• Home
  • About Us
  • ಕರ್ನಾಟಕ
Tuesday, November 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಐದು ಸ್ಮಾರಕಗಳ ಸಂರಕ್ಷಣೆಗೆ ಸಂಕಲ್ಪ

by
February 3, 2020
in ದೇಶ
0
ಐದು ಸ್ಮಾರಕಗಳ ಸಂರಕ್ಷಣೆಗೆ ಸಂಕಲ್ಪ
Share on WhatsAppShare on FacebookShare on Telegram

2020-21ರ ಆಯವ್ಯಯಗಳನ್ನು ಸಂಸತ್ತಿನ ಮುಂದಿಡುವ ಸಂದರ್ಭದಲ್ಲಿ ದೇಶದ ಕಾಲಾತೀತ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಐದು ಸ್ಮಾರಕಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಯ ವಿಚಾರವೊಂದನ್ನು ಪ್ರಸ್ತಾಪಿಸಲಾಗಿದೆ.

ADVERTISEMENT

ಸಹಸ್ರಮಾನಗಳು ಹಾಗೂ ಯುಗಗಳಷ್ಟು ಹಳೆಯ ಇತಿಹಾಸವನ್ನು ಕಂಡ ಭರತವರ್ಷವು, “ಮಾನವ ಜನಾಂಗದ ತೊಟ್ಟಿಲಾಗಿದ್ದು, ಭಾಷೆಯ ಉಗಮಸ್ಥಾನ, ಇತಿಹಾಸ ತಾಯಿ, ದಂತಕಥೆಗಳ ಅಜ್ಜಿ, ಹಾಗೂ ಸಂಪ್ರದಾಯಗಳ ಮುತ್ತಜ್ಜಿ. ಮಾನವನ ಇತಿಹಾಸದ ಕುರಿತ ಅತ್ಯಂತ ಮೌಲ್ಯಯುತವಾದ ನಿರ್ದೇಶನಾ ಸಂಪನ್ಮೂಲಗಳೆಲ್ಲವೂ ಭಾರತದಲ್ಲಿಯೇ ಸೇರಿಕೊಂಡಿವೆ,” ಎಂದು ಶ್ರೇಷ್ಠ ಬರಹಗಾರ, ಉದ್ಯಮಿ ಹಾಗೂ ಪ್ರಾಧ್ಯಾಪಕ ಮಾರ್ಕ್ ಟ್ವೈನ್ ಹೇಳಿದ್ದ ಮಾತುಗಳು ಎಂದೆಂದಿಗೂ ಪ್ರಸ್ತುತ.

ಯುಗಯುಗಳ ಇತಿಹಾಸದ ಕುರುಹುಗಳಾಗಿ ಉಳಿದುಕೊಂಡಿರುವ ಅನೇಕ ಸ್ಮಾರಕಗಳು ಭಾರತೀಯ ನಾಗರೀಕತೆ ನಡೆದು ಬಂದ ಹಾದಿಯನ್ನು ಥಟ್ಟೆಂದು ಹಾಗೇ ಕಣ್ಣ ಮುಂದೆ ತರಬಲ್ಲಷ್ಟು ಪ್ರಖರವಾದ ವಿಚಾರಗಳನ್ನು ತಮ್ಮಲ್ಲಿ ಹುದುಗಿಸಿಟ್ಟುಕೊಂಡಿವೆ.

ದ್ವಾಪರಯುಗದ ಮಹಾಭಾರತದಿಂದ ಹಿಡಿದು, ಮಣ್ಣಿನ ಮಡಿಕೆಗಳ ಬಳಕೆಯ ಆರಂಭಿಕ ದಿನಗಳು, ಹರಪ್ಪ-ಮೊಹೆಂಜೋದಾರೋ ನಾಗರೀಕತೆಯ ಸಂದರ್ಭದ ನಗರ ಯೋಜನೆಗಳ ಕುರಿತಂತೆ ಬೆಳಕು ಚೆಲ್ಲುವಂತಹ 5 ಐತಿಹಾಸಿಕ & ಪೌರಾಣಿಕ ಕ್ಷೇತ್ರಗಳ ಪುನರುಜ್ಜೀವನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

ಭಾರತೀಯ ಪ್ರವಾಸೋದ್ಯಮದಲ್ಲಿರುವ ಅಗಾಧವಾದ ಸಾಧ್ಯತೆಗಳನ್ನು ಸಾಕಾರಗೊಳಿಸಲು ಇಂಥ ಸಾಕಷ್ಟು ಕ್ರಮಗಳ ಅಗತ್ಯವಿದೆ.

ಅಂದ ಹಾಗೆ, ಇವೇ ಆ ಐದು ತಾಣಗಳು….

ಹಸ್ತಿನಾಪುರ

ಉತ್ತರ ಪ್ರದೇಶದ ಮೀರತ್‌ ಬಳಿ ಇರುವ ಹಸ್ತಿನಾಪುರದ ಇತಿಹಾಸ ಯುಗಗಳಷ್ಟು ಹಳೆಯದು. ಮಹಾಭಾರತದ ಪಾಂಡವರು ಹಾಗೂ ಕೌರವರ ರಾಜಧಾನಿಯಾಗಿದ್ದ ಈ ಊರಿನಲ್ಲಿ ದ್ವಾಪರಯುಗದ ಕುರುಹುಗಳನ್ನು ಈಗಲೂ ಕಾಣಬಹುದಾಗಿದೆ. ಹಸ್ತಿನಾಪುರವು ಸಾಮ್ರಾಟ ಭರತನ ರಾಜಧಾನಿಯೂ ಆಗಿತ್ತು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಜೈನ ಭಕ್ತರಿಗೂ ಪವಿತ್ರ ಕ್ಷೇತ್ರವಾದ ಹಸ್ತಿನಾಪುರ, ದೇಶದ ಗತಕಾಲದ ದಿನಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸಬಲ್ಲ ಜಾಗಗಳಲ್ಲಿ ಒಂದು.

ರಾಖಿಗರ್ಹಿ

ಹರಿಯಾಣಾದ ಹಿಸಾರ್‌ನಲ್ಲಿರುವ ರಾಖಿಗರ್ಹಿ ಸಿಂಧೂ ನಾಗರಿಕತೆಗಿಂತ ಹಳೆಯದಾಗಿದ್ದು, ಕ್ರಿಸ್ತ ಪೂರ್ವ 6500ದ ಕಾಲಕ್ಕೆ ಸೇರಿದೆ. ಅಲ್ಲದೇ ಸಿಂಧೂ ಕಣಿವೆ ನಾಗರಿಕತೆಯ ಪ್ರಬುದ್ಧ ಘಟ್ಟದ ಭಾಗವಾಗಿಯೂ (ಕ್ರಿ.ಪೂ 2600-1900) ಇರುವ ಈ ಜಾಗವನ್ನು ದೇಶದ ಅತ್ಯಂತ ಸೂಕ್ಷ್ಮ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ.

ಶಿವಸಾಗರ, ಅಸ್ಸಾಂ

ಶಿವನ ಸಾಗರ ಎಂಬ ಅರ್ಥದ ಈ ಊರು ಅಸ್ಸಾಂ ರಾಜ್ಯದಲ್ಲಿದೆ. 1699-1788ರ ನಡುವೆ ಅಹೋಮ್‌ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಶಿವಸಾಗರ್‌‌, ದೇಹಿಂಗ್ ಮಳೆಕಾಡುಗಳ ನಡುವೆ ಇರುವ ನಗರವಾಗಿದ್ದು, ’ಪೂರ್ವದ ಅಮೇಝಾನ್‌’ ಎಂದು ಕರೆಯಲ್ಪಡುತ್ತಿದೆ.

ಆದಿಚನಲ್ಲೂರು

ತಮಿಳುನಾಡಿದ ತೂತ್ತುಕುಡಿ ಜಿಲ್ಲೆಯಲ್ಲಿರುವ ಆದಿಚನಲ್ಲೂರು, ಪ್ರಾಚ್ಯವಸ್ತು ಸ್ಮಾರಕವಾಗಿದೆ. ಇಂದಿನ ದಿನಮಾದಲ್ಲೂ ಸಹ ಸಿಗಲಾರದಷ್ಟು ಉತ್ಕೃಷ್ಟ ಗುಣಮಟ್ಟ ಮಡಿಕೆಗಳು, ಕಬಿಣದ ಅಸ್ತ್ರಗಳು, ಮಾನವರ ಅಸ್ಥಿಯನ್ನು ಹೊಂದಿದ್ದ ಜೇಡಿಮಣ್ಣಿನ ಕುಡಿಕೆಗಳು ಇಲ್ಲಿ ಕಂಡುಬಂದಿದ್ದು, ಇವೆಲ್ಲಾ ಕನಿಷ್ಠ 38,000 ವರ್ಷಗಳಷ್ಟು ಹಳೆಯದಾಗಿವೆ ಎನ್ನಲಾಗಿದೆ.

ಧೋಲವಿರಾ

ಗುಜರಾತ್‌ನ ಕಚ್ಛ್‌ ಜಿಲ್ಲೆಯ ಧೊಲವಿರಾ ಹರಪ್ಪ ನಾಗರಿಕತೆಯ ಸ್ಮಾರಕಗಳ ಪೈಕಿ ಅತ್ಯಂತ ದೊಡ್ಡದಾದ ಎರಡು ಸ್ಮಾರಕಗಳಲ್ಲಿ ಒಂದಾಗಿದೆ. ಈ ಜಾಗವನ್ನು 1967ರಲ್ಲಿ ಪ್ರಾಚ್ಯ ವಸ್ತು ಇಲಾಖೆ ಹೊರತೆಗೆದಿದ್ದು, 1990ರಿಂದ ವ್ಯವಸ್ಥಿತವಾದ ಪ್ರಕ್ರಿಯೆಗಳ ಮೂಲಕ ಇನ್ನಷ್ಟು ಕುರುಹುಗಳನ್ನು ಆಚೆ ತರಲಾಗುತ್ತಿದೆ.

Tags: archaeological sitesconstructeddevelopedFinance MinisterIndiamuseumsNirmala Sitharamanಅಭಿವೃದ್ಧಿನಿರ್ಮಲಾ ಸೀತಾರಾಮನ್ನಿರ್ಮಾಣಪುರಾತತ್ವ ಸ್ಥಳಗಳುಭಾರತಮ್ಯೂಸಿಯಂಗಳುಹಣಕಾಸು ಸಚಿವೆ
Previous Post

ಜಮ್ಮು ಮತ್ತು ಕಾಶ್ಮೀರದಿಂದ ಜಿಯೋ ಚಾಟ್ ಹೊರಕ್ಕೆ

Next Post

ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸುವುದು ಸಂವಿಧಾನ ಉಲ್ಲಂಘನೆ ಅಲ್ಲವೇ?

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

November 3, 2025
Next Post
ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸುವುದು ಸಂವಿಧಾನ ಉಲ್ಲಂಘನೆ ಅಲ್ಲವೇ?

ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸುವುದು ಸಂವಿಧಾನ ಉಲ್ಲಂಘನೆ ಅಲ್ಲವೇ?

Please login to join discussion

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada