ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈಗಾಗಲೇ ನಾಲ್ಕನೇ ಹಂತದ ಚುನಾವಣೆ ಮುಕ್ತಾಯವಾಗಿದೆ. ಆದರೆ ಭಾರತೀಯ ಜನತಾ ಪಾರ್ಟಿ (BJP) ಚಾರ್ ಸೋ ಪಾರ್ ಅನ್ನೋ ಘೋಷವಾಕ್ಯಕ್ಕೆ ಕುಂದುಂಟು ಮಾಡುವ ಪರಿಸ್ಥಿತಿ ಎದುರಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈಗ ನಡೆದಿರುವ ನಾಲ್ಕು ಹಂತಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಗೆ ಹಿನ್ನಡೆ ಆಗಿರುವ ಲಕ್ಷಣಗಳು ಕಂಡು ಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಮಾತುಗಳೇ ಸೋಲಿನ ಸುಳಿವನ್ನು ಕೊಡುತ್ತಿರುವುದು ಕಾಣಿಸುತ್ತಿದೆ.
![](https://pratidhvani.com/wp-content/uploads/2024/05/bjp-flag-3.webp)
ಪ್ರಧಾನಿ ನರೇಂದ್ರ ಮೋದಿ ಕಳೆದ ಎರಡು ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶ ರಕ್ಷಣೆ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನ, ಆರ್ಥಿಕತೆ ಸೇರಿದಂತೆ, ದೇಶವನ್ನು ಮುನ್ನಡೆಸಲು ನಾವು ಸಮರ್ಥರು ಎನ್ನುವ ಮಾತನ್ನು ಹೇಳುತ್ತಿದ್ರು. ಇಷ್ಟು ದಿನ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಸೋಲುವ ಭೀತಿಯಿಂದ ಮಾತುಗಳ ಸರಣಿಯಲ್ಲಿ ಹಳಿ ತಪ್ಪುತ್ತಿದ್ದಾರೆ. ಮmಾತು ಮಾತುಗಳಿಗೂ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
![](https://pratidhvani.com/wp-content/uploads/2024/04/BJP.jpg)
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಮಾಂಗಲ್ಯಗಳನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಾರೆ ಎನ್ನುವ ಮೂಲಕ ಮಾತನ್ನು ಹರಿಬಿಟ್ಟಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಇಡೀ ಭಾರತದ ಸಂಪತನ್ನು ಕೇವಲ ಮುಸ್ಲಿಮರಿಗೆ ಹಂಚಿಕೆ ಮಾಡುತ್ತಾರೆ ಎನ್ನುವ ಮೂಲಕ ಹಿಂದೂಗಳ ಮತಕ್ರೂಢೀಕರಣಕ್ಕೆ ಮುಂದಾಗಿದ್ದರು. ಆ ಬಳಿಕ ಮುಸ್ಲಿಮರಿಗೆ ದೇಶದ ಸಂಪತ್ತನ್ನು ಹಂಚಿಕೆ ಮಾಡ್ತಾರೆ ಅನ್ನೋ ಮಾತು ವಿಚಾದದ ಸ್ವರೂಪ ಪಡೆಯುತ್ತಿದ್ದಂತೆ ತನ್ನ ಹೇಳಿಕೆಯಿಂದ ಯೂಟರ್ನ್ ಹೊಡೆದಿದ್ದರು.
![](https://pratidhvani.com/wp-content/uploads/2024/04/congress-flag.webp)
ಮುಸ್ಲಿಮರ ಮತಗಳು ಕಳೆದುಕೊಳ್ಳುವ ಭೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ನಾನು ಮುಸ್ಲಿಮರನ್ನು ಉದ್ದೇಶಿಸಿ ಹೇಳಿದ್ದಲ್ಲ, ನಾನು ಎಲ್ಲಿಯೂ ಹಿಂದೂ ಮುಸ್ಲಿಂ ಎನ್ನುವ ಬಗ್ಗೆ ಹೇಳಿಲ್ಲ ಎಂದಿದ್ದಾರೆ. ಅಂದರೆ ಪ್ರಧಾನಿ ಮೋದಿ ಅವರ ಮಾತಿನಲ್ಲೇ ಸೋಲಿನ ಭಯ ಇದೆ ಎನ್ನುವ ವಿಶ್ಲೇಷಣೆಗಳು ಹೊರ ಬೀಳುತ್ತಿವೆ. ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯದ ಓಲೈಕೆ ಮಾಡುತ್ತದೆ ಎನ್ನುವುದನ್ನು ಹೇಳಲು ಇಡೀ ಭಾರತದ ಕ್ರಿಕೆಟ್ ತಂಡದಲ್ಲಿ ಕೇವಲ ಮುಸ್ಲಿಮರನ್ನು ಸೇರಿಕೊಂಡು ಆಟವಾಡಿಸುತ್ತಾರೆ ಎನ್ನುವ ಮೂಲಕ ಪ್ರಧಾನಿ ಸ್ಥಾನಕ್ಕೆ ತಕ್ಕುದಾದ ಮಾತುಗಳಲ್ಲ ಎನ್ನುವಂತೆ ಮಾಡಿದರು.
![](https://pratidhvani.com/wp-content/uploads/2024/05/narendra-modi-2024-05-07t113623.314-1024x576.webp)
ಒಟ್ಟಾರೆ ನರೇಂದ್ರ ಮಾತುಗಳು ಹಳ್ಳ ಹಿಡಿಯುತ್ತಿರುವುದಕ್ಕೆ ಪ್ರಮುಖ ಕಾರಣ ಭಾರತೀಯ ಜನತಾ ಪಾರ್ಟಿ ಸೋಲಿನ ಸುಳಿಗೆ ಸಿಲುಕಿರುವುದು ಕಾರಣ ಎನ್ನುವ ಚರ್ಚೆಗಳು ಶುರುವಾಗಿದೆ. ಬಿಜೆಪಿ ನಿರೀಕ್ಷೆಯಂತೆ ಮತದಾರರು ಹಕ್ಕು ಚಲಾವಣೆ ಮಾಡಿಲ್ಲ ಅನ್ನೋದು ಮನಗಾಣುತ್ತಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ವಿರುದ್ಧ ಬರುವ ಸಾಧ್ಯತೆ ಇರುವ ಕಾರಣಕ್ಕೆ ಮೋದಿ ಮಾತುಗಳು ಮಿತಿಯನ್ನು ಮೀರುತ್ತಿವೆ. ಈ ಬಾರಿ ನಿರೀಕ್ಷಿತ ಫಲಿತಾಂಶ ಬಿಜೆಪಿ ಪಕ್ಷಕ್ಕೆ ಬರುವುದಿಲ್ಲ ಎನ್ನುತ್ತಿರುವ ಚರ್ಚೆಗಳಿಗೆ ಉತ್ತರ ಜೂನ್ 4ರಂದೇ ಸಿಗಬೇಕಿದೆ.