ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಬೆರಳೆಣಿಕೆಯ ದಿನಗಳು ಬಾಕಿ ಉಳಿದಿದೆ. ಚುನಾವಣೆಯಲ್ಲಿ ಗೆಲ್ಲಲು ಪ್ರಾಮಾಣಿಕ ಪ್ರಯತ್ನ ಪಡುತ್ತಿರುವ ಅಭ್ಯರ್ಥಿಗಳು ಒಂದೆಡೆಯಾದರೆ ವಾಮಮಾರ್ಗದ ಮೂಲಕ ಅಧಿಕಾರದ ಗದ್ದುಗೆ ಏರಲು ಯತ್ನಿಸುತ್ತಿರುವವರ ಸಂಖ್ಯೆಗೇನು ಕಡಿಮೆಯಿಲ್ಲ. ಈ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಎಲೆಕ್ಷನ್ ಗೆಲ್ಲಲು ಜೆಡಿಎಸ್ ಅಭ್ಯರ್ಥಿಯೊಬ್ಬರು ತನ್ನನ್ನು ತಾನೇ ಕಿಡ್ನಾಪ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.

ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಇಂತಹದ್ದೊಂದು ಖರ್ತನಾಕ್ ಪ್ಲಾನ್ ಮಾಡಿದ್ದಾರೆ.ವಿಪಕ್ಷಗಳು ನನ್ನನ್ನು ಅಪಹರಣ ಮಾಡಿವೆ ಎಂದು ಸುದ್ದಿ ಹಬ್ಬಿಸುವ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳುವುದು ಮುನೇಗೌಡರ ಪ್ಲಾನ್ ಆಗಿದೆ. ಬಿಜೆಪಿ ಅಭ್ಯರ್ಥಿ ವಿಶ್ವನಾಥ್ರನ್ನು ಮತದಾರರ ವಿರುದ್ಧ ಎತ್ತಿ ಕಟ್ಟಲು ಮುನೇಗೌಡ ರೆಡಿಯಾಗಿದ್ದರು ಎನ್ನಲಾಗಿದ್ದು ಅಪರಚಿತ ವ್ಯಕ್ತಿಯೊಡನೆ ಮುನೇಗೌಡ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಬೆರಳೆಣಿಕೆಯ ದಿನಗಳು ಬಾಕಿ ಉಳಿದಿದೆ. ಚುನಾವಣೆಯಲ್ಲಿ ಗೆಲ್ಲಲು ಪ್ರಾಮಾಣಿಕ ಪ್ರಯತ್ನ ಪಡುತ್ತಿರುವ ಅಭ್ಯರ್ಥಿಗಳು ಒಂದೆಡೆಯಾದರೆ ವಾಮಮಾರ್ಗದ ಮೂಲಕ ಅಧಿಕಾರದ ಗದ್ದುಗೆ ಏರಲು ಯತ್ನಿಸುತ್ತಿರುವವರ ಸಂಖ್ಯೆಗೇನು ಕಡಿಮೆಯಿಲ್ಲ. ಈ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಎಲೆಕ್ಷನ್ ಗೆಲ್ಲಲು ಜೆಡಿಎಸ್ ಅಭ್ಯರ್ಥಿಯೊಬ್ಬರು ತನ್ನನ್ನು ತಾನೇ ಕಿಡ್ನಾಪ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.
ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಇಂತಹದ್ದೊಂದು ಖರ್ತನಾಕ್ ಪ್ಲಾನ್ ಮಾಡಿದ್ದಾರೆ.ವಿಪಕ್ಷಗಳು ನನ್ನನ್ನು ಅಪಹರಣ ಮಾಡಿವೆ ಎಂದು ಸುದ್ದಿ ಹಬ್ಬಿಸುವ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳುವುದು ಮುನೇಗೌಡರ ಪ್ಲಾನ್ ಆಗಿದೆ. ಬಿಜೆಪಿ ಅಭ್ಯರ್ಥಿ ವಿಶ್ವನಾಥ್ರನ್ನು ಮತದಾರರ ವಿರುದ್ಧ ಎತ್ತಿ ಕಟ್ಟಲು ಮುನೇಗೌಡ ರೆಡಿಯಾಗಿದ್ದರು ಎನ್ನಲಾಗಿದ್ದು ಅಪರಚಿತ ವ್ಯಕ್ತಿಯೊಡನೆ ಮುನೇಗೌಡ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ಮುನೇಗೌಡ, JDS ಅಭ್ಯರ್ಥಿ: ನನ್ ಬಾಮೈದನೇ ಕಿಡ್ನಾಪ್ ಪ್ಲಾನ್ ಮಾಡಿದ್ದ. ಅವನೂ ಎಲ್ಲಕ್ಕೂ ರೆಡಿ ಆಗಿದ್ದಾನೆ. ಹೊಡೆದಂಗೆ ಮಾಡ್ತೀವಿ ಅಂತ ಪ್ಲಾನ್ ಮಾಡಿದ್ದಾನೆ.
ಅಪರಿಚಿತ: ಅವನಿಗೆ ಸ್ಕೆಚ್ ಹಾಕೋಕೆ ಹೇಳಿ. ಬೆಸ್ಟ್ ಹೇಳ್ತೀನಿ ಕೇಳಿ. ನಾನು ಮಾಡಿಸ್ತೀನಿ. ನಿಮ್ ಮನೆಯವರು ಪ್ರಚಾರಕ್ಕೆ ಹೋಗಲಿ. ಹುಡುಗರಿಗೆ ಹೇಳಿ ನಿಮ್ಮನ್ನು ಕಿಡ್ನಾಪ್ ಮಾಡಿಸೋಣ
ಮುನೇಗೌಡ, JDS ಅಭ್ಯರ್ಥಿ: ಒಂದು ಗಲಾಟೆ ಆಗಲಿ ಬಿಡಿ. ಒಂದ್ ಹೋದ್ರೆ ಹೋಗಲಿ.
ಅಪರಿಚಿತ: ನಮ್ಮವರು ಬೈದಿಲ್ಲ ಅಂದ್ರೂ ಆರೆಸ್ಸೆಸ್ ಹುಡುಗರೇ ಬಂದು ನಿಮ್ಮನ್ನು ಬಯ್ಯಲಿ. ನಮ್ಮವರು ಸೈಲೆಂಟಾಗಿ ನಿಲ್ಲಲಿ. ಕತ್ತರಿಸಿ ಹಾಕಿಬಿಡ್ತೀನಿ ಅಂತ ಬಯ್ಯಲಿ..
ಅಪರಿಚಿತ: ವಿಶ್ವನಾಥ್ ಮೋಸ ಮಾಡಿದ್ದ ಅಂತೆಲ್ಲಾ ಹೇಳೋಣ.
ಮುನೇಗೌಡ, JDS ಅಭ್ಯರ್ಥಿ: ರೆಡಿ ಮಾಡಿ ಹೊಡೆದು ಬಿಸಾಕೋಣ
ಅಪರಿಚಿತ: ಟಿವಿಯವರಿಗೂ ಹೇಳೋಣ.. ವಿಶ್ವನಾಥ್ ಹೀಗೆ ಮಾಡಿದ್ದ ಅಂತ ಹೇಳೋಣ. ಒಂದು ಇಂಟರ್ವ್ಯೂ ಮಾಡಿ ಕಳಿಸೋಣ.
ಇನ್ನು ಈ ವಿಚಾರವಾಗಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು. ಜೆಡಿಎಸ್ ಅಭ್ಯರ್ಥಿ ಮುನೇಗೌಡ ಹಾಗೂ ಚರಣ್ ಗೌಡ ಸೇರಿ ಇಂತಹದ್ದೊಂದು ಪ್ಲಾನ್ ಮಾಡಿದ್ದರು ಎಂದು ತಿಳಿದು ಬಂದಿದೆ. 4-5ರಂದು ಕಿಡ್ನಾಪ್ ಮಾಡುವ ಸಂಚು ಮಾಡಿ ನನ್ನ ವಿರುದ್ಧ ಎಫ್ಐಆರ್ ದಾಖಲಿಸುವುದು ಇವರ ಪ್ಲಾನ್ ಆಗಿತ್ತು. ನಾನು ಆ ವ್ಯಕ್ತಿಯನ್ನು ಒಂದು ಬಾರಿ ನೋಡಿರಬಹುದು. ಆದರೆ ಅವರು ಏಕೆ ನನ್ನನ್ನು ಪದೇ ಪದೇ ಟಾರ್ಗೆಟ್ ಮಾಡ್ತಿದ್ದಾರೆ ಎಂಬುದೇ ಅರ್ಥವಾಗ್ತಿಲ್ಲ ಎಂದು ಹೇಳಿದ್ದಾರೆ.