ಬೀದರ್: ಸುಹಾಸ್ ಶೆಟ್ಟಿಯನ್ನ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಹತ್ಯೆ ನರಮೇಧ ಹತ್ಯೆಯಾಗಿದೆ ಇದು ಖಂಡನೀಯ ಎಂದಿದ್ದಾರೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ. ಹಿಂದೂಗಳ ಕೊಲೆ ಮಾಡಲು ಸರ್ಕಾರ ಸಮೀತಿ ರಚನೆ ಮಾಡಿದೆ. ಹಿಂದೂ ಯುವಕರ ಹತ್ಯೆಯಾದರೆ ಗೃಹ ಸಚಿವರು ಅವರ ಮನೆಗೆ ಹೋಗಿಲ್ಲ. ಯಾಕೆ ಮನೆಗೆ ಹೋಗಿಲ್ಲ..? ಅಂತಾ ಗೃಹ ಸಚಿವರನ್ನ ಕೇಳಿದರೆ ಆತನ ಮೇಲೆ ಕೇಸ್ ಇವೆ ಎಂದು ಹೇಳಿದ್ದಾರೆ. ಸುಹಾಸ್ ಶೆಟ್ಟಿ ಮೇಲೆ ಕೊಲೆ ಕೇಸ್ ಇವೆಯಾ..? ಅತ್ಯಾಚಾರದ ಕೇಸ್ ಇವೆಯಾ..? ಎಂದು ಪ್ರಶ್ನಿಸಿದ್ದಾರೆ.

ಸುಹಾಸ್ ಶೆಟ್ಟಿ ಹಿಂದುತ್ವಕ್ಕೋಸ್ಕರ ಹೋರಾಟ ಮಾಡಿದವ, ಗೋ ರಕ್ಷಕ ಎಂದಿರುವ ರೇಣುಕಾಚಾರ್ಯ, ಹಿಂದೂಗಳನ್ನ ಹತ್ಯೆ ಮಾಡುತ್ತೇವೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗುತ್ತಿವೆ. ಸರ್ಕಾರ ಹಿಂದೂಗಳಿಗೆ ರಕ್ಷಣೆ ಕೊಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಉಚ್ಚಾಟಿತ ಬಿಜೆಪಿ ಶಾಸಕ ಯತ್ನಾಳ್ ಬಗ್ಗೆ ರೇಣುಕಾಚಾರ್ಯ ಕಿಡಿಕಾರಿದ್ದು, ಹಿಂದೂಗಳಿಗೆ ರಕ್ಷಣೆ ಕೊಡುತ್ತೇನೆಂದು ಯತ್ನಾಳ್ ಹೇಳಿಕೆಗೆ ರೇಣುಕಾಚಾರ್ಯ ಟಾಂಗ್ ಕೊಟ್ಟಿದ್ದಾರೆ. ಯತ್ನಾಳ್ ಒಬ್ಬ ಸ್ವಯಂ ಘೋಷಿಸಿತ ಹಿಂದೂ ನಾಯಕ, ನೀನು ಹಿಂದೂ ಆಗಿದ್ದರೆ ಟಿಪ್ಪು ಅವತಾರ ಯಾಕೆ ತಾಳಿದ್ದೆ..? ಎಂದಿದ್ದಾರೆ.

ಚಿಕನ್ ಕಬಾಬ್ ಯಕೆ ತಿಂದೆ..? ಇಫ್ತಿಯಾರ್ ಕೂಟದಲ್ಲಿ ಯಾಕೆ ಭಾಗಿಯಾಗಿದ್ದೆ..? ನೀನು ಒಬ್ಬ ನಕಲಿ ಹಿಂದೂ ನಾಯಕ ನಾಲಿಗೆಗೆ ಬಾಯಿಗೆ ಲಿಂಕ್ ಇಲ್ಲದವನು. ವಾಪಸ್ ಪಕ್ಷಕ್ಕೆ ಬರುತ್ತೇನೆಂದು ಯತ್ನಾಳ್ ಹೇಳಿಕೆಗೆ ರೇಣುಕಾಚಾರ್ಯ ತಿರುಗೇಟು ನೀಡಿದ್ದು, ಬಿಜೆಪಿಗೆ ಯತ್ನಾಳ್ ಅನಿವಾರ್ಯವಲ್ಲ, ಅವನೊಬ್ಬನೇ ಹಿಂದೂವಲ್ಲ. ಹಿಂದೂಗಳ ಹತ್ಯೆಯನ್ನ ಬಿಜೆಪಿ ಯಾವತ್ತೂ ರಾಜಕೀಯಕ್ಕೆ ಬಳಕೆ ಮಾಡಿಕೊಂಡಿಲ್ಲ. ಪಹಲ್ಗಾಮ್ನಲ್ಲಿ ಹಿಂದೂಗಳನ್ನ ಹತ್ಯೆ ಮಾಡಿದ್ದು ಖಂಡನೀಯ. ಹಿಂದೂಗಳನ್ನ ಹತ್ಯೆ ಮಾಡಿದ ಜಿಹಾದಿ ಗುಂಡಾಗಳನ್ನ ಮೋದಿ ಬಿಡುವುದಿಲ್ಲ ಎಂದು ಬೀದರ್ನಲ್ಲಿ ಎಂ.ಪಿ.ರೇಣುಕಾಚಾರ್ಯ ಅಬ್ಬರಿಸಿದ್ದಾರೆ.
