದೂ ನಿಜಕ್ಕೂ ಅಚ್ಚರಿಯೇ ಸರಿ. ಏಕೆಂದರೆ ಒಂದು ಕಡೆಯಲ್ಲಿ ಗುಜರಾತ್ ನ ಅಹಮದಾಬಾದ್ ಇಂದಿಗೂ ಅತೀ ಸೋಂಕು ಪೀಡಿತರ ಪ್ರದೇಶಗಳಲ್ಲಿ ಒಂದಾಗಿದೆ. ಇನ್ನೊಂದೆಡೆ ದೇಶದ ಆರ್ಥಿಕ ಪರಿಸ್ಥಿತಿ ಕುಸಿದು ಹೋಗಿದೆ. ಈ ಸಮಯದಲ್ಲೂ ಟ್ವಿಟ್ಟರ್ ಮೂಲಕವೇ ಉತ್ತರ ಕೊಡುತ್ತಾ ವಿಷಯವನ್ನ ಬೇರೆಡೆ ಕೇಂದ್ರೀಕರಿಸುವ ಗುಜರಾತ್ ಸಿಎಂ, ಕೇಂದ್ರ ಆರ್ಥಿಕ ಸಚಿವೆ ನಿಜಕ್ಕೂ ಚಾಣಕ್ಯರೇ ಸರಿ.