• Home
  • About Us
  • ಕರ್ನಾಟಕ
Thursday, July 17, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಮುಸ್ಲಿಮರಿಗೆ ಬಜೆಟ್​ನಲ್ಲಿ ಕೊಟ್ಟಿದ್ದು ಹೆಚ್ಚೇನು ಅಲ್ಲ.. ಅದು ನಿಮ್ಮ ಪಾಲು..

ಪ್ರತಿಧ್ವನಿ by ಪ್ರತಿಧ್ವನಿ
April 29, 2025
in Top Story, ಕರ್ನಾಟಕ, ರಾಜಕೀಯ
0
ಮುಸ್ಲಿಮರಿಗೆ ಬಜೆಟ್​ನಲ್ಲಿ ಕೊಟ್ಟಿದ್ದು ಹೆಚ್ಚೇನು ಅಲ್ಲ.. ಅದು ನಿಮ್ಮ ಪಾಲು..
Share on WhatsAppShare on FacebookShare on Telegram

ಹಜ್ ಯಾತ್ರಿಗಳ ವಿಮಾನ ಯಾನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಹೆಗಡೆ ನಗರದಲ್ಲಿರುವ ಹಜ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಿದ್ದರು. ಹಜ್ ಖಾತೆ ಸಚಿವ ರಹೀಂ ಖಾನ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ವಸತಿ ಸಚಿವ ಜಮೀರ್ ಖಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಹಲ್ಗಾಮ್​ನಲ್ಲಿ ಭಯೋತ್ಪಾದನಾ ದಾಳಿಯಲ್ಲಿ ಮೃತರಾದವರಿಗೆ ಒಂದು ನಿಮಿಷ ಮೌನ ಆಚರಣೆ ಮಾಡಲಾಯ್ತು.

ADVERTISEMENT

ನಾನು ಈ ಹಜ್ ಯಾತ್ರೆಗೆ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಬಹಳ ಸಲ ಭಾಗವಹಿಸಿದ್ದೇನೆ. ಎಲ್ಲಾ ಯಾತ್ರಿಗಳಿಗೆ ಶುಭ ಕೋರಲು ರಾಜ್ಯದ ಏಳು‌ಕೋಟಿ ಜನರ ಪರವಾಗಿ ಬಂದಿದ್ದೇನೆ. ಪ್ರತಿ ಮುಸಲ್ಮಾನ ಹಜ್ ಯಾತ್ರೆಗೆ ಹೋಗುವ ಆಸೆ ಇಟ್ಟುಕೊಂಡಿರುತ್ತಾರೆ. ಕನ್ನಡ ಅರ್ಥ ಆಗುತ್ತಾ ಎಂದು ವೇದಿಕೆ ಮೇಲಿದ್ದ ಮುಸಲ್ಮಾನ ಮುಖಂಡರನ್ನು ಕೇಳಿದ ಸಿದ್ದರಾಮಯ್ಯ, ಇತ್ತೀಚೆಗೆ ಪ್ರತಿಯೊಬ್ಬ ಮುಸಲ್ಮಾನ ಕೂಡಾ ಕನ್ನಡ ಮಾದ್ಯಮದಲ್ಲಿ ಓದುತ್ತಿರುತ್ತಾರೆ. ಅವರೆಲ್ಲರಿಗೆ ಕನ್ನಡ ಅರ್ಥ ಆಗುತ್ತೆ ಎಂದಿದ್ದಾರೆ ಸಿಎಂ. ಜೊತೆಗೆ ಮೆಕ್ಕಾದಲ್ಲಿ ಭಾರತೀಯರ ಪರವಾಗಿ ಪ್ರಾರ್ಥನೆ ಮಾಡಲಿ, ಏಳು ಕೋಟಿ ಕನ್ನಡಿಗರ ಪರವಾಗಿ ಹಜ್ ಯಾತ್ರೆಗೆ ಹೋದವರು ಪ್ರಾರ್ಥನೆ ಮಾಡಲಿ ಎಂದಿದ್ದಾರೆ.

#watch ಲಕ್ಷ್ಮಿ ಹೆಬ್ಬಾಳ್ಕರ್ ನ ಸ್ಟೇಜ್ ಮೇಲೆ ಕರೆದು ಬೈದ CM ಸಿದ್ದರಾಮಯ್ಯ#pratidhvani #siddaramaiah #protest

ನಮ್ಮ ಸರ್ಕಾರ ಯಾರನ್ನೋ ಓಲೈಕೆ ಮಾಡಲು ಯಾವ ಕಾರ್ಯಕ್ರಮವನ್ನೂ ಮಾಡಲ್ಲ. ನಾವು ಕರ್ನಾಟಕದ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎಂದು ಆಸೆ ಇಟ್ಟುಕೊಂಡಿರುವ ಜನ. ನಾವು ಯಾವುದೇ ಜನಾಂಗಕ್ಕೆ ಸೇರಿದವರು ಆಗಿರಬಹುದು. ಆದ್ರೆ ನಾವು ಮಾನವರು. ಯಾವುದೇ ಧರ್ಮ ಕೂಡಾ ಮಾನವರಾಗುವಂತೆ ಹೇಳುತ್ತವೆಯೇ ವಿನಹಃ ಮೃಗಗಳಾಗಿ ಎಂದು ಹೇಳಲ್ಲ. ನೀವು ನಾವೆಲ್ಲ ಮನುಷ್ಯರಾಗಿ ಇರೋಣ, ದ್ವೇಷ ಅಸೂಯೆ ಯಿಂದ ಏನೂ ಸಾಧನೆ ಮಾಡಲು ಆಗಲ್ಲ ಎಂದಿದ್ದಾರೆ ಸಿದ್ದರಾಮಯ್ಯ.

ಸಮಸಮಾಜ ನಿರ್ಮಾಣ ಮಾಡಲು ಪರಸ್ಪರ ಪ್ರೀತಿ ಗೌರವ ಅವಶ್ಯಕತೆ ಇದೆ. ಸಂವಿಧಾನದಲ್ಲಿ ಸಹಿಷ್ಣುತೆ, ಸಹಬಾಳ್ವೆ ಭೋದಿಸಲಾಗಿದೆ. ಹಿಂದೂ, ಮುಸ್ಲಿಂ, ಬೌದ್ಧ, ಸಿಖ್ ಯಾರೇ ಇದ್ರೂ ಒಂದೇ ತಾಯಿ ಮಕ್ಕಳಂತೆ ಬದುಕುವವರಾಗಬೇಕು. ಹಜ್ ಯಾತ್ರೆಗೆ ಹೋಗುವವರೆಲ್ಲಾ ಸಮಾಜದಲ್ಲಿ ಸೌಹಾರ್ದ ಬೆಳೆಯುವಂತೆ ಪ್ರಾರ್ಥನೆ ಮಾಡಬೇಕು. ದ್ವೇಷದಿಂದ ಯಾರನ್ನೂ ಗೆಲ್ಲಲು ಆಗಲ್ಲ, ಸ್ನೇಹ ಪ್ರೀತಿಯಿಂದ ಗೆಲ್ಲುವುದಕ್ಕೆ ಸಾಧ್ಯ ಅಗುತ್ತದೆ. ಸರ್ಕಾರದ ಮುಖ್ಯಸ್ಥನಾಗಿ ಯಾವುದೋ ಒಂದು ಧರ್ಮದವರಿಗಾಗಿ ನಾನು ಕೆಲಸ ಮಾಡುವುದಲ್ಲ. ಎಲ್ಲರೂ ಸಮಾನವಾಗಿ ಬದುಕಬೇಕು ಎಂದು ಆಶಯ ಇಟ್ಟುಕೊಂಡವನು ನಾನು ಎಂದಿದ್ದಾರೆ.

ಸ್ವಾತಂತ್ರ್ಯ ಬಂದ ಬಳಿಕ ವಿಭಜನೆ ಆಯಿತು, ಭಾರತದಲ್ಲಿ ಉಳಿದುಕೊಂಡ ಮುಸಲ್ಮಾನರು ಕೂಡ ಭಾರತೀಯರು. ಮುಸಲ್ಮಾನರೂ ಸಹಾ ನಮ್ಮ ಸೋದರರು, ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ಎಲ್ಲ ಜನಾಂಗ, ಧರ್ಮದವರನ್ನು ಸಮಾನವಾಗಿ ನೋಡುತ್ತದೆ. ನಮ್ಮ ಸರ್ಕಾರ ಬಜೆಟ್​ನಲ್ಲಿ ನಿಮಗೆ ನಾಲ್ಕೂವರೆ ಸಾವಿರ ಕೊಟಿ ಮೀಸಲಿಟ್ಟಿದೆ. ಅದೇನೂ ದೊಡ್ಡದಲ್ಲ, ನಿಮ್ಮ ಪಾಲನ್ನು ನಿಮಗೆ ಕೊಡಲೇ ಬೇಕಲ್ಲವಾ.? ಎಲ್ಲರಿಗೂ ಸಮಾನವಾಗಿ ಹಂಚಿಕೆ ಆದಾಗ ಮಾತ್ರ ಸಮಾನತೆ ಬರುತ್ತದೆ. ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ವಾಗಿ ಸಮಾನತೆ ಬರಬೇಕು ಎಂದಿದ್ದಾರೆ.

ನಿಮ್ಮ ಹಕ್ಕುಗಳನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಯಾರು ಏನೇ ಹೇಳಿಕೊಳ್ಳಲಿ, ಅದಕ್ಕೆಲ್ಲ ನಾವು ಸೊಪ್ಪು ಹಾಕುವವರಲ್ಲ. ಸಂವಿಧಾನ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಅದನ್ನು ನಾವು ಮಾಡುತ್ತಾ ಇದ್ದೇವೆ. ಮಂಗಳೂರಿನಲ್ಲಿ ಹಜ್ ಭವನಕ್ಕೆ ಹದಿನಾರನೇ ತಾರೀಖು ಶಂಕು ಸ್ಥಾಪನೆ ಮಾಡ್ತಾ ಇದೀನಿ. ನಿಮ್ಮಲ್ಲಿ ಶಿಕ್ಷಣ ಹೆಚ್ಚಾಗಬೇಕು. ಆಗ ಸ್ವಾಭಿಮಾನಿಗಳಾಗಿ ಬದುಕ್ತೀರಾ. ಸರ್ಕಾರ ಏನು ಮಾಡಿದೆ ಅಂತಾ ನಾನೇ ಹೇಳಲು ಹೋಗಲ್ಲ. ಅದನ್ನು ನೀವು ಹೇಳಬೇಕು. ನಾವು ಯಾವ ಧರ್ಮಕ್ಕೂ ಅನ್ಯಾಯ ಮಾಡಲ್ಲ. ಎಲ್ಲರಿಗೂ ರಕ್ಷಣೆ ಕೊಡುವುದು ನಮ್ಮ ಕರ್ತವ್ಯ. ನಮ್ಮ ಸರ್ಕಾರದಲ್ಲಿ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಕರ್ನಾಟಕದಲ್ಲಂತೂ ಯಾರೂ ಆತಂಕ ಪಡಬೇಕಿಲ್ಲ ಎಂದಿದ್ದಾರೆ.

Tags: @newsfirstkannadacm siddarmaiahcongressDCM DK Shivakumarkannada latest newskannada live newskannada live tvkannada news channelkannada news livekannada tv channelkarnataka latest newskarnataka political developmentsKarnataka Politicslive karnataka newslive newsnews first kannadanewsfirst kannadanewsfirst liveRainsiddaramihsiddutoday newstv9 kannadaVIDHANA SOUDHA
Previous Post

ಡಿಜಿಟಲ್​ ಮೀಡಿಯಾಗೆ ಸರ್ಕಾರಿ ಜಾಹಿರಾತು.. ಗಣ್ಯರಿಗೆ ಅಭಿನಂದನೆ

Next Post

ಸಿಎಂ ಕನ್ನಡಿಗರನ್ನು ಕರೆತಂದರೂ ಶ್ಲಾಘನೆ ಇಲ್ಲ.. ಬರೀ ಟೀಕೆ..

Related Posts

ಮರುನಾಮಕರಣ- ಊಳಿಗಮಾನ್ಯ ಅಧಿಕಾರದ ಗೀಳು
Top Story

ಮರುನಾಮಕರಣ- ಊಳಿಗಮಾನ್ಯ ಅಧಿಕಾರದ ಗೀಳು

by ಪ್ರತಿಧ್ವನಿ
July 17, 2025
0

-----ನಾ ದಿವಾಕರ---- ಸ್ಥಳಗಳಿಗೆ ಹೊಸ ಹೆಸರಿಸುವ ಪರಂಪರೆಗೆ ಪ್ರಜಾತಂತ್ರದ ಸ್ಪರ್ಶ ಇರಬೇಕು ಭಾರತದ ರಾಜಕಾರಣದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಊರುಗಳ, ನಗರಗಳ ಮತ್ತು ರಸ್ತೆ-ವೃತ್ತಗಳ ಹೆಸರುಗಳನ್ನು...

Read moreDetails
ಶಿಕ್ಷಣ ಸಚಿವರೇ ನಿಮ್ಮ ಇಲಾಖೆಯ ಗೊತ್ತು ಗುರಿಗಳೇನು? ನಿಮ್ಮದು ಕೇವಲ ಪರೀಕ್ಷೆ ನಡೆಸುವ ಇಲಾಖೆಯೇ?

ಶಿಕ್ಷಣ ಸಚಿವರೇ ನಿಮ್ಮ ಇಲಾಖೆಯ ಗೊತ್ತು ಗುರಿಗಳೇನು? ನಿಮ್ಮದು ಕೇವಲ ಪರೀಕ್ಷೆ ನಡೆಸುವ ಇಲಾಖೆಯೇ?

July 16, 2025

Basavaraj Bommai: ಜಿಟಿಟಿಸಿ ತರಬೇತಿ ಪಡೆಯುವವರಿಗೆ ಒಳ್ಳೆಯ ಭವಿಷ್ಯವಿದೆ..

July 16, 2025

CM Siddaramaiah: ನ್ಯಾಯ ಯೋಧ ರಾಹುಲ್ ಗಾಂಧಿಯವರ ಧೈರ್ಯಕ್ಕೆ ಅಭಿನಂದಿಸಿದ ಸಿಎಂ.

July 16, 2025

Just Married: ಜನಮನಸೂರೆಗೊಳ್ಳುತ್ತಿದೆ “ಜಸ್ಟ್ ಮ್ಯಾರೀಡ್” ಚಿತ್ರದ “ಮಾಂಗಲ್ಯಂ ತಂತು ನಾನೇನಾ” ಹಾಡು .

July 16, 2025
Next Post
ಸಿಎಂ ಕನ್ನಡಿಗರನ್ನು ಕರೆತಂದರೂ ಶ್ಲಾಘನೆ ಇಲ್ಲ.. ಬರೀ ಟೀಕೆ..

ಸಿಎಂ ಕನ್ನಡಿಗರನ್ನು ಕರೆತಂದರೂ ಶ್ಲಾಘನೆ ಇಲ್ಲ.. ಬರೀ ಟೀಕೆ..

Recent News

ಮರುನಾಮಕರಣ- ಊಳಿಗಮಾನ್ಯ ಅಧಿಕಾರದ ಗೀಳು
Top Story

ಮರುನಾಮಕರಣ- ಊಳಿಗಮಾನ್ಯ ಅಧಿಕಾರದ ಗೀಳು

by ಪ್ರತಿಧ್ವನಿ
July 17, 2025
ಶಿಕ್ಷಣ ಸಚಿವರೇ ನಿಮ್ಮ ಇಲಾಖೆಯ ಗೊತ್ತು ಗುರಿಗಳೇನು? ನಿಮ್ಮದು ಕೇವಲ ಪರೀಕ್ಷೆ ನಡೆಸುವ ಇಲಾಖೆಯೇ?
Top Story

ಶಿಕ್ಷಣ ಸಚಿವರೇ ನಿಮ್ಮ ಇಲಾಖೆಯ ಗೊತ್ತು ಗುರಿಗಳೇನು? ನಿಮ್ಮದು ಕೇವಲ ಪರೀಕ್ಷೆ ನಡೆಸುವ ಇಲಾಖೆಯೇ?

by ಪ್ರತಿಧ್ವನಿ
July 16, 2025
Top Story

CM Siddaramaiah: ನ್ಯಾಯ ಯೋಧ ರಾಹುಲ್ ಗಾಂಧಿಯವರ ಧೈರ್ಯಕ್ಕೆ ಅಭಿನಂದಿಸಿದ ಸಿಎಂ.

by ಪ್ರತಿಧ್ವನಿ
July 16, 2025
Top Story

Just Married: ಜನಮನಸೂರೆಗೊಳ್ಳುತ್ತಿದೆ “ಜಸ್ಟ್ ಮ್ಯಾರೀಡ್” ಚಿತ್ರದ “ಮಾಂಗಲ್ಯಂ ತಂತು ನಾನೇನಾ” ಹಾಡು .

by ಪ್ರತಿಧ್ವನಿ
July 16, 2025
ರಾಜ್ಯದಲ್ಲಿ ಹೂಡಿಕೆ: ಕೈಗಾರಿಕಾ ಸಚಿವ ಎಂ ಬಿ ಪಾಟೀಲರ ಜತೆ ರೋಲ್ಸ್‌ ರಾಯ್ಸ್‌ ಕಂಪನಿ ಮಾತುಕತೆ
Top Story

ರಾಜ್ಯದಲ್ಲಿ ಹೂಡಿಕೆ: ಕೈಗಾರಿಕಾ ಸಚಿವ ಎಂ ಬಿ ಪಾಟೀಲರ ಜತೆ ರೋಲ್ಸ್‌ ರಾಯ್ಸ್‌ ಕಂಪನಿ ಮಾತುಕತೆ

by ಪ್ರತಿಧ್ವನಿ
July 16, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮರುನಾಮಕರಣ- ಊಳಿಗಮಾನ್ಯ ಅಧಿಕಾರದ ಗೀಳು

ಮರುನಾಮಕರಣ- ಊಳಿಗಮಾನ್ಯ ಅಧಿಕಾರದ ಗೀಳು

July 17, 2025
ಶಿಕ್ಷಣ ಸಚಿವರೇ ನಿಮ್ಮ ಇಲಾಖೆಯ ಗೊತ್ತು ಗುರಿಗಳೇನು? ನಿಮ್ಮದು ಕೇವಲ ಪರೀಕ್ಷೆ ನಡೆಸುವ ಇಲಾಖೆಯೇ?

ಶಿಕ್ಷಣ ಸಚಿವರೇ ನಿಮ್ಮ ಇಲಾಖೆಯ ಗೊತ್ತು ಗುರಿಗಳೇನು? ನಿಮ್ಮದು ಕೇವಲ ಪರೀಕ್ಷೆ ನಡೆಸುವ ಇಲಾಖೆಯೇ?

July 16, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada