Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಪಾತಾಳದಿಂದ ಜಿಗಿದ ಷೇರುಪೇಟೆ; 5000 ಅಂಶಗಳಷ್ಟು ಏರಿಕೆ ದಾಖಲಿಸಿದ ಸೆನ್ಸೆಕ್ಸ್

ಪಾತಾಳದಿಂದ ಜಿಗಿದ ಷೇರುಪೇಟೆ; 5000 ಅಂಶಗಳಷ್ಟು ಏರಿಕೆ ದಾಖಲಿಸಿದ ಸೆನ್ಸೆಕ್ಸ್
ಪಾತಾಳದಿಂದ ಜಿಗಿದ ಷೇರುಪೇಟೆ; 5000 ಅಂಶಗಳಷ್ಟು ಏರಿಕೆ ದಾಖಲಿಸಿದ ಸೆನ್ಸೆಕ್ಸ್

March 13, 2020
Share on FacebookShare on Twitter

ಶುಕ್ರವಾರ ಜಾಗತಿಕ ಷೇರುಪೇಟೆಗಳು ತೀವ್ರ ಕುಸಿತದಿಂದ ತಲ್ಲಣಗೊಂಡಿದ್ದರೆ, ಭಾರತೀಯ ಷೇರುಪೇಟೆಯಲ್ಲಿ ನಾಟಕೀಯ ರೀತಿಯಲ್ಲಿ ಸೂಚ್ಯಂಕಗಳು ಮಿಂಚಿನಂತೆ ಚೇತರಿಸಿಕೊಂಡು ದಾಖಲೆ ಬರೆದವು. ಸೆನ್ಸೆಕ್ಸ್ ಒಂದೇ ದಿನದಲ್ಲಿ 5380 ಅಂಶಗಳಷ್ಟು ಚೇತರಿಕೆ ಕಂಡು ಐತಿಹಾಸ ಸೃಷ್ಟಿಸಿತು. ನಿಫ್ಟಿ ಸಹ 1600 ಅಂಶಗಳಷ್ಟು ಚೇತರಿಕೆಯನ್ನು ದಾಖಲಿಸಿತು.

ಹೆಚ್ಚು ಓದಿದ ಸ್ಟೋರಿಗಳು

ಮೋದಿ ಹಿರಿಯಣ್ಣ, ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ: ಕೇಜ್ರಿವಾಲ್‌

ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಅಪಘಾತ : ಶಸ್ತ್ರಚಿಕಿತ್ಸೆ ಮುಗಿಸಿ ಆ್ಯಂಬುಲೆನ್ಸ್​ನಲ್ಲೇ ಪರೀಕ್ಷೆ ಬರೆದ ಸಾಹಸಿ

ಅಭಿವೃದ್ಧಿಯ ಮಾರ್ಗವೂ ಕಾರ್ಪೋರೇಟ್ ಬಂಡವಾಳವೂ ಸಮಾಜದ ಮೇಲ್ವರ್ಗಕ್ಕೆ ಮಾತ್ರವೇ ನಿಲುಕುವ ಅಭಿವೃದ್ಧಿ ಮಾದರಿಗಳೇ ನವಉದಾರವಾದದ ಜೀವಾಳ

ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 1,325 ಅಂಶ ಏರಿಕೆಯೊಂದಿಗೆ 34103ಕ್ಕೆ ಸ್ಥಿರಗೊಂಡರೆ, ನಿಫ್ಟಿ 365 ಅಂಶಗಳ ಏರಿಕೆಯೊಂದಿಗೆ 9955 ಅಂಶಗಳಿಗೆ ಸ್ಥಿರಗೊಂಡಿತು. ಸೆನ್ಸೆಕ್ಸ್ ತನ್ನ ಪ್ರಬಲ ಸುಭದ್ರತಾ ಮಟ್ಟವಾದ 34,000 ಅಂಶಗಳನ್ನು ಕಾಯ್ದುಕೊಂಡಿತು. ನಿಫ್ಟಿ 10,000 ಅಂಶಗಳ ಮಟ್ಟವನ್ನು ಕಾಯ್ದುಕೊಳ್ಳಲಾಗಲಿಲ್ಲ. ದಿನದ ಅಂತ್ಯಕ್ಕೆ ನಿಫ್ಟಿ ಮಿಡಿಯಾ ಸೂಚ್ಯಂಕ ಹೊರತಾಗಿ ವಿಸ್ತೃತ ಮಾರುಕಟ್ಟೆಯ ಎಲ್ಲಾ ಸೂಚ್ಯಂಕಗಳು ಏರುಹಾದಿಯಲ್ಲಿ ಸಾಗಿ ಶೇ.2ರಿಂದ 6ರಷ್ಟು ಏರಿಕೆ ದಾಖಲಿಸಿದವು.

ಇದೆಲ್ಲಾ ಆಗುವ ಮುನ್ನ ಬೆಳಿಗ್ಗೆ ವಹಿವಾಟು ನಡೆದಾಗ ಆತಂಕಕಾರಿ ಬೆಳೆವಣಿಗೆಗಳಾದವು. ‘ಕೋವಿಡ್-19’ ವಿಷವೃತ್ತದಲ್ಲಿ ಸಿಲುಕಿ ನಲುಗುತ್ತಿರುವ ಜಾಗತಿಕ ಷೇರುಪೇಟೆಗಳು ಶುಕ್ರವಾರವೂ ಕುಸಿದವು. ನಿಲ್ಲದ ರಕ್ತದೋಕುಳಿಗೆ ದೇಶೀಯ ಷೇರು ಪೇಟೆ ನ್ಯಾಷನಲ್ ಸ್ಟಾಕ್ ಎಕ್ಸ್ಚೆಂಜ್ ಸೂಚ್ಯಂಕ ‘ನಿಫ್ಟಿ’ ಲೋಯರ್ ಸರ್ಕ್ಯೂಟ್ ಮುಟ್ಟಿದ ಪರಿಣಾಮ ತಾಲ್ಕಾಲಿಕವಾಗಿ ಒಂದು ಗಂಟೆ ವಹಿವಾಟು ಸ್ಥಗಿತಗೊಳಿಸಲಾಗಿತ್ತು. ತೀವ್ರ ಮಾರಾಟದ ಒತ್ತಡದ ಕಾರಣ ವಹಿವಾಟು ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಷೇರುಪೇಟೆ ಶೇ.10ರಷ್ಟು ಕುಸಿಯಿತು. ಭಾರಿ ಪ್ರಮಾಣದಲ್ಲಿ ಕುಸಿತವಾಗುವುದನ್ನು ತಡೆಗಟ್ಟುವ ಸಲುವಾಗಿ ಶೇ.10ರ ಲೋಯರ ಸರ್ಕ್ಯೂಟ್ ಹೇರಿ ಮಾರಾಟ ತೀವ್ರತೆಯಿಂದ ರಕ್ಷಿಸಲಾಯಿತು. ತ್ವರಿತವಾಗಿ ಶೇ.10ರಷ್ಟು ಕುಸಿತ ದಾಖಲಿಸಿದಾಗ ಭಾರಿ ನಷ್ಟವಾಗುವುದನ್ನು ತಪ್ಪಿಸಲು ವಹಿವಾಟನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ವಿಶೇಷ ಮತ್ತು ವಿರಳಾತಿವಿರಳ ಸಂದರ್ಭಗಳಲ್ಲಿ ಈ ಕ್ರಮ ಕೈಗೊಳ್ಳಳಾಗುತ್ತದೆ. ಒಂದು ಗಂಟೆಯ ನಂತರ ವಹಿವಾಟು ಪುನಾರಂಭಗೊಂಡು ಕುಸಿತವು ಶೇ.15ರಷ್ಟಾದರೆ ಮತ್ತೆ ತಾತ್ಕಾಲಿಕವಾಗಿ ವಹಿವಾಟು ಸ್ಥಗಿತಗೊಳಿಸಲಾಗುತ್ತದೆ. ಹೂಡಿಕೆದಾರರ ಸಂಪತ್ತು ತ್ವರಿತವಾಗಿ ನಾಶವಾಗುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ. 2008ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ವೇಳೆ ತೀವ್ರ ಕುಸಿತ ತಡೆಯಲು ತಾತ್ಕಾಲಿಕವಾಗಿ ಒಂದು ಬಾರಿ ವಹಿವಾಟು ಸ್ಥಗಿತಗೊಳಿಸಲಾಗಿತ್ತು. ಅದಾದ ನಂತರ ಇದೇ ಮೊದಲ ಬಾರಿಗೆ ತಾತ್ಕಾಲಿಕವಾಗಿ ವಹಿವಾಟು ಸ್ಥಗಿತಗೊಳಿಸಲಾಗಿತ್ತು.

ವಾರವಿಡೀ ಕುಸಿತದ ಹಾದಿಯಲ್ಲಿ ಸಾಗಿದ್ದ ಷೇರುಪೇಟೆ ಶುಕ್ರವಾರ ವಹಿವಾಟು ಆರಂಭಿಸಿದ ತಕ್ಷಣವೇ ತೀವ್ರ ಕುಸಿತ ದಾಖಲಿಸಿತು. ಅದಕ್ಕೂ ಮುನ್ನ ಜಾಗತಿಕ ಮಾರುಕಟ್ಟೆಗಳು ತೀವ್ರ ಕುಸಿತದಾಖಲಿಸಿದ್ದರಿಂದ ದೇಶೀಯ ಪೇಟೆಯ ಕುಸಿತವನ್ನು ನಿರೀಕ್ಷಿತವಾಗಿತ್ತು. ಆದರೆ, ತ್ವರಿತವಾಗಿ ಶೇ.10ರಷ್ಟು ಕುಸಿತ ದಾಖಲಿಸುತ್ತದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ವಹಿವಾಟು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.

ಭಾರತೀಯ ಷೇರುಪೇಟೆಯ ಪ್ರಮುಖ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಒಂದೇ ದಿನದಲ್ಲಿ ಅತಿ ಗರಿಷ್ಠ ಪ್ರಮಾಣದ ಐತಿಹಾಸಿಕ ಮಹಾಪತನವನ್ನು ಗುರುವಾರ ದಾಖಲಿಸಿದ್ದವು. ಶುಕ್ರವಾರ ಶೇ.10ರಷ್ಟು ಕುಸಿತವಾಗಿ ಮತ್ತೊಂದು ಐತಿಹಾಸಿಕ ಕುಸಿತ ದಾಖಲಾದಂತಾಗಿದೆ. ಇದು. ನಿಫ್ಟಿ 966 ಅಂಶಗಳಷ್ಟು ಕುಸಿದು 8624ಕ್ಕೆ ಇಳಿದಾಗ ಲೋಯರ್ ಸರ್ಕ್ಯೂಟ್ ಹೇರಿ ನಂತರ ವಹಿವಾಟು ಸ್ಥಗಿತಗೊಳಿಸಲಾಯಿತು. ಒಂದು ಗಂಟೆ ತಾತ್ಕಾಲಿಕ ಸ್ಥಗಿತದ ನಂತರ ವಹಿವಾಟು ಆರಂಭವಾದಾಗಲೂ ಕುಸಿತದ ಹಾದಿಯಲ್ಲೇ ಸಾಗಿದ್ದ ಸೂಚ್ಯಂಕಗಳು ಮತ್ತೆ ಚೇತರಿಕೆಯತ್ತ ಸಾಗಿದವು.

ಹಾಗೆಯೇ  ನೋಡುನೋಡುತ್ತಿದ್ದಂತೆ ಶೇ.20ರಷ್ಟು ಕುಸಿತ ಕಂಡಿದ್ದ ಷೇರುಗಳು ಚೇತರಿಸಿಕೊಂಡು ಏರುಹಾದಿಯತ್ತ ಪುಟಿಯತೊಡಗಿದವು. ಸೂಚ್ಯಂಕಗಳು ಗರಿಷ್ಠ ಮಟ್ಟದಿಂದ ಶೇ.22ರಷ್ಟು ಕುಸಿದಿದ್ದರಿಂದ ಖರೀದಿಗೆ ಉತ್ತಮ ಅವಕಾಶ ಎಂಬುದನ್ನು ಅರಿತ ಸಾಂಸ್ಥಿಕ ಹೂಡಿಕೆದಾರರು ದೊಡ್ಡಮಟ್ಟದಲ್ಲಿ ಖರೀದಿ ಮಾಡತೊಡಗಿದ್ದರಿಂದ ತೀವ್ರಗತಿಯಲ್ಲಿ ಮಾರುಕಟ್ಟೆ ಚೇತರಿಸಿಕೊಂಡಿತು. ಒಂದೇ ಗಂಟೆಯಲ್ಲಿ ಅವಧಿಯಲ್ಲಿ ಸೆನ್ಸೆಕ್ಸ್ ತನ್ನ ತೀವ್ರ ಕುಸಿತದ ಮಟ್ಟದಿಂದ 5300 ಅಂಶಗಳಷ್ಟು ಮತ್ತು ನಿಫ್ಟಿ 1600 ಅಂಶಗಳಷ್ಟು ಏರಿಕೆ ಕಂಡವು.

₹184 ಕ್ಕೆ ಕುಸಿದಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರು ತೀವ್ರ ಚೇತರಿಕೆ ಕಂಡು ₹248ಕ್ಕೆ ಜಿಗಿಯಿತು. ಶೇ.14ರಷ್ಟು ಏರಿಕೆ ದಾಖಲಿಸಿ ಸೆನ್ಸೆಕ್ಸ್ ಮತ್ತು ನಿಫ್ಟಿಯನ್ನು ಮೇಲೆತ್ತಲು ಪ್ರಮುಖ ಪಾತ್ರ ವಹಿಸಿತು. ಸೆನ್ಸೆಕ್ಸ್ ಸೂಚ್ಯಂಕದ 30 ಷೇರುಗಳ ಪೈಕಿ 25 ಷೇರುಗಳು ಏರುಹಾದಿಯಲ್ಲಿ ಸಾಗಿದವು ಶೇ.1 ರಿಂದ 14ರಷ್ಟು ಏರಿಕೆ ದಾಖಲಿಸಿದವು. ಎಚ್ಸಿಎಲ್ ಟೆಕ್, ಹಿರೋ ಮೊಟೋಕಾರ್ಪ್, ಹಿಂದೂಸ್ತಾನ್ ಯೂನಿಲಿವರ್, ಏಷಿಯನ್ ಪೇಂಟ್ಸ್ ಮತ್ತು ನೆಸ್ಲೆ ತೀವ್ರ ಕುಸಿತದಿಂದ ಚೇತರಿಸಿಕೊಂಡರೂ ನಿನ್ನೆ ವಹಿವಾಟಿನ ಮಟ್ಟಕ್ಕಿಂತ ಮೇಲೇರಲಿಲ್ಲ. ನಿಫ್ಟಿ 50 ಷೇರುಗಳ ಪೈಕಿ 40 ಷೇರುಗಳು ಶೇ.1ರಿಂದ 14ರಷ್ಟು ಏರಿಕೆ ದಾಖಲಿಸಿವೆ. ಉಳಿದ ಹತ್ತು ಷೇರುಗಳು ಬೆಳಗಿನ ವಹಿವಾಟಿನ ಕುಸಿತದಿಂದ ಚೇತರಿಸಿಕೊಂಡರೂ ನಿನ್ನೆ ವಹಿವಾಟಿನ ಮಟ್ಟಮುಟ್ಟಲಾಗಿಲ್ಲ.

ನಿಫ್ಟಿ ಮತ್ತು ಸೆನ್ಸೆಕ್ಸ್ ಈ ವಾರದಲ್ಲಿ ಶೇ.14ರಷ್ಟು ಮತ್ತು ಒಂದು ತಿಂಗಳಲ್ಲಿ ಶೇ.21ರಷ್ಟು ಕುಸಿದಿವೆ. ಇದು ತೀವ್ರವಾದ ಕುಸಿತವಾಗಿದೆ. ಶುಕ್ರವಾರದ ತ್ವರಿತ ಏರಿಕೆಯಿಂದ ಮಾರುಕಟ್ಟೆ ಕುಸಿತಕ್ಕೆ ತಡೆ ಬಿದ್ದಿದೆಯಾದರೂ ಸ್ಥಿರತೆ ಬಂದಿಲ್ಲ. ‘ಕೋವಿಡ್-19’ ರ ಕಪಿಮುಷ್ಟಿಯಿಂದ ಜಗತ್ತು ಮುಕ್ತವಾಗುವವರೆಗೂ ಜಾಗತಿಕ ಷೇರುಪೇಟೆಗಳಲ್ಲಿ ಅಸ್ಥಿರತೆ ಮುಂದುವರೆಯುತ್ತದೆ ಎನ್ನುತ್ತಾರೆ ಮಾರುಕಟ್ಟೆ ತಜ್ಢರು.

ಶುಕ್ರವಾರದ ಚೇತರಿಕೆ ಹೂಡಿಕೆದಾರರಲ್ಲಿ ಕೊಂಚ ನೆಮ್ಮದಿ ತಂದಿದೆ. ಶುಕ್ರವಾದ ಕುಸಿತವು ಹಾಗೆ ಮುಂದುವರೆದಿದ್ದರೆ 12 ಲಕ್ಷ ಕೋಟಿ ಸಂಪತ್ತು ನಾಶವಾಗಿ ಬಿಡುತ್ತಿತ್ತು. ಚೇತರಿಕೆಯಿಂದಾಗಿ ಅಂತಹ ಅಪಾಯದಿಂದ ಹೂಡಿಕೆದಾರರು ಪಾರಾಗಿದ್ದಾರೆ. ಮುಂದಿನವಾರದ ವಹಿವಾಟು ಬಹುತೇಕ ಜಾಗತಿಕ ಷೇರುಪೇಟೆಗಳ ಹಾದಿಯಲ್ಲೇ ಸಾಗಲಿದೆ. ಕೋವಿಡ್-19 ಚೀನಾದ ಹೊರಗೆ ತ್ವರಿತವಾಗಿ ಹರಡುತ್ತಿರುವುದರಿಂದ ಮುಂದಿನವಾರ ಜಾಗತಿಕ ಷೇರುಪೇಟೆಗಳಷ್ಟೇ ಅಲ್ಲದೇ, ಅಂತಾರಾಷ್ಟ್ರೀಯ ತೈಲಮಾರುಕಟ್ಟೆ, ಕರೆನ್ಸಿ ಮಾರುಕಟ್ಟೆಗಳಲ್ಲೂ ಅಸ್ಥಿರತೆ ನಿಚ್ಛಳವಾಗಿರಲಿದೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಮಳೆ ನೀರಲ್ಲಿ ಮತ್ತೆ ಮುಳುಗಿದ ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಹೈವೇ..! : Mysore Bangalore Express Highway
Top Story

ಮಳೆ ನೀರಲ್ಲಿ ಮತ್ತೆ ಮುಳುಗಿದ ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಹೈವೇ..! : Mysore Bangalore Express Highway

by ಪ್ರತಿಧ್ವನಿ
March 18, 2023
ಡಾ.ಬಿ.ಆರ್‌ ಅಂಬೇಡ್ಕರ್‌ ದೃಷ್ಟಿಯಲ್ಲಿ ಮಹಿಳೆ ಮತ್ತು ಸಮಾನ ನಾಗರಿಕ ಸಂಹಿತೆ : Women And Equal Civil Code
ಕರ್ನಾಟಕ

ಡಾ.ಬಿ.ಆರ್‌ ಅಂಬೇಡ್ಕರ್‌ ದೃಷ್ಟಿಯಲ್ಲಿ ಮಹಿಳೆ ಮತ್ತು ಸಮಾನ ನಾಗರಿಕ ಸಂಹಿತೆ : Women And Equal Civil Code

by ನಾ ದಿವಾಕರ
March 18, 2023
ಬರ್ತಿದೆ ಲವ್‌ ಮಾಕ್ಟೇಲ್‌ 3..! ಗುಡ್‌ನ್ಯೂಸ್‌ ಕೊಟ್ಟ ಆದಿ-ನಿಧಿಮಾ
ಸಿನಿಮಾ

ಬರ್ತಿದೆ ಲವ್‌ ಮಾಕ್ಟೇಲ್‌ 3..! ಗುಡ್‌ನ್ಯೂಸ್‌ ಕೊಟ್ಟ ಆದಿ-ನಿಧಿಮಾ

by ಪ್ರತಿಧ್ವನಿ
March 23, 2023
ANTIBIOTIC | ಆಂಟಿಬಯಾಟಿಕ್ ಟ್ಯಾಬ್ಲೆಟ್ ಅರೋಗ್ಯಕೆ ಒಳ್ಳೆಯದಲ್ಲ #PRATIDHVANI
ಇದೀಗ

ANTIBIOTIC | ಆಂಟಿಬಯಾಟಿಕ್ ಟ್ಯಾಬ್ಲೆಟ್ ಅರೋಗ್ಯಕೆ ಒಳ್ಳೆಯದಲ್ಲ #PRATIDHVANI

by ಪ್ರತಿಧ್ವನಿ
March 23, 2023
DK SHIVAKUMAR | ಬಿಜೆಪಿ ಎಸ್ ಸಿ ಎಸ್ ಟಿ ಅವರಿಗೆ ತುಂಬಾ ಮೋಸ ಮಾಡಿದೆ #PRATIDHVANI
ಇದೀಗ

DK SHIVAKUMAR | ಬಿಜೆಪಿ ಎಸ್ ಸಿ ಎಸ್ ಟಿ ಅವರಿಗೆ ತುಂಬಾ ಮೋಸ ಮಾಡಿದೆ #PRATIDHVANI

by ಪ್ರತಿಧ್ವನಿ
March 23, 2023
Next Post
ಜಗತ್ತಿನ ವಿರಳ ಸೃಷ್ಟಿ ಬಿಳಿ ಜಿರಾಫೆಗಳು ಇನ್ನು ನೆನಪಿಗಷ್ಟೇ 

ಜಗತ್ತಿನ ವಿರಳ ಸೃಷ್ಟಿ ಬಿಳಿ ಜಿರಾಫೆಗಳು ಇನ್ನು ನೆನಪಿಗಷ್ಟೇ 

ಫಾರೂಕ್ ಅಬ್ದುಲ್ಲಾ ಬಿಡುಗಡೆ; ಕಣಿವೆ ರಾಜ್ಯದ ರಾಜಕೀಯದಲ್ಲಿ ಗರಿಗೆದರಿದ ಹೊಸ ಸಂಚಲನ..!

ಫಾರೂಕ್ ಅಬ್ದುಲ್ಲಾ ಬಿಡುಗಡೆ; ಕಣಿವೆ ರಾಜ್ಯದ ರಾಜಕೀಯದಲ್ಲಿ ಗರಿಗೆದರಿದ ಹೊಸ ಸಂಚಲನ..!

ಗ್ರಾಹಕರ ಜೇಬಿಗೆ ನರೇಂದ್ರ ಮೋದಿ ಸರ್ಕಾರದಿಂದ ಕನ್ನ; ಪೆಟ್ರೋಲ್

ಗ್ರಾಹಕರ ಜೇಬಿಗೆ ನರೇಂದ್ರ ಮೋದಿ ಸರ್ಕಾರದಿಂದ ಕನ್ನ; ಪೆಟ್ರೋಲ್, ಡಿಸೇಲ್ ಮೇಲೆ ₹3 ತೆರಿಗೆ ಹೇರಿಕೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist