• Home
  • About Us
  • ಕರ್ನಾಟಕ
Wednesday, July 9, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ದೇಶದ ಕಾರ್ಮಿಕರ ಕಲ್ಯಾಣ ಮಂಡಳಿಗಳಲ್ಲಿ ಕೊಳೆಯುತ್ತಿದೆ 30,000 ಕೋಟಿ!

by
September 28, 2019
in ಕರ್ನಾಟಕ
0
ದೇಶದ ಕಾರ್ಮಿಕರ ಕಲ್ಯಾಣ ಮಂಡಳಿಗಳಲ್ಲಿ ಕೊಳೆಯುತ್ತಿದೆ 30
Share on WhatsAppShare on FacebookShare on Telegram

ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಹುದ್ದೆಯಿಂದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ದಾಸರಿ ವರ್ಗಾವಣೆಯೊಂದಿಗೆ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಮಿಕರ ಹೆಸರಿನಲ್ಲಿ ಸರಕಾರ ಕೂಡಿಟ್ಟ ಬೃಹತ್ ಪ್ರಮಾಣದ ವಂತಿಗೆಯನ್ನು ಖರ್ಚು ಮಾಡದಿರುವುದು ಬೆಳಕಿಗೆ ಬಂದಿದೆ. ಅದರೊಂದಿಗೆ, ಖಾಲಿ ಖಜಾನೆ ಹೊಂದಿರುವ ಸರಕಾರ ಕಾರ್ಮಿಕರ ಹಣವನ್ನು ಪ್ರವಾಹ ಸಂತ್ರಸ್ತರಿಗೆ ಖರ್ಚು ಮಾಡಲು ಮುಂದಾಗಿರುವುದು ಸ್ಪಷ್ಟವಾಗಿದೆ.

ADVERTISEMENT

1996ರಿಂದ ಇಂದಿನ ವರೆಗೆ ದೇಶದಲ್ಲಿ ಕಟ್ಟಡ ಕಾರ್ಮಿಕರ ವಂತಿಗೆ ಸಂಗ್ರಹ ಆಗಿರುವುದು ಬರೋಬ್ಬರಿ 50,000 ಕೋಟಿ ರೂಪಾಯಿ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿರುವ ಕಾಯಿದೆ ಪ್ರಕಾರ ಸರಕಾರ ಕಟ್ಟಡ ನಿರ್ಮಾಣ ಮಾಡುವವರಿಂದ ಶೇಕಡ 1ರಷ್ಟು ಸೆಸ್ ಸಂಗ್ರಹ ಮಾಡುತ್ತಿದೆ. 2019 ಮಾರ್ಚ್ ಅಂತ್ಯದ ವೇಳೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಂಗ್ರಹ ಮಾಡಿರುವ ಒಟ್ಟು ದೇಣಿಗೆ 49,688 ಕೋಟಿ ರೂಪಾಯಿ. ಇದರಲ್ಲಿ ಖರ್ಚು ಮಾಡಿರುವುದು ಕೇವಲ 19, 379 ಕೋಟಿ ರೂಪಾಯಿ. 30 ಸಾವಿರ ಕೋಟಿ ರೂಪಾಯಿಯನ್ನು ಪ್ರತಿ ರಾಜ್ಯಗಳಲ್ಲಿ ಇರುವ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಗಳು ಖರ್ಚು ಮಾಡಿಲ್ಲ.

ಸ್ವಚ್ಛ ಭಾರತ್ ಅಭಿಯಾನದಲ್ಲಿ ಪ್ರಧಾನ ಮಂತ್ರಿಯವರಿಂದಲೇ ಪ್ರಶಂಸಿಲ್ಪಟ್ಟ ರೋಹಿಣಿ ಸಿಂಧೂರಿ ಅವರು ಕಳೆದ ಕೆಲವು ತಿಂಗಳಿನಿಂದ ಕಾರ್ಯದರ್ಶಿಯಾಗಿ ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯವೈಖರಿಯನ್ನು ಚುರುಕುಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಸುಮಾರು 8,000 ಕೋಟಿ ರೂಪಾಯಿ ಮಂಡಳಿಯಲ್ಲಿ ಕೊಳೆಯುತ್ತಾ ಬಿದ್ದಿತ್ತು. ಅದನ್ನು ಅಧಿಕ ಬಡ್ಡಿ ದರದಲ್ಲಿ ಠೇವಣಿ ಇರಿಸಲು ಸರಕಾರ ಒಪ್ಪಿರಲಿಲ್ಲ.

ಇದೀಗ ಕೇಂದ್ರ ಸರಕಾರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತುರ್ತು ಪರಿಹಾರಕ್ಕಾಗಿ ಅನುದಾನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ಮಂಡಳಿಯ 8,000 ಕೋಟಿ ರೂಪಾಯಿಯ ಮೇಲೆ ಕಣ್ಣಿಟ್ಟಿತ್ತು. ಕನಿಷ್ಟ 3,000 ಕೋಟಿ ರೂಪಾಯಿಯನ್ನು ವರ್ಗಾಯಿಸಬೇಕೆಂಬ ಇರಾದೆಯನ್ನು ಬಿ. ಎಸ್. ಯಡಿಯೂರಪ್ಪ ಸರ್ಕಾರ ಹೊಂದಿತ್ತು. ಅದು ಸಾಧ್ಯವಾಗದೇ ಹೋದಾಗ ಸಂತ್ರಸ್ತರಿಗೆ ಆಹಾರ ಪೊಟ್ಟಣ ವಿತರಿಸಲು 1,000 ಕೋಟಿ ರೂಪಾಯಿ ಪಡೆಯುವ ಕೆಲಸ ನಡೆದಿತ್ತು.

ರೋಹಿಣಿ ಸಿಂಧೂರಿ

ಸರ್ಕಾರದ ಪರವಾಗಿ ಕಾರ್ಮಿಕ ‌ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಅವರೇ ಈ ಫಂಡ್ ವರ್ಗಾವಣೆ ಮಾಡಲು ರೋಹಿಣಿ ಸಿಂಧೂರಿಗೆ ಸೂಚಿಸಿದ್ದರು ಎಂಬುದು ಮಣಿವಣ್ಣನ್ ಅವರ ಪತ್ರವೇ ಖಚಿತ ಪಡಿಸಿದೆ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಪತ್ರ ಬರೆದಿರುವ ಮಹಾನ್ ಬುದ್ಧಿವಂತ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರು ರೋಹಿಣಿ ಸಿಂಧೂರಿ ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಬಹುದು ಎಂದಿದ್ದರು. ಮಾತ್ರವಲ್ಲದೆ, ಸರಕಾರದ ಪರವಾಗಿ ಮಣಿವಣ್ಣನ್ ಅವರೇ ಫಂಡ್ ಕೇಳಿದ್ದರು ಎಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ರೋಹಿಣಿ ಸ್ಪಷ್ಟಪಡಿಸಿದ್ದಾರೆ.

ಕಾರ್ಮಿಕ ಸಹಾಯವಾಣಿ ರೂಪಿಸಲು ಕಿಯೋನಿಕ್ಸ್ ಕಂಪೆನಿ ಮೂಲಕ ನೇರ ಗುತ್ತಿಗೆ ನೀಡದೆ ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದು ಕೂಡ ಸರ್ಕಾರದ ಮೇಲಿನ ಹಂತದವರಿಗೆ ರುಚಿಸಲಿಲ್ಲ. ಉತ್ತರ ಕನ್ನಡ ಜಿಲ್ಲೆಯೊಂದರಿಂದಲೇ ಕಾರ್ಮಿಕರಿಗೆ ವಿವಾಹ ಸಹಾಯಧನ ನೀಡಲು ಐದು ಕೋಟಿ ರೂಪಾಯಿ ಪ್ರಸ್ತಾಪ ಬಂದಿರುವುದು ರೋಹಿಣಿ ಸಿಂಧೂರಿ ಅವರನ್ನು ಎಚ್ಚರಿಸಿದೆ ಎಂದರೂ ತಪ್ಪಾಗಲಾರದು.

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಹದಿನಾರಕ್ಕೂ ಹೆಚ್ಚು ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳು ಜಾರಿಯಲ್ಲಿವೆ. ಅವುಗಳಲ್ಲಿ ವಿವಾಹ ಸಂದರ್ಭದಲ್ಲಿ ಐವತ್ತು ಸಾವಿರ ರೂಪಾಯಿ ಸಹಾಯಧನ ನೀಡುವುದು ಕೂಡ ಒಂದು. ಉತ್ತರ ಕನ್ನಡ ಜಿಲ್ಲೆಯಿಂದ ಅಂದಾಜು ಒಂದು ಸಾವಿರ ಮಂದಿಗೆ ವಿವಾಹ ಸಹಾಯಧನ ನೀಡುವ ಪ್ರಸ್ತಾಪದ ಫೈಲ್ ಗುಮಾನಿ ಹುಟ್ಟಿಸುವಂತೆ ಇತ್ತು.

ಸಿಂಧೂರಿ ಅವರ ಪ್ರಕಾರ ಬಹುತೇಕ ಪ್ರಸ್ತಾಪಗಳು ಬೋಗಸ್ ಆಗಿದ್ದವು. ಈ ನಿಟ್ಟಿನಲ್ಲಿ ಮಂಡಳಿಯ ಹನ್ನೆರಡು ಸೇವೆಗಳನ್ನು ಆನ್ ಲೈನ್ ಮೂಲಕ ನೀಡಿ ಪಾರದರ್ಶಕಗೊಳಿಸುವ ಪ್ರಕ್ರಿಯೆ ಆರಂಭ ಆಗಿತ್ತು. ಕಾರ್ಮಿಕ ಕಲ್ಯಾಣ ಮಂಡಳಿಯ ಬಹುತೇಕ ಕಾರ್ಯಕ್ರಮಗಳು ಫಲಾನುಭವಿಗಳಿಗೆ ತಲಪುತ್ತಿರಲಿಲ್ಲ. ಕರ್ನಾಟಕ ರಾಜ್ಯದಲ್ಲಿ 8,000 ಕೋಟಿ ರೂಪಾಯಿ ಸಂಗ್ರಹ ಇದ್ದರೂ ಖರ್ಚಾಗಿರುವುದು ಶೇಕಡ 10ಕ್ಕಿಂತಲೂ ಕಡಿಮೆ.

ಪಿ ಮಣಿವಣ್ಣನ್

ದೇಶದಲ್ಲಿ ಕೂಡ ಕೆಲವು ರಾಜ್ಯಗಳು ಕಾರ್ಯಕ್ರಮಗಳ ಅನುಷ್ಠಾನ, ಕಾರ್ಮಿಕರ ನೋಂದಾವಣೆಯಲ್ಲಿ ಮುಂದಿದ್ದರೂ ಬಹುತೇಕ ರಾಜ್ಯಗಳು ಅನುಷ್ಠಾನದಲ್ಲಿ ಹಿಂದಿದ್ದವೆ. ಈ ಹಿನ್ನೆಲೆಯಲ್ಲಿ, 2006ರಲ್ಲೇ ಕಾರ್ಮಿಕ ಪರವಾದ ಸಂಘಟನೆಯೊಂದು ಕಾರ್ಮಿಕ ಮಂಡಳಿಗಳ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕಾನೂನು ಹೋರಾಟ (WP (C)318/ 2006) ನಡೆಸುತ್ತಲೇ ಬಂದಿದೆ. ಇತ್ತೀಚಿಗಿನ ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ಈ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿಯ ಬಳಕೆಯನ್ನು ಗಮನಿಸುತ್ತಿದೆ. ಮಾತ್ರವಲ್ಲದೆ, ಲೆಕ್ಕ ಪರಿಶೋಧಕರಿಗೂ ಕಾರ್ಮಿಕ ಮಂಡಳಿಯ ಕಾರ್ಯಕ್ರಮಗಳ ಅನುಷ್ಠಾನದ ಮೇಲೆ ಕಣ್ಣಿಡುವಂತೆ ಆದೇಶ ನೀಡಿದೆ.

ಆ ಕಾರಣಕ್ಕಾಗಿಯೇ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಆಗಿದ್ದ ಸಿಂಧೂರಿ ಮಂಡಳಿಯ ನಿಧಿಯನ್ನು ಬೇರೆಡೆ ವರ್ಗಾಯಿಸಲು ಒಪ್ಪಿಗೆ ನೀಡಿಲ್ಲ. ಮಾತ್ರವಲ್ಲದೆ, ಸುಪ್ರೀಂ ಕೋರ್ಟಿನ ನಿರ್ದೇಶನ ಇರುವುದರಿಂದ ಆ ರೀತಿ ಮಾಡಲು ಆಗುವುದಿಲ್ಲ ಎಂದು ತನ್ನ ಹಿರಿಯ ಅಧಿಕಾರಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ. ಕಾರ್ಮಿಕ ಮಂಡಳಿಯನ್ನು ಚುರುಕುಗೊಳಿಸುವ ಕಾರ್ಯದಲ್ಲಿದ್ದ ಅಧಿಕಾರಿಯನ್ನು ದಿಢೀರ್ ವರ್ಗಾವಣೆ ಮಾಡಿರುವುದು ಸಾರ್ವಜನಿಕ ಹಿತದೃಷ್ಟಿಯಿಂದ ಸರಿಯಾದ ನಿರ್ಧಾರವಲ್ಲ.

Tags: B S YediyurappaGovernment of KarnatakaKarnataka Building and Other Construction Workers Welfare BoardLabour SecretaryP ManivannanRohini Sindhuriಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಕರ್ನಾಟಕ ಸರ್ಕಾರಕಾರ್ಮಿಕ ಕಾರ್ಯದರ್ಶಿಪಿ ಮಣಿವಣ್ಣನ್ಬಿ ಎಸ್ ಯಡಿಯೂರಪ್ಪರೋಹಿಣಿ ಸಿಂಧೂರಿ
Previous Post

ಪ್ರಧಾನಿ ಆರ್ಥಿಕ ಸಲಹೆಗಾರರಿಗೆ ಅರ್ಧಚಂದ್ರ- ಹಳೆಯ ವ್ಯಾಧಿ

Next Post

ಗಾಂಧಿಯೋ, ಮೋದಿಯೋ ಎಂಬಲ್ಲಿಗೆ ಬಂದು ನಿಂತ ಸಂಕಥನ

Related Posts

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
0

ತರುಣ್‌ ಸುಧೀರ್‌ ನಿರ್ಮಾಣದ ಹೊಸ ಚಿತ್ರಕ್ಕೆ ಶಿವಣ್ಣ-ಪ್ರೇಮ್‌ ಸಾಥ್..ʼಏಳುಮಲೆʼ ಟೈಟಲ್‌ ಟೀಸರ್‌ನಲ್ಲಿ ಮಿಂಚಿದ ರಕ್ಷಿತಾ ಸಹೋದರ ರಾಣಾ. ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ...

Read moreDetails

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

July 9, 2025
Next Post
ಗಾಂಧಿಯೋ

ಗಾಂಧಿಯೋ, ಮೋದಿಯೋ ಎಂಬಲ್ಲಿಗೆ ಬಂದು ನಿಂತ ಸಂಕಥನ

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada