• Home
  • About Us
  • ಕರ್ನಾಟಕ
Friday, June 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ರಿಸರ್ವ್ ಬ್ಯಾಂಕ್ ಜೋಳಿಗೆಗೆ ಮತ್ತೆ ಕೈಹಾಕಲು ಮುಂದಾದ ಮೋದಿ ಸರ್ಕಾರ!

by
October 1, 2019
in ದೇಶ
0
ರಿಸರ್ವ್ ಬ್ಯಾಂಕ್ ಜೋಳಿಗೆಗೆ ಮತ್ತೆ ಕೈಹಾಕಲು ಮುಂದಾದ ಮೋದಿ ಸರ್ಕಾರ!
Share on WhatsAppShare on FacebookShare on Telegram

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾರ್ಪೊರೆಟ್ ತೆರಿಗೆ ಕಡಿತ ಮಾಡಿ ಕಾರ್ಪೊರೆಟ್ ದಿಗ್ಗಜಗಳಿಗೆ ರೂ 1.45 ಲಕ್ಷ ಕೋಟಿ ಉಡುಗೊರೆ ನೀಡಿದಾಗ, ‘ಪ್ರತಿಧ್ವನಿ’ ಸೇರಿದಂತೆ ದೇಶದ ವಿತ್ತ ಪತ್ರಿಕೆಗಳು ಎತ್ತಿದ ಮುಖ್ಯ ಪ್ರಶ್ನೆ ಎಂದರೆ – ಈ ಬೃಹತ್ ಮೊತ್ತವನ್ನು ಎಲ್ಲಿಂದ ಮತ್ತು ಹೇಗೆ ಸರಿದೂಗಿಸಲಾಗುವುದು? ಆರ್ಥಿಕ ಚೇತರಿಕೆ ಉದ್ದೀಪಿಸಬೇಕಾದ ಗ್ರಾಹಕನಿಗೆ ಈ ಕೊಡುಗೆಯಿಂದ ದೊರೆಯುವ ಲಾಭವಾದರೂ ಏನು ಎಂಬುದಾಗಿತ್ತು.

ADVERTISEMENT

ಕಾರ್ಪೊರೆಟ್ ದಿಗ್ಗಜಗಳ ಹೊಗಳಿಕೆಗಳು ಬಂಡವಾಳ ಪೇಟೆಯಲ್ಲಿ ಮಾರ್ದನಿಸುತ್ತಿದ್ದಂತೆ ಈ ಮೂಲಭೂತ ಪ್ರಶ್ನೆಗಳು ಹಿನ್ನೆಲೆ ಸರಿದಿದ್ದವು. ಆದರೆ, ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ವಿತ್ತೀಯ ಕೊರತೆ ಪ್ರಮಾಣವನ್ನು ಜಿಡಿಪಿಯ ಶೇ. 3.3ರಷ್ಟು ಕಾಯ್ದುಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಬಹುತೇಕ ಆರ್ಥಿಕ ಚಿಂತಕರು ಕಳವಳ ವ್ಯಕ್ತಪಡಿಸಿದ್ದರೂ ಸರ್ಕಾರ ಈ ಬಗ್ಗೆ ಜಾಣ ಮೌನ ವಹಿಸಿತ್ತು.

ವಿತ್ತೀಯ ಕೊರತೆ ಮಿತಿ ಕಾಯ್ದುಕೊಳ್ಳುವುದು ಹೇಗೆ? ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ (2003) ಜಾರಿಗೆ ಬಂದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಯಾ ವಿತ್ತೀಯ ವರ್ಷದಲ್ಲಿ ಬಜೆಟ್ ನಲ್ಲಿ ಘೋಷಣೆ ಮಾಡಿದ ಪ್ರಮಾಣದ ವಿತ್ತೀಯ ಕೊರತೆ ಕಾಯ್ದುಕೊಳ್ಳುವುದು ಅತ್ಯಗತ್ಯ. ಬಹುತೇಕ ಸಂದರ್ಭಗಳಲ್ಲಿ ಶೇ. 0.2ರಿಂದ ಶೇ. 1ರಷ್ಟು ವಿತ್ತೀಯ ಕೊರತೆ ಪ್ರಮಾಣ ಹಿಗ್ಗುವುದು ಸಾಮಾನ್ಯವಾಗಿದೆ. ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗಿರುವ ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯು ವಿತ್ತೀಯ ಕೊರತೆ ಪ್ರಮಾಣವನ್ನು ಅತಿಯಾಗಿ ಹಿಗ್ಗಿಸುವುದಕ್ಕೆ ಅವಕಾಶ ನೀಡುತ್ತಿಲ್ಲ. ವಿತ್ತೀಯ ಜವಾಬ್ದಾರಿ ನಿರ್ವಹಿಸುವುದು ಆಯಾ ಸರ್ಕಾರಗಳ ಸಾಂವಿಧಾನಿಕ ಜವಾಬ್ದಾರಿಯೂ ಹೌದು.

ಕೇಂದ್ರ ಸರ್ಕಾರ ಕಾರ್ಪೊರೆಟ್ ವಲಯಕ್ಕೆ ನೀಡಿರುವ 1.46 ಲಕ್ಷ ಕೋಟಿ ರುಪಾಯಿಗಳನ್ನು ಸರಿದೂಗಿಸಲು ಮತ್ತೆ ಭಾರತೀಯ ರಿಸರ್ವ್ ಬ್ಯಾಂಕ್ ಜೋಳಿಗೆ ಕೈ ಹಾಕಲು ಮುಂದಾಗಿದೆ. ಈಗ ಪ್ರಕಟಿತ ವರದಿಗಳ ಪ್ರಕಾರ ಇನ್ನೂ 30,000 ಕೋಟಿ ರುಪಾಯಿಗಳನ್ನು ಪ್ರಸಕ್ತ ವಿತ್ತೀಯ ವರ್ಷದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಮೀಸಲು ಲಾಭದಲ್ಲಿ ಪಡೆಯಲಿದೆ. ಪ್ರಸಕ್ತ ವಿತ್ತೀಯ ವರ್ಷದ ಉತ್ತರಾರ್ಧದಲ್ಲಿ 2.68 ಲಕ್ಷ ಕೋಟಿ ರುಪಾಯಿ ಸಾಲ ಎತ್ತಲು ನಿರ್ಧರಿಸಿರುವುದರ ಜತೆಗೆ ಮತ್ತೆ ಆರ್ ಬಿ ಐ ನಿಂದ ಮತ್ತಷ್ಟು ಪಡೆಯುವುದು ಕೇಂದ್ರದ ಉದ್ದೇಶ.

ಅಂಕಿ-ಅಂಶ ತೋರುವುದೇನನ್ನು?

ಈಗ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕಿನಿಂದ ಹೆಚ್ಚುವರಿ ಲಾಭ ನಿಧಿಯಿಂದ ರೂ 1.76 ಲಕ್ಷ ಕೋಟಿಯನ್ನು ಪಡೆದು ತನ್ನ ಬೊಕ್ಕಸಕ್ಕೆ ಸೇರಿಸಿದ ನಂತರವೂ ವಿತ್ತೀಯ ಕೊರತೆ ಮಿತಿ ಶೇ. 3.3ರಷ್ಟು ಕಾಯ್ದುಕೊಳ್ಳುವುದು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಆರ್ ಬಿ ಐ ನಿಂದ ಹೆಚ್ಚುವರಿ ಲಾಭ ನಿಧಿಯನ್ನು ಪಡೆಯುವಲ್ಲಿ ಭಾರಿ ಜಾಣ್ಮೆ ಮೆರೆದಿದೆ. 2018-19 ವಿತ್ತೀಯ ವರ್ಷಕ್ಕೆ ಸಂದಾಯವಾಗುವಂತೆ ಅಂದರೆ 2019 ಮಾರ್ಚ್ 31ಕ್ಕೆ ಮುಗಿದ ವರ್ಷಕ್ಕೆ ಪೂರ್ವಾನ್ವಯವಾಗಿ ಸಂದಾಯವಾಗುವಂತೆ 1.23 ಲಕ್ಷ ಕೋಟಿ ರುಪಾಯಿಗಳನ್ನು ಪಡೆದುಕೊಂಡಿದೆ. ಪ್ರಸಕ್ತ ವಿತ್ತೀಯ ವರ್ಷದ ಲೆಕ್ಕದಲ್ಲಿ 52,637 ಕೋಟಿ ರುಪಾಯಿ ಜಮೆ ಆಗಲಿದೆ. ಇದರ ಜತೆಗೆ ಸರ್ಕಾರ ಹೆಚ್ಚುವರಿಯಾಗಿ 30,000 ಕೋಟಿ ರುಪಾಯಿ ಪಡೆಯಲು ಮುಂದಾಗಿದೆ.
ಈ ಮೊತ್ತವನ್ನು ಕೇಂದ್ರ ಸರ್ಕಾರ ಮಧ್ಯಂತರ ಲಾಭಾಂಶವೆಂದು ಸ್ವೀಕರಿಸಲಿದೆ.

ಈಗಾಗಲೇ ಕೇಂದ್ರ ಸರ್ಕಾರ ಪ್ರಸಕ್ತ ವಿತ್ತೀಯ ವರ್ಷದಲ್ಲಿ 95,414 ಕೋಟಿ ರುಪಾಯಿಗಳನ್ನು ಆರ್ ಬಿ ಐ ನಿಂದ ಲಾಭಾಂಶವಾಗಿ ಪಡೆದಿದೆ. ಇದು ಬಜೆಟ್ ನಲ್ಲಿ ಘೋಷಿಸಿದ್ದ ಅಂದಾಜು ಲಾಭಾಂಶ ಮೊತ್ತ 90,000 ಕೋಟಿಗೆ ಹೋಲಿಸಿದರೆ 5,414 ಕೋಟಿ ಹೆಚ್ಚುವರಿಯಾಗಿ ಪಡೆದಂತಾಗಿದೆ. ಈಗ ಇನ್ನೂ 30,000 ಕೋಟಿ ರುಪಾಯಿ ಪಡೆಯುವುದರಿಂದ ಕೇಂದ್ರ ಸರ್ಕಾರವು ಪ್ರಸಕ್ತ ವಿತ್ತೀಯ ವರ್ಷದಲ್ಲಿ ಆರ್ ಬಿ ಐ ನಿಂದ ಲಾಭಾಂಶ ರೂಪದಲ್ಲಿ ಪಡೆಯುವ ಮೊತ್ತವು ರೂ. 1,25,414 ಕೋಟಿಗಳಾಗುತ್ತದೆ. ಕಳೆದ ವಿತ್ತೀಯ ವರ್ಷದಲ್ಲಿ ಆರ್ ಬಿ ಐ ನಿವ್ವಳ ಆದಾಯದ ಪ್ರಮಾಣವನ್ನು (ಅಂದರೆ, ರೂ 1,23,414 ಕೋಟಿ) ಮೀರಿ ಲಾಭಾಂಶವನ್ನು ಕೇಂದ್ರ ಸರ್ಕಾರ ಪಡೆಯುತ್ತಿದೆ. ಸಾಂವಿಧಾನಿಕ ಔಪಚಾರಿಕತೆಗಳ ಅನುಸಾರ ಕೇಂದ್ರ ಸರ್ಕಾರಕ್ಕೆ ಎಷ್ಟು ಲಾಭಾಂಶ ನೀಡಬೇಕು ಎಂಬುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸುತ್ತದೆ. ಕೇಂದ್ರ ಸರ್ಕಾರವೇ ಅದನ್ನು ನಿರ್ಧರಿಸಿ, ಪಡೆಯುವುದು ಸ್ವಾಯತ್ತತೆಗೆ ಧಕ್ಕೆ ತಂದಂತಾಗುತ್ತದೆ.

ಆರ್ ಬಿ ಐ ಗವರ್ನರ್  ಶಕ್ತಿಕಾಂತ ದಾಸ್

ಎಲ್ಲಿದೆ ಆರ್ ಬಿ ಐ ಸ್ವಾಯತ್ತತೆ?

ಆರ್ ಬಿ ಐ ಸ್ವಾಯತ್ತತೆಯನ್ನು ಪ್ರತಿಪಾದಿಸಿದ ರಘುರಾಮ್ ರಾಜನ್ ಅವರನ್ನು ಮೋದಿ ಸರ್ಕಾರ ಎರಡನೇ ಅವಧಿಗೆ ಪರಿಗಣಿಸಲೇ ಇಲ್ಲ. ಸ್ವಾಯತ್ತತೆ ಪ್ರತಿಪಾದಿಸಿದ ಊರ್ಜಿತ್ ಪಟೇಲ್ ಅವರು ಮೊದಲನೇ ಅವಧಿ ಪೂರ್ಣಗೊಳ್ಳುವ ಮುನ್ನವೇ ಆರ್ಬಿಐ ಗವರ್ನರ್ ಸ್ಥಾನ ತ್ಯಜಿಸಿ ಹೋದರು. ಮೋದಿ ಸರ್ಕಾರದಲ್ಲಿ ಹಣಕಾಸು ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಶಕ್ತಿಕಾಂತ ದಾಸ್ ಅವರು ಮೋದಿ ಸರ್ಕಾರದ ಬಗ್ಗೆ ಉದಾರ ನೀತಿ ತಳೆದಿರುವಂತಿದೆ. ಆರ್ ಬಿ ಐ ಸ್ವಾಯತ್ತತೆಯನ್ನು ಒತ್ತೆ ಇಟ್ಟಾದರೂ ಮೋದಿ ಸರ್ಕಾರದ ಗೌರವ ಕಾಪಾಡುವುದಕ್ಕೆ ಆದ್ಯತೆ ನೀಡಿದಂತಿದೆ.

ಅದೇನೇ ಇರಲಿ, ಕೇಂದ್ರ ಸರ್ಕಾರವು ಆರ್ ಬಿ ಐ ನಿಂದ ಪಡೆದಿದ್ದಷ್ಟೂ ಸಾಲದೆಂಬಂತೆ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಯಿಂದ (ಎನ್ಎಸ್ಎಸ್ಎಫ್) ಯಿಂದಲೂ ಸಾಕಷ್ಟು ಮೊತ್ತವನ್ನು ಪಡೆಯುವ ಚಿಂತನೆ ಮಾಡಿದೆ. 1999 ರಲ್ಲಿ ರಚನೆಯಾಗಿರುವ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಯು ದೇಶದಲ್ಲಿರುವ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಸಂಗ್ರಹ. ಎಂಟರಿಂದ ಹತ್ತು ವರ್ಷಗಳ ಸುದೀರ್ಘ ಅವಧಿಗೆ ಕೋಟ್ಯಂತರ ಜನಸಾಮಾನ್ಯರು ಮಾಡುವ ಹೂಡಿಕೆಯ ನಿಧಿ ಇದು. ವಿತ್ತೀಯ ಕೊರತೆ ಸರಿದೂಗಿಸಲು ಆಗಾಗ್ಗೆ ಈ ನಿಧಿಯನ್ನು ಬಳಸುವುದು ಉಂಟು. ಆದರೆ, ಬಳಸಿದ ನಿಧಿಯನ್ನು ಮರುಪಾವತಿಸಿ ನಿಧಿಯ ಒಟ್ಟು ಮೌಲ್ಯದ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಕೇಂದ್ರದ ಜಬಾವ್ದಾರಿಯೂ ಹೌದು.

ಆದರೆ, ಕುಸಿಯುತ್ತಿರುವ ತೆರಿಗೆ ಸಂಗ್ರಹ, ಕಾರ್ಪೊರೆಟ್ ತೆರಿಗೆ ಕಡಿತದಿಂದ ವಾರ್ಷಿಕ 1.45 ಲಕ್ಷ ಕೋಟಿಯ ಹೊರೆಯನ್ನು ಹೊರಬೇಕಾದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಣ್ಣ ಉಳಿತಾಯ ನಿಧಿಯಿಂದ ಪಡೆದ ಮೊತ್ತವನ್ನು ಸಕಾಲದಲ್ಲಿ ಭರ್ತಿ ಮಾಡುತ್ತದಾ ಎಂಬ ಪ್ರಶ್ನೆಯೂ ಇದೆ. ಜತೆಗೆ ಆರ್ ಬಿ ಐ ನಲ್ಲಿ ಉಳಿದಿರುವ ಹೆಚ್ಚುವರಿ ಲಾಭ ನಿಧಿ ಏಳೆಂಟು ಕೋಟಿಗಳನ್ನೂ ಕೇಂದ್ರ ಸರ್ಕಾರ ಬರುವ ವರ್ಷಗಳಲ್ಲಿ ಬಳಸಿಕೊಂಡು ಕೇಂದ್ರ ಬ್ಯಾಂಕನ್ನು ಬರಿದು ಮಾಡುವ ಆಪಾಯವೂ ಇದೆ.

Tags: Corporate Tax CutGovernment of IndiaMinistry of FinanceNirmala SitharamanPrime Minister Narendra ModiRBI Interim DividendReserve Bank of IndiaSlowing Economyಆರ್ ಬಿ ಐ ಮೀಸಲು ಲಾಭಆರ್ಥಿಕ ಹಿಂಜರಿತಕಾರ್ಪೊರೇಟ್ ತೆರಿಗೆ ಕಡಿತನಿರ್ಮಲಾ ಸೀತಾರಾಮನ್ಪ್ರಧಾನಿ ನರೇಂದ್ರ ಮೋದಿಭಾರತ ಸರ್ಕಾರಭಾರತೀಯ ರಿಸರ್ವ್ ಬ್ಯಾಂಕ್
Previous Post

ಕೊಡಗು: ರಸ್ತೆ ವಿಸ್ತರಣೆಗೆ ಪರಿಸರವಾದಿಗಳ ವಿರೋಧ

Next Post

ಪ್ರವಾಹ ಸಂತ್ರಸ್ತರಿಗೆ ಬೇಕಾಗಿರುವುದು ಟ್ವೀಟ್ – ಭರವಸೆಯಲ್ಲ, ನೆರವು

Related Posts

Top Story

Santhosh Lad: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿದ ಸಂತೋಷ ಲಾಡ್..

by ಪ್ರತಿಧ್ವನಿ
June 13, 2025
0

ಅತಿವೃಷ್ಟಿಯಿಂದ ಹಾನಿಗೊಳಗಾದ ಕುಂದಗೋಳ ತಾಲೂಕಿನ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ, ಪರಿಶೀಲನೆ, ಜಿಲ್ಲೆಯ 130 ಮನೆಗಳಿಗೆ ಭಾಗಶಃ ಹಾನಿ, ಜಿಲ್ಲಾಡಳಿತದಿಂದ ತ್ವರಿತ ಪರಿಹಾರ...

Read moreDetails

M B Patil: ಎರಡು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ

June 13, 2025

16ನೇ ಹಣಕಾಸು ಆಯೋಗಕ್ಕೆ ಸಲ್ಲಿಸಿದ ರಾಜ್ಯದ ಶಿಫಾರಸ್ಸುಗಳ ಕುರಿತು ಮುಖ್ಯಮಂತ್ರಿಗಳು ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

June 13, 2025

ಮಳೆ ಹಾನಿ ಪ್ರದೇಶಗಳಿಗೆ ಸಚಿವ ಸಂತೋಷ್‌ ಲಾಡ್‌ ಭೇಟಿ..

June 13, 2025

ಕರ್ನಾಟಕದ AI-ಸಿದ್ಧ ಭವಿಷ್ಯವನ್ನು ಎತ್ತಿ ತೋರಿಸಿದ ಪ್ರಿಯಾಂಕ್ ಖರ್ಗೆ

June 13, 2025
Next Post
ಪ್ರವಾಹ ಸಂತ್ರಸ್ತರಿಗೆ ಬೇಕಾಗಿರುವುದು ಟ್ವೀಟ್ - ಭರವಸೆಯಲ್ಲ

ಪ್ರವಾಹ ಸಂತ್ರಸ್ತರಿಗೆ ಬೇಕಾಗಿರುವುದು ಟ್ವೀಟ್ - ಭರವಸೆಯಲ್ಲ, ನೆರವು

Please login to join discussion

Recent News

Top Story

Santhosh Lad: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿದ ಸಂತೋಷ ಲಾಡ್..

by ಪ್ರತಿಧ್ವನಿ
June 13, 2025
Top Story

M B Patil: ಎರಡು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ

by ಪ್ರತಿಧ್ವನಿ
June 13, 2025
Top Story

16ನೇ ಹಣಕಾಸು ಆಯೋಗಕ್ಕೆ ಸಲ್ಲಿಸಿದ ರಾಜ್ಯದ ಶಿಫಾರಸ್ಸುಗಳ ಕುರಿತು ಮುಖ್ಯಮಂತ್ರಿಗಳು ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

by ಪ್ರತಿಧ್ವನಿ
June 13, 2025
Top Story

ಮಳೆ ಹಾನಿ ಪ್ರದೇಶಗಳಿಗೆ ಸಚಿವ ಸಂತೋಷ್‌ ಲಾಡ್‌ ಭೇಟಿ..

by ಪ್ರತಿಧ್ವನಿ
June 13, 2025
Top Story

ಬಹು ನಿರೀಕ್ಷಿತ “45” ಚಿತ್ರದ ಹಾಡಿಗೆ ಉಗಾಂಡದಿಂದ ಬಂದ ನೃತ್ಯಗಾರರು..

by ಪ್ರತಿಧ್ವನಿ
June 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Santhosh Lad: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿದ ಸಂತೋಷ ಲಾಡ್..

June 13, 2025

M B Patil: ಎರಡು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ

June 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada