• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಮಕ್ಕಳ‌ ಅಪೌಷ್ಟಿಕತೆ ಮತ್ತು ಪರಿಹಾರೋಪಾಯಗಳು

ಫಾತಿಮಾ by ಫಾತಿಮಾ
September 12, 2021
in ದೇಶ
0
ಮಕ್ಕಳ‌ ಅಪೌಷ್ಟಿಕತೆ ಮತ್ತು ಪರಿಹಾರೋಪಾಯಗಳು
Share on WhatsAppShare on FacebookShare on Telegram

ವೈದ್ಯ ಜಗತ್ರು ಮಕ್ಕಳ ಅಪೌಷ್ಟಿಕತೆಯನ್ನು ‘ಕಡಿಮೆ ಪೌಷ್ಟಿಕತೆ’ (ಕ್ಯಾಲೋರಿಗಳ ಅಸಮರ್ಪಕ ಬಳಕೆ) ಮತ್ತು ‘ಅತಿಯಾದ ಪೋಷಣೆ’ (ಅಧಿಕ ಕ್ಯಾಲೋರಿಗಳ ಬಳಕೆ) ಎಂದು ಎರಡು ವಿಭಾಗವಾಗಿ ವರ್ಗೀಕರಿಸುತ್ತದೆ. ಇವುಗಳಲ್ಲಿ, ಕಡಿಮೆ ಪೌಷ್ಟಿಕತೆಯ ಮಕ್ಕಳಲ್ಲಿ ವಯಸ್ಸಿಗೆ ತಕ್ಕ ಎತ್ತರ ಇರುವುದಿಲ್ಲ ಅಥವಾ ಎತ್ತರದ ಕುಂಠಿತಕ್ಕೆ ಕಾರಣವಾಗುತ್ತದೆ. ಅಸಮರ್ಪಕ ಎತ್ತರವನ್ನು ಮಕ್ಕಳ ಅಪೌಷ್ಟಿಕತೆಯ ಅತ್ಯಂತ ಕೆಟ್ಟ ರೂಪವೆಂದು ಕರೆಯಲಾಗುತ್ತದೆ ಏಕೆಂದರೆ ಎತ್ತರದಲ್ಲಾದ ನಷ್ಟವನ್ನು ತಕ್ಷಣವೇ ಮರಳಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ, ಇದು ದೀರ್ಘಕಾಲದ ಅಪೌಷ್ಟಿಕತೆಯ ಸೂಚಕವಾಗಿದೆ. ಇದು ಮುಂದಿನ ಪೀಳಿಗೆಯನ್ನು ಸಹ ಭಾದಿಸುವಂಥದ್ದಾಗಿದ್ದು ಬದಲಾಯಿಸಲಾಗದ ಮಾನಸಿಕ ಮತ್ತು ದೈಹಿಕ ಹಾನಿಗೆ ಕಾರಣವಾಗಬಹುದು.

ADVERTISEMENT

ಜಾಗತಿಕವಾಗಿ ಅಪೌಷ್ಟಿಕ ಮಕ್ಕಳಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳು ಭಾರತೀಯರು. ಮಕ್ಕಳ ಅಪೌಷ್ಟಿಕತೆಯ ಸಮಸ್ಯೆಯನ್ನು ಪರಿಹರಿಸದೆ ಯಾವುದೇ ದೇಶ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವೇ ಇಲ್ಲ. ಮಕ್ಕಳ ಅಪೌಷ್ಟಿಕತೆಯನ್ನು ನಿಭಾಯಿಸಲು ಬಹುಮುಖಿ ವಿಧಾನದ ಅಗತ್ಯವಿದೆ ಎಂದು ಸಂಶೋಧನೆಯೊಂದು ಸೂಚಿಸುತ್ತದೆ, ಉದಾಹರಣೆಗೆ, ಆಹಾರ ಸೇವನೆಯ ಪ್ರಮಾಣ ಮತ್ತು ಗುಣಮಟ್ಟವನ್ನು ಸುಧಾರಿಸುವುದು, ನೈರ್ಮಲ್ಯದ ಮಟ್ಟಗಳು, ತಾಯಿಯ ಆರೋಗ್ಯ ಮತ್ತು ಶಿಕ್ಷಣ, ಸಾಮಾಜಿಕ ಸುರಕ್ಷತಾ ಕಾರ್ಯಕ್ರಮಗಳು ಇತ್ಯಾದಿ.
ಆರು ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ಸಮಗ್ರ ಆರೋಗ್ಯ ಮತ್ತು ಪೌಷ್ಠಿಕಾಂಶವಿರುವ ಆಹಾರ ವಿತರಣೆ, ಶಾಲೆಗೆ ಹೋಗುವ ಮಕ್ಕಳಿಗೆ ಮಧ್ಯಾಹ್ನದ ಊಟಗಳಂತಹ ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ಐಸಿಡಿಎಸ್ ) ಕಾರ್ಯಕ್ರಮಗಳನ್ನು ಸರ್ಕಾರವು ಜಾರಿಗೆ ತಂದಿದೆ. ಆದರೆ ಇವೆಲ್ಲವುಗಳ ಮಧ್ಯೆಯೂ ಭಾರತದಲ್ಲಿ ಇನ್ನೂ ಮಕ್ಕಳ ಅಪೌಷ್ಟಿಕತೆಯ ಬಗ್ಗೆ ಸಂಪೂರ್ಣ ಜಾಗೃತಿ ಮೂಡಿಲ್ಲ ಅನ್ನುವುದು ವಿಷಾದನೀಯ. NFHS-5 ಡಾಟಾ ಸಹ ಭಾರತದಲ್ಲಿ ಮಕ್ಕಳ ಅಪೌಷ್ಟಿಕತೆಯು ಮತ್ತಷ್ಟು ಹದಗೆಡುತ್ತಿರುವ ಮಾಹಿತಿ ನೀಡಿದೆ.

2015-16 ರಲ್ಲಿ ನಡೆದ NFHS-4 ಸಮೀಕ್ಷೆಗೆ ಐದು ವರ್ಷಕ್ಕಿಂತ ಕಡಿಮೆ ಇರುವ 90,000 ಮಕ್ಕಳು ಒಳಪಟ್ಟಿದ್ದರು. ಮಗುವಿನ ವಯಸ್ಸು (ತಿಂಗಳುಗಳಲ್ಲಿ; 0-5 ವರ್ಷದಿಂದ), ಲಿಂಗ, ಸೋಂಕುಗಳು ಸಂಭವಿಸುವುದು, ಔಷಧೀಯ ಸೇವನೆ, ಜನ್ಮ ಗುಣಲಕ್ಷಣಗಳು (ಹುಟ್ಟಿದಾಗಿನ ಗಾತ್ರ ಮತ್ತು ತೂಕ), ಅವರ ಆಹಾರ ಸೇವನೆ (ಸ್ತನ್ಯಪಾನ ಮತ್ತು ಆಹಾರ ವೈವಿಧ್ಯ), ಮಕ್ಕಳ ಪರಿಸರ (ಹಳ್ಳಿಯಲ್ಲಿ ಬಯಲು ಶೌಚದ ಮಟ್ಟ, ಕಲ್ಯಾಣ ಯೋಜನೆಗಳ ಪ್ರಯೋಜನಗಳ ಲಭ್ಯತೆ, ಸುಧಾರಿತ ಕುಡಿಯುವ ನೀರು, ಮನೆಯ ಗಾತ್ರ), ತಾಯಿಯ ಗುಣಲಕ್ಷಣಗಳು (ಎತ್ತರ, BMI, ಶಿಕ್ಷಣ, ಮತ್ತು ಮದುವೆಯ ವಯಸ್ಸು), ಆಕೆಯ ಪರಿಸರ (ಗರ್ಭಾವಸ್ಥೆಯಲ್ಲಿ ಐಸಿಡಿಎಸ್ ಕೇಂದ್ರಗಳಿಂದ ಪ್ರಯೋಜನಗಳು, ಆರೋಗ್ಯ ವಿಮೆ) ಮತ್ತು ಸಾಮಾಜಿಕ-ಆರ್ಥಿಕ ನಿಯಂತ್ರಣಗಳು (ಸಂಪತ್ತು, ವಾಸಸ್ಥಳ, ಇತ್ಯಾದಿ) ಮುಂತಾದ ಯುನಿಸೆಫ್‌‌ ಹಾಕಿಕೊಟ್ಟಿರುವ ಮಗುವಿನ ಅಪೌಷ್ಟಿಕತೆಯನ್ನು ವಿವರಿಸಲು ಬಳಸುವ ಹತ್ತು ಗುಂಪುಗಳ ಆಧಾರದ ಮೇಲೆ NFHS-4 ಡಾಟಾ ಸಂಗ್ರಹಿಸಲಾಗಿತ್ತು.

ಮಗುವಿನ HAZ (ಎತ್ತರ-ವಯಸ್ಸು)ಅಂಕಗಳು, ಮಗುವಿನ ವಯಸ್ಸು, ತಾಯಿಯ ಗುಣಲಕ್ಷಣಗಳ ಮತ್ತು ಸಾಮಾಜಿಕ-ಆರ್ಥಿಕ ನಿಯಂತ್ರಣಗಳನ್ನು ಅನುಸರಿಸಿರುವುದು ಈ ಸಮೀಕ್ಷೆಯಿಂದ ತಿಳಿದು ಬಂತು. ಈ ಫಲಿತಾಂಶವು ಮೊದಲ 24 ತಿಂಗಳಲ್ಲಿ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ ಎನ್ನುವ ಮಾಹಿತಿಯನ್ನು ಪ್ರಧಾನವಾಗಿ ಹೊರಗೆಡವಿತು.

ಇದೇ ರೀತಿಯಲ್ಲಿ ಮಗುವಿನ ಎತ್ತರವನ್ನು ನಿರ್ಧರಿಸುವ ಮತ್ತೊಂದು ಪ್ರಮುಖ ಅಂಶ ತಾಯಿಯ ಎತ್ತರವಾಗಿದೆ. ಎತ್ತರವನ್ನು ನಿರ್ಧರಿಸುವಲ್ಲಿ ಜೆನೆಟಿಕ್ಸ್ ಯಾವಾಗಲೂ ಪ್ರಮುಖ ಪಾತ್ರ ವಹಿಸುತ್ತದೆ ಎಂಬುವುದು ಹಿಂದೆಯೇ ಸಾಬೀತಾಗಿರುವ ವಿಷಯವಾಗಿದೆ. ಗರ್ಭಧಾರಣೆಯಿಂದ ಎರಡು ವರ್ಷಗಳವರೆಗೆ (ಅಂದರೆ ಜೀವನದ ಮೊದಲ 1,000 ದಿನಗಳು) ಮಕ್ಕಳಿಗೆ ಸಾಕಷ್ಟು ಪೌಷ್ಠಿಕಾಂಶವನ್ನು ಒದಗಿಸಲು ಹೆಚ್ಚುವರಿ ಪ್ರಯತ್ನಗಳನ್ನು ಮಾಡಲೇಬೇಕು ಎಂಬುವುದಕ್ಕೆ ಈ ಫಲಿತಾಂಶವು ಪುಷ್ಟಿ ನೀಡುತ್ತದೆ.

ಭಾರತದಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಹೆಚ್ಚು ಅಪೌಷ್ಟಿಕತೆಗೆ ಒಳಗಾಗುತ್ತಾರೆ ಎನ್ನುವುದು ಈ ಸಮೀಕ್ಷೆಯ ಮತ್ತೊಂದು ಫಲಿತಾಂಶವಾಗಿದೆ. ಹುಡುಗಿಯರ ಪೌಷ್ಟಿಕಾಂಶದ ಅಗತ್ಯಗಳಿಗೆ ಆದ್ಯತೆ ನೀಡುವುದರಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು ಎನ್ನುತ್ತದೆ ಅಧ್ಯಯನ. ಯಾಕೆಂದರೆ ಬಾಲ್ಯದಲ್ಲಿ ಬೆಳವಣಿಗೆಯ ಕುಂಠಿತವನ್ನು ಎದುರಿಸಿದ ತಾಯಂದಿರು ಪೂರ್ತಿ ಬೆಳಬಣಿಗೆ ಹೊಂದದ ಗರ್ಭಾಶಯವನ್ನು ಹೊಂದುವ ಅಪಾಯವಿದೆ. ಮುಂದೆ ಬೆಳವಣಿಗೆ ಕುಂಠಿತಗೊಂಡ ಮಕ್ಕಳ ಸಂತಾನೋತ್ಪತ್ತಿಗೂ ಕಾರಣವಾಗಬಹುದು.

‘ಐಸಿಡಿಎಸ್‌’ನ ‘ಪೋಶನ್ ಅಭಿಯಾನ್’ ಮಗುವಿನ ಜೀವನದ ಮೊದಲ 1,000 ದಿನಗಳಲ್ಲಿ ಸಾಕಷ್ಟು ಪೌಷ್ಠಿಕಾಂಶ ಸೇವನೆಯ ಮಹತ್ವವನ್ನು ತಿಳಿಸಿದರೂ, ಮಕ್ಕಳು ಮತ್ತು ಮಹಿಳೆಯರಿಗಾಗಿ ಇತರ ಕಲ್ಯಾಣ ಯೋಜನೆಗಳಂತೆಯೇ ಈ ಕಾರ್ಯಕ್ರಮವು ಕಳೆದ ಕೆಲವು ವರ್ಷಗಳಿಂದ ಬಜೆಟ್ ಕಡಿತವನ್ನು ಪಡೆಯುತ್ತಿದೆ. ಈ ಬಗ್ಗೆ ದೇಶದ ಅರ್ಥ ಶಾಸ್ತ್ರಜ್ಞರು ಎಚ್ವರಿಕೆ ನೀಡುತ್ತಾ ಬಂದಿದ್ದಾರೆ. ಮತ್ತು ಸರ್ಕಾರವು ತಾಯಂದಿರಿಗೆ ಅಗತ್ಯವಾದ ಪ್ರಸವಪೂರ್ವ ಆರೋಗ್ಯ ರಕ್ಷಣೆ ಮತ್ತು ಮಕ್ಕಳಿಗೆ ಸೂಕ್ತ ಪ್ರಮಾಣದ ಆಹಾರ ಮತ್ತು ಗುಣಮಟ್ಟವನ್ನು ಒದಗಿಸುವ ಜವಾಬ್ದಾರಿಯನ್ನು ಹೊರಬೇಕು ಎಂದು ಆಗ್ರಹಿಸಿದ್ದಾರೆ.

ಸಾಮಾಜಿಕ-ಆರ್ಥಿಕ ನಿಯಂತ್ರಣಗಳು HAZ ಸ್ಕೋರ್‌ಗಳನ್ನು ನಿರ್ಣಯಿಸುವ ಮತ್ತೊಂದು ಪ್ರಮುಖ ಅಂಶವಾಗಿದೆ. ಇದು ಕ್ಯಾಲೋರಿಗಳು ಮತ್ತು ಪೌಷ್ಟಿಕಾಂಶ, ಆರೋಗ್ಯ ರಕ್ಷಣೆ ಮತ್ತು ಸಾಮಾನ್ಯ ಜೀವನ ಪರಿಸ್ಥಿತಿಗಳಲ್ಲಿ ಸೂಕ್ತವಾದ ಆಹಾರವನ್ನು ಪಡೆಯುವ ಮಗುವಿನ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಪೂರಕ ಪೌಷ್ಠಿಕಾಂಶ ಕಾರ್ಯಕ್ರಮಗಳನ್ನು ಬಲಪಡಿಸಿದರೆ ಮಾತ್ರ ಮಕ್ಕಳ ಆರೋಗ್ಯ ಪರಿಸ್ಥಿತಿ ಸುಧಾರಿಸಬಹುದು.

Tags: ChildrenGovernment of IndiaMalnutritionssolutions
Previous Post

ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಲ್ಯಾಬ್ ಉಪಕರಣ ಖರೀದಿಯಲ್ಲಿ ಬಹು ಕೋಟಿ ಅಕ್ರಮ; ಸಿಬಿಐ ತನಿಖೆಗೆ ಕಾಂಗ್ರೆಸ್ ಆಗ್ರಹ

Next Post

ಭವಾನಿಪುರದ ಉಪಚುನಾವಣೆ; ದೀದಿಗೆ ಮಾಡು ಇಲ್ಲವೆ ಮಡಿ ಸ್ಥಿತಿ, ತ್ರಿಕೋನ ಸ್ಪರ್ಧೆ

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

November 3, 2025
Next Post
ʼಪ್ರಜಾಪ್ರಭುತ್ವ ಮುಂದುವರೆಯುತ್ತದೆʼ: ದೆಹಲಿ ಭೇಟಿ ಯಶಸ್ವಿ ಎಂದ ಮಮತಾ ಬ್ಯಾನರ್ಜಿ

ಭವಾನಿಪುರದ ಉಪಚುನಾವಣೆ; ದೀದಿಗೆ ಮಾಡು ಇಲ್ಲವೆ ಮಡಿ ಸ್ಥಿತಿ, ತ್ರಿಕೋನ ಸ್ಪರ್ಧೆ

Please login to join discussion

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada