• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಅನ್ನದಾತರಿಗೆ ಕಂಟಕವಾಯ್ತು ದೆಹಲಿಯ ಹವಾಮಾನ ವೈಪರಿತ್ಯ

by
December 17, 2020
in ದೇಶ
0
ಅನ್ನದಾತರಿಗೆ ಕಂಟಕವಾಯ್ತು ದೆಹಲಿಯ ಹವಾಮಾನ ವೈಪರಿತ್ಯ
Share on WhatsAppShare on FacebookShare on Telegram

ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿ ರೈತರ ಪ್ರತಿಭಟನೆಯಿಂದ ಸುದ್ದಿಯಾಗುತ್ತಿದೆ. ದೇಶದ ಪಂಜಾಬ್, ಹರಿಯಾಣ, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯದ ರೈತಸಂಘಟನೆಗಳು ಒಂದುಗೂಡಿ ಆಧುನಿಕ ಇತಿಹಾಸದಲ್ಲಿಯೇ ಪ್ರಪಥಮ ಬಾರಿಗೆ ದೀರ್ಘ ಮುಷ್ಕರಕ್ಕೆ ಮುಂದಾಗಿದ್ದು, ಮೋದಿ ಸರ್ಕಾರ ಜಾರಿಗೆತಂದ ಕೃಷಿ ವಿರೋಧಿ ಕಾಯ್ದೆಗಳನ್ನ ವಿರೋಧಿಸಿ ಅನ್ನದಾತರು ಮನೆಮಟ ಜೀವದ ಹಂಗು ತೊರೆದು ಅಲ್ಲೇ ಬೀಡುಬಿಟ್ಟು ಹೋರಾಟ ನಿರತರಾಗಿದ್ದಾರೆ. ಇತ್ತ ಸರ್ಕಾರ ಅನ್ನದಾತರ ಕೂಗಿಗೆ ಕನಿಷ್ಠ ಮಟ್ಟದ ಮಾನವೀಯತೆ ತೋರದಿರುವುದು ದುರಾದೃಷ್ಟಕರ ಸಂಗತಿ. ಮತ್ತೊಂದೆಡೆ ರೈತರಿಗೆ ಹವಮಾನ ವೈಪರಿತ್ಯ ಕಂಟಕವಾಗಿ ಎದುರಾಗಿದೆ. ದೆಹಲಿ ಈ ಹಿಂದೆ ಅಧಿಕ ತಾಪಮಾನ ವಾಯ್ಯುಮಾಲಿನ್ಯ ಕುರಿತು ಸುದ್ದಿಯಾಗುತ್ತಿತ್ತು. ಇದೀಗ ಅಧಿಕ ಶೀತವಾತಾವರಣ ಹೊಂದಿದ ನಗರವೆಂದು ಗುರುತಿಸಿಗೊಂಡಿದೆ.

ADVERTISEMENT

ಇತ್ತ ರಸ್ತೆಯ ಇಕ್ಕೆಲಗಳಲ್ಲಿ ಶೆಡ್ ನಿರ್ಮಿಸಿಕೊಂಡ ರೈತರಿಗೆ ಪೊಲೀಸರ ಚಾಟಿಯೇಟು, ದೌರ್ಜ್ಯನದ, ಆಹಾರ ಸಮಸ್ಯೆ, ಮೂಲಭೂತ ಸೌರ್ಕಗಳ ಕೊರತೆ ಒಂದೆಡೆಯಾದರೆ ಹವಮಾನದಲ್ಲಿಯೂ ತೀವ್ರ ವೈಪರಿತ್ಯ ಉಂಟಾಗಿ ದೆಹಲಿಯಾದ್ಯಂತ ಚಳಿಯ ವಾತಾವರಣ ದಿನೇ ದಿನೇ ಹೆಚ್ಚುತಿದೆ. ನ್ಯಾಯ ಕೇಳುವ ಹೋರಾಟ ಒಂದೆಡೆಯಾದರೆ ಈಕಡೆ ಸಾವು ನೋವಿನ ಹೋರಾಟವೂ ಕಂಟಕವಾಗಿ ಎದುರಾಗಿದೆ. ಈಗಾಗಲೇ 20ಕ್ಕೂ ಹೆಚ್ಚು ಪ್ರತಿಭಟನಾಕಾರು ಪ್ರತಿಭಟನಾ ನಿರತ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದು, ಮತ್ತೊಂದೆಡೆ ಮೃತ ರೈತರ ಕುಟುಂಬ ಮನೆಯ ಮುಖ್ಯಸ್ಥನನ್ನು ಕಳೆದು ಕೊಂಡು ಬಡವಾಗಿದೆ. ಹಿರಿಯರಿಂದ ಹಿಡಿದು ಮಕ್ಕಳು ಕೂಡ ಹೋರಾಟದಲ್ಲಿ ಭಾಗಿಯಾಗಿದ್ದು, ಅಧಿಕ ಚಳಿಗೆ ೧೦ ರಿಂದ ೧೪ ವರ್ಷದ ಮಕ್ಕಳು ಬಲಿಯಾಗಿದ್ದಾರೆಂದು ವರದಿಯಾಗಿದೆ. ದೆಹಲಿ ಹರಿಯಾಣ ಸಮೀಪದಲ್ಲಿ ಬೀಡುಬಿಟ್ಟಿದ್ದ ಪ್ರತಿಭಟನಾಕಾರರೊಬ್ಬರು ಬುಧವಾರ ಚಳಿಗೆ ತುತ್ತಾಗಿ ಮೃತಪಟ್ಟಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದೆಹಲಿಯಲ್ಲಿ ಡಿಸೆಂಬರ್ 14 ರಿಂದೇ ಅಧಿಕ ಶೀತ ದಿನವೆಂದು ದಾಖಲೆಯಾಗಿದ್ದು, ಬುಧವಾರ ಗರಿಷ್ಟ 16 ಡಿಗ್ರಿ ತಾಪಮಾನದಿಂದ ಕನಿಷ್ಠ 6 ಡಿಗ್ರಿಗೆ ಇಳಿಕೆಯಾಗಿದೆ. ಗುರುವಾರ ಸಫ್ದರ್ ಜಂಗ್ ಮತ್ತು ಪಲಾಮಂ ನಿಲ್ದಾಣಗಳಲ್ಲಿ ತಾಪಮಾನ ಗರಿಷ್ಠ 18.5 ರಿಂದ ಕನಿಷ್ಠ 5 ದಕ್ಕಿಳಿದಿದೆ. ಕಳೆದ ಎರಡು ದಿನಗಳಿಂದ ಅಧಿಕ ಶೀತವಾತಾವರಣ ಹೊಂದಿದ ಸ್ಥಳವಾಗಿ ಮಾರ್ಪಟ್ಟಿದೆ. ಮುಂದಿನ ೨೪ ಗಂಟೆಗಳಲ್ಲಿ ದೇಶದ ಪಶ್ಚಿಮ ಭಾಗ, ಪಂಜಾಬ್, ಉತ್ತರಪ್ರದೇಶ, ಹರಿಯಾಣ, ಛಂಡಿಗಡ ಹಾಗೂ ದೆಹಲಿ ಸೇರಿದಂತೆ ಹಲವೆಡೆ ಚಳಿ ಹೆಚ್ಚಿರಲ್ಲಿದ್ದು, ಸಾರ್ವಜನಿಕರು ಆರೋಗ್ಯ ದೃಷ್ಟಿಯಿಂದ ಭದ್ರತೆವಹಿಸ ಬೇಕೆಂದು ಭಾರತೀಯ ಹವಮಾನ ಇಲಾಖೆ (ಐಎಂಡಿ) ಇಂದಿನ ವರದಿಯಲ್ಲಿ ತಿಳಿಸಿದೆ.

ಮಂಜುಮುಸುಕಿದ ವಾತಾವರಣವಿರಲ್ಲಿದ್ದು, ಇದರಿಂದಾಗಿ ಕೆಲವು ಮಾರಣಾಂತಿಕ ರೋಗಗಳಿಗೆ ಜನರು ತುತ್ತಾಗುವ ಸಾಧ್ಯತೆಯಿದೆ. ವಾತಾವರಣದಲ್ಲಿ ಶೀತ ಪ್ರಮಾಣ ಅಧಿಕವಾಗಿರುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿ ಉಸಿರಾಟದ ಸಮಸ್ಯೆ, ಶೀತಾ, ಜ್ವರ, ಚರ್ಮಕ್ಕೆ ಸಂಬಂಧಿಸಿದಂತಹ ಕಾಯಿಲೆಗಳಿಗೆ ತುತ್ತಾಗು ಸಾಧ್ಯತೆ ಹೆಚ್ಚಿದೆ. ಇಂತಹ ಸಮಸ್ಯೆ ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೇ ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕೆಂದು ಸೂಚಿಸಲಾಗಿದೆ.

ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯ ಹೆಚ್ಚಿರುವುರಿಂದ ಗಾಳಿಯಲ್ಲಿ ವಿಷಕಾರಿ ಅಂಶಗಳು ಹೆಚ್ಚಿದ್ದು, ಮಂಜಿನ ವಾತಾವರಣದಲ್ಲಿ ಸೇರ್ಪಡೆಯಾಗಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವ ಸಾಧ್ಯೆತೆಯಿದೆ. ಈಗಾಗಲೆ ಪ್ರಪಂಚಕ್ಕೆ ಕಂಟಕವಾದ ಕರೋನಾದಿಂದ ಮನುಕುಲ ಸಾಕಷ್ಟು ನಲುಗಿಹೋಗಿದ್ದು, ಜನ ಆರೋಗ್ಯ ದೃಷ್ಟಿಯಿಂದ ಮುಂಜಾಗೃತಾ ಕ್ರಮ ವಹಿಸಬೇಕೆಂದು ಐಎಂಡಿ ವರದಿಯಲ್ಲಿ ತಿಳಿಸಿದೆ. ಮತ್ತೊಂದೆಡೆ ಹಿಮಾಲಯದಲ್ಲಿ ವಾಯುಭಾರ ಕುಸಿತ, ಈಸ್ಟರ್ಲಿ ಅಲೆಯ ಪರಿಣಾಮ ತಮಿಳುನಾಡು, ಪುದುಚೇರಿ, ಕಾರೇಕಲ್, ಕೇರಳ, ಮಾಹೆ, ಲಕ್ಷದ್ವೀಪ ಪ್ರದೇಶಗಳಿಗೆ ಪರಿಣಾಮ ಬೀರಲಿದ್ದು, ಡಿ16 ರಿಂದ 19ರವರೆಗೆ ತಮಿಳುನಾಡು, ಪುದುಚೇರಿ, ಕಾರೇಕಲ್ನಲ್ಲಿ ಮಳೆಯಾದರೆ, ಕೇರಳ ಮಾಹೆಯಲ್ಲಿ ಡಿ 17, 19 ರಂದು ಮಳೆಯಾಗಲಿದೆ. ಮುಂಜಾಗೃತಾ ಕ್ರಮವಹಿಸಬೇಕೆಂದು ಹವಮಾನ ಇಲಾಖೆಯ ಸೂಚನೆಯಾಗಿದೆ.

ಒಂದೆಡೆ ದೇಶದ ಬೆನ್ನೆಲುಬೆಂದು ಹೆಸರುವಾಸಿಯಾದ ರೈತ ಮಾತ್ರ ಸಮಸ್ಯೆಯಲ್ಲಿ ಸಿಲುಕಿ ಪರಿಹಾರ ಒದಗಿಸುವಂತೆ ಪಟ್ಟುಹಿಡಿದ್ದಿದ್ದು, ಹೋರಾಟವನ್ನು ಮುಂದುವರೆಸುತ್ತಲೇ ಇದ್ದಾರೆ. ಇತ್ತ ಹವಾಮಾನ ಬದಲಾಗಿ ಚಳಿಯ ವಾತಾವರಣ ಉಲ್ಬಣವಾದ ಹಿನ್ನಲೆ, ರೈತರ ಸುರಕ್ಷತೆಯ ದೃಷ್ಟಿಯಿಂದ ಅನೇಕ ಸ್ವಯಂ ಸೇವಕರು, ಹಲವಾರು ಸಂಘ ಸಂಸ್ಥೆಗಳು, ದಾನಿಗಳು ರೈತರು ಬೀಡುಬಿಟ್ಟ ಸ್ಥಳಗಳಿಗೆ ಭೇಟಿ ನೀಡಿ ಮೂಲಭೂತ ಅಗತ್ಯ ವಸ್ತುಗಳನ್ನ ಹಂಚುತ್ತಿದ್ದಾರೆ..

Tags: COLD SPELLDelhiFarmers protest
Previous Post

ಪ್ರತಿಭಟನೆ ರೈತರ ಸಂವಿಧಾನಬದ್ಧ ಹಕ್ಕು – ಸುಪ್ರಿಂ ಕೋರ್ಟ್

Next Post

ಹಂಪಿ ವಿವಿ ಉಳಿಸಿಕೊಳ್ಳಲು ಕರವೇಯಿಂದ ಟ್ವಿಟರ್‌ ಅಭಿಯಾನ

Related Posts

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ
Top Story

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

by ಪ್ರತಿಧ್ವನಿ
May 1, 2026
0

ಬೆಂಗಳೂರು : ಕಾರ್ಮಿಕರು ದೇಶದ ಆರ್ಥಿಕ ಸಾಮಾಜಿಕ, ಅಭಿವೃದ್ಧಿಯ ಶಿಲ್ಪಿಗಳು. ಕಾಯಕವೇ ಕೈಲಾಸ ಅಂತ ಬಸವಣ್ಣ ಹೇಳಿದ್ದರು. ಯಾವುದೇ ಕೆಲಸ ಮಾಡಿದರೂ ಅದಕ್ಕೆ ಸಮಾನ ಗೌರವ ನೀಡಬೇಕು....

Read moreDetails
ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

May 1, 2026
ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

May 1, 2026
“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

May 1, 2026
ಗಂಡನ ಸಾಲ, ಹೆಂಡತಿ ಅಕೌಂಟ್‌ಗೆ ಬಿತ್ತು ಕತ್ತರಿ : ಗೃಹ ಲಕ್ಷ್ಮಿ ಹಣಕ್ಕೂ ಬ್ಯಾಂಕ್‌ಗಳಲ್ಲಿ ಇಲ್ಲದಾಯಿತೇ ಭದ್ರತೆ..?

ಗಂಡನ ಸಾಲ, ಹೆಂಡತಿ ಅಕೌಂಟ್‌ಗೆ ಬಿತ್ತು ಕತ್ತರಿ : ಗೃಹ ಲಕ್ಷ್ಮಿ ಹಣಕ್ಕೂ ಬ್ಯಾಂಕ್‌ಗಳಲ್ಲಿ ಇಲ್ಲದಾಯಿತೇ ಭದ್ರತೆ..?

May 1, 2026
Next Post
ಹಂಪಿ ವಿವಿ ಉಳಿಸಿಕೊಳ್ಳಲು ಕರವೇಯಿಂದ ಟ್ವಿಟರ್‌ ಅಭಿಯಾನ

ಹಂಪಿ ವಿವಿ ಉಳಿಸಿಕೊಳ್ಳಲು ಕರವೇಯಿಂದ ಟ್ವಿಟರ್‌ ಅಭಿಯಾನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada