ಕೋರ್ಟ್ನಲ್ಲಿ ಇಂದು ನಟ ಯುವರಾಜ್ (yuva rajkumjar) ಹಾಗೂ ಶ್ರೀದೇವಿ (Sri devi) ಡೈವೋರ್ಸ್ ಅರ್ಜಿ ವಿಚಾರಣೆ ನಡೆಯಲಿದೆ. ಸದ್ಯ ಡೈವೋರ್ಸ್ ಅರ್ಜಿ ವಿಚಾರಣೆಗೆ ಮುನ್ನ ಶ್ರೀದೇವಿ ಪೋಸ್ಟ್ ಒಂದನ್ನ ಹಾಕಿದ್ದಾರೆ. ಸತ್ಯ ಮತ್ತು ನ್ಯಾಯ ಮೇಲುಗೈ ಸಾಧಿಸುತ್ತೆ ಎಂದು ನಾನು ನಂಬಿದ್ದೇನೆ ಎಂದು ಬರೆದುಕೊಂಡಿದ್ದಾರೆ.
![](https://pratidhvani.com/wp-content/uploads/2024/07/IMG_8568.jpeg)
ನನ್ನ ಮೇಲೆ ಮಾಡಿರುವ ಎಲ್ಲಾ ಸುಳ್ಳು ಆರೋಪದಿಂದ ಮುಕ್ತಳಾಗುವೆ. ಆರೋಪ ಮುಕ್ತಳಾಗೋವರೆಗೆ ನನ್ನ ದಾರಿಗೆ ಏನೇ ಎದುರಾದರೂ ಹೆದರಲ್ಲ ಅಂತ ಶ್ರೀದೇವಿ ಸೋಷಿಯಲ್ ಮೀಡಿಯಾದಲ್ಲಿ (Socall media) ಪೋಸ್ಟ್ ಹಾಕಿದ್ದಾರೆ. ಇನ್ನು ಹಾರ್ವಡ್ನಲ್ಲಿ ಕೆಲಸ ಇರೋದ್ರಿಂದ ಅಮೆರಿಕಾಗೆ (America) ವಾಪಸ್ ಆಗ್ತಿರೋದಾಗಿಯೂ ಶ್ರೀದೇವಿ ಮಾಹಿತಿ ನೀಡಿದ್ದಾರೆ.
![](https://pratidhvani.com/wp-content/uploads/2024/07/IMG_8569.jpeg)
ಈ ಹಿಂದೆ ಶ್ರೀದೇವಿ ತಮಗೆ ಮಾನಸೀಕ ಹಿಂಸೆ ನೀಡಿದ್ದಾರೆ. ಅಗೌರವ ತೋರಿದ್ದಾರೆ ಹಾಗೂ 6 ತಿಂಗಳಿಂದ ತನ್ನ ಜೊತೆಗಿಲ್ಲ ಎಂದು ತಮ್ಮ ವಕೀಲರ ಮೂಲಕ ಯುವರಾಜ್ ಕುಮಾರ್ ಫಾಮಿಲಿ ಕೋರ್ಟ್ನಲ್ಲಿ ಡಿವೋರ್ಸ್ ಅರ್ಜಿ ಸಲ್ಲಿಸಿದ್ದರು.