• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ದೀದಿ ಗೆಲುವಿನ ಪ್ರಮುಖ ರೂವಾರಿ ಪ್ರಶಾಂತ್ ಕಿಶೋರ್ ಹಠಾತ್ ನಿವೃತ್ತಿಗೆ ಕಾರಣಗಳೇನು?

Any Mind by Any Mind
May 3, 2021
in ದೇಶ
0
ದೀದಿ ಗೆಲುವಿನ ಪ್ರಮುಖ ರೂವಾರಿ ಪ್ರಶಾಂತ್ ಕಿಶೋರ್ ಹಠಾತ್ ನಿವೃತ್ತಿಗೆ ಕಾರಣಗಳೇನು?
Share on WhatsAppShare on FacebookShare on Telegram

ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳಲ್ಲಿ ಟಿಎಂಸಿ ಮತ್ತು ಡಿಎಂಕೆಗಳ ಗೆಲುವಿಗೆ ತೆರೆಯ ಹಿಂದಿದ್ದು ಕೆಲಸ ಮಾಡಿದ I-PAC ಸಂಸ್ಥೆಯ ಮಹಾನ್ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ತಾನು ಇನ್ನುಮುಂದೆ ಈ ಚುನಾವಣಾ ತಂತ್ರಗಾರಿಕೆಯ ಕೆಲಸದಿಂದ ಮುಕ್ತನಾಗಿ ಜೀವನದಲ್ಲಿ ಬೇರೇನನ್ನಾದರೂ ಹುಡುಕುವೆ ಎಂದಿದ್ದಾರೆ. ಇದು ಅನೇಕರ ಹುಬ್ಬೇರಿಸಿದೆ ಕೂಡಾ. ಚುನಾವಣೆಗೆ ಮುನ್ನ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ  ಎರಡಂಕಿ ದಾಟಲು ಸಾಧ್ಯವಿಲ್ಲ ಹಾಗೇನಾದರೂ ದಾಟಿದರೆ ತಾನು ಈಗ ಮಾಡಿತ್ತಿರುವ ಕೆಲಸವನ್ನೇ ಬಿಡುತ್ತೇನೆ ಎಂದು ಘೋಷಿಸಿದ್ದರು. ಈಗ ಅವರ ಭವಿಷ್ಯ ಸುಳ್ಳಾಗಿಲ್ಲ. ಬಿಜೆಪಿ ಸೋತಿದೆ, ಟಿಎಂಸಿ ಗೆದ್ದಿದೆ. ಆದರೂ ಮನುಷ್ಯ ಸಧ್ಯ ಇದರಿಂದ ಕೈತೊಳೆದುಕೊಳ್ಳುತ್ತೇನೆ, ಹೇಗೂ ಇದನ್ನು ಸಮರ್ಥವಾಗಿ ಮುನ್ನಡೆಸಲು ಐ-ಪ್ಯಾಕ್ ನಲ್ಲಿ ಹಲವರಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ನೆನ್ನೆ ಚುನಾವಣಾ ಫಲಿತಾಂಶ ಬಹುತೇಕ ಹೊರಬಂದು ಮಮತಾ ದೀದಿ ಗೆಲುವಿನ ನಗೆ ಬೀರುತ್ತಿದ್ದ ಸಮಯದಲ್ಲಿ ಪ್ರಶಾಂತ್ ಕಿಶೋರ್ ಎನ್ ಡಿ ಟಿವಿ ಗೆ ನೀಡಿದ ಸಂದರ್ಶನದಲ್ಲಿ ಬಹಳ ಗಹನವಾದ ವಿಚಾರಗಳನ್ನು ಹಂಚಿಕೊಂಡರು.

ಮುಖ್ಯವಾಗಿ ಪ.ಬಂಗಾಳದ ಚುನಾವಣೆಯಲ್ಲಿ ಚುನಾವಣಾ ಆಯೋಗ ನಡೆದುಕೊಂಡ ರೀತಿಯನ್ನು ವಿವರಿಸಿದ ಪ್ರಶಾಂತ್ ಕಿಶೋರ್, ‘ಅದು ನಮಗೆ (ಟಿಎಂಸಿಗೆ) ಅಕ್ಷರಶಃ ನರಕವನ್ನು ಸೃಷ್ಟಿಸಿತು. ಹೆಚ್ಚೆಂದರೆ ನಾಲ್ಕೈದು ಸುತ್ತಿನಲ್ಲಿ ಮುಗಿಯುತ್ತಿದ್ದ ಚುನಾಣೆಯನ್ನೆ ಬೇಕೆಂದೇ ಎರಡು ತಿಂಗಳು ಲಂಬಿಸಿದ್ದು, ಬಿಜೆಪಿಗೆ ಯಾವ ರೀತಿ ಅನುಕೂಲವಾಗುತ್ತದೆಯೋ ಅದೇ ರೀತಿಯಲ್ಲಿ ಚುನಾವಣಾ ದಿನಾಂಕಗಳನ್ನು ನಿಗದಿ ಮಾಡಿದ್ದು ಎಲ್ಲವೂ ಬಿಜೆಪಿಯನ್ನು ಗೆಲ್ಲಿಸಲೇಬೇಕು ಎಂದು ಚುನಾವಣಾ ಆಯೋಗ ಪಣ ತೊಟ್ಟಂತಿತ್ತು. ಅದರ ನಡವಳಿಕೆ ನೋಡಿ ಇದು ಚುನಾವಣಾ ಆಯೋಗವೋ ಅಥವಾ ಬಿಜೆಪಿ ಪಕ್ಷದ ವಿಸ್ತೃತ ಅಂಗಸಂಸ್ಥೆಯೋ ಎನಿಸುವಷ್ಟರ ಮಟ್ಟಿಗೆ ಅದು ನಡೆದುಕೊಂಡಿದೆ. ಮೋದಿ ಮತ್ತು ಬಿಜೆಪಿ ಈ ಚುನಾವಣೆಯಲ್ಲಿ ಲೆಕ್ಕವಿಲ್ಲದಷ್ಟು ಸಲ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಆದರೆ ಒಂದೇ ಒಂದು ಪ್ರಕರಣದಲ್ಲೂ ಕ್ರಮ ಕೈಗೊಳ್ಳಲಿಲ್ಲ. ಒಂದು ಚುನಾವಣಾ ಆಯೋಗ ಈ ಮಟ್ಟಕ್ಕೆ ಕುಸಿದಿರುವುದು ದೇಶದ ಪ್ರಜಾಪ್ರಭುತ್ವದ ದೃಷ್ಟಿಯಿಂದ ಬಹಳ ಅಪಾಯಕಾರಿಯಾಗಿದೆ’ ಎಂದರು.

ಪ್ರಶಾಂತ್ ಪ್ರತಿಸ್ಪಂದನೆ ನೀಡಿದ ಎರಡನೇ ಅಂಶ, ಮತದಾರರ ಧ್ರುವೀಕರಣ. ಹಿಂದೆಂದೂ ಇಲ್ಲದ ರೀತಿಯಲ್ಲಿ ಈ ಸಲ ಬಿಜೆಪಿ ಪ.ಬಂಗಾಳದ ಮತದಾರರನ್ನು ಧರ್ಮದ ಆಧಾರದಲ್ಲಿ ಇಬ್ಬಾಗ ಮಾಡಲು ಯತ್ನಿಸಿತು. ಈ ಬಾರಿ ಅವರು ಬಳಸಿದಷ್ಟು ಜೈ ಶ್ರೀರಾಮ್, ಓಂ ಇತ್ಯಾದಿ ಧಾರ್ಮಿಕ ಸಂಕೇತಗಳನ್ನು ಪ್ರಾಯಶಃ ಹಿಂದೆ ಬಳಸಿರಲಿಕ್ಕಿಲ್ಲ. ಆದರೆ ನಾವು  ಅರ್ಥ ಮಾಡಿಕೊಳ್ಳಬೇಕಾದ ಒಂದು ಸಂಗತಿ ಏನೆಂದರೆ ಹೀಗೆ ಧರ್ಮದ ಆಧಾರದಲ್ಲಿ ನಡೆಸುವ ಧ್ರುವೀಕರಣಕ್ಕೆ ಒಂದು ಮಿತಿ ಇರುತ್ತದೆ. ಇದನ್ನು ಗ್ರಹಿಸದೇ ಎಲ್ಲರೂ ಮಾಡುವ ತಪ್ಪೇನೆಂದರೆ ಬಿಜೆಪಿ ಧರ್ಮದ ಹೆಸರಲ್ಲಿ ಇಬ್ಬಾಗ ಮಾಡಿತು ಎಂದಾಕ್ಷಣ ಹೋರಾಟದಿಂದಲೇ ಹಿಂದೆ ಸರಿದು ಬಿಜೆಪಿ ಅನಾಯಾಸವಾಗಿ ಗೆಲ್ಲುವಂತೆ ಮಾಡುತ್ತಾರೆ. ವಾಸ್ತವವಾಗಿ ಅಂತಹ ಸಂದರ್ಭದಲ್ಲಿ ಧ್ರುವೀಕರಣ ತಂತ್ರದಿಂದಾಗಿ  ಬಿಜೆಪಿ ಗೆದ್ದಿರುವುದಿಲ್ಲ. ಬದಲಿಗೆ ಕಣದಲ್ಲಿ ಹೋರಾಟವನ್ನು ಬಿಟ್ಟು ಹಿಂದೆ ಸರಿದ ಕಾರಣಕ್ಕಾಗಿ ಅದು ಗೆಲ್ಲಿತ್ತದೆ.‌ ನಾವು ಇಂತಹ ತಪ್ಪಾಗಲು ಅವಕಾಶ ಕೊಡಲಿಲ್ಲ ಎಂದ ಪ್ರಶಾಂತ್ ಕಿಶೋರ್ ಮಾತುಗಳು ಚಿಂತನಾಯೋಗ್ಯವಾಗಿವೆ.‌

ಚುನಾವಣೆಗೆ ಸಜ್ಜಾಗುವ ಮೊದಲು ನಾವು ನಮ್ಮ ಮತ್ತು ಎದುರಾಳಿಗಳಲ್ಲಿ ಇರುವ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಮೊದಲು ಸರಿಯಾಗಿ ಗುರುತಿಸಿಕೊಳ್ಳಬೇಕು (cognizant). ಇದು ಬಹಳ ಮುಖ್ಯ. ಕಳೆದ ಲೋಕಸಭಾ ಚುನಾವಣಾ ನಂತರದಲ್ಲಿ ನಾವು ಮಾಡಿದ ಮೊದಲ ಕೆಲಸ ಇದು. ಕೆಲವು ಸಂಗತಿಗಳನ್ನು ಗುರುತಿಸಿಕೊಂಡ ಬಳಿಕ ಅದಕ್ಕೆ ಸೂಕ್ತವಾದ ಬದಲಾವಣೆಗಳನ್ನು ಪಕ್ಷದ ಒಳಗೆ ಸಂಘಟನಾ ಮಟ್ಟದಲ್ಲಿ ತಂದೆವು. ಇದರ ಪರಿಣಾಮವಾಗಿ ಕೆಲವರಿಗೆ ಪಕ್ಷ ತೊರೆಯುವುದು ಅನಿವಾರ್ಯವಾಗಿ ಕೊನೆಗೆ ಅವರು ಹೋಗಿ  ಬಿಜೆಪಿ‌ ಸೇರಿಕೊಂಡರು. ಅವರು ನಾವು ಪಕ್ಷದೊಳಗೆ ತಂದ ಬದಲಾವಣೆಗೆ ಹೊಂದಿಕೊಂಡು ಬದಲಾಗುವ ಮನಸ್ಥಿತಿ ಹೊಂದಿರಲಿಲ್ಲ. ಮಾತ್ರವಲ್ಲದೇ ತಮ್ಮಿಂದಲೇ ಪಕ್ಷ ಎಂಬ ಭಾವನೆಯುಳ್ಳವರಾಗಿದ್ದರು. ಈಗ ನೋಡಿ ಬಹುತೇಕ ಅವರೆಲ್ಲರೂ ಸೋತಿದ್ದಾರೆ.‌

ನಿಮ್ಮ ಸಹಾಯವನ್ನು ಕಾಂಗ್ರೆಸ್ ಬಯಸಿದರೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರಶಾಂತ್ ಕಿಶೋರ್, “ಈ ಪ್ರಶ್ನೆ ಉದ್ಭವಿಸುವುದಿಲ್ಲ. ಕಾಂಗ್ರೆಸ್ 100 ವರ್ಷ ಇತಿಹಾಸವಿರುವ ದೊಡ್ಡ ಪಕ್ಷ, ಅದಕ್ಕೆ ಅದರದ್ದೇ ರೀತ ರಿವಾಜು ಇರತ್ತೆ. ನಾನು ಬಹಳ ಸಣ್ಣ ವ್ಯಕ್ತಿ’ ಎಂದರು.‌ ಮತ್ತೆ ಮುಂದುವರಿದು, “ಕಾಂಗ್ರೆಸ್ ನಲ್ಲಿ ತಮ್ಮ  ಸಮಸ್ಯೆ, ದೌರ್ಬಲ್ಯಗಳನ್ನು ಗುರುತಿಸಿ ಒಪ್ಪಿಕೊಳ್ಳುವ ಮನಸ್ಥಿತಿಯೇ ಇಲ್ಲ, ಇನ್ನೇನು ನಿರೀಕ್ಷಿಸಬಹುದು ಹೇಳಿ” ಎಂದ ಅವರ ಅಭಿಪ್ರಾಯ ನೂರಕ್ಕೆ ನೂರ ಸರಿಯೆನಿಸುತ್ತದೆ. ಈ ಚುನಾವಣೆಗಳಲ್ಲಿ ಕಾಂಗ್ರೆಸ್ ತೋರಿದ ಅತ್ಯಂತ ಪೇಲವ ಪ್ರದರ್ಶನವೂ ಪ್ರಶಾಂತ್ ಕಿಶೋರ್ ಅವರ ಮಾತುಗಳಿಗೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಒಳಗೂ ನಿಜ ಬದಲಾವಣೆ ತರಬಯಸುವ ಕೆಲವು ಮುಖಂಡರು ಅಲ್ಲಲ್ಲಿ ಇದ್ದಾರಾದರೂ ಅವರ ಮಾತಿಗೆ ಅಲ್ಲಿ ಎಷ್ಟು ಬೆಲೆಯಿದೆ ಎಂಬುದು ಪ್ರಶ್ನೆ. ಉದಾಹರಣೆಗೆ ಕರ್ನಾಟಕದಲ್ಲಿ ಸತೀಶ್ ಜಾರಕಿಹೊಳಿಯಂತಹ ಮುತ್ಸದ್ಧಿ ನಾಯಕರು ಸಾಕಷ್ಟು ಭವಿಷ್ಯದಲ್ಲಿ ಯೋಚನೆ ಮಾಡುತ್ತಾರಾದರೂ ಅವರಿಗೆ ದಿಲ್ಲಿ ಹೈಕಮಾಂಡ್ ಮತ್ತು ಲೋಕಲ್ ಕಮಾಂಡುಗಳು ಎಷ್ಟರ ಮಟ್ಟಿಗೆ ಸಹಾಯಕವಾಗಿದ್ದಾರೆ ಎಂಬ ಪ್ರಶ್ನೆಯಿದೆ.‌

ಇನ್ನು ಪ್ರಶಾಂತ್ ಕಿಶೋರ್ ಎಂಬ ಈ ಮಾಂತ್ರಿಕ ಬಹಳ ಸರಳ ಮಾತಿನ ಮಹಾನ್ ತಂತ್ರಗಾರನಾದರೂ ಅಷ್ಟೇ ಹ್ಯುಮಿಲಿಟಿ ಇರುವ ಮನುಷ್ಯ ಎಂಬುದು ಆತನ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ತಾನು ಸ್ವತಃ ರಾಜಕಾರಣಿಯಾಗ ಬಯಸಿ ಜೆಡಿಯು ಸೇರಿ ಇತ್ತೀಚೆಗೆ ಉಚ್ಛಾಟನೆಯಾಗಿರುವ ಈತ ನಾನು ಒಬ್ಬ ರಾಜಕಾರಣಿಯಾಗಿ ವಿಫಲ ವ್ಯಕ್ತಿ (failed person) ಎನ್ನುತ್ತಾರೆ. ಬಹುಶಃ ನಾನು ಪ್ರತಿಯೊಂದನ್ನೂ ಆರಂಭದಿಂದ ಕಲಿಯಬೇಕೇನೋ ಅಥವಾ ಅದು ನನಗೆ ಆಗಿಬರುವುದಿಲ್ಲವೇನೋ ಅನ್ನುವಲ್ಲಿ ಆತನ ವಿನಮ್ರತೆಯಿದೆ.

ರಾಜಕೀಯ-ಚುನಾವಣಾ ತಂತ್ರಗಾರಿಕೆಯಲ್ಲಿ 2012 ರಲ್ಲಿ ಗುಜರಾತ್ ಚುನಾವಣೆಯಲ್ಲಿ ಮತ್ತು 2014 ರ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಸಾಥ್ ನೀಡಿದ್ದ ಪ್ರಶಾಂತ್ ಕಿಶೋರ್ ಈಗ ಪಶ್ಚಾತ್ತಾಪ ಪಡುತ್ತಿರುವಂತೆ ಕಾಣುತ್ತದೆ. ತದನಂತರದಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ, ಆಂಧ್ರದಲ್ಲಿ ಜಗನ್ಮೋಹನ್ ರೆಡ್ಡಿ ಹೀಗೆ ಹಲವರ ಗೆಲುವಿನಲ್ಲಿ ಈ ಮಹಾನ್ ಚತುರನ ನೈಪುಣ್ಯತೆಗಳ ಪಾತ್ರವಿದೆ.

ದೇಶದ ಹಿತದೃಷ್ಟಿಯಿಂದ ಬಹಳ ಪ್ರಮುಖ ಪಾತ್ರ ವಹಿಸಲಿರುವ 2023 ರ ಚುನಾವಣೆಗೆ ಮೊದಲೇ ಹೀಗೆ “ಕೈ ತೊಳೆದುಕೊಳ್ಳುವುದು” ಬಹಳ ಜನರಿಗೆ ನಿರಾಸೆ ತರಿಸಬಹುದು. ಆದರೆ “ನಾನು ನನ್ನ ಹೆಂಡತಿ ಮಕ್ಕಳನ್ನು ಸರಿಯಾಗಿ ನೋಡಿ ಮಾತಾಡದೇ ಹಲವಾರು ತಿಂಗಳುಗಳೇ” ಆದವು ಎನ್ನುವಾಗ ಅವನ ತುಮುಲ ತುಡಿತಗಳನ್ನು ಇನ್ನೇನಿರಬಹುದೋ ಎನಿಸುತ್ತದೆ.

ಎನಿವೇ

ಹ್ಯಾವ್ ಎ ಗುಡ್ ಟೈಮ್ ಅಹೆಡ್ ಪ್ರಶಾಂತ್ ಕಿಶೋರ್ ಜಿ

Previous Post

ಆಕ್ಸಿಜನ್ ಕೊರತೆಯಿಂದ 24 ಜನ ಸತ್ತಿರುವುದಕ್ಕೆ ಯಾರು ಹೊಣೆ..? ಸರ್ಕಾರವೇ ಹೊಣೆ ಹೊರಬೇಕು -ಡಿಕೆಶಿ

Next Post

ಬೆಳಗಾವಿ: ಗೆದ್ದರೂ ‘ಕಮಲ’ಕ್ಕೆ ಆತಂಕ ತಪ್ಪಿಲ್ಲ, ಸೋತರೂ ‘ಕೈ’ಗಿಲ್ಲ ನೋವು

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
Next Post
ಬೆಳಗಾವಿ: ಗೆದ್ದರೂ ‘ಕಮಲ’ಕ್ಕೆ ಆತಂಕ ತಪ್ಪಿಲ್ಲ, ಸೋತರೂ ‘ಕೈ’ಗಿಲ್ಲ ನೋವು

ಬೆಳಗಾವಿ: ಗೆದ್ದರೂ ‘ಕಮಲ’ಕ್ಕೆ ಆತಂಕ ತಪ್ಪಿಲ್ಲ, ಸೋತರೂ ‘ಕೈ’ಗಿಲ್ಲ ನೋವು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada