ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಹಿನ್ನೆಲೆ ಸುರ್ಜೇವಾಲಾ (Randeep surjewala) 3 2 2 (Cm siddaramaiah) ২৯০ ৯৪ (Dcm Dk shivakumar) ದೆಹಲಿಯಲ್ಲಿ ಸರಣಿ ಸಭೆ ನಡೆಸಿದ್ದಾರೆ.ವಿಧಾನಪರಿಷತ್ಗೆ ನಿರೀಕ್ಷೆಗೂ ಮೀರಿ ಆಕಾಂಕ್ಷಿಗಳ ಹೆಸರು ಕೇಳಿ ಬಂದ ಹಿನ್ನೆಲೆ ಕಾಂಗ್ರೆಸ್ಗೆ (Congress) ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ.ಹೀಗಾಗಿ ಸಿಎಂ, ಡಿಸಿಎಂ ದೆಹಲಿಯಲ್ಲಿ ನಿರಂತರ ಸಭೆಗಳು ಮಾಡುತ್ತಿದ್ದಾರೆ.
![](https://pratidhvani.com/wp-content/uploads/2024/05/4r7rpdj8_dk-shivakumar_625x300_17_April_24-1024x630.webp)
ರಾತ್ರಿ ಸಭೆ ಮುಗಿದ ಬಳಿಕ ಸಿಎಂ, ಡಿಸಿಎಂ ಅವರು ಕೆ.ಸಿ.ವೇಣುಗೋಪಾಲ (Kc Venugopal) ಮನೆಗೆ ತೆರಳಿ ಸಭೆ ನಡೆಸಿದ್ದಾರೆ.ಮತ್ತೆ ಇಂದು ಬೆಳಗ್ಗೆ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ (Mallikarjun kharge) ಜೊತೆಗೆ ಅಂತಿಮ ಸಭೆ ನಡೆಸಿ ವಿಧಾನಪರಿಷತ್ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲಿದ್ದಾರೆ.
ಅಭ್ಯರ್ಥಿಗಳ ಆಯ್ಕೆಯಲ್ಲಿ ಕುಟುಂಬ ಅಂತ ಯಾವುದು ಇಲ್ಲ, ಒಬ್ಬರಿಗೆ ಮಾತ್ರ ನಾವು ಮಾತು ಕೊಟ್ಟಿದೀವಿ,ಆ ಮಾತಿನಂತೆ ನಾವು ಕೆಲ ಸಂದರ್ಭದಲ್ಲಿ ನಡೆದುಕೊಳ್ಳಬೇಕುಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಯತೀಂದ್ರ ಸಿದ್ದರಾಮಯ್ಯಗೆ (Yatindra siddaramaiah) ಪರಿಷತ್ ಸ್ಥಾನ ಸಿಗುತ್ತಾ ಎಂಬ ಮಾಧ್ಯಮದವರ ಪ್ರಶ್ನೆಗೆ ಗರಂ ಆದ ಡಿಕೆಶಿ, ನಿಮ್ಮ ಮಾತುಗಳು ನಾವು ಕೇಳಕ್ಕಾಗುತ್ತಾ? ಕೆಲವರಿಗೆ ಮಾತು ಕೊಟ್ಟಿದ್ದೇವರ ಆ ಮಾತಿನಂತೆ ನಡೆದುಕೊಳ್ಳಬೇಕಾಗುತ್ತದೆ ಅಂತ ದೆಹಲಿಯಲ್ಲಿ ಡಿಕೆಶಿ ಹೇಳಿದ್ದಾರೆ.