ಚಾಮರಾಜನಗರ : ವರುಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ. ಚಾಮರಾಜನಗರ ತಾಲೂಕಿನ ಆಲೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು , ನನಗೆ ಒಳ ಹೊರ ಏನೂ ಗೊತ್ತಿಲ್ಲ .ನನಗೆ ಜನ ಮಾತ್ರ ಗೊತ್ತು.ಸೋಮಣ್ಣ ತೆರೆದ ಪುಸ್ತಕ, ಒಳ ಒಪ್ಪಂದ ಏನಿದ್ರು ಚಾಮುಂಡಿ ತಾಯಿ ಜೊತೆ ಮಾತ್ರ ಇರುತ್ತೆ ಎಂದು ಹೇಳಿದ್ದಾರೆ .

ಚುನಾವಣೆಯನ್ನು ಸವಾಲಾಗಿ ಸ್ವೀಕಾರ ಮಾಡಬೇಕು .ಆಗ ಇದ್ಯಾವುದು ತಲೆಗೆ ಬರಲ್ಲ. ನಾನು ಸವಾಲಾಗಿ ಸ್ವೀಕರಿಸಿದ್ದೇನೆ .ಜನರ ಹತ್ತಿರ ಹೋಗ್ತೀವಿ ಜನ ಏನು ತೀರ್ಮಾನ ಮಾಡ್ತಾರೆ ಮಾಡಲಿ, ಯಾರೂ ಧೃತಿಗೆಡಬಾರದು.ಇಂತಹ ಕ್ಷುಲ್ಲಕ ವಿಚಾರಗಳಿಗೆ ನಾನು ಉತ್ತರ ಕೊಡಲ್ಲ ಎಂದು ಹೇಳಿದ್ದಾರೆ.
ವರುಣಕ್ಕು ಪ್ರತಾಪಸಿಂಹರಿಗು ಏನು ಸಂಬಂಧ ಎನ್ನುವ ಸಿದ್ದು ಹೇಳಿಕೆ ವಿಚಾರವಾಗಿಯೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ವರುಣಾದಲ್ಲಿ ಮಾತ್ರ ಇರಲಿ, ಅವರ್ಯಾಕೆ ಬೇರೆ ಕಡೆ ಹೋಗ್ತಾರೆ..?ಪ್ರತಾಪ ಸಿಂಹ ಯುವಕರ ಆಶಾಕಿರಣ.ಸಿದ್ದರಾಮಯ್ಯ ಎಲ್ಲಾ ಕಡೆ ಹೋಗ್ತಾರೆ. ಪ್ರತಾಪ್ ಸಿಂಹ ಹೋದ್ರೆ ತಪ್ಪೇನಿದೆ..?ಪಕ್ಷದ ತೀರ್ಮಾನದಂತೆ ಪ್ರತಾಪ್ ಸಿಂಹ ಕೆಲಸ ಮಾಡ್ತಿದಾರೆ ಎಂದು ಹೇಳಿದ್ದಾರೆ.