ವಿಪಕ್ಷ ನಾಯಕರ ಟೀಕೆಯನ್ನು ನಿರ್ಲಕ್ಷಿಸಿದ್ದೇ ದೇಶಕ್ಕೆ ದುಬಾರಿ ಆಯಿತೇ..!?

ಫೆಬ್ರವರಿ 12ರಂದು ಒಂದು ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಕರೋನಾ ವೈರಸ್ ಎನ್ನುವುದನ್ನು ನಾವು ತುಂಬಾ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. ಕರೋನಾ ವೈರಸ್ ನಿಂದ ನಮ್ಮ ಜನ ಹಾಗೂ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಲಿದೆ ಎಂದೆನಿಸುತ್ತದೆ.
ಪ್ರಾದೇಶಿಕ ಪಕ್ಷವಾಗಿ ಅಧಿಕಾರ ಹಿಡಿಯಲು ಜೆಡಿಎಸ್ ಗೆ ಎಲ್ಲಾ ಅವಕಾಶವಿದೆ, ಆದರೆ…

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವಾಗಿ ಬೆಳೆದು ಅಧಿಕಾರಕ್ಕೆ ಬರಲು ಜೆಡಿಎಸ್ ಪಕ್ಷಕ್ಕೆ ಎಲ್ಲಾ ಅವಕಾಶಗಳೂ ಇವೆ. ನಾಯಕರು ಒಟ್ಟಾದರೆ ಜನ ಕೈಜೋಡಿಸುತ್ತಾರೆ. ದೇವೇಗೌಡರನ್ನು ಹೊರತುಪಡಿಸಿ ಅಂತಹ ಅವಕಾಶವನ್ನು ಬಳಸಿಕೊಂಡು ಜೆಡಿಎಸ್ ಅನ್ನು ಬಲಗೊಳಿಸುವ ತಾಳ್ಮೆ ಮತ್ತು ಇಚ್ಛಾಶಕ್ತಿ ಇರುವವರು ಬೇರೆ ಯಾರೂ ಇಲ್ಲ
ಜಂಜಾಟದಿಂದ ಮುಕ್ತಿ ಪಡೆಯಲು ಮತ್ತೆ ಮಂಗಳೂರಿಗೆ ಹಿಂತಿರುಗಿದರೇ ಸಿದ್ಧಾರ್ಥ್

ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಪಡೆದಿರುವ ಸಿದ್ದಾರ್ಥ್ ಅವರ ತಂದೆ ಚಿಕ್ಕಮಗಳೂರು ಮೂಡಿಗೆರೆಯಲ್ಲಿ ಕಾಫಿ ತೋಟಗಳನ್ನು ಹೊಂದಿದ್ದರು.
ಮಾನ-ಮರ್ಯಾದೆಯೇ ಆಸ್ತಿ ಎಂದಿದ್ದ ಗೊಗಾಯಿ ಘನತೆ ಎಲ್ಲಿಗೆ ಬಂತು?

ಭವಿಷ್ಯದಲ್ಲಿ ನಿವೃತ್ತರಾಗುವ ನಿರ್ಣಾಯಕ ಸ್ಥಾನದಲ್ಲಿರುವ ನ್ಯಾಯಾಧೀಶರಿಗೂ, ನೀವು ನಮ್ಮನ್ನು ನೋಡಿಕೊಂಡರೆ, ನಾಳೆ ನಾವೂ ನಿಮ್ಮನ್ನು ನೋಡಿಕೊಳ್ಳುವೆವು ಎಂಬ ಸ್ಪಷ್ಟ ಸಂದೇಶವನ್ನು ಕೂಡ ಇಂತಹ ನೇಮಕಾತಿಗಳು ರವಾನಿಸುತ್ತವೆ. ಹಾಗಾಗಿ ಅಂತಿಮವಾಗಿ ನ್ಯಾಯಾಂಗದ ನ್ಯಾಯಪಕ್ಷಪಾತಿ ಧೋರಣೆಗೆ ಬದಲಾಗಿ ಅಧಿಕಾರಸ್ಥರ ಪಕ್ಷಪಾತಿಯಾಗಿ ಬದಲಾಗಲಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಕುಟುಕು ಕಾರ್ಯಾಚರಣೆಯಲ್ಲಿ ಬೆತ್ತಲಾದ BJP, ದೆಹಲಿ ಪೊಲೀಸ್ ಗೆ ಶಿಕ್ಷೆಯೇನು?

ಪೋಷಕನಾಗಬೇಕಾದ ಕುಲಪತಿಯ ಪಿತೂರಿ, ರಕ್ಷಕ ಸ್ಥಾನದಲ್ಲಿ ನಿಲ್ಲದೆ ಆಡಳಿತಗಾರರ ಮರ್ಜಿಗೆ ಬಿದ್ದ ಆರಕ್ಷಕರು, ಸಂತ್ರಸ್ತರಿಗೆ ನೆರವಾಗಬೇಕಾದ ಸರ್ಕಾರವೇ ಪ್ರತೀಕಾರಕ್ಕೆ ಇಳಿದರೆ ಹೇಗಿರುತ್ತದೆ? ಜೆ ಎನ್ ಯು ಪ್ರಕರಣ ಇದಕ್ಕೆ ಸ್ಪಷ್ಟ ಉದಾಹರಣೆ.
ಕಂಬಳ ವರದಿ: ಬೆತ್ತಲಾಗುತ್ತಿದೆ ಪತ್ರಕರ್ತರ ಅಲ್ಪಜ್ಞಾನ

ಹುದ್ದೆ ಕಡಿತ, ವೆಬ್ಸೈಟ್ ಹಾಗೂ ಪ್ರಿಂಟ್ ಎರಡೂ ವಿಭಾಗಗಳಿಗೂ ಸುದ್ದಿ ನೀಡಲೇಬೇಕಾದ ಅನಿವಾರ್ಯತೆ, ಪುನರ್ ಮನನ ತರಬೇತಿಗಳ ಕೊರತೆ, ವಿಚಾರ ಸಂಕಿರಣಗಳಿಗೂ ಕಳುಹಿಸಲು ಕೆಲಸದ ಒತ್ತಡವಿದೆ ಎಂಬ ಬ್ಯೂರೋ ಹೆಡ್ಗಳ ನೆಪ, ಕುಸಿದ ಓದು-ಸುತ್ತಾಟ, ಇವೆಲ್ಲದರ ಪರಿಣಾಮ ವಾಸ್ತವದಿಂದ ದೂರವಾಗುತ್ತಿದ್ದಾರೆ ಪತ್ರಕರ್ತರು.
ಖಜಾನೆ ಖಾಲಿ ಎಂದು ಒಪ್ಪಿಕೊಂಡ ಕೇಂದ್ರ ಸರ್ಕಾರ; ಬರಿಗೈ ಸಂಸದರು ಏನು ಮಾಡುತ್ತಾರೆ?

ಕೇಂದ್ರ ಸರ್ಕಾರ ಕಡೆಗೂ ಸಂಪನ್ಮೂಲ ಹೊಂದಿಸಿಕೊಳ್ಳಲು ವಿಧಿಯಿಲ್ಲದೆ ಸಂಸದರ ನಿಧಿಯನ್ನು ನುಂಗಿಹಾಕಲು ಹೊರಟಿದೆ. ಓರ್ವ ಸಂಸದನಿಗೆ ವರ್ಷಕ್ಕೆ 5 ಕೋಟಿ ರೂಪಾಯಿ ಸಂಸದರ ಅನುದಾನ ಇರುತ್ತದೆ. ಲೋಕಸಭೆಯ 543 ಮತ್ತು ರಾಜ್ಯಸಭೆಯ 245 ಸದಸ್ಯರೆಂದರೆ ಒಟ್ಟು 788 ಸಂಸದರು. ಇವರೆಲ್ಲರಿಂದ ವರ್ಷಕ್ಕೆ 3,940 ಕೋಟಿ ರೂಪಾಯಿ ಅನುದಾನ ಇರುತ್ತದೆ. 2 ವರ್ಷಕ್ಕೆ 7,880 ಕೋಟಿ ರೂಪಾಯಿ ಅನುದಾನ ಇರುತ್ತದೆ.
ಸರ್ದಾರ್ ಪಟೇಲರು ಆರ್ಎಸ್ಎಸ್ ನಿಷೇಧಿಸಿ ಇಂದಿಗೆ 72 ವರ್ಷ

ಆರ್ಎಸ್ಎಸ್ ಸಂಪೂರ್ಣವಾಗಿಭಾರತದ ಧ್ವಜದ ಎದುರು ಶರಣಾಗತವಾಗುವವರೆಗೂ ಪಟೇಲರು ತಮ್ಮ ಪಟ್ಟು ಸಡಿಲಿಸಲಿಲ್ಲ. ಇಂತಹ ಸಂಘಟನೆಯನ್ನುಸರ್ದಾರ್ ಪಟೇಲರು ನಿಷೇಧಿಸಿ ಇಂದಿಗೆ 72 ವರ್ಷ ತುಂಬಿದೆ.
ಪೌರತ್ವ ವಿಚಾರದಲ್ಲಿ ಸರ್ಕಾರಕ್ಕೆ ಮುಖಭಂಗ! ವಿಪಕ್ಷಗಳಿಗೆ ಸಿಕ್ಕಿದೆ ಬ್ರಹ್ಮಾಸ್ತ್ರ!

ಪ್ರತಿಭಟನಾಕಾರರ ವಿರುದ್ಧ ಸರ್ಕಾರ ಕೈಗೊಂಡಿರುವ ಕೆಲಸಗಳ ಬಗ್ಗೆ ಕೋರ್ಟ್ನಲ್ಲಿ ಸರ್ಕಾರಗಳಿಗೆ ಹಿನ್ನಡೆ ಆಗುತ್ತಿದೆ. ಕರ್ನಾಟಕದಲ್ಲೂ ಬಿಜೆಪಿ ಸರ್ಕಾರದ ನಿರ್ಧಾರಕ್ಕೆಹೈಕೋರ್ಟ್ ಪರೋಕ್ಷ ಚಾಟಿ ಬೀಸಿದೆ.
ದೇಶಕ್ಕೆ ಕರೋನಾ ಭೀತಿ… ಬಿಸಿಸಿಐಗೆ ‘ಐಪಿಎಲ್’ ಲಾಭ-ನಷ್ಟದ ಚಿಂತೆ..!!

ಸದ್ಯ ಕರೋನಾ ಆತಂಕದಿಂದ ಈ ಬಾರಿಯ ಐಪಿಎಲ್ ಮಂಕಾಗಲಿದೆ. ಪ್ರೇಕ್ಷಕ ವರ್ಗ ಬರುತ್ತೋ, ಇಲ್ವೋ ಅನ್ನೋ ಆತಂಕಕ್ಕಿಂತಲೂ ಬಿಸಿಸಿಐಗೆ ಅದೆಲ್ಲಿ ಹಣದ ಒಳಹರಿವು ಕಡಿಮೆಯಾಗುತ್ತೆ ಅನ್ನೋ ಆತಂಕವೇ ಜಾಸ್ತಿಯಾಗಿದೆ.ಆ ಕಾರಣಕ್ಕಾಗಿಯೇ 2020ರ ಐಪಿಎಲ್ನಲ್ಲಿ ಕೊನೆಗೂ ಒಂದಿಷ್ಟು ಮಾರ್ಪಾಡು ಮಾಡಿದೆ.