• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭ: ಬಿಟ್ ಕಾಯಿನ್, ಮತಾಂತರ ನಿಷೇಧ ವಿಷಯಗಳೇ ಪ್ರತಿಪಕ್ಷಗಳ ಅಸ್ತ್ರ

Any Mind by Any Mind
December 12, 2021
in ಕರ್ನಾಟಕ, ರಾಜಕೀಯ
0
ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭ: ಬಿಟ್ ಕಾಯಿನ್, ಮತಾಂತರ ನಿಷೇಧ ವಿಷಯಗಳೇ ಪ್ರತಿಪಕ್ಷಗಳ ಅಸ್ತ್ರ
Share on WhatsAppShare on FacebookShare on Telegram

ಬೆಳಗಾವಿಯಲ್ಲಿ ನಾಳೆ ಸೋಮವಾರದಿಂದ (ಡಿ.ಸೆಂಬರ್ 13) ಚಳಿಗಾಲದ ಅಧಿವೇಶನ ಶುರುವಾಗುತ್ತಿದೆ.ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ಬಿಂಬಿಸುವ, ಅದಕ್ಕೆ ಪರಿಹಾರಗಳನ್ನು ರೂಪಿಸುವ ಉದ್ದೇಶದಿಂದ ನಿರ್ಮಾಣವಾದ ಬೆಳಗಾವಿಯ ಸುವರ್ಣ ವಿಧಾನಸೌಧ ತನ್ನ ಆಶಯಗಳನ್ನು ಈಡೇರಿಸುವ ದಾರಿ ತುಳಿಯಲೇ ಇಲ್ಲ.

ADVERTISEMENT

ವರ್ಷಕ್ಕೊಮ್ಮೆ 8-10 ದಿನಗಳ ಅವಧಿಯ ಚಳಿಗಾಲ ಅಧಿವೇಶನ ನಡೆಸಲಿಕ್ಕಷ್ಟೇ ಈ ಸೌಧ ಉಪಯೋಗವಾಗುತ್ತಿದೆ. ಬೆಂಗಳೂರಿನಿಂದ ದೂರವಿರುವ ಉತ್ತರ ಕರ್ನಾಟಕದ ಜಿಲ್ಲೆಗಳ ಸಂಘಟನೆಗಳು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ದಿನವೂ ಸಾಲು ಪ್ರತಿಭಟನೆಗಳನ್ನು ನಡೆಸುವುದು ಸಾಮಾನ್ಯ. ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ತಯಾರಾದ ನವ-ದ್ರಾವಿಡ ಶೈಲಿಯ ಈ ಕಟ್ಟಡಕ್ಕೆ ಕನಿಷ್ಠ ಹಲವು ಇಲಾಖೆಗಳನ್ನೂ ವರ್ಗಾಯಿಸಿಲ್ಲ.

ಈ ಸಲ ಏನಾಗಬಹುದು?

ಪ್ರತಿ ಸಲದಂತೆ ಈ ಸಲವೂ ಇದೊಂದು ಸಾಮಾನ್ಯ ಅಧಿವೇಶನವಾಗಲಿದೆಯಾ? ಸದ್ಯಕ್ಕೆ ಉತ್ತರವಿಲ್ಲ. ಉತ್ತರ ಕರ್ನಾಟಕದ ವಿಷಯಗಳೇನೂ ಹೆಚ್ಚಿನ ಆದ್ಯತೆ ಪಡೆಯುವ ಲಕ್ಷಣವಿಲ್ಲ. ಬಿಟ್ ಕಾಯಿನ್-ಕ್ರಿಪ್ಸೊ ಕರೆನ್ಸಿ ಹಗರಣದ ತನಿಖೆಯ ವಿಷಯದಲ್ಲಿ ಆಡಳಿತ ಪಕ್ಷ ಎಡವಿದ್ದು, ತನಿಖೆಯಲ್ಲಿ ಪಾರದರ್ಶಕತೆಯ ಕೊರತೆ ಇರುವುದು ವಿಪಕ್ಷಗಳ ಅಸ್ತ್ರವಾಗಲಿದೆ. ಅಕಾಲಿಕ ಮಳೆಯಿಂದಾದ ಬೆಳೆನಾಶಕ್ಕೆ ಪರಿಹಾರ. ಪೊಲೀಸ್ ಇಲಾಖೆಯ ಕುರಿತು ಗೃಹ ಸಚಿವರೇ ಮಾಡಿದ ʼಎಂಜಲು ತಿನ್ನುವʼ ಗಂಭೀರ ಆರೋಪ, ಹೈದರಾಬಾದ್ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವ ಕಾರ್ಯಕ್ರಮದ ಕುರಿತ ಗೊಂದಲ- ಈ ವಿಷಯಗಳು ಆಡಳಿತ ಮತ್ತು ವಿಪಕ್ಷಗಳ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದು.

ಮತಾಂತರ ನಿಷೇಧ ಕಾಯಿದೆಯ ಕಿಡಿ

ಈ ಸಲ ವಿವಾದಾತ್ಮಕ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಉತ್ತರ ಪ್ರದೇಶದಲ್ಲಿ ಸಾಕಷ್ಟು ಟೀಕೆಗೆ ಒಳಗಾಗಿರುವ ಮತಾಂತರ ವಿರೋಧಿ ಕಾಯಿದೆಯ ಡ್ರಾಫ್ಟ್ನ್ನೇ ಕರ್ನಾಟಕ ಸರ್ಕಾರ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಮಸೂದೆಯಾಗಿ ಮಂಡಿಸಲು ಹೊರಟಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಇದನ್ನು ತೀವ್ರವಾಗಿ ವಿರೊಧಿಸುವ ಸಾಧ್ಯತೆ ಇದೆ. ಇದು ಸಭಾತ್ಯಾಗಕ್ಕೂ ಕಾರಣವಾಗಬಹುದು. ಈ ಮಸೂದೆ ಜಾರಿಯಾಗಲೇಬೇಕು ಎಂದು ಹಿಂದೂತ್ವವಾದಿ ಸಂಘಟನೆಗಳಿಂದ ಭಾರಿ ಒತ್ತಡವಿದೆ. ಈಗಾಗಲೇ ಅವು ಬೆಳಗಾವಿಯಲ್ಲಿ ಕ್ರೈಸ್ತರಿಗೆ ತೊಂದರೆ ಕೊಡುವ ಕೆಲಸಗಳನ್ನು ಮಾಡಿವೆ. ಪಾದ್ರಿಯೊಬ್ಬರ ಮೇಲೆ ಹಲ್ಲೆಯೂ ನಡೆದಿದೆ. ಆರ್ಎಸ್ಎಸ್ ಮೂಲದ ಬಿಜೆಪಿ ಶಾಸಕರು, ಸಂಘ ಪರಿವಾರದ ಕಟ್ಟಾ ಸದಸ್ಯರ ಒತ್ತಡಕ್ಕೆ ಮಣಿದು ಸರ್ಕಾರ ಸುಗ್ರೀವಾಜ್ಞೆ ಮೂಲಕ ಮಸೂದೆಗೆ ಅಂಗೀಕಾರ ಪಡೆದುಕೊಳ್ಳುವ ತಂತ್ರವನ್ನೂ ಅನುಸರಿಸಬಹುದು.

ಗದ್ದಲ-ಗಲಾಟೆ-ಪ್ರತಿಭಟನೆಗಳಲ್ಲೇ ಈ ಅಧಿವೇಶನ ಮುಗಿಯದಿರಲಿ. ಉತ್ತರ ಕರ್ನಾಟಕ ಭಾಗದ ಸಮ್ಯೆಗಳ ಚರ್ಚೆಯಾಗಲಿ ಮತ್ತು ಅದಕ್ಕೆ ಪರಿಹಾರ ದೊರೆಯುವಂತಾಗಲಿ.ಕೇವಲ ಕಾಟಾಚಾರಕ್ಕೆ ಚಳಿಗಾಲದ ಅಧಿವೇಶನ ಮಾಡಿದರೆ, ಅದು ತೆರಿಗೆದಾರರ ಹಣ ಪೋಲು ಮಾಡಿದಂತಾಗುತ್ತದೆ ಎಂಬ ಸೂಕ್ಷ್ಮತೆ ಸರ್ಕಾರಕ್ಕಿರಲಿ.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿನಾಳೆಯಿಂದ ಚಳಿಗಾಲದ ಅಧಿವೇಶನಬಿ ಎಸ್ ಯಡಿಯೂರಪ್ಪಬಿಜೆಪಿಬಿಟ್ ಕಾಯಿನ್ಮತಾಂತರ ನಿಷೇಧ
Previous Post

ʼನಮಗೆ ಮೊಟ್ಟೆ ಕೊಡದಿದ್ರೆ ಮಠಕ್ಕೆ ಬಂದು ಮೊಟ್ಟೆ ತಿಂತೀವಿʼ : ವಿದ್ಯಾರ್ಥಿಗಳಿಂದ ಮಠಾಧೀಶರಿಗೆ ಎಚ್ಚರಿಕೆ

Next Post

ಕರ್ನಾಟಕದಲ್ಲಿ ಮತ್ತೊಂದು ಒಮಿಕ್ರಾನ್ ಪತ್ತೆ: ಆರೋಗ್ಯ ಸಚಿವ ಸುಧಾರಕ್ ಈ ಕುರಿತು ಟ್ವೀಟ್

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
Next Post
ಕರ್ನಾಟಕದಲ್ಲಿ ಮತ್ತೊಂದು ಒಮಿಕ್ರಾನ್ ಪತ್ತೆ: ಆರೋಗ್ಯ ಸಚಿವ ಸುಧಾರಕ್ ಈ ಕುರಿತು ಟ್ವೀಟ್

ಕರ್ನಾಟಕದಲ್ಲಿ ಮತ್ತೊಂದು ಒಮಿಕ್ರಾನ್ ಪತ್ತೆ: ಆರೋಗ್ಯ ಸಚಿವ ಸುಧಾರಕ್ ಈ ಕುರಿತು ಟ್ವೀಟ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada