• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬೇಕಾದದ್ದು‌ ಪೋಸ್ಟ್ ಮಾ… ಅಲ್ಲ ಪ್ರಾಗ್ನೋಸಿಸ್..!!

ಪ್ರತಿಧ್ವನಿ by ಪ್ರತಿಧ್ವನಿ
June 6, 2025
in Top Story, ಅಂಕಣ, ಇದೀಗ, ಕರ್ನಾಟಕ, ಕ್ರೀಡೆ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ, ಸರ್ಕಾರಿ ಗೆಜೆಟ್
0
Share on WhatsAppShare on FacebookShare on Telegram

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ಸಾ….ಗಳಲ್ಲಿ “ಯಾರದ್ದು ತಪ್ಪು” ಎಂಬ ಕರಟ ಹೆರೆಯುವ ಕೆಲಸವನ್ನು ರಾಜಕೀಯವಾಗಿ “ಸ್ಕೋರ್” ಆಗಬೇಕಿರುವ ಹಪಾಹಪಿಯವರೆಲ್ಲ ಮಾಡಿಕೊಳ್ಳಲಿ. ಈಗ ಕೋಟೆ ಬಾಗಿಲು ಸೂರೆ ಹೋದಮೇಲೆ, ಸರ್ಕಾರ ದೊಡ್ಡ ಗಾತ್ರದಲ್ಲಿ ಜನ ಸೇರಿದರೆ SOP ಏನಿರಬೇಕು ಎಂದು ನಿರ್ಧರಿಸುತ್ತೇವೆ ಎಂದು ಹೇಳಿಕೊಂಡಿದೆ.

ADVERTISEMENT

ಅದೂ ಸಂತೋಷವೇ.
ಇದೆಲ್ಲಕ್ಕಿಂತ ಮಿಗಿಲಾಗಿ ಆಗಬೇಕಿರುವ ಕೆಲಸವೊಂದಿದೆ. ಜನರ ಜೀವಗಳು ಅಮೂಲ್ಯ ಎಂಬುದು ಸರ್ಕಾರಕ್ಕೆ ಖಚಿತವಿದ್ದರೆ, ಸ್ವಲ್ಪ ಕಷ್ಟಪಟ್ಟಾದರೂ ಇದನ್ನು ಅವರು ಮಾಡಬೇಕು ಮತ್ತು ಮಾಡುವಂತೆ ಸಾರ್ವಜನಿಕರು ಸರ್ಕಾರದ, ಕಾರ್ಯಾಂಗದ ಮೇಲೆ ಒತ್ತಾಯ ತರಬೇಕು. ಇದು ಯಾಕೆ ಅಗತ್ಯ ಎಂದರೆ, ಬೆಂಗಳೂರಿನಲ್ಲಿ ಹೀಗೆ ಜನಜಂಗುಳಿ ನಿಯಂತ್ರಣ ತಪ್ಪುತ್ತಿರುವುದು ಇದೇ ಮೊದಲಲ್ಲ. ನಾನು ಈಗಾಗಲೇ ಹೇಳಿರುವಂತೆ ಜನ “ಗುಂಪು” ಆದಾಗ, ಆ ಗುಂಪಿಗೆ ಮೆದುಳು ಇರುವುದಿಲ್ಲ. ಅಲ್ಲಿ “ವಿವೇಕ” ಅಗತ್ಯವಿರುತ್ತದೆ. ಈ ವಿವೇಕವನ್ನು ಅಗತ್ಯ ಇರುವವರಿಗೆ ಕಲಿಸಬೇಕಿದೆ. ಈ ಜನಜಂಗುಳಿಯಲ್ಲಿ “ಬಾರ್ಡರ್‌ಲೈನ್ ಪರ್ಸನಾಲಿಟಿ”ಗಳಿರುತ್ತವೆ. ಅವರು ಯಾರೆಂದು ಗುರುತಿಸುವುದು ಕಷ್ಟ. ಆದರೆ, ಜನ ಸೇರಿದಾಗ, ಗುಂಪಿನ ವಿವೇಕವನ್ನು ಅವರು ಹೈಜಾಕ್ ಮಾಡಿಬಿಟ್ಟಿರುತ್ತಾರೆ. ಇದನ್ನು ತಪ್ಪಿಸುವುದಕ್ಕೆ ಜನರಿಗೆ ತರಬೇತಿ ಅಗತ್ಯವಿದೆ. ಬೆಂಗಳೂರಿನಂತಹ ಅತಿಸಂದಣಿಯ ಮಹಾನಗರಗಳಲ್ಲಿಯಂತೂ ಇದು ಬಹಳ ಅಗತ್ಯ.

ಸರ್ಕಾರ ಏನು ಮಾಡಬಹುದೆಂದರೆ, ಇಂದು ಲಭ್ಯವಿರುವ ಟೆಕ್ನಾಲಜಿ ಬಳಸಿಕೊಂಡು, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನೆರೆದಿರುವ ಪ್ರತಿಯೊಬ್ಬರನ್ನೂ ಅವರ ಮೊಬೈಲ್ ಫೋನ್ ನಂಬರ್ ಮೂಲಕ ಗುರುತಿಸುವುದು ಸಾಧ್ಯ ಇದೆ (ಅಲ್ಲಿ ಮೊಬೈಲ್ ಇಲ್ಲದೇ ಬಂದಿರುವವರ ಸಂಖ್ಯೆ ಬಹುತೇಕ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ!). GPS, ಟವರ್ ಡಂಪಿಂಗ್, ಇತ್ಯಾದಿ ಹತ್ತು ಹಲವು ತಂತ್ರಜ್ಞಾನಗಳು ಸರ್ಕಾರದ ಕೈಯೆಟುಕಿನಲ್ಲೇ ಲಭ್ಯವಿವೆ. ಇವುಗಳನ್ನು ಬಳಸಿಕೊಂಡು, ಅಲ್ಲಿ ಅಂದು ನೆರೆದಿದ್ದ 2 ಲಕ್ಷ ಮಂದಿಯನ್ನು ಗುರುತಿಸಬೇಕು ಮತ್ತು ಅವರನ್ನು ಎಲ್ಲರನ್ನೂ ಸಂಪರ್ಕಿಸಿ, ಅವರಿಗೆ ಅವರ ಉದ್ಯೋಗದ ಸ್ಥಳದಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ಅಥವಾ ಇಂತಹ ಒಂದು ಕನ್ಸಿಡರೆಬಲ್ ಗುಂಪು ಲಭ್ಯವಾಗುವ ಯಾವುದೇ ಜಾಗದಲ್ಲಿ ಅವರಿಗೆ ಗುಂಪು ವರ್ತನೆಗಳ ಬಗ್ಗೆ ಕೌನ್ಸೆಲಿಂಗ್ ನೀಡಬೇಕು, ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಬೇಕು ಮತ್ತು ಅಪಾಯ ಸನ್ನಿವೇಶಗಳಲ್ಲಿ ಏನು ಪರಿಹಾರ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ತಿಳಿವಳಿಕೆ ನೀಡಬೇಕು.

ಇನ್ನು ನನ್ನ ಕಣ್ಣಿಗೆ ಬಿದ್ದ ಕೆಲವು ವೀಡಿಯೊಗಳಲ್ಲೇ, ಚಿನ್ನಸ್ವಾಮಿ ಗೇಟನ್ನು ಮುರಿಯಲು ಪ್ರಯತ್ನಿಸುತ್ತಿರುವ, ಹೈಕೋರ್ಟ್ ಕಟ್ಟಡ ಹತ್ತಿರುವ, ಮರ ಹತ್ತಿರುವ, ಎತ್ತರದ ಕಾಂಪೌಂಡ್ ಗೋಡೆಗಳನ್ನು ಹತ್ತಿರುವ ಇತ್ಯಾದಿ ಅಸಹಜ ಸಾಮಾಜಿಕ ವರ್ತನೆ ತೋರಿರುವ ಹಲವರನ್ನು ಗುರುತಿಸುವಷ್ಟು ಸ್ಪಷ್ಟವಾದ ವೀಡಿಯೊಗಳು ಇವೆ. ಟೆಲಿವಿಷನ್ ಚಾನೆಲ್‌ಗಳಲ್ಲಿ, ಸಿಸಿಟಿವಿಗಳಲ್ಲಿ ಇವು ಲಭ್ಯವಿರಬಹುದು. ಇವರಲ್ಲಿ “ಬಾರ್ಡರ್‌ಲೈನ್ ಪರ್ಸನಾಲಿಟಿ”ಗಳನ್ನು ಅಥವಾ ಬೇರೆ ಮಾನಸಿಕ ಸಮಸ್ಯೆಗಳು, ಮದ್ಯ/ಮಾದಕ ವ್ಯಸನಿಗಳನ್ನು ಗುರುತಿಸಿ, ಅವರಿಗೆ ಅಗತ್ಯ ವೈದ್ಯಕೀಯ ನೆರವನ್ನು ಒದಗಿಸಬೇಕು. ಸರ್ಕಾರ ಇಷ್ಟು ಮಾಡಿದರೆ, ಇನ್ನು ಮುಂದೆಯಾದರೂ ಬೆಂಗಳೂರಿನಲ್ಲಿ ಜನಸಂದಣಿ ಸೇರಿದಾಗ ಸಾಮಾನ್ಯ ನಾಗರಿಕರು ತಾವು ಸ್ವಲ್ಪ ಸುರಕ್ಷಿತ ಭಾವನೆ ತಳೆಯಬಹುದು.

ಲೇಖಕರು
✍🏻‌ ರಾಜರಾಂ ತಲ್ಲೂರ್

Tags: BJPChinnaswamy StadiumcongressCricketDK ShivakumarKarnatakaRajaram TallurRCBRCB winsiddaramaiahVishanasouda
Previous Post

ನಮ್ಮ ಉಸಿರಿಗಾಗಿ ಪರಿಸರ ಸಂರಕ್ಷಿಸಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

Next Post

ಕ್ರೀಡೆ ಮನರಂಜನೆ ಮತ್ತು ಮಾರುಕಟ್ಟೆ ಬಂಡವಾಳ

Related Posts

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
0

ಪ್ರಮುಖಪಾತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ, "ಬಿಗ್ ಬಾಸ್" ಖ್ಯಾತಿಯ ತನಿಷಾ ಕುಪ್ಪಂಡ ಹಾಗೂ ಕಿಶನ್ ನಟನೆ . ಆರ್ ಹೆಚ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್ ಹನುಮಂತರಾಜು...

Read moreDetails
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

June 18, 2025

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
Next Post
ಕ್ರೀಡೆ ಮನರಂಜನೆ ಮತ್ತು ಮಾರುಕಟ್ಟೆ ಬಂಡವಾಳ

ಕ್ರೀಡೆ ಮನರಂಜನೆ ಮತ್ತು ಮಾರುಕಟ್ಟೆ ಬಂಡವಾಳ

Recent News

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ
Top Story

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

by ಪ್ರತಿಧ್ವನಿ
June 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada