2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಪಕ್ಷದ ನಾಯಕರು, ಮುಖಂಡರು ಅಖಾಡಕ್ಕಿಳಿದು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಇಂದು ಮಂಡ್ಯ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ಪರ ಪ್ರಚಾರ ನಡೆಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ʻ30 ವರ್ಷದಲ್ಲಿ ಜೆಡಿಎಸ್, ಕಾಂಗ್ರೆಸ್ ಗೆ ಮತ ಹಾಕಿದ್ದೀರಿ. ಯಾವುದೇ ಅಭಿವೃದ್ಧಿ ಆಗಿಲ್ಲ. ಇಬ್ಬರ ರಾಜಕೀಯ ಆಟದಿಂದ ಜನರಿಗೆ ಸಂಕಟ ಬಂದಿದೆ. ಈ ಬಾರಿ ಬದಲಾವಣೆ ಆಗಬೇಕು. ಹೊಸ ನಾಯಕತ್ವ, ಛಲದಿಂದ ಕೆಲಸ ಮಾಡುವಂತಹ ರಾಜಕೀಯ ಶಕ್ತಿ ಬಿಜೆಪಿಯಿಂದ ಮಾತ್ರ ಸಾಧ್ಯʼ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ʻಮಂಡ್ಯ ಇಸ್ ಇಂಡಿಯಾ. ಮೊನ್ನೆ ನರೇಂದ್ರ ಮೋದಿಯವರು ಮಂಡ್ಯಗೆ ಬಂದು ಹೋದ ನಂತರ ಇಂಡಿಯಾ ಅಂದ್ರೆ ಮಂಡ್ಯ ಎನ್ನುವ ಹಾಗಿದೆ. ಮಂಡ್ಯದಲ್ಲಿ ಹೊಸ ಗಾಳಿ ಬೀಸುತ್ತಿದೆ. ಇನ್ನು ಏಳು ದಿನಗಳ ಕಾಲ ನೀವು ಶ್ರಮವಹಿಸಿದರೆ ಈ ಗಾಳಿ ಸುನಾಮಿಯಾಗಲಿದೆ. ಮಂಡ್ಯವನ್ನು ಅಭಿವೃದ್ಧಿಗೆ ಎಸ್.ಟಿ ಜಯರಾಮ್ ಅವರ ಕೊಡುಗೆ ಬಹಳ ದೊಡ್ಡದಿದೆ, ಅವರು ಹೃದಯವಂತರು. ಹೃದಯವಂತ ಜಯರಾಮ ಅವರ ಮಗ ಅಶೋಕ ಜಯರಾಮ ಮಂಡ್ಯದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಜಯರಾಮ ಅವರ ಸ್ನೇಹಿತನಾಗಿ ನಾನು ಅವರ ಅಭಿಮಾನಿಗಳಿಗೆ ಕರೆ ಕೊಡುತ್ತಿದ್ದೇನೆ. ಎಲ್ಲರೂ ಪಕ್ಷಾತೀತವಾಗಿ ಅಶೋಕ್ ಅವರಿಗೆ ಆಶೀರ್ವಾದ ಮಾಡಬೇಕು ಎಂದರು.

ʻಮಂಡ್ಯ ನಗರ ನಮ್ಮ ರಾಜ್ಯದ ಪ್ರಮುಖ ನಗರ. ಇಲ್ಲಿಯೂ ಕೈಗಾರಿಕೆ ಬೆಳೆಯಬೇಕು. ಬೆಂಗಳೂರಿನ ಮಾದರಿಯಲ್ಲಿ ಮಂಡ್ಯ ಜಿಲ್ಲೆ ಬೆಳೆಯಬೇಕು. ಆಧುನಿಕ ಮಂಡ್ಯ ಕಟ್ಟುವ ನಿಟ್ಟಿನಲ್ಲಿ ನಾವು ಇಲ್ಲಿಗೆ ಬಂದಿದ್ದೇವೆ. ನಮ್ಮ ಯುವ ನಾಯಕ ಅಶೋಕ್ ಅವರಿಗೆ ಮತ ನೀಡಿ. 30 ವರ್ಷದಲ್ಲಿ ಜೆಡಿಎಸ್, ಕಾಂಗ್ರೆಸ್ ಮತ ಹಾಕಿದ್ದೀರಿ. ಯಾವುದೇ ಅಭಿವೃದ್ಧಿ ಆಗಿಲ್ಲ. ಇಬ್ಬರ ರಾಜಕೀಯ ಆಟದಿಂದ ಜನರಿಗೆ ಸಂಕಟ ಬಂದಿದೆ. ಈ ಬಾರಿ ಬದಲಾವಣೆ ಆಗಬೇಕು. ಹೊಸ ನಾಯಕತ್ವ, ಛಲದಿಂದ ಕೆಲಸ ಮಾಡುವಂತಹ ರಾಜಕೀಯ ಶಕ್ತಿ ಬಿಜೆಪಿಯಿಂದ ಮಾತ್ರ ಸಾಧ್ಯ. ಎಲ್ಲ ಯುವಕರು ಬಿಜೆಪಿಗೆ ಬೆಂಬಲ ಮಾಡುತ್ತಿದ್ದಾರೆ. ಯುವಕರು ಎಲ್ಲರ ಹಿರಿಯರ ಆಶೀರ್ವಾದ ಪಡೆಯಿರಿ, ನಮಗೆ ಜಯ ಆಗುತ್ತದೆ. ಜಯರಾಮ ಅವರಿಗೆ ಜಯ ಆಗುತ್ತದೆ. ಮಂಡ್ಯದಲ್ಲಿ ಬದಲಾವಣೆ ಆದರೆ ಇಡೀ ಜಿಲ್ಲೆಯಲ್ಲಿ ಬದಲಾವಣೆ ಆಗುತ್ತದೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು.







