Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಏನಿದು Mastodon? ಟ್ವಿಟ್ಟರ್  ಬಳಕೆದಾರರೆಲ್ಲ ಇದರ ಹಿಂದೇಕೆ ಬಿದ್ದಿದ್ದಾರೆ?

ಏನಿದು Mastodon? ಟ್ವಿಟ್ಟರ್ ಬಳಕೆದಾರರೆಲ್ಲ ಇದರ ಹಿಂದೇಕೆ ಬಿದ್ದಿದ್ದಾರೆ?
ಏನಿದು Mastodon? ಟ್ವಿಟ್ಟರ್  ಬಳಕೆದಾರರೆಲ್ಲ ಇದರ ಹಿಂದೇಕೆ ಬಿದ್ದಿದ್ದಾರೆ?

November 15, 2019
Share on FacebookShare on Twitter

ನೀವೇನಾದರೂ ಟ್ವಿಟ್ಟರ್ ನ ಸಕ್ರೀಯ ಬಳಕೆದಾರರಾಗಿದ್ದರೆ ಕಳೆದವಾರ #Mastodon ಎನ್ನುವ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದ್ದನ್ನು ನೀವು ಗಮನಿಸಿರಬಹುದು. ಇಷ್ಟು ದಿನ ಟ್ವಿಟ್ಟರ್ ಬಳಸುತ್ತಿದ್ದ ಒಂದು ಪಂಗಡ ಮುಖ್ಯವಾಗಿ ಪ್ರಗತಿಪರರು ಈ ಹೊಸ ಸಾಮಾಜಿಕ ಜಾಲತಾಣಕ್ಕೆ ವಲಸೆ ಹೋಗಲು ಉತ್ಸುಕರಾಗಿದ್ದಾರೆ. ಇದಕ್ಕೆಲ್ಲ ಕಾರಣ ಸುಪ್ರೀಂ ಕೋರ್ಟ್ ವಕೀಲ ಸಂಜಯ್ ಹೆಗ್ಡೆ ಅವರ ಖಾತೆಯನ್ನು ಟ್ವಿಟ್ಟರ್ ಕಂಪನಿಯು 1936 ರಲ್ಲಿ ತೆಗೆದ ಆಗಸ್ಟ್ ಲ್ಯಾಂಡ್ ಮೆಸ್ಸರ್ ಎನ್ನುವ ವ್ಯಕ್ತಿ ನಾಜಿ ಸೆಲ್ಯೂಟ್ ಮಾಡಲು ನಿರಾಕರಿಸಿರುವ ಚಿತ್ರವನ್ನು ತಮ್ಮ ಕವರ್ ಫೋಟ್ ಆಗಿ ಬಳಸಿರುವುದನ್ನು ಹಾಗೂ ಹಿಂದಿ ಕವಿ ಗೋರಖ್ ಪಾಂಡೆ ಅವರ ಕವನವನ್ನು ಹಂಚಿಕೊಂಡಿರುವುದನ್ನು ನಿಯಮಗಳ ಉಲ್ಲಂಘನೆಯೆಂದು ಪರಿಗಣಿಸಿ ಖಾತೆಯನ್ನು ನಿಷ್ಕ್ರಿಯಗೊಳಿಸಿರುವುದು ಹಾಗೂ ಅಧೀಕೃತ ಖಾತೆಗಳು ಎಂದು ಸೂಚಿಸಲು ಟ್ವಿಟ್ಟರ್ ಕೊಡಮಾಡುವ ಬ್ಲೂ ಟಿಕ್ ಗಳ ನೀಡುವಿಕೆಯಲ್ಲಿ ತಾರತಮ್ಯ ಮಾಡುತ್ತಿರುವುದಾಗಿ ಬಳಕೆದಾರರು ದೂರಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಕೆಲವು ರಾಷ್ಟ್ರಗಳು ಅಜೆಂಡಾ ನಿರ್ಧರಿಸಿ, ಉಳಿದವರು ಅನುಸರಿಸುವ ಕಾಲ ಮುಗಿದಿದೆ: ಜೈಶಂಕರ್

ಸುಪ್ರೀಂ ಕೋರ್ಟ್ ಗಮನ ಸೆಳೆಯಲು ಬೀದಿಗಿಳಿದು ಹೋರಾಟ ಅನಿವಾರ್ಯ: ಬಸವರಾಜ ಬೊಮ್ಮಾಯಿ

ತಮಿಳುನಾಡಿನಲ್ಲಿ ಬಿಜೆಪಿ ಜತೆಗಿನ ಬಾಂಧವ್ಯವನ್ನು ಕಳೆದುಕೊಳ್ಳುತ್ತೇನೆ : ಉದಯನಿಧಿ ಸ್ಟಾಲಿನ್

ಹೆಗ್ಡೆ ಅವರು ಪ್ರತಿಭಟನೆಯ ಸೂಚಕವಾಗಿ ಅವರು ಹೊಸ ಜಾಲತಾಣ Mastodon ನಲ್ಲಿ ನೋಂದಾಯಿಸಿಕೊಂಡಿರುವುದಾಗಿ ಹೇಳಿದ್ದಾರೆ. ಇದರಿಂದ ಅವರ ಬೆಂಬಲಿಗರು ಹಾಗೂ ಕೆಲ ಪತ್ರಕರ್ತರು Mastodon ಸೇರಿದ್ದಾರೆ. ಸೇರಿರುವವರಲ್ಲಿ ಪ್ರಮುಖವಾಗಿ ಆರ್ಟಿಕಲ್ 370 ರದ್ಧತಿ ಕುರಿತಾಗಿ ಸರ್ಕಾರದ ಧೋರಣೆಯನ್ನು ಕಾರಣವಾಗಿಟ್ಟುಕೊಂಡು ರಾಜೀನಾಮೆ ನೀಡುವ ಮೂಲಕ ಗಮನಸೆಳೆದ ಮಾಜಿ ಐ.ಎ.ಎಸ್. ಅಧಿಕಾರಿ ಕಣ್ಣನ್ ಗೋಪಿನಾಥನ್, ಸಂಗೀತ ನಿರ್ದೇಶಕ ವಿಶಾಲ್ ದಾದ್ಲಾನಿ, ಅಂಕಣಗಾರ್ತಿ ಮಿಥಾಲಿ ಸರಣ್, ಸಾಮಾಜಿಕ ಕಾರ್ಯಕರ್ತೆ ಕವಿತಾ ಕೃಷ್ಣನ್, ಪತ್ರಕರ್ತ ಶಿವಮ್ ವಿಜ್ ಇದ್ದಾರೆ.

ಹೊಸ ಜಾಲತಾಣ Mastodon

Mastodon ಒಂದು ಸಾಮಾಜಿಕ ಜಾಲತಾಣವಾದರೂ ಇದರ ಕಾರ್ಯ ವೈಖರಿ ಇತರೆ ಸಾಮಾಜಿಕ ಜಾಲತಾಣಗಳಿಗಿಂತ ಸಂಪೂರ್ಣ ಭಿನ್ನ. ಇದೊಂದು ಮುಕ್ತ ಸಂಪನ್ಮೂಲ ಜಾಲತಾಣವಾಗಿದ್ದು ಜರ್ಮನಿ ಮೂಲದ ಇಪ್ಪತಾರರ ಹರೆಯದ ಯುವಕ ಯುಗೇನ್ ರೊಚ್ಕೊ ಅವರು 2016 ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಸದ್ಯ ಇದರಲ್ಲಿ ಜಾಗತಿಕವಾಗಿ 2.2 ಮಿಲಿಯನ್ ಬಳಕೆದಾರರು ಇದ್ದಾರೆ.

ಟ್ವಿಟ್ಟರ್ ನಂತೆ ಮೈಕ್ರೋ ಬ್ಲಾಗಿಂಗ್ ತಾಣವಾಗಿ ನೋಡಲು ಹಾಗೂ ಬಳಸಲು ಬಹುತೇಕ ಅದರಂತೆ ಕಂಡರೂ ಬಳಕೆಯ ನಿಯಮಗಳು ಕಟ್ಟುನಿಟ್ಟಾಗಿವೆ. ಟ್ವಿಟ್ಟರ್ ನ ಟ್ವೀಟ್ ಗೆ ಸಂವಾದಿಯಾಗಿ ‘Toot’ ಎಂದು ಹಾಗೂ ರೀಟ್ವೀಟ್ ಗೆ ‘Boost’ ಎಂದು ಹೆಸರಿಡಲಾಗಿದೆ. ಟ್ವಿಟ್ಟರ್ ನಲ್ಲಿ ಪ್ರತಿ ಟ್ವೀಟ್ ನ ಅಕ್ಷರಗಳ ಮಿತಿ 280 ಇದ್ದರೆ ಇಲ್ಲಿ ಪ್ರತಿ Toot ನ ಅಕ್ಷರಗಳ ಮಿತಿಯನ್ನು 500 ಕ್ಕೆ ಇಡಲಾಗಿದೆ. ಪ್ರತೀ Toot ಮಾಡುವ ಮುನ್ನ ನೀಡಿರುವ ಹಲವು ಗೌಪ್ಯತಾ ಆಯ್ಕೆಗಳು ಬಳಕೆದಾರರನ್ನು ಆಕರ್ಷಿಸುತ್ತಿವೆ.

ಸಾಂಪ್ರದಾಯಿಕ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುವ ಏಕೀಕೃತ ದತ್ತಾಂಶ ಸಂಗ್ರಹಣಾ ವ್ಯವಸ್ಥೆ ಇದರಲ್ಲಿ ಇಲ್ಲ. ಇದೊಂದು ವಿಕೇಂದ್ರೀಕೃತ ಹಾಗೂ ಮುಕ್ತ ಸಂಪನ್ಮೂಲ ತಾಣವಾಗಿದೆ. ಅಂದರೆ ಜಾಲತಾಣವನ್ನು ನಿರ್ವಹಿಸಲು ಕೇವಲ ಒಂದೇ ಘಟಕವಿಲ್ಲ. ಬಳಕೆದಾರರು ತಮಗೆ ಇಚ್ಛೆಗೆ ಅನುಸಾರವಾಗಿ ಸರ್ವರ್ ಗಳನ್ನು ರಚಿಸಿಕೊಳ್ಳಬಹುದು. ಈ ಸರ್ವರ್ ಗಳನ್ನು ‘Instance’ ಎಂದು ಕರೆಯಲಾಗಿದೆ. ಈ ರೀತಿ ರಚಿಸಿಕೊಂಡ ಸರ್ವರ್ ಗಳಿಗೆ ಸೇರುವ ಬಳಕೆದಾರರು ಆಯಾ ಸರ್ವರ್ ಗಳ ನಿಯಮ ಮತ್ತು ನಿಬಂಧನೆಗಳಿಗೆ ಸಮ್ಮತಿ ಸೂಚಿಸಿರಬೇಕು. ಪ್ರತಿ ಸರ್ವರ್ ಗೂ ತನ್ನದೇ ಆದ ಅಡ್ಮಿನ್ ಹಾಗೂ ನಿರ್ವಹಣಾ ಮಂಡಳಿ ಇರುವುದರಿಂದ ದ್ವೇಷ ಪೂರಿತ ಅಭಿಪ್ರಾಯಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲು ಸುಲಭವಾಗಲಿದೆ.

ದತ್ತಾಂಶವು ವಿವಿಧ ಸರ್ವರ್ ಗಳಲ್ಲಿ ಸಂಗ್ರಹವಾಗಿರುವುದರಿಂದ ಅದನ್ನು ಮಾರಾಟ ಮಾಡಲು ಹಾಗೂ ವಿಶ್ಲೇಷಿಸಲು ಕಷ್ಟಸಾಧ್ಯ. ಇದು ಟ್ವಿಟ್ಟರ್ ಅನ್ನು ಪಕ್ಕಕ್ಕೆ ಸರಿಸಿ ಯಶಸ್ಸು ಕಾಣುವುದೋ ಇಲ್ಲವೋ ಎನ್ನುವುದನ್ನು ಕಾದುನೋಡಬೇಕಿದೆ.

RS 500
RS 1500

SCAN HERE

Pratidhvani Youtube

«
Prev
1
/
5518
Next
»
loading
play
Congress | DCM ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ.
play
D K Shivakumar | ಯಾವುದೇ ಕಾರಣಕ್ಕೂನಾವು ಕೆ ಆರ್ ಎಸ್ ಇಂದ ನೀರು ಕೊಡುವ ಸ್ಥಿತಿ ಉದ್ಭವಿಸುವುದಿಲ್ಲ|
«
Prev
1
/
5518
Next
»
loading

don't miss it !

ಕಾವೇರಿ ಬಿಕ್ಕಟ್ಟು ಬಗೆಹರಿಸಲು ರಾಜ್ಯಗಳ ನಡುವೆ ಒಮ್ಮತ ಮೂಡಬೇಕು: ಎಚ್‌ಡಿ ದೇವೇಗೌಡ
Top Story

ಕಾವೇರಿ ಬಿಕ್ಕಟ್ಟು ಬಗೆಹರಿಸಲು ರಾಜ್ಯಗಳ ನಡುವೆ ಒಮ್ಮತ ಮೂಡಬೇಕು: ಎಚ್‌ಡಿ ದೇವೇಗೌಡ

by ಪ್ರತಿಧ್ವನಿ
September 27, 2023
ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ: ಸಂತೋಷ್ ಲಾಡ್
Top Story

ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ: ಸಂತೋಷ್ ಲಾಡ್

by ಪ್ರತಿಧ್ವನಿ
September 20, 2023
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಭೇಟಿಯಾದ ಸಿಎಂ, ಡಿಸಿಎಂ
Top Story

ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಭೇಟಿಯಾದ ಸಿಎಂ, ಡಿಸಿಎಂ

by ಪ್ರತಿಧ್ವನಿ
September 21, 2023
ರೈತರ ಹೋರಾಟಕ್ಕೆ ಬಿಜೆಪಿ ಮತ್ತು ಜೆಡಿಎಸ್ ಬೆಂಬಲ ಕೊಟ್ಟಿದೆ: ಹೆಚ್​ಡಿ ಕುಮಾರಸ್ವಾಮಿ
Top Story

ರೈತರ ಹೋರಾಟಕ್ಕೆ ಬಿಜೆಪಿ ಮತ್ತು ಜೆಡಿಎಸ್ ಬೆಂಬಲ ಕೊಟ್ಟಿದೆ: ಹೆಚ್​ಡಿ ಕುಮಾರಸ್ವಾಮಿ

by ಪ್ರತಿಧ್ವನಿ
September 23, 2023
ನಾನು ಮಂಡ್ಯ ಕ್ಷೇತ್ರದ ಚುನಾವಣಾ ಸ್ಪರ್ಧಾಕಾಂಕ್ಷಿಯಲ್ಲ: ನಿಖಿಲ್‌ ಕುಮಾರಸ್ವಾಮಿ
Top Story

ನಾನು ಮಂಡ್ಯ ಕ್ಷೇತ್ರದ ಚುನಾವಣಾ ಸ್ಪರ್ಧಾಕಾಂಕ್ಷಿಯಲ್ಲ: ನಿಖಿಲ್‌ ಕುಮಾರಸ್ವಾಮಿ

by ಪ್ರತಿಧ್ವನಿ
September 24, 2023
Next Post
ಬಿಜೆಪಿ-ಶಿವಸೇನೆಯ ಜಗಳದಲ್ಲಿ ಉಣ್ಣುವವರು ಜಾಣರಲ್ಲ!

ಬಿಜೆಪಿ-ಶಿವಸೇನೆಯ ಜಗಳದಲ್ಲಿ ಉಣ್ಣುವವರು ಜಾಣರಲ್ಲ!

ಉಪ ಚುನಾವಣಾ ಕಣ ರಂಗೇರುತ್ತಿರುವಾಗ ಬಣ್ಣಕಳೆದುಕೊಳ್ಳುತ್ತಿರುವ ಕಾಂಗ್ರೆಸ್

ಉಪ ಚುನಾವಣಾ ಕಣ ರಂಗೇರುತ್ತಿರುವಾಗ ಬಣ್ಣಕಳೆದುಕೊಳ್ಳುತ್ತಿರುವ ಕಾಂಗ್ರೆಸ್

ಭಾರತದ ಅಧಿಕಾರಸ್ಥರಿಗೆ ಫೇಕ್ ನ್ಯೂಸ್ ತಾಣಗಳ ಸಾಥ್!

ಭಾರತದ ಅಧಿಕಾರಸ್ಥರಿಗೆ ಫೇಕ್ ನ್ಯೂಸ್ ತಾಣಗಳ ಸಾಥ್!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist