Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ವಿಕ್ರಂ ಲ್ಯಾಂಡರ್ ನ ಅವಶೇಷದ ಸುಳಿವು ನೀಡಿದ ಚೆನ್ನೈ ಇಂಜಿನಿಯರ್ !

ವಿಕ್ರಂ ಲ್ಯಾಂಡರ್ ನ ಅವಶೇಷದ ಸುಳಿವು ನೀಡಿದ ಚೆನ್ನೈ ಇಂಜಿನಿಯರ್ !
ವಿಕ್ರಂ ಲ್ಯಾಂಡರ್ ನ ಅವಶೇಷದ ಸುಳಿವು ನೀಡಿದ ಚೆನ್ನೈ ಇಂಜಿನಿಯರ್ !

December 3, 2019
Share on FacebookShare on Twitter

ಭಾರತದವರಷ್ಟೇ ಅಲ್ಲ ನಾಸಾದ ಖಗೋಳ ಶಾಸ್ತ್ರಜ್ಞರಿಗೂ ಯಕ್ಷ ಪ್ರಶ್ನೆಯಾಗಿ ಕಾಡಿದ್ದ ಚಂದ್ರಯಾನ-2 ವಿಕ್ರಂ ಲ್ಯಾಂಡರ್ ನ ಅವಶೇಷಗಳನ್ನು ಭಾರತೀಯ ಹವ್ಯಾಸಿ ಖಗೋಳ ಶಾಸ್ತ್ರಜ್ಞ ಷಣ್ಮುಖ ಸುಬ್ರಮಣ್ಯನ್ ಪತ್ತೆ ಮಾಡಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಬಿರುಗಾಳಿಯಾಗಿರುವ ರಾಹುಲ್ ಗಾಂಧಿ ಸುನಾಮಿ ಆಗುಬಲ್ಲರೆ?

ಯಾರಾದರೂ ಒಳಗೆ ಬಂದರೆ ಅಟ್ಟಾಡಿಸಿ ಹೊಡಿರಿ, ಮಿಕ್ಕಿದ್ದು ನಾನು ನೋಡಿಕೊಳ್ಳುತ್ತೇನೆ’ : ಸಚಿವ ಮುನಿರತ್ನ ವಿವಾದಾತ್ಮಕ ಹೇಳಿಕೆ

ನಂದಿನಿ ಮೊಸರು ಪ್ಯಾಕೆಟ್‌ ಮೇಲೆ ‘ದಹಿ’ ಮುದ್ರಣ ಆದೇಶ ಹಿಂಪಡೆದ FSSAI.. ಕನ್ನಡಿಗರು ಟೀಕೆ ಬೆನ್ನಲ್ಲೇ ನಿರ್ಧಾರ..!

ಭಾರತದ ಬಹುನಿರೀಕ್ಷೆಯ ವಿಕ್ರಂ ಲ್ಯಾಂಡರ್ ಸಂಪರ್ಕ ತಪ್ಪಿ ಚಂದ್ರನಂಗಳದಲ್ಲಿ ಕಳೆದುಹೋಗಿತ್ತು. ಅದರ ಅವಶೇಷಗಳ ಪತ್ತೆಗೆ ಭಾರತ ಮತ್ತು ನಾಸಾದ ವಿಜ್ಞಾನಿಗಳು ಕಳೆದೆರಡು ತಿಂಗಳಿಂದ ಹಗಲಿರುಳೂ ಶ್ರಮಿಸುತ್ತಿದ್ದರು.

ಈ ಮಧ್ಯೆ, ನಾಸಾ ಕಳೆದ ಸೆಪ್ಟಂಬರ್ 26 ರಂದು ಚಂದ್ರನ ಚಿತ್ರವನ್ನು ಬಿಡುಗಡೆ ಮಾಡಿತ್ತು. ಈ ಚಿತ್ರವನ್ನು ಪಡೆದುಕೊಂಡ ತಮಿಳುನಾಡಿನ ಸುಬ್ರಮಣ್ಯನ್ ಅವರು ಅಂದಿನಿಂದ ಸಂಪರ್ಕ ಕಳೆದುಕೊಂಡಿದ್ದ ವಿಕ್ರಂ ಲ್ಯಾಂಡರ್ ನ ಇರುವಿಕೆಯ ಬಗ್ಗೆ ಅಧ್ಯಯನ ನಡೆಸಿದ್ದರು. ಹೀಗೆ ಅಧ್ಯಯನ ಮಾಡುವ ಸಂದರ್ಭದಲ್ಲಿ ಸುಬ್ರಮಣ್ಯನ್ ಅವರು ವಿಕ್ರಂ ಇರುವಿಕೆಯ ಕುರುಹನ್ನು ಪತ್ತೆ ಮಾಡಿದ್ದರು. ಅಕ್ಟೋಬರ್ 14 ಮತ್ತು ನವೆಂಬರ್ 11 ರಂದು ನಾಸಾ ಬಿಡುಗಡೆ ಮಾಡಿದ ಕೆಲವು ಚಿತ್ರಗಳಲ್ಲಿಯೂ ಸುಬ್ರಮಣ್ಯನ್ ವಿಕ್ರಂ ಅವಶೇಷಗಳನ್ನು ಗುರುತು ಮಾಡಿದ್ದರು.

ಈ ಖಗೋಳ ಶಾಸ್ತ್ರಜ್ಞ ಷಣ್ಮುಖ ಸುಬ್ರಮಣ್ಯನ್ ಅವರು ಅವಶೇಷಗಳನ್ನು ಪತ್ತೆ ಮಾಡಲು ಐದಾರು ರಾತ್ರಿಗಳ ಕಾಲ ಚಂದ್ರನ ಮೇಲೆ ಕಣ್ಣಿಟ್ಟಿದ್ದರು. ಅದೂ ಅಲ್ಲದೇ ಪ್ರತಿ ದಿನ ರಾತ್ರಿ ಸುಮಾರು ಏಳೆಂಟು ಗಂಟೆಗಳ ಕಾಲ ಅವರ ಕಣ್ಣು ಚಂದ್ರನ ಮೇಲೆಯೇ ಇತ್ತು.

ಹೀಗೆ ನಿರಂತರವಾಗಿ ಚಂದ್ರನ ಮೇಲೆ ಕಣ್ಣಿಟುತ್ತಾ ಬಂದಾಗ ಚಂದ್ರನ ಮೇಲ್ಮೈನ ಒಂದು ಭಾಗದಲ್ಲಿ ಕುತೂಹಲಕಾರಿ ವಸ್ತುವೊಂದು ಕಂಡಿದೆ. ಈ ಬಗ್ಗೆ ಕುತೂಹಲ ಮತ್ತು ಸಂದೇಹ ಉಂಟಾಗಿ ಇನ್ನೂ ಒಳಹೊಕ್ಕು ಹೋದಾಗ ಷಣ್ಮುಖ ಅವರಿಗೆ ವಸ್ತುವಿನ ಆಜುಬಾಜಿನಲ್ಲಿ ಇನ್ನೂ ಕೆಲವು ಚೂರುಗಳು ಕಾಣಿಸಿವೆ. ಈ ಬಗ್ಗೆ ಅಧ್ಯಯನ ನಡೆಸಿದ ಅವರಿಗೆ ಇದು ವಿಕ್ರಂ ಲ್ಯಾಂಡರ್ ನ ಅವಶೇಷ ಎಂಬುದು ಖಾತರಿಯಾಗಿದೆ.

ಸುಬ್ರಮಣ್ಯನ್ ಅವರು ಈ ಬಗ್ಗೆ ನಾಸಾ ವಿಜ್ಞಾನಿಗಳಿಗೆ ಸುಳಿವು ನೀಡಿದ ಆಧಾರದ ಮೇಲೆ ಮತ್ತಷ್ಟು ಅಧ್ಯಯನ ನಡೆಸಿದ ವಿಜ್ಞಾನಿಗಳು ಇದು ವಿಕ್ರಂನ ಅವಶೇಷ ಎಂಬುದನ್ನು ದೃಢಪಡಿಸಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ನಾಸಾದ ವೆಬ್ ಸೈಟ್ ನಲ್ಲಿ ಹಾಕಿದ್ದಾರೆ.

ಚಂದ್ರನ ಮೇಲೆ ನೀಲಿ ಮತ್ತು ಹಸಿರು ಬಣ್ಣದ ಚುಕ್ಕೆಗಳನ್ನು ತೋರಿಸಲಾಗಿದೆ. ವಿಕ್ರಂ ಲ್ಯಾಂಡರ್ ಅವಶೇಷ ಬಿದ್ದುದರಿಂದ ಈ ಪರಿಣಾಮ ಉಂಟಾಗಿದೆ ಎಂದು ನಾಸಾ ತಿಳಿಸಿದೆ.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಬಾಣಂತಿ ನಿಗೂಢ ಸಾವು ಪ್ರಕರಣ ಭೇದಿಸಿದ ಖಾಕಿ : ಹೆತ್ತ ತಾಯಿ, ಸಹೋದರ ಅರೆಸ್ಟ್​
Top Story

ಬಾಣಂತಿ ನಿಗೂಢ ಸಾವು ಪ್ರಕರಣ ಭೇದಿಸಿದ ಖಾಕಿ : ಹೆತ್ತ ತಾಯಿ, ಸಹೋದರ ಅರೆಸ್ಟ್​

by ಮಂಜುನಾಥ ಬಿ
March 27, 2023
ಬಿಜೆಪಿ ಸರ್ಕಾರ  ಮೀಸಲಾತಿ ಸರ್ಕಸ್ ಬಗ್ಗೆ ಹೆಚ್.ಡಿಕೆ ಕಿಡಿ
Top Story

ಬಿಜೆಪಿ ಸರ್ಕಾರ ಮೀಸಲಾತಿ ಸರ್ಕಸ್ ಬಗ್ಗೆ ಹೆಚ್.ಡಿಕೆ ಕಿಡಿ

by ಪ್ರತಿಧ್ವನಿ
March 25, 2023
ಮಾಡಾಳು ವಿರೂಪಾಕ್ಷಪ್ಪ ಬಂಧನ ಬೆನ್ನಲ್ಲೇ ಚೆನ್ನಗಿರಿ ಟಿಕೆಟ್​ ಆಕಾಂಕ್ಷಿಗಳಿಂದ ಟಿಕೆಟ್​ಗಾಗಿ ಲಾಬಿ
Top Story

ಮಾಡಾಳು ವಿರೂಪಾಕ್ಷಪ್ಪ ಬಂಧನ ಬೆನ್ನಲ್ಲೇ ಚೆನ್ನಗಿರಿ ಟಿಕೆಟ್​ ಆಕಾಂಕ್ಷಿಗಳಿಂದ ಟಿಕೆಟ್​ಗಾಗಿ ಲಾಬಿ

by ಮಂಜುನಾಥ ಬಿ
March 28, 2023
SR SHRINIVAS : ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮುಂದಿನ ನಡೆ ಏನು?? | JDS | HD DEVEGOWDA | CONGRESS |
ಇದೀಗ

SR SHRINIVAS : ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮುಂದಿನ ನಡೆ ಏನು?? | JDS | HD DEVEGOWDA | CONGRESS |

by ಪ್ರತಿಧ್ವನಿ
March 29, 2023
ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ
ಇದೀಗ

ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ

by ಮಂಜುನಾಥ ಬಿ
March 27, 2023
Next Post
ಸಿದ್ದು ದೂರವಿಟ್ಟು ಜೆಡಿಎಸ್ ಜತೆ ಮೈತ್ರಿಯಾದರೆ ಕಾಂಗ್ರೆಸ್ ಉಳಿಯುವುದೇ?

ಸಿದ್ದು ದೂರವಿಟ್ಟು ಜೆಡಿಎಸ್ ಜತೆ ಮೈತ್ರಿಯಾದರೆ ಕಾಂಗ್ರೆಸ್ ಉಳಿಯುವುದೇ?

ಬ್ಯಾಂಕಿನಲ್ಲಿ ನೀವು ಕೋಟಿ ಇಟ್ಟರೂ ಲಕ್ಷ ರುಪಾಯಿಗೆ ಮಾತ್ರ ವಿಮಾ ಸುರಕ್ಷೆ!

ಬ್ಯಾಂಕಿನಲ್ಲಿ ನೀವು ಕೋಟಿ ಇಟ್ಟರೂ ಲಕ್ಷ ರುಪಾಯಿಗೆ ಮಾತ್ರ ವಿಮಾ ಸುರಕ್ಷೆ!

ಮಸೀದಿಗೆ ಬದಲು ಮಸೀದಿಯೇ ಬೇಕು- ಸುಪ್ರೀಮ್ ಗೆ ಜಾಮಿಯತ್ ಮೇಲ್ಮನವಿ

ಮಸೀದಿಗೆ ಬದಲು ಮಸೀದಿಯೇ ಬೇಕು- ಸುಪ್ರೀಮ್ ಗೆ ಜಾಮಿಯತ್ ಮೇಲ್ಮನವಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist