ಮೈಸೂರು (Mysuru): ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದೆಡೆಗೆ ಹೆಜ್ಜೆಯಿಟ್ಟ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar)!
2024 ರ ಲೋಕಸಭಾ ಚುನಾವಣೆಯಲ್ಲಿ (Loksabha Election) ಮೈಸೂರು-ಕೊಡಗು (Mysuru-Kodagu) ಲೋಕಸಭಾ ಕ್ಷೇತ್ರದಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಣಕ್ಕಿಳಿಯುವುದು ಬಹುತೇಕ ಫಿಕ್ಸ್ ಆಗಿದೆ.

ಇಂದು ರಾತ್ರಿ ಅಥವಾ ನಾಳೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೆಸರು ಬಿಜೆಪಿಯಿಂದ (BJP) ಘೋಷಣೆಯಾಗುವ ಸಾಧ್ಯತೆಯಿದೆ.
ಪ್ರತಿಧ್ವನಿಗೆ (Pratidhvani) ಬಿಜೆಪಿಯ ಉನ್ನತ ಮೂಲಗಳಿಂದಲೇ ಮಾಹಿತಿ ಲಭ್ಯವಾಗಿದೆ. ಆರ್ಎಸ್ಎಸ್ನ (Rss) ಪ್ರಮುಖರಾದ ಹರೀಶ್ ಪೈ (Harish Pai) ನೇತೃತ್ವದಲ್ಲಿ ಬಿಜೆಪಿಗೆ ಆಗಮಿಸುವಂತೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಆಹ್ವಾನ ನೀಡಲಾಗಿದೆ.
ಆಹ್ವಾನಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಹಮತ ಸೂಚಿಸಿದ್ದಾರೆ. ಒಡೆಯರ್ ಅವರ ಈ ನಿರ್ಧಾರಕ್ಕೆ ರಾಣಿ ತ್ರಿಷಿಕಾ ಸಿಂಗ್ ಒಡೆಯರ್ (trishika singh Wadiyar)ಹಾಗೂ ರಾಜಮಾತೆ ಪ್ರಮೋದಾದೇವಿ ಒಡೆಯರ್ (Pramoda devi Wadiyar) ಕೂಡ ಸಹಮತ ಸೂಚಿಸಿದ್ದಾರೆ.
ರಾಜಮನೆತನ ರಾಜಕಾರಣಕ್ಕೆ ಬರುವುದರಿಂದ, ಮನೆತನಕ್ಕೂ ಸಮಾಜಕ್ಕೂ ಒಳ್ಳೆಯದಾಗಲಿದೆ ಎಂದು ಮಾತುಕತೆ ಮೂಲಕ ಹರೀಶ್ ಪೈ ಅವರು ಒಪ್ಪಿಸಿದ್ದಾರೆ.
ಇಂದು ದೆಹಲಿಯಲ್ಲಿ (Newdelhi) ನಡೆಯಲಿರುವ ಸಿಇಸಿ (CEC) ಸಭೆಯ ಬಳಿಕ ಬಿಡುಗಡೆಯಾಗಲಿರುವ ಪಟ್ಟಿಯಲ್ಲಿಯೇ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೆಸರು ಅಂತಿಮವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಅಷ್ಟಕ್ಕೂ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿಗೆ ಬರುವುದರಿಂದ ಆಗುವ ಉಪಯೋಗಗಳೇನು?
ಪ್ರತಿಧ್ವನಿ ಬಿಚ್ಚಿಡುತ್ತಿದೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಕಾರಣಕ್ಕೆ ಆಗಮನದಿಂದ ಆಗುವ ಪ್ರಯೋಜನಗಳು ಹಾಗೂ ಲಾಭದ ಇಂಚಿಂಚೂ ಮಾಹಿತಿ.
- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಯುವ ಹಾಗೂ ಹೊಸಮುಖದ ಅಭ್ಯರ್ಥಿ.
- ರಾಜಕಾರಣಕ್ಕೆ ಆಗಮಿಸುವ ಮುನ್ನವೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕುಟುಂಬಸ್ಥರು.
- ಒಂದು ರಾಜಮನೆತನದವರಿಗೆ ಟಿಕೆಟ್ ಕೊಟ್ಟಿದ್ದೇವೆ ಎಂದು ಬಿಜೆಪಿ ಪಕ್ಷಕ್ಕೂ ಹೆಗ್ಗಳಿಕೆ.
- ಇಲ್ಲಿಯವರೆಗೂ ಬಿಜೆಪಿ ರಾಜ್ಯದಲ್ಲಿ ಇಂತಹ ಪ್ರಯೋಗ ಮಾಡದೇ ಇದ್ದು, ಇದೊಂದು ಹೊಸ ಪ್ರಯತ್ನ.
- ಇತ್ತ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಕಾರಣಕ್ಕೆ ಬಂದಿದ್ದೇ ಆದ್ರೆ, ಅವರ ಆಗಮನದ ಪ್ರಭಾವ ಹಳೆಯ ಮೈಸೂರು ಭಾಗದ ಕನಿಷ್ಠ ಆರೇಳು ಜಿಲ್ಲೆಗಳಲ್ಲಿನ ಕ್ಷೇತ್ರಗಳ ಮೇಲೆ ಬೀರಲಿರುವುದು.
ಹೀಗೆ ಸಾಲು ಸಾಲು ಕಾರಣಗಳನ್ನಿಟ್ಟುಕೊಂಡು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಬಿಜೆಪಿ ಆಫರ್ ಕೊಟ್ಟಿದೆ. ಆರ್ಎಸ್ಎಸ್ನ ಪ್ರಮುಖರಾದ ಹರೀಶ್ ಪೈ ನೇತೃತ್ವದಲ್ಲಿ ಮಾತುಕತೆ ನಡೆಸಿ, ಸಹಮತ ಪಡೆದಿರುವ ಕಮಲ ಪಾರ್ಟಿ.
ಪ್ರತಿಧ್ವನಿಗೆ ಬಿಜೆಪಿಯ ಮೂಲಗಳಿಂದಲೇ ಮಾಹಿತಿ ಲಭ್ಯವಾಗಿದೆ.
#Karnataka #mysuru #loksabhaelection #YaduveerKrishnadattaChamarajaWadiyar #mysuru-kodagu #bjp






