Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಉಪ ಚುನಾವಣೆ: ಗೊಂದಲದ ಗೂಡಾಗಿರುವ ಚುನಾವಣಾ ಆಯೋಗ

ಉಪ ಚುನಾವಣೆ: ಗೊಂದಲದ ಗೂಡಾಗಿರುವ ಚುನಾವಣಾ ಆಯೋಗ
ಉಪ ಚುನಾವಣೆ: ಗೊಂದಲದ ಗೂಡಾಗಿರುವ ಚುನಾವಣಾ ಆಯೋಗ
Pratidhvani Dhvani

Pratidhvani Dhvani

September 28, 2019
Share on FacebookShare on Twitter

ಸಾಮಾನ್ಯವಾಗಿ ಚುನಾವಣಾ ಆಯೋಗ ಚುನಾವಣೆ ನಡೆಸುವ ಕುರಿತು ವೇಳಾಪಟ್ಟಿ ಹೊರಡಿಸುವಾಗ ಇಂತಹ ದಿನ ಮತದಾನ ನಡೆಯಲಿದೆ ಎಂದು ಹೇಳುತ್ತದೆ. ಆದರೆ, ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳ ಉಪ ಚುನಾವಣೆಗೆ ಸಂಬಂಧಿಸಿದಂತೆ ಡಿಸೆಂಬರ್ 5ರಂದು ಮತದಾನಕ್ಕೆ ದಿನಾಂಕ ನಿಗದಿಪಡಿಸಿರುವ ಆಯೋಗ ಅಗತ್ಯಬಿದ್ದರೆ ಚುನಾವಣೆ ನಡೆಯಲಿದೆ ಎಂದು ಹೇಳಿರುವುದರ ಅರ್ಥವೇನು?

ಹೆಚ್ಚು ಓದಿದ ಸ್ಟೋರಿಗಳು

ಶಿವಸೇನೆ ಶಾಸಕರನ್ನು ಅನರ್ಹಗೊಳಿಸುವಂತೆ ಮನವಿ ಸಲ್ಲಿಸಿದ ಶಿಂಧೆ ಬಣ

ಶೀಘವ್ರೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು : ಫಡ್ನವೀಸ್

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಾಸಕರೊಬ್ಬರ ಮೇಲೆ ACB ದಾಳಿ : ಅಷ್ಟಕ್ಕೂ ACB ಕೆಲಸ ಏನು.!?

ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳ ಉಪ ಚುನಾವಣೆ ಕುರಿತಂತೆ ಚುನಾವಣಾ ಆಯೋಗ ನಡೆದುಕೊಂಡಿರುವ ರೀತಿ ಸಾಕಷ್ಟು ಅನುಮಾನ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಶಾಸಕರ ಅನರ್ಹತೆ ಕುರಿತಂತೆ ನಡೆಯುತ್ತಿರುವ ಕಾನೂನು ಹೋರಾಟದಿಂದ ಚುನಾವಣಾ ದಿನಾಂಕ ನಿಗದಿಗೆ ಸಂಬಂಧಿಸಿದಂತೆ ಗೊಂದಲಗಳು ಇರಬಹುದು. ಆದರೆ, ಆ ಗೊಂದಲಗಳನ್ನು ಬಗೆಹರಿಸಿಕೊಂಡು ವೇಳಾಪಟ್ಟಿ ಪ್ರಕಟಿಸಬೇಕಿತ್ತು. ಅದನ್ನು ಬಿಟ್ಟು ವೇಳಾಪಟ್ಟಿ ಪ್ರಕಟಿಸಿ ತನ್ನ ಗೊಂದಲವನ್ನು ಜನರ ಮೇಲೂ ಹೇರಿರುವುದೇಕೆ ಎಂಬುದೇ ಗೊತ್ತಾಗುತ್ತಿಲ್ಲ.

ಪ್ರಶ್ನೆ-1

17 ಶಾಸಕರು ಅನರ್ಹತೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ಇನ್ನೂ ವಿಚಾರಣೆ ಹಂತದಲ್ಲಿರುವಾಗಲೇ ಏಕಾಏಕಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಿಸಿತು. ಇನ್ನೆರಡು ಕ್ಷೇತ್ರಗಳಲ್ಲಿ ಗೆದ್ದ ಅಭ್ಯರ್ಥಿಗಳ ವಿರುದ್ಧ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ಈ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಮಾಡಿಲ್ಲ ಎಂದು ಹೇಳಿತ್ತು. ಹಾಗಿದ್ದರೆ ಅನರ್ಹತೆ ಅರ್ಜಿ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗ ಏಕಾಏಕಿ 15 ಕ್ಷೇತ್ರಗಳಿಗೆ ಚುನಾವಣೆ ಘೋಷಿಸಿದ್ದು ಏಕೆ?

ಪ್ರಶ್ನೆ-2

ತಮ್ಮನ್ನು ಶಾಸಕತ್ವದಿಂದ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ 17 ಮಂದಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಪ್ರತಿವಾದಿಯಾಗಿ ತನ್ನನ್ನು ಮಾಡದೇ ಇದ್ದರೂ ಚುನಾವಣಾ ಆಯೋಗ ಖುದ್ದಾಗಿ ನ್ಯಾಯಾಲಯದ ಮುಂದೆ ಹೋಗಿ ಉಪ ಚುನಾವಣೆ ಮುಂದೂಡುತ್ತೇವೆ ಎಂದು ಹೇಳಿದ್ದೇಕೆ? ಉಪ ಚುನಾವಣೆ ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸುವ ಮುನ್ನವೇ ಅಥವಾ ತನಗೆ ನೋಟಿಸ್ ಜಾರಿ ಮಾಡುವ ಮುನ್ನವೇ ಕೋರ್ಟ್ ಮುಂದೆ ಹಾಜರಾಗಿ ಮುಂದೂಡುವುದಾಗಿ ಹೇಳುವ ಅಗತ್ಯವಾದರೂ ಏನಿತ್ತು?

ಪ್ರಶ್ನೆ-3

ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ವಿಧಾನಸಭೆ ಉಪ ಚುನಾವಣೆಗೆ ಸೆ. 21ರಂದು ಮೊದಲ ಬಾರಿ ವೇಳಾಪಟ್ಟಿ ಪ್ರಕಟಿಸಿದ ವೇಳೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದರು. ಆದರೆ, ಸುಪ್ರೀಂ ಕೋರ್ಟ್ ಮುಂದೆ ಹಾಜರಾದ ಚುನಾವಣಾ ಆಯೋಗದ ಹಿರಿಯ ವಕೀಲರು, ಅನರ್ಹರು ಚುನಾವಣೆಗೆ ಸ್ಪರ್ಧಿಸಲು ಆಯೋಗದ ಆಕ್ಷೇಪವಿಲ್ಲ. ಸ್ಪರ್ಧೆಗೆ ಅವಕಾಶ ನೀಡಬಹುದಾಗಿದೆ. ಅನರ್ಹಗೊಳಿಸಿರುವ ಸ್ಪೀಕರ್ ಅವರಿಗೆ ಅವರನ್ನು ಸ್ಪರ್ಧೆಯಿಂದ ದೂರವಿರಿಸಲಾಗದು ಎಂದು ಹೇಳಿದ್ದೇಕೆ?

ಪ್ರಶ್ನೆ-4

ಉಪ ಚುನಾವಣೆ ಮುಂದೂಡುತ್ತೇವೆ ಎಂದು ಕೋರ್ಟ್ ನಲ್ಲಿ ಹೇಳಿದ್ದರಿಂದ ಚುನಾವಣಾ ಆಯೋಗ ಅದಕ್ಕೆ ಒಪ್ಪಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ನಿಗದಿ ಮಾಡಿದೆ. ಹೀಗಿರುವಾಗ ಕೋರ್ಟ್ ನಲ್ಲಿ ಪ್ರಕರಣ ಇತ್ಯರ್ಥವಾಗುವ ಮುನ್ನವೇ ಮತ್ತೆ ಹೊಸ ದಿನಾಂಕ ನಿಗದಿಪಡಿಸಿದ್ದೇಕೆ? ದಿನಾಂಕ ನಿಗದಿಪಡಿಸಿದ್ದರೂ ಅಗತ್ಯ ಬಿದ್ದರೆ ಮತದಾನ ನಡೆಯುತ್ತದೆ ಎಂದು ಚುನಾವಣಾ ವೇಳಾಪಟ್ಟಿಯಲ್ಲಿ ತಿಳಿಸಿರುವುದೇಕೆ ಚುನಾವಣೆ ನಡೆಯುವುದೇ ಅನುಮಾನ ಎಂದಾಗಿದ್ದರೆ ವೇಳಾಪಟ್ಟಿ ಹೊರಡಿಸುವ ಅಗತ್ಯವೇನಿತ್ತು?

ಪ್ರಶ್ನೆ-5

ಸಾಮಾನ್ಯವಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಿ 45 ದಿನಗಳಲ್ಲಿ ಚುನಾವಣಾ ಪ್ರಕ್ರಿಯೆ ಮುಗಿಸಬೇಕು. ವೇಳಾಪಟ್ಟಿ ಘೋಷಣೆಯಾದ ದಿನದಿಂದ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಆದರೆ, ಈ ಉಪ ಚುನಾವಣೆಯಲ್ಲಿ ಮತದಾನಕ್ಕೆ 68 ದಿನ ಮೊದಲೇ ವೇಳಾಪಟ್ಟಿ ಪ್ರಕಟಿಸಿದ್ದೇಕೆ? ವೇಳಾಪಟ್ಟಿ ಪ್ರಕಟವಾದ ದಿನದಿಂದಲೇ ನೀತಿ ಸಂಹಿತೆ ಜಾರಿಯಲ್ಲಿರಬೇಕು ಎಂದಿದ್ದರೂ ಇಲ್ಲಿ ನೀತಿ ಸಂಹಿತೆ ಏಕೆ ಜಾರಿಯಾಗಿಲ್ಲ? ಸಂಪ್ರದಾಯಗಳನ್ನು ಉಲ್ಲಂಘಿಸಿ ಈ ರೀತಿಯ ಗೊಂದಲಕಾರಿ ನಿರ್ಧಾರ ಪ್ರಕಟಿಸುವ ಅಗತ್ಯವೇನಿತ್ತು?

ಪ್ರಶ್ನೆ-6

ಶಾಸಕ ಸ್ಥಾನ ತೆರವಾದ ಆರು ತಿಂಗಳೊಳಗೆ ಅದನ್ನು ಭರ್ತಿ ಮಾಡಬೇಕು. ಅದಕ್ಕಾಗಿ ಚುನಾವಣೆ ನಡೆಸಲೇಬೇಕಾದ ಅಗತ್ಯವಿದೆ ಎಂದು ಆಯೋಗ ಹೇಳುತ್ತದೆ. ಅದರಂತೆ ಅನರ್ಹ ಶಾಸಕರ ಕ್ಷೇತ್ರಗಳನ್ನೂ ಜನವರಿ ಅಂತ್ಯದೊಳಗೆ ಭರ್ತಿ ಮಾಡಬೇಕು. ಹೀಗಿರುವಾಗ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಮಾತ್ರ ಉಪ ಚುನಾವಣೆ ಘೋಷಿಸಿದ್ದೇಕೆ? ನ್ಯಾಯಾಲಯದಲ್ಲಿ ತಕರಾರು ಅರ್ಜಿ ಇದೆ ಎಂದ ಮಾತ್ರಕ್ಕೆ ಉಳಿದ ಎರಡು ಕ್ಷೇತ್ರಗಳನ್ನು ಆರು ತಿಂಗಳಿಗಿಂತ ಹೆಚ್ಚು ಕಾಲ ಖಾಲಿ ಬಿಡಬಹುದೇ ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ?

ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್

ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ಬಗ್ಗೆ ರಾಜಕೀಯ ಪಕ್ಷಗಳಿಂದ ವ್ಯಕ್ತವಾಗುತ್ತಿರುವ ಆರೋಪ, ಅನುಮಾನಗಳಿಗೆ ಈ ಪ್ರಶ್ನೆಗಳು ಇನ್ನಷ್ಟು ಪುಷ್ಠಿ ನೀಡುತ್ತಿದೆ. ಇದರ ಮಧ್ಯೆ ಅನರ್ಹ ಶಾಸಕರ ಅರ್ಜಿ ವಿಚಾರಣೆ ಕಾರಣಕ್ಕಾಗಿ ಚುನಾವಣೆ ಮುಂದೂಡುವುದಾಗಿ ಸುಪ್ರೀಂ ಕೋರ್ಟ್ ನಲ್ಲಿ ಹೇಳಿಕೆ ನೀಡಿ ಮಾರನೇ ದಿನವೇ ಅರ್ಜಿ ಇತ್ಯರ್ಥಗೊಳ್ಳುವ ಮುನ್ನ ಹೊಸದಾಗಿ ವೇಳಾಪಟ್ಟಿ ಪ್ರಕಟಿಸುವ ಮೂಲಕ ಅರ್ಜಿ ಇತ್ಯರ್ಥಗೊಳಿಸಲು ಆಯೋಗ ನ್ಯಾಯಾಲಯಕ್ಕೆ ಗಡುವು ನೀಡಿದೆಯೇ ಎಂಬ ಪ್ರಶ್ನೆಯೂ ಇಲ್ಲಿ ಉದ್ಭವವಾಗುತ್ತದೆ.

ವಿಧಾನಸಭೆ ಸ್ಪೀಕರ್ ಅವರು ಜುಲೈ 26 ಮತ್ತು 28ಕ್ಕೆ ಎರಡು ಹಂತಗಳಲ್ಲಿ 17 ಶಾಸಕರನ್ನು ಅನರ್ಹಗೊಳಿಸಿದ್ದರು. ಅಂದರೆ, 2020ರ ಜನವರಿ 26ರ ಒಳಗಾಗಿ ಈ ಎಲ್ಲಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದು ಶಾಸಕರನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದು ಅನರ್ಹತೆ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಬಹುದಿತ್ತು. ಬಳಿಕ ವೇಳಾಪಟ್ಟಿ ಪ್ರಕಟಿಸಬಹುದಿತ್ತು. ಆದರೆ, ಅಂತಹ ಯಾವುದೇ ಯೋಚನೆ ಮಾಡದೆ ಏಕಾಏಕಿ ತೀರ್ಮಾನಗಳನ್ನು ಪ್ರಕಟಿಸುತ್ತಿರುವ ಆಯೋಗದ ನಡೆಯೇ ಈಗ ಅದನ್ನು ಅನುಮಾನದಿಂದ ನೋಡುವಂತಹ ಪರಿಸ್ಥಿತಿ ಹುಟ್ಟುಹಾಕಿದೆ.

RS 500
RS 1500

SCAN HERE

don't miss it !

ಝೀ ಟಿವಿ ತೊರೆದ ಸುಧೀರ್ ಚೌಧರಿ ರಾಜೀನಾಮೆ: ಹೊಸ ಸಂಸ್ಥೆ ಸ್ಥಾಪನೆ?
ದೇಶ

ಝೀ ಟಿವಿ ತೊರೆದ ಸುಧೀರ್ ಚೌಧರಿ ರಾಜೀನಾಮೆ: ಹೊಸ ಸಂಸ್ಥೆ ಸ್ಥಾಪನೆ?

by ಪ್ರತಿಧ್ವನಿ
July 1, 2022
ಹುಬ್ಬಳ್ಳಿಯಲ್ಲಿ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗೂರೂಜಿ ಕಗ್ಗೊಲೆ
ಕರ್ನಾಟಕ

ಚಂದ್ರಶೇಖರ್‌ ಗುರೂಜಿಗೆ 60 ಬಾರಿ ಇರಿತ, ಹುಬ್ಬಳ್ಳಿ-ಧಾರವಾಡದಲ್ಲಿ ಹೈಅಲರ್ಟ್!

by ಪ್ರತಿಧ್ವನಿ
July 5, 2022
ಜಾತಿ, ಧರ್ಮಗಳನ್ನು ಮೀರಿದ್ದು ಮಾನವೀಯತೆ : ಶಾಸಕ ಜಮೀರ್ ಅಹ್ಮದ್
ಇದೀಗ

ಶಾಸಕ ಜಮೀರ್ ಅಹ್ಮದ್ಗೆ ಎಸಿಬಿ ಶಾಕ್

by ಪ್ರತಿಧ್ವನಿ
July 5, 2022
ಅಮರಾವತಿ ಕೊಲೆ ಪ್ರಕರಣ; ಮಾಸ್ಟರ್ ಮೈಂಡ್ ಬಂಧನ
ದೇಶ

ಅಮರಾವತಿ ಕೊಲೆ ಪ್ರಕರಣ; ಮಾಸ್ಟರ್ ಮೈಂಡ್ ಬಂಧನ

by ಪ್ರತಿಧ್ವನಿ
July 3, 2022
ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿ ಕುಟುಂಬ ರಾಜಕಾರಣವನ್ನು ಕೊನೆಗೊಳಿಸುತ್ತೇವೆ : ಅಮಿತ್ ಶಾ
ದೇಶ

ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿ ಕುಟುಂಬ ರಾಜಕಾರಣವನ್ನು ಕೊನೆಗೊಳಿಸುತ್ತೇವೆ : ಅಮಿತ್ ಶಾ

by ಪ್ರತಿಧ್ವನಿ
July 3, 2022
Next Post
ಜನರನ್ನು ಮರುಳಾಗಿಸಿದ ಟಿಕ್ ಟಾಕ್ ಕಂಪೆನಿಯ ಮೌಲ್ಯ 53 ಸಾವಿರ ಕೋಟಿ!

ಜನರನ್ನು ಮರುಳಾಗಿಸಿದ ಟಿಕ್ ಟಾಕ್ ಕಂಪೆನಿಯ ಮೌಲ್ಯ 53 ಸಾವಿರ ಕೋಟಿ!

ಅಂಧರಾಗಿಯೂ ಯಶಸ್ವಿ ಟೈಲರ್ ಆಗಿರುವ ರುದ್ರಾಚಾರಿ

ಅಂಧರಾಗಿಯೂ ಯಶಸ್ವಿ ಟೈಲರ್ ಆಗಿರುವ ರುದ್ರಾಚಾರಿ

ಕರ್-ನಾಟಕ ಗೊಂದಲಕ್ಕೆ ಕಲಶ ಪ್ರಾಯವಾದ ಚುನಾವಣಾ ಆಯೋಗ

ಕರ್-ನಾಟಕ ಗೊಂದಲಕ್ಕೆ ಕಲಶ ಪ್ರಾಯವಾದ ಚುನಾವಣಾ ಆಯೋಗ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist