• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ʼಮತ್ತೆ ಲಾಕ್‌ಡೌನ್ʼ ಕುರಿತು ಮೋದಿ ಸಲಹೆ: ತಿರಸ್ಕರಿಸಿದ ಕರ್ನಾಟಕ ಸರ್ಕಾರ

by
September 26, 2020
in ದೇಶ
0
ʼಮತ್ತೆ ಲಾಕ್‌ಡೌನ್ʼ ಕುರಿತು ಮೋದಿ ಸಲಹೆ: ತಿರಸ್ಕರಿಸಿದ ಕರ್ನಾಟಕ ಸರ್ಕಾರ
Share on WhatsAppShare on FacebookShare on Telegram

ಕರೋನಾ ಸಾಂಕ್ರಾಮಿಕ ರೋಗ ಮೊದಲೇ ಕುಂಠಿತಗೊಂಡಿದ್ದ ದೇಶದ ಆರ್ಥಿಕ ಪ್ರಗತಿಯನ್ನು ಇನ್ನಷ್ಟು ಬರ್ಬರವಾಗಿಸಿತು. ಬಹುಮುಖ್ಯವಾಗಿ ಕರೋನಾ ಹರಡುವಿಕೆಯ ತಡೆಯಲು ದೇಶವ್ಯಾಪಿ ಹೇರಿದ ʼಲಾಕ್‌ಡೌನ್‌ʼ ಈ ಕುಸಿತಕ್ಕೆ ನೇರ ಕಾರಣವಾಯಿತು.

ADVERTISEMENT

ಲಾಕ್‌ಡೌನ್‌ ದೇಶದ ಆರ್ಥಿಕತೆಯಯನ್ನು ನಾಶಗೊಳಿಸಿತಲ್ಲದೆ, ಕರೋನಾದ ನಾಶಕ್ಕೆ ಕಾರಣವಾಗಲಿಲ್ಲ. ಸರಿಸುಮಾರು ಮೂರು ತಿಂಗಳು ಯಾವುದೇ ಮುನ್ನೆಚ್ಚರಿಕೆ, ಯೋಜನೆಗಳಿಲ್ಲದ ಸುದೀರ್ಘ ಲಾಕ್‌ಡೌನ್‌ ಪ್ರಪಂಚದ ಇನ್ಯಾವ ದೇಶಗಳಲ್ಲೂ ಇರಲಿಲ್ಲ, ಭಾರತದ ಹೊರತಾಗಿ. ಬೇರೆ ದೇಶಗಳು ಲಾಕ್‌ಡೌನ್‌ ಮಾಡಿತ್ತಾದರೂ ಭಾರತದಷ್ಟು ಯಾವ ದೇಶವೂ ಲಾಕ್‌ಡೌನ್‌ನಿಂದ ತತ್ತರಿಸಿರಲಿಲ್ಲ.

ಮುಖ್ಯವಾಗಿ, ಏಕಾಏಕಿ ಲಾಕ್‌ಡೌನ್‌ನಿಂದ ನೇರ ಸಂಕಷ್ಟಗೊಳಗಾಗಿದ್ದು ವಲಸೆ ಕಾರ್ಮಿಕರು. ದಿನನಿತ್ಯದ ರೊಟ್ಟಿಗೆ ಅಂದಂದೇ ದುಡಿಯುವ ಮಂದಿ ಹಸಿವು, ಬಳಲಿಕೆಯಿಂದ ಬೀದಿಹೆಣಗಳಾಗುತ್ತಿದ್ದರೆ, ʼಷೋಕಿಲಾಲʼ ಎಂದು‌ ವಿಪಕ್ಷಗಳಿಂದ ಕರೆಯಲ್ಪಡುವ ಪ್ರಧಾನಿ ಮೋದಿ ʼಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಲುʼ ಕರೆ ನೀಡಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮೋದಿ ಕರೆಗೆ ಓಗೊಟ್ಟ ಭಾರತ ಗುಂಪು ಗುಂಪಾಗಿ ಚಪ್ಪಾಳೆ ತಟ್ಟುತ್ತಾ, ಗಂಟೆ, ತಟ್ಟೆ ಬಡಿಯುತ್ತಾ, ದೀಪ ಬೆಳಗಿಸಿ, ಬೆಂಕಿ ಮತ್ತು ವೈಬ್ರೇಷನ್‌ ಗೆ ಕರೋನಾವನ್ನು ಕೊಲ್ಲುವ ಮೂರ್ಖತನ ಪ್ರದರ್ಶಿಸಿತು. ಭಾರತದ ರಾಜಕೀಯ ನಾಯಕರುಗಳೇ ಈ ರೀತಿ ಮಾಡುವುದರಿಂದ ಕರೋನಾ ನಾಶವಾಗುತ್ತದೆಂದು ಹೇಳಿದ್ದರು, ಜನರನ್ನು ನಂಬಿಸಿದ್ದರು.

ಕೇಂದ್ರದ ಲಾಕ್‌ಡೌನ್‌ ವಿಫಲ ತಂತ್ರವೆಂದು ತಜ್ಞರು ನೀಡಿದ ಎಚ್ಚರಿಕೆ, ಲಾಕ್‌ಡೌನ್‌ ಮುಗಿದ ಬಳಿಕ ಸಾಬೀತಾಯಿತು. ದಿನವೊಂದಕ್ಕೆ ಸರಿಸುಮಾರು ಒಂದು ಲಕ್ಷದಷ್ಟು ಹೊಸ ಪ್ರಕರಣಗಳು, ಸುಮಾರು ಒಂದು ಲಕ್ಷದ ಗಡಿ ತಲುಪಿದ ಕರೋನಾ ಪೀಡಿತರ ಸಾವು, ಅರುವತ್ತು ಲಕ್ಷದಷ್ಟು ಕಂಡುಬಂದ ಒಟ್ಟು ಪ್ರಕರಣಗಳು ಕೇಂದ್ರ ಲಾಕ್‌ಡೌನ್‌ ನಿರೀಕ್ಷಿತ ಯಶಸ್ಸು ತಂದಿಲ್ಲ ಎನ್ನುವದನ್ನು ಸಾಬೀತು ಪಡಿಸಿದವು.

ಕರೋನಾ ಯುದ್ಧ 21 ದಿನಗಳಲ್ಲಿ ಮುಗಿಯುತ್ತದೆ ಎಂದು ಭರವಸೆ ನೀಡಿದ್ದ ಮೋದಿ ಮಹಾಭಾರತ ಯುದ್ಧವನ್ನು ಉಲ್ಲೇಖಿಸಿ 21 ದಿನಗಳ ಲಾಕ್‌ಡೌನ್‌ ಹೇರಿದ್ದರು. ನಿರೀಕ್ಷೆಗಳನ್ನೂ ಮೀರಿ ಕರೋನಾ ಹಬ್ಬುತ್ತಿದ್ದಂತೆ ಲಾಕ್‌ಡೌನ್‌ ವಿಸ್ತರಿಸಿಕೊಳ್ಳುತ್ತಾ ಸಾಗಿತು. ಕೊನೆಗೆ ಲಾಕ್‌ಡೌನ್‌ ಕೆಲಸ ಮಾಡುವುದಿಲ್ಲವೆಂದು ಅರಿವಾಗಿ ಅದನ್ನು ಕೈಬಿಟ್ಟಿತು.

ದೇಶದಲ್ಲಿ ಕರೋನಾ ಪ್ರಕರಣ ಏರುತ್ತಲೇ ಇದೆ. ನಿಯಂತ್ರಿಸಲು ಬಾರದ ಮೋದಿ ಮತ್ತೆ ಲಾಕ್‌ಡೌನ್‌ ಮೊರೆ ಹೋಗುವ ಹುನ್ನಾರದಲ್ಲಿದ್ದಾರೆ. ಬುಧವಾರ ನಡೆದ ಏಳು ರಾಜ್ಯಗಳ ಮುಖ್ಯಮಂತ್ರಿ ಸಭೆಯಲ್ಲಿ ಒಂದೆರಡು ದಿನ ಲಾಕ್‌ಡೌನ್‌ ಹೇರುವ ಕುರಿತಂತೆ ಸಲಹೆ ನೀಡಿದ್ದಾರೆ. ಮತ್ತೆ ಮತ್ತೆ ವಿಫಲಗೊಳ್ಳುತ್ತಿರುವ ಲಾಕ್‌ಡೌನನ್ನೇ ಮೋದಿ ನೆಚ್ಚಿ ಕುಳಿತಿರುವುದು ಕರೋನಾ ನಿಯಂತ್ರಿಸಲು ಅವರಿಗೆ ಸರಿಯಾದ ಯಾವ ಕಾರ್ಯತಂತ್ರವೂ ಇಲ್ಲದಿರುವುದನ್ನು ಸಾಬೀತುಪಡಿಸುತ್ತಿವೆ.

ಆದರೆ ಈ ಬಾರಿ ಏಕಾಏಕಿ ನೋಟ್‌ಬ್ಯಾನ್‌, ಲಾಕ್‌ಡೌನ್‌ ಮೊದಲಾದ ತೀರ್ಮಾನ ತೆಗೆದ ಹುಂಬ ಅಹಂ ಮೋದಿಯವರಲ್ಲಿ ಕಡಿಮೆಯಾಗಿದೆ. ಆದೇಶದ ಬದಲಾಗಿ ಸಲಹೆಯ ರೂಪಕ್ಕೆ ಹೋಗಿದ್ದಾರೆ. ಮೊದಲೇ ಪ್ರಧಾನಿಯ ಹುಂಬತನದ ನಿರ್ಧಾರಗಳಿಂದ ಸಾಕಷ್ಟು ಬಸವಳಿದಿರುವ ರಾಜ್ಯಗಳು ಮೋದಿಯ ಈ ಸಲಹೆಯನ್ನು ತಿರಸ್ಕರಿಸಿವೆ.

Also Read: ಲಾಕ್‌ಡೌನ್ ಇಲ್ಲದೆ ಕೋವಿಡ್ ವಿರುದ್ದ ಹೋರಾಟ ಯಶಸ್ವಿ ಆಗಲಿದೆಯೇ?

ಬಿಜೆಪಿ ಸರ್ಕಾರವೇ ಇರುವ ಕರ್ನಾಟಕ ರಾಜ್ಯ ಮೋದಿ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಅಂದರೆ ತಿರಸ್ಕರಿಸಿದೆ. ಸೆಪ್ಟೆಂಬರ್‌ 24ರಂದು ಬೆಂಗಳೂರು ನಗರವೊಂದರಲ್ಲೇ ನಾಲ್ಕು ಸಾವಿರಕ್ಕೂ ಹೆಚ್ಚು ಹೊಸ ಕರೋನಾ ಪ್ರಕರಣಗಳು ಪತ್ತೆಯಾದ ಬಳಿಕ, ಮೋದಿ ನೀಡಿದ ಸಲಹೆಯಿಂದ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಹೇರುವರೋ ಎಂಬ ಆತಂಕ ರಾಜ್ಯದ ಜನತೆಯಲ್ಲಿ ಸಣ್ಣದಾಗಿ ಮೂಡಿತ್ತು. ಆದರೆ ರಾಜ್ಯದ ಜನರ ಆತಂಕವನ್ನು ನಿವಾಳಿಸುವಂತೆ ವೈದ್ಯಕೀಯ ಸಚಿವ ಸುಧಾಕರ್‌ ಹಾಗೂ ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿಕೆ ನೀಡಿದ್ದಾರೆ.

ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್‌ ಕೆ, ಲಾಕ್‌ಡೌನ್‌ ಕುರಿತಾದ ವದಂತಿಗಳಿಗೆ ತೆರೆ ಎಳೆದಿದ್ದಾರೆ. ರಾಜ್ಯ ಸರ್ಕಾರ ಮತ್ತೊಮ್ಮೆ ಲಾಕ್‌ಡೌನ್‌ ಹೇರುವುದಿಲ್ಲ ಎಂದಿದ್ದಾರೆ. ರಾಜ್ಯ ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವಿಲ್ಲ ಎಂದಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್ ವಿಧಿಸಲು ಶಿಫಾರಸು ಮಾಡಿದ್ದಾರೆ. ಆದರೆ, ಇದು ಯಾವುದೇ ರಾಜ್ಯಕ್ಕೆ ಕಡ್ಡಾಯವಲ್ಲ. ಅಲ್ಲದೆ ಲಾಕ್‌ಡೌನ್ ಮತ್ತೆ ಹೇರಲು ಯಾವುದೇ ನಿರ್ದಿಷ್ಟ ಕಾರಣಗಳಿಲ್ಲ ಎಂದಿದ್ದಾರೆ.

Also Read: ಲಾಕ್‌ಡೌನ್ ದುರಂತಕ್ಕೆ ‘ಗಿಲಿಗಿಲಿ ಪೂ’ ಚಮತ್ಕಾರದ ಹಪಾಹಪಿ ಕಾರಣವೇ?

ಈತನ್ಮಧ್ಯೆ, ರಾಜ್ಯ ಸರ್ಕಾರವು COVID-19 ಬಗ್ಗೆ ಜಾಗೃತಿ ಮೂಡಿಸಲು ಬಯಸಿದ್ದರೂ, ಮತ್ತೊಂದು ಲಾಕ್ ಡೌನ್ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಕರ್ನಾಟಕ ಪ್ರವಾಸೋದ್ಯಮ ಸಚಿವ ಸಿ.ಟಿ ರವಿಯೂ ಹೇಳಿದ್ದಾರೆ. ಒಟ್ಟಾರೆ ರಾಜ್ಯದ ಎರಡು ಸಚಿವರುಗಳೇ ಲಾಕ್‌ಡೌನ್‌ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಪ್ರಧಾನಿಯ ʼಲಾಕ್‌ಡೌನ್‌ʼ ಸಲಹೆಗೆ ಕಿಮ್ಮತ್ತಿನ ಬೆಲೆ ನೀಡಿಲ್ಲ ಅನ್ನುವುದು ಋಜುವಾತಾಗಿದೆ.

Tags: ಡಾ. ಕೆ ಸುಧಾಕರ್ನರೇಂದ್ರ ಮೋದಿಲಾಕ್‌ಡೌನ್‌
Previous Post

ಪ್ರಧಾನಿ ಮೋದಿ ಅಧಿಕಾರಾವಧಿ: ರೈತರ ಪ್ರತಿಭಟನೆಯಲ್ಲಿ ಶೇಕಡಾ 700ರಷ್ಟು ಏರಿಕೆ

Next Post

GST ಪಾಲು ಕೇಳಿ, ಧೈರ್ಯವಿಲ್ಲದಿದ್ದರೆ ನಮ್ಮನ್ನು ಕರೆಯಿರಿ; BSY ಗೆ ಸಿದ್ದರಾಮಯ್ಯ ಸವಾಲು

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
Next Post
GST ಪಾಲು ಕೇಳಿ

GST ಪಾಲು ಕೇಳಿ, ಧೈರ್ಯವಿಲ್ಲದಿದ್ದರೆ ನಮ್ಮನ್ನು ಕರೆಯಿರಿ; BSY ಗೆ ಸಿದ್ದರಾಮಯ್ಯ ಸವಾಲು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada