Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಮಹಿಳಾ ಕ್ರಿಕೆಟ್ ಮನ್ವಂತರಕ್ಕೆ ಕಾರಣವಾಗಲಿ ನಾರೀಮಣಿಯರ ಪ್ರದರ್ಶನ

ಮಹಿಳಾ ಕ್ರಿಕೆಟ್ ಮನ್ವಂತರಕ್ಕೆ ಕಾರಣವಾಗಲಿ ನಾರೀಮಣಿಯರ ಪ್ರದರ್ಶನ
ಮಹಿಳಾ ಕ್ರಿಕೆಟ್ ಮನ್ವಂತರಕ್ಕೆ ಕಾರಣವಾಗಲಿ ನಾರೀಮಣಿಯರ ಪ್ರದರ್ಶನ

February 29, 2020
Share on FacebookShare on Twitter

ಮಹಿಳೆಯರ ಟಿ-20 ವಿಶ್ವಕಪ್‌ನಲ್ಲಿ ಅಜೇಯ ಓಟದೊಂದಿಗೆ ಸೆಮಿ ಫೈನಲ್ ಪ್ರವೇಶಿಸಿರುವ ಭಾರತೀಯ ಮಹಿಳೆಯರ ಕ್ರಿಕೆಟ್‌ ತಂಡ, ದೇಶವಾಸಿಗಳಿಗೆ ಕೇಳಲು ಹಿತಕರವಾದ ಸುದ್ದಿ ಕೊಡುವ ಮೂಲಕ ಎಡ/ಬಲಗಳ ರಾಜಕೀಯ ಸೈದ್ಧಾಂತಿಕ ಕಚ್ಚಾಟದಲ್ಲಿ ಬ್ಯುಸಿ ಆಗಿದ್ದ ನೆಟ್ಟಿಗರೆಲ್ಲಾ ಒಟ್ಟಾಗಿ, ಒಂದು ವಿಚಾರಕ್ಕಾಗಿ ಸಮಾನ ಮನಸ್ಸಿನಿಂದ ಸೆಲೆಬ್ರೇಟ್ ಮಾಡಲು ಕಾರಣ ನೀಡಿದೆ.

ಹೆಚ್ಚು ಓದಿದ ಸ್ಟೋರಿಗಳು

ಗಾಯಾಳು ಪ್ರೇಮ್‌ ಸಿಂಗ್‌ ಆರೋಗ್ಯ ವಿಚಾರಿಸಿದ ಬಿಜೆಪಿ ನಾಯಕರು

ನೆಹರೂ ಫೋಟೋ ಹಾಕದೆ ಬಿಜೆಪಿ ಕೊಳಕುತನ ಪ್ರದರ್ಶಿಸಿದೆ : ಮಾಜಿ ಸಿಎಂ ಸಿದ್ದರಾಮಯ್ಯ

Sentence Rewriter On-line

ಅದರಲ್ಲೂ, ನ್ಯೂಝೀಲೆಂಡ್ ವಿರುದ್ಧದ ಪಂದ್ಯದಲ್ಲಿ ಚುರುಕಿನ 46 ರನ್‌ಗಳಿಸಿ ಭಾರತ ತಂಡಕ್ಕೆ ಮಿಂಚಿನ ಆರಂಭ ಒದಗಿಸಿಕೊಟ್ಟ 16 ವರ್ಷದ ಆರಂಭಿಕ ಬ್ಯಾಟ್ಸ್‌ವುಮನ್ ಶೆಫಾಲಿ ವರ್ಮಾ ಇದೀಗ ಎಲ್ಲರ ಕಣ್ಮನ ಸೆಳೆದ ಸೆನ್ಸೇಶನ್ ಆಗಿದ್ದಾರೆ. ಬರೀ 34 ಎಸೆತಗಳಲ್ಲಿ 46 ರನ್‌ಗಳ ತಮ್ಮ ಇನಿಂಗ್ಸ್‌ನಿಂದಾಗಿ ವರ್ಮಾಗೆ ಟೂರ್ನಿಯ ಎರಡನೇ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ.

ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ 114 ರನ್‌ ಕಲೆ ಹಾಕಿರುವ ಶೆಫಾಲಿ, 172.72 ಸ್ಟ್ರೈಕ್ ರೇಟ್ ಕಾಪಾಡಿಕೊಂಡಿದ್ದು, ವಿಶ್ವಕಪ್‌ ದಾಖಲೆ ನಿರ್ಮಿಸಿದ್ದಾರೆ. ಶೆಫಾಲಿಯ ಈ ಮಿಂಚಿನ ಓಟದಿಂದ ಕ್ರಿಕೆಟ್‌ ಜಗತ್ತಿನ ದಂತಕಥೆ ಸಚಿನ್ ತೆಂಡೂಲ್ಕರ್‌ ಸೇರಿದಂತೆ ಭಾರತೀಯ ಪುರುಷರ ತಂಡದ ಮಾಜಿ ಆಟಗಾರರು ಇಂಪ್ರೆಸ್ ಆಗಿದ್ದಾರೆ.

“ಟಿ-20 ವಿಶ್ವಕಪ್‌ ಸೆಮಿಫೈನಲ್ ತಲುಪಿದ ಮೊದಲ ತಂಡವಾದ ಭಾರತೀ ಮಹಿಳಾ ತಂಡಕ್ಕೆ ಅಭಿನಂದನೆಗಳು. ಇದೊಂದು ಟೈಟ್ ಗೇಮ್ ಆಗಿದ್ದು ಒತ್ತಡದಲ್ಲಿ ನಾವು ಒಳ್ಳೆಯ ಆಟವಾಡಿದ್ದೇವೆ. ಮತ್ತೊಂದು ನಿರ್ಣಾಯಕ ಆಟವಾಡಿದ ಶೆಫಾಲಿಯನ್ನು ನೋಡುವುದು ಬಹಳ ಸಂತಸವಾಯಿತು,” ಎಂದು ಸಚಿನ್ ತೆಂಡೂಲ್ಕರ್‌ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಶೆಫಾಲಿ, “ಥ್ಯಾಂಕ್ಯೂ ಸರ್‌ ನಿಮ್ಮ ಶ್ಲಾಘನೆಯ ಮಾತುಗಳು ಹಾಗೂ ಬೆಂಬಲಕ್ಕೆ! ನನ್ನ ತಂಡಕ್ಕೆ ನನ್ನ ಬೆಸ್ಟ್‌ ಆಟವನ್ನು ನೀಡುತ್ತಲೇ ಇರಲು ಇಚ್ಛಿಸುತ್ತೇನೆ ಸರ್‌.” ಎಂದು ಪ್ರತಿಕ್ರಿಯಿಸಿದ್ದಾರೆ.

ಟ್ವಿಟರ್‌ನಲ್ಲಿ ಸದಾ ಆಕ್ಟಿವ್ ಆಗಿರುವ ಮತ್ತೊಬ್ಬ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌, “ವಾಹ್ ಭಾಯ್‌ ಬಾಹ್‌!ಒತ್ತಡಲ್ಲಿ ತಮ್ಮ ಶಾಂತಚಿತ್ತೆ ಕಾಪಾಡಿಕೊಂಡ ಹುಡುಗಿಯರು ನ್ಯೂಝೀಲೆಂಡ್ ತಂಡವನ್ನು ಮಣಿಸಿ ಟಿ-20 ವಿಶ್ವಕಪ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಶೆಫಾಲಿ ವರ್ಮಾ ಒಬ್ಬ ದೊಡ್ಡ ರಾಕ್ ಸ್ಟಾರ್‌. ಹುಡುಗಿಯರ ಪ್ರದರ್ಶನ ಕಂಡು ಆನಂದವಾಗುತ್ತಿದೆ,” ಎಂದಿದ್ದಾರೆ.

ಶೆಫಾಲಿ ಕುರಿತು ಮೆಚ್ಚುಗೆ ಮಾತನ್ನು ಆಡಿದ ಮತ್ತೊಬ್ಬ ಲೆಜೆಂಡರಿ ಆಟಗಾರ ವಿವಿಎಸ್ ಲಕ್ಷ್ಮಣ್‌, “ಪಂದ್ಯದಲ್ಲಿ 132 ರನ್‌ಗಳನ್ನು ಡಿಫೆಂಡ್ ಮಾಡುವಲ್ಲಿ ಬೌಲರ್‌ಗಳು ಅತ್ಯುತ್ತಮ ಆಟವಾಡಿದ್ದಾರೆ. ಶೆಫಾಲಿ ವರ್ಮಾ ಭಾರತದ ಪರವಾಗಿ ಟಾಪ್ ಕ್ಲಾಸ್ ಆಟವಾಡಿದ್ದಾರೆ,” ಎಂದಿದ್ದಾರೆ.

ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಮಾತನಾಡಿ, “ಯೆಸ್‌! ವೆಲ್ ಡನ್, ಶಿಕಾ ಪಾಂಡೆ. ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದ ಅಮೇಲಿಯಾ ಕರ್‌‌ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯದಂತೆ ನೋಡಿಕೊಂಡರು ಆಕೆ,” ಎಂದಿದ್ದಾರೆ.

ಕಳೆದ 3-4 ವರ್ಷಗಳಿಂದ ಜಾಗತಿಕ ಕೂಟಗಳಲ್ಲಿ ಅತ್ಯುತ್ತಮ ಆಟವಾಡುತ್ತಾ ಬಂದಿರುವ ಮಹಿಳಾ ಕ್ರಿಕೆಟ್‌ಗೆ ಪುರಷರ ಕ್ರಿಕೆಟ್‌ಗಿರುವಷ್ಟು ಹಿಂಬಾಲಕರಿಲ್ಲ ಎಂಬುದೇನೂ ಗೊತ್ತಿರದ ವಿಚಾರವಲ್ಲ. ಇದು ಬರೀ ಕ್ರಿಕೆಟ್‌ನಲ್ಲಿ ಮಾತ್ರವಲ್ಲೇ ಫುಟ್ಬಾಲ್‌ನಲ್ಲೂ ಇರುವ ಟ್ರೆಂಡ್.

ಆದರೂ, ಈ ವಿಶ್ವಕಪ್‌ಅನ್ನೇ ತೆಗೆದುಕೊಂಡರೆ, ಆಸ್ಟ್ರೇಲಿಯಾ ವಿರುದ್ಧದ ತಮ್ಮ ಮೊದಲ ಲೀಗ್ ಪಂದ್ಯದಲ್ಲಿ ಎಷ್ಟು ಚಂದ ಆಡಿರಲ್ಲ ನಮ್ಮ ಮಾನಿನಿಯರು? ಅಲ್ಪ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವ ನಿಟ್ಟಿನಲ್ಲಿ ಶಿಸ್ತಿನ ಬೌಲಿಂಗ್ ಹಾಗೂ ಅದಕ್ಕೆ ಪೂರಕವಾಗಿ ಚುರುಕಾದ ಫೀಲ್ಡಿಂಗ್ ಮೂಲಕ ವೀಕ್ಷಕರ ಗಮನವನ್ನು ಹಿಡಿದಿಡುವ ಆಟ ಆಡುವಲ್ಲಿ ಮಹಿಳೆಯರು ಸಫಲರಾಗಿದ್ದಾರೆ ಎನ್ನಲಡ್ಡಿಯಿಲ್ಲ.

ಎಳಸು ಎಳಸಾಗಿ ಆಡುವ ರಿಶಭ್ ಪಂತ್‌ನನ್ನೂ ನಾಚಿಸುವಂತೆ ಆಡುತ್ತಿರುವ ಶೆಫಾಲಿ ಆಗಲೀ, ಎದುರಾಳಿ ಬ್ಯಾಟ್ಸ್‌ವುಮೆನ್‌ಅನ್ನು ದಂಗುಬಡಿಸುವಂಥ ಗೂಗ್ಲಿಗಳ ಪ್ರಯೋಗ ಮಾಡುತ್ತಿರುವ ಪೂನಮ್ ಯಾದವ್‌ ಇರಲಿ ಗುಣಮಟ್ಟದ ಆಟವನ್ನು ಅಭಿಮಾನಿಗಳಿಗೆ ಕೊಡಮಾಡುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಇವರೊಂದಿಗೆ ಸ್ಮೃತಿ ಮಂದನಾ, ಹರ್ಮನ್ ಪ್ರೀತ್‌ ಕೌರ್‌ ಹಾಗೂ ಜೆಮಿಮಾ ರಾಡ್ರಿಗ್ಸ್‌ರಂಥ ಯಂಗ್‌ಸ್ಟರ‍್ಸ್‌‌ ನೆರವಿನಿಂದ ಭಾರತ ತಂಡ ಫೈನಲ್ ತಲುಪಿದಲ್ಲಿ ಅಚ್ಚರಿಯಲ್ಲ. ಈ ಆಟಗಾತಿಯರನ್ನು ದೇಶದ ಜನತೆ ಚೆನ್ನಾಗೇ ಗುರುತಿಸುತ್ತಿದ್ದು, ಅವರ ಆಟಕ್ಕೆ ಮೆಚ್ಚುಗೆಯ ಚಪ್ಪಾಳೆಗಳು ಸಾಕಷ್ಟು ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.

ಟೆನಿಸ್‌ ಹಾಗೂ ಬ್ಯಾಡ್ಮಿಂಟನ್‌ಗಳಂತೆ ಮಹಿಳಾ ಕ್ರಿಕೆಟ್‌ ಸಹ ಫೇಮಸ್ ಆಗಲು ಮಾಡಬಹುದಾದ ಬ್ರಾಂಡಿಂಗ್ ಅನ್ನು ಮಾಡಲು ಕ್ರಿಕೆಟ್‌ ಮಂಡಳಿಗಳು ಮಾಡಲು ಮುಂದೆ ಬರಬೇಕಿದೆ. ಕಳೆದ ದಶಕದಿಂದ ತೀರಾ ಬೋರಿಂಗ್ ಆಗಿಬಿಟ್ಟಿರುವ ಏಕದಿನ ಪಂದ್ಯಗಳಿಗೆ ಮನ್ವಂತರ ನೀಡಲು ಮಾಡುತ್ತಿರುವಂಥ ಪ್ರಯತ್ನವನ್ನು ಮಹಿಳಾ ಕ್ರಿಕೆಟ್‌ಗೂ ನೀಡಬೇಕಾಗಿದೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಸಿಬಿಐ ಕಚೇರಿಯನ್ನು ನನ್ನ ಮನೆಯಲ್ಲೇ ನಿರ್ಮಿಸಲಿ: ಕೇಂದ್ರ ಸರ್ಕಾರದ ವಿರುದ್ಧ ತೇಜಸ್ವಿ ಯಾದವ್‌ ವ್ಯಂಗ್ಯ
ದೇಶ

ಸಿಬಿಐ ಕಚೇರಿಯನ್ನು ನನ್ನ ಮನೆಯಲ್ಲೇ ನಿರ್ಮಿಸಲಿ: ಕೇಂದ್ರ ಸರ್ಕಾರದ ವಿರುದ್ಧ ತೇಜಸ್ವಿ ಯಾದವ್‌ ವ್ಯಂಗ್ಯ

by ಪ್ರತಿಧ್ವನಿ
August 12, 2022
ಕಾಂಗ್ರೆಸ್ ಯಾವಾಗಲೂ ಮುಸ್ಲಿಂ ಮತಗಳ ಮೇಲೆ ಕೇಂದ್ರೀಕರಿಸುತ್ತದೆ : ಸಚಿವ ಬಿ.ಸಿ.ನಾಗೇಶ್
ಕರ್ನಾಟಕ

ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ: ಟ್ವೀಟ್ ಮೂಲಕ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ

by ಪ್ರತಿಧ್ವನಿ
August 12, 2022
ಸರಕಾರದ ಜಾಹಿರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನೆಹರುಗೆ ಕೊಕ್‍!
ಫೀಚರ್ಸ್

ಸರಕಾರದ ಜಾಹಿರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನೆಹರುಗೆ ಕೊಕ್‍!

by ಪ್ರತಿಧ್ವನಿ
August 14, 2022
ರಾಜ್ಯಕ್ಕಿಂತ ದೇಶಕ್ಕೆ ಸಿದ್ದರಾಮಯ್ಯ ಅವಶ್ಯಕತೆ ಕಾಣುತ್ತಿದೆ :ಸಾ.ರಾ ಮಹೇಶ್
ವಿಡಿಯೋ

ರಾಜ್ಯಕ್ಕಿಂತ ದೇಶಕ್ಕೆ ಸಿದ್ದರಾಮಯ್ಯ ಅವಶ್ಯಕತೆ ಕಾಣುತ್ತಿದೆ :ಸಾ.ರಾ ಮಹೇಶ್

by ಫಾತಿಮಾ
August 13, 2022
ವೇದಿಕೆ ಮೇಲೆ ಚಾಕು ಇರಿತಕ್ಕೊಳಗಾದ ಸಲ್ಮಾನ್ ರಶ್ದಿ ಸ್ಥಿತಿ ಗಂಭೀರ, ಕಣ್ಣು ಕಳೆದುಕೊಳ್ಳುವ ಸಾಧ್ಯತೆ!
ವಿದೇಶ

ವೇದಿಕೆ ಮೇಲೆ ಚಾಕು ಇರಿತಕ್ಕೊಳಗಾದ ಸಲ್ಮಾನ್ ರಶ್ದಿ ಸ್ಥಿತಿ ಗಂಭೀರ, ಕಣ್ಣು ಕಳೆದುಕೊಳ್ಳುವ ಸಾಧ್ಯತೆ!

by ಪ್ರತಿಧ್ವನಿ
August 13, 2022
Next Post
ನೆರೆ ಪರಿಹಾರಕ್ಕೆ ಕನ್ನ: ಆರು ಸರ್ಕಾರಿ ಅಧಿಕಾರಿಗಳು ಅಮಾನತು 

ನೆರೆ ಪರಿಹಾರಕ್ಕೆ ಕನ್ನ: ಆರು ಸರ್ಕಾರಿ ಅಧಿಕಾರಿಗಳು ಅಮಾನತು 

ದೆಹಲಿಯಲ್ಲಿ ಮನುಷ್ಯತ್ವ ಮರೆತು ದಾನವರಾದ ಮತಾಂಧರು

ದೆಹಲಿಯಲ್ಲಿ ಮನುಷ್ಯತ್ವ ಮರೆತು ದಾನವರಾದ ಮತಾಂಧರು

ಕೊನೆಗೂ ಹತ್ತಿರವಾಗುತ್ತಿದೆ ಕೆಪಿಸಿಸಿ ಅಧ್ಯಕ್ಷರ ನೇಮಕ ದಿನ!

ಕೊನೆಗೂ ಹತ್ತಿರವಾಗುತ್ತಿದೆ ಕೆಪಿಸಿಸಿ ಅಧ್ಯಕ್ಷರ ನೇಮಕ ದಿನ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist