Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಹೈದರಾಬಾದ್‌ ಮೆಟ್ರೋ ಕಾಮಗಾರಿಯ ವೇಗ ಬೆಂಗಳೂರಿಗೊಂದು ಪಾಠ!

ಹೈದರಾಬಾದ್‌ ಮೆಟ್ರೋ ಕಾಮಗಾರಿಯ ವೇಗ ಬೆಂಗಳೂರಿಗೊಂದು ಪಾಠ!
ಹೈದರಾಬಾದ್‌ ಮೆಟ್ರೋ ಕಾಮಗಾರಿಯ ವೇಗ ಬೆಂಗಳೂರಿಗೊಂದು ಪಾಠ!

February 9, 2020
Share on FacebookShare on Twitter

ಕಾರ್ಯಾರಂಭಗೊಂಡ ಎರಡು ವರ್ಷ 2-3 ತಿಂಗಳ ಒಳಗೇ ತನ್ನ ಮೂರೂ ಲೈನ್‌ಗಳಲ್ಲಿ ಸಕ್ರಿಯವಾಗಿರುವ ಹೈದರಾಬಾದ್‌ ಮೆಟ್ರೋ ಈಗ ದೆಹಲಿ ಬಿಟ್ಟರೆ ದೇಶದ ಎರಡನೇ ಅತಿ ದೊಡ್ಡ ಜಾಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದ್ಯ 69 ಕಿಮೀನಷ್ಟು active network ಹೊಂದಿರುವ ಹೈದರಾಬಾದ್‌ ಮೆಟ್ರೋದ ನಿರ್ಮಾಣ ಕಾಮಗಾರಿ ಸಂಬಂಧ ತೆಲಂಗಾಣ ಸರ್ಕಾರ ತೋರುತ್ತಿರುವ ರಾಜಕೀಯ ಇಚ್ಛಾಶಕ್ತಿಗೆ ಎಲ್ಲೆಡೆಯಿಂದ ಪ್ರಶಂಸೆ ಕೇಳಿ ಬರುತ್ತಿದೆ.

ಹೆಚ್ಚು ಓದಿದ ಸ್ಟೋರಿಗಳು

ಕನ್ನಡಿಗರ ಆದ್ಯತೆಗಳೂ ಕರ್ನಾಟಕದ ಮುನ್ನಡೆಯೂ.. 2023ರ ಚುನಾವಣೆಗಳು ಸಮೀಪಿಸುತ್ತಿರುವಂತೆ ಭರವಸೆಗಳ ಮಹಾಪೂರವೇ ಹರಿದುಬರುತ್ತಿದೆ..!

ಜೆಡಿಎಸ್ ಪರ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪ್ರಚಾರ..!

ಬಿಜೆಪಿಗೆ ಬಿಜೆಪಿಯೇ ಎದುರಾಳಿ..! ‘ನಾವಿಕನಿಲ್ಲದ ಹಡಗು’ ಭಾಗ – 02

ಮತ್ತೊಂದು ಕಡೆ, ಎಂಟೂವರೆ ವರ್ಷಗಳ ಹಿಂದೆಯೇ ಕಾರ್ಯಾರಂಭಗೊಂಡ ಬೆಂಗಳೂರಿನ ನಮ್ಮ ಮೆಟ್ರೋ ಜಾಲದ ವಿಸ್ತರಣೆ ಬಹಳ ನಿಧಾನವಾಗಿ ಸಾಗುತ್ತಿದ್ದು ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಕಾರಣ. ಮೊದಲೇ ಟ್ರಾಫಿಕ್ ಜಾಮ್‌ನಿಂದ ನರಳುತ್ತಿರುವ ಸಿಲಿಕಾನ್ ಸಿಟಿ ಜನರು ’ಇನ್ನೆಷ್ಟು ದಿನ ಕಾಯಬೇಕಪ್ಪಾ?’ ಎಂದು ಮೌನವಾಗಿ ಕಷ್ಟವನ್ನು ನುಂಗಿಕೊಳ್ಳಬೇಕಾದ ಪರಿಸ್ಥಿತಿ ಇದೆ. ವಿಸ್ತೀರ್ಣದಲ್ಲಿ ಹೈದರಾಬಾದ್‌ಗಿಂತ ದೊಡ್ಡದಾದ, ದೇಶದ ಮೂರನೇ ಅತಿ ದೊಡ್ಡ ನಗರವೂ ಆಗಿರುವ ಸಿಲಿಕಾನ್‌ ಸಿಟಿಯಲ್ಲಿ ಸಕ್ರಿಯವಾದ ಮೆಟ್ರೋ ಜಾಲದ ಉದ್ದ ಕೇವಲ ಬರೀ 42 ಕಿಮೀ ನಷ್ಟು ಮಾತ್ರ. ಎರಡು ಲೈನ್‌ಗಳು ಸಕ್ರಿಯವಾಗಿದ್ದು, ದಿನೇ ದಿನೇ ಹೆಚ್ಚುತ್ತಲೇ ಇರುವ ಜನಸಂಖ್ಯೆ ಹಾಗೂ ಸಂಚಾರ ದಟ್ಟಣೆಯ ಕಾರಣ ನಗರಾದ್ಯಂತ ಇನ್ನಷ್ಟು ವ್ಯಾಪಕವಾದ ಮೆಟ್ರೋ ಜಾಲದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಮೊನ್ನೆ ತಾನೇ ಹೈದರಾಬಾದ್ ಮೆಟ್ರೋ ಜಾಲಕ್ಕೆ ಹೆಚ್ಚುರಿಯಾಗಿ 11 ಕಿಮೀ ಮಾರ್ಗವನ್ನು ಸೇರಿಸುವ ಕೆಲಸ ಯಶಸ್ವಿಯಾಗಿ ಮುಗಿದಿದೆ. ಜಗತ್ತಿನ ಅತಿ ದೊಡ್ಡ ಸಾರ್ವಜನಿಕ ಖಾಸಗಿ ಪಾಲುದಾರಿಕೆ (PPP) ಪ್ರಾಜೆಕ್ಟ್‌‌ಗೆ ಮುಂದಡಿ ಇಟ್ಟು, ಇದನ್ನು ಬಹಳ ಅಚ್ಚುಕಟ್ಟಾಗಿ ಅನುಷ್ಠಾನ ಮಾಡಿಕೊಂಡು ಹೋಗುತ್ತಿರುವ ಹೈದರಾಬಾದ್‌ ಮೆಟ್ರೋನ ಮೂರನೇ ಲೈನ್‌ಅನ್ನು ಲೋಕಾರ್ಪಣೆ ಮಾಡಿದ ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌, ಇಲ್ಲಿನ ಜುಬಿಲೀ ಬಸ್ ನಿಲ್ದಾಣದಿಂದ ಚಿಕ್ಕಡ್‌ಪಲ್ಲಿಯವರೆಗೆ ರೈಲಿನಲ್ಲಿ ಸಂಚರಿಸಿ ಉದ್ಘಾಟನಾ ಸವಾರಿ ಮಾಡಿದ್ದಾರೆ.

ನವೆಂಬರ್‌ 28, 2017ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಧ್ಯುಕ್ತ ಚಾಲನೆ ಪಡೆದ ಹೈದರಾಬಾದ್ ಮೆಟ್ರೋ, ನೋಡನೋಡುತ್ತಿದ್ದಂತೆಯೇ ಮೂರು ಲೈನ್‌ಗಳನ್ನು ಅಭಿವೃದ್ಧಿಪಡಿಸಿ, ಅವೆಲ್ಲವೂ ಈಗ ಸಕ್ರಿಯವಾಗಿ ಚಾಲೂ ಮಾಡಿ, ಪ್ರತಿನಿತ್ಯ 780 ಟ್ರಿಪ್‌ಗಳ ಮೂಲಕ 4 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಾಟ ಮಾಡುತ್ತಿದೆ. ದೇಶದ ಅತಿ ದೊಡ್ಡ ಮೆಟ್ರೊ ನಿಲ್ದಾಣವಾಗಲಿದೆ ಎನ್ನಲಾಗುತ್ತಿರುವ ಮಹಾತ್ಮಾ ಗಾಂಧಿ ಬಸ್ ನಿಲ್ದಾಣ (MGBS) ಹಾಗೂ ಫಲಕ್‌ನುಮಾ ನಡುವಿನ ಮಾರ್ಗವೊಂದು ಪೂರ್ತಿಯಾಗಿ ಕಾಮಗಾರಿ ಕೆಲಸ ಮಗಿಸಿ ಈ ಜಾಲಕ್ಕೆ ಸೇರಿಕೊಂಡಲ್ಲಿ, ಮೊದಲ ಹಂತದ 73 ಕಿಮೀಗಳ ಅಷ್ಟೂ ಜಾಲ ಆಕ್ಟಿವೇಟ್ ಆಗಲಿದೆ. 20,000 ಕೋಟಿ ರೂಗಳ ಈ ಬೃಹತ್‌ ಯೋಜನೆಯ ನಿಮಾಣ ಕಾಮಗಾರಿಯನ್ನು L&T ಸಹಭಾಗಿತ್ವದಲ್ಲಿ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗಲಾಗುತ್ತಿದೆ.

ಮತ್ತೊಂದೆಡೆ ದಿನದ 24 ಗಂಟೆಗಳ ಕಾಲವೂ ನಿರ್ಮಾಣ ಕಾಮಗಾರಿ ಮಾಡುವ ಮೂಲಕ ಮುಂಬಯಿ ಮೆಟ್ರೋ 3 ಅನ್ನು ಸಾಧ್ಯವಾದಷ್ಟು ಬೇಗ ಲೋಕಾರ್ಪಣೆ ಮಾಡಲು ಇಚ್ಛಿಸಿರುವ ಮಹಾರಾಷ್ಟ್ರ ಸರ್ಕಾರ, ಪುಣೆ ಹಾಗೂ ನಾಗ್ಪುರ ಮೆಟ್ರೋಗಳನ್ನೂ ಸಹ ದಾಖಲೆ ವೇಗದಲ್ಲಿ ಸಕ್ರಿಯವಾಗಿಸಿದೆ. ಮುಂಬಯಿ, ಚೆನ್ನೈ, ಹೈದರಾಬಾದ್, ದೆಹಲಿ, ಕೋಲ್ಕತ್ತಾ ಹಾಗೂ ಪುಣೆಗಳಲ್ಲಿ ಮೆಟ್ರೋಗಳೊಂದಿಗೆ ಸಬ್ ಅರ್ಬನ್‌ ರೈಲ್ವೇ ಜಾಲಗಳೂ ಸಹ ಸಕ್ರಿಯವಾಗಿ

ದಶಕಗಳ ಹೋರಾಟದ ಬಳಿಕ ಈ ಬಾರಿಯ ಬಜೆಟ್‌ನಲ್ಲಿ ಕೊನೆಗೂ ಸಬ್‌ ಅರ್ಬನ್‌ ರೈಲಿನ ಯೋಜನೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡ ಬೆಂಗಳೂರೆಂಬ ಟ್ರಾಫಿಕ್‌ ಬೆಂಗಾಡಿನ ನಿವಾಸಿಗಳು ಇನ್ನೂ ಅದೆಷ್ಟು ವರ್ಷಗಳು ತಮ್ಮ ದಿನನಿತ್ಯದ ರೋದನೆಗೆ ಫುಲ್ ಸ್ಟಾಪ್ ಹಾಕಲು ಕಾಯಬೇಕೋ ಗೊತ್ತಿಲ್ಲ.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಕೈ ಬಿಟ್ಟಿದ್ದಕ್ಕೆ ಕಾರಣ ಮತ್ತು ಮುಂದಿನ ರಾಜಕೀಯ : Siddaramaiah
Top Story

ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಕೈ ಬಿಟ್ಟಿದ್ದಕ್ಕೆ ಕಾರಣ ಮತ್ತು ಮುಂದಿನ ರಾಜಕೀಯ : Siddaramaiah

by ಕೃಷ್ಣ ಮಣಿ
March 19, 2023
SIDDARAMAIAH VS DK SHIVAKUMAR | ಇನ್ನೂ ಮುಗಿಯದ ಸಿದ್ದರಾಮಯ್ಯ ಕ್ಷೇತ್ರ ಗೊಂದಲ #PRATIDHVANI
ಇದೀಗ

SIDDARAMAIAH VS DK SHIVAKUMAR | ಇನ್ನೂ ಮುಗಿಯದ ಸಿದ್ದರಾಮಯ್ಯ ಕ್ಷೇತ್ರ ಗೊಂದಲ #PRATIDHVANI

by ಪ್ರತಿಧ್ವನಿ
March 23, 2023
ಬಿಜೆಪಿಗೆ ಕೊಳ್ಳೆ ಹೊಡೆಯಲು ಎಟಿಎಂ ಆಗಿದೆ ಬೆಂಗಳೂರು..! ;  ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ
Top Story

ಬಿಜೆಪಿಗೆ ಕೊಳ್ಳೆ ಹೊಡೆಯಲು ಎಟಿಎಂ ಆಗಿದೆ ಬೆಂಗಳೂರು..! ; ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

by ಪ್ರತಿಧ್ವನಿ
March 22, 2023
ಕೋಲಾರದಿಂದ ಹಿಂದೆ ಸರಿದ ಸಿದ್ದರಾಮಯ್ಯ? ರಾಹುಲ್‌ ಸಲಹೆಯೇನು?
ಕರ್ನಾಟಕ

ಕೋಲಾರದಿಂದ ಹಿಂದೆ ಸರಿದ ಸಿದ್ದರಾಮಯ್ಯ? ರಾಹುಲ್‌ ಸಲಹೆಯೇನು?

by ಪ್ರತಿಧ್ವನಿ
March 18, 2023
ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ : ಸಿದ್ದರಾಮಯ್ಯ
Top Story

ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ : ಸಿದ್ದರಾಮಯ್ಯ

by ಪ್ರತಿಧ್ವನಿ
March 23, 2023
Next Post
ದಿಲ್ಲಿಯಲ್ಲಿ ಇವಿಎಂ ಹ್ಯಾಕ್ ಮಾಡುವ ಭೀತಿ? ಸಿಎಂ ಸಿಡಿಮಿಡಿ!

ದಿಲ್ಲಿಯಲ್ಲಿ ಇವಿಎಂ ಹ್ಯಾಕ್ ಮಾಡುವ ಭೀತಿ? ಸಿಎಂ ಸಿಡಿಮಿಡಿ!

ಕಪ್ಪತಗುಡ್ಡ ವನ್ಯಜೀವಿ ಧಾಮಕ್ಕೆ ಬಂದಿದೆಯಾ ಆಪತ್ತು? 

ಕಪ್ಪತಗುಡ್ಡ ವನ್ಯಜೀವಿ ಧಾಮಕ್ಕೆ ಬಂದಿದೆಯಾ ಆಪತ್ತು? 

ಉನ್ನತ ಹುದ್ದೆಗಳಿಗೆ  ಐಎಎಸ್‌ಯೇತರ ಅಧಿಕಾರಿಗಳನ್ನು ನೇಮಿಸುತ್ತಿರುವ ಕೇಂದ್ರ ಸರ್ಕಾರ

ಉನ್ನತ ಹುದ್ದೆಗಳಿಗೆ  ಐಎಎಸ್‌ಯೇತರ ಅಧಿಕಾರಿಗಳನ್ನು ನೇಮಿಸುತ್ತಿರುವ ಕೇಂದ್ರ ಸರ್ಕಾರ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist