Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕರ್ನಾಟಕದ ಸಂಸದೆ, ಕರ್ನಾಟಕದ ಸೀರೆಯುಟ್ಟು ಕನ್ನಡಿಗರಿಗೆ ಕೊಟ್ಟಿದ್ದೇನು..?

ಕೃಷ್ಣ ಮಣಿ

ಕೃಷ್ಣ ಮಣಿ

February 2, 2023
Share on FacebookShare on Twitter

ತಮಿಳುನಾಡು ಮೂಲದ ನಿರ್ಮಲಾ ಸೀತಾರಾಮನ್​ ಕರ್ನಾಟಕ ವಿಧಾನಸಭೆಯಿಂದ ಸತತ ಎರಡು ಬಾರಿ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದಾರೆ. ಯಾವುದೇ ಒಂದು ರಾಜ್ಯದ ಸಂಸದರು ಮಂತ್ರಿಗಳಾಗಿ ಕಾರ್ಯ ನಿರ್ವಹಣೆ ಮಾಡುವಾಗ ಕೆಲವೊಂದು ಯೋಜನೆಗಳನ್ನು ಜಾರಿ ಮಾಡುವ ಮೂಲಕ ಅವರ ಹೆಸರಾಗಿ ಆ ಯೋಜನೆಗಳನ್ನು ನೋಡಿಕೊಳ್ತಾರೆ. ಒಬ್ಬರು ಅಧಿಕಾರದಲ್ಲಿ ಇದ್ದಾಗ ತಮ್ಮ ಕ್ಷೇತ್ರ, ತಾವು ಆಯ್ಕೆಯಾಗಿ ಬಂದ ರಾಜ್ಯಕ್ಕೆ ಕೊಂಚ ಹೆಚ್ಚಿನ ಆದ್ಯತೆಯನ್ನು ಕೊಟ್ಟಿರುವ ಸಂಗತಿಗಳು ನೂರಾರು ಇವೆ. ಆದರೆ ತಮಿಳುನಾಡಿಗೂ ಕರ್ನಾಟಕಕ್ಕೂ ಆತ್ಮೀಯ ಸಂಬಂಧವಿಲ್ಲ. ತಮಿಳುನಾಡಿಲ್ಲ ಬಿಜೆಪಿ ಅಭ್ಯರ್ಥಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದರಾಗುವುದು ಇತಿಹಾಸಲದಲ್ಲಿ ಇಲ್ಲೀವರೆಗೂ ಆಗಿಲ್ಲ. ನಿರ್ಮಲಾ ಸೀತಾರಾಮನ್​ ಅವರನ್ನು ಸಂಸದರಾಗಿ ಮಾಡುವ ಉದ್ದೇಶದಿಂದ ಕರ್ನಾಟಕ ವಿಧಾನಸಭೆಯಿಂದ ಆಯ್ಕೆ ಮಾಡಲಾಗ್ತಿದೆ. ಸತತ ಎರಡು ಬಾರಿ ರಾಜ್ಯಸಭೆಗೆ ಆಯ್ಕೆ ಆಗಿದ್ದರೂ ನಿರ್ಮಲಾ ಸೀತಾರಾಮನ್​ ಅವರಿಗೆ ಕರುನಾಡಿನ ಬಗ್ಗೆ ಕಿಂಚಿತ್ತು ಆತ್ಮೀಯ ಭಾವನೆ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಪ್ರಧಾನಿ MODI ಮತ್ತು ಅದಾನಿ ನಡುವಿನ ಸಂಬಂಧ ಏನು? ಪ್ರಶ್ನಿಸುವುದನ್ನು ನಾನು ನಿಲ್ಲಿಸಲ್ಲ: Rahul Gandhi

ಕಾಂಗ್ರೆಸ್​ ನಾಯಕಿಗೆ ಶೂರ್ಪನಖಿ ಎಂದಿದ್ದ ಪ್ರಧಾನಿ ಮೋದಿ : ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದ ರೇಣುಕಾ ಚೌಧರಿ

ಬಿಜೆಪಿಗೆ ಬಿಜೆಪಿಯೇ ಎದುರಾಳಿ..! ‘ನಾವಿಕನಿಲ್ಲದ ಹಡಗು’ ಭಾಗ – 02

ಬರದ ನಾಡು ಕೋಟೆನಾಡು ಚಿತ್ರದುರ್ಗಕ್ಕೆ 5300ಕೋಟಿ..!

ಕೇಂದ್ರದ ಬಜೆಟ್​ನಲ್ಲಿ ಎದ್ದು ಕಾಣಿಸಿದ ಒಂದೇ ಒಂದು ಯೋಜನೆ ಅಂದ್ರೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ 5300 ಕೋಟಿ ಘೋಷಣೆ ಮಾಡಿರುವುದು ಮಾತ್ರ. ಕೇಂದ್ರ ಸರ್ಕಾರದ ನಿರ್ಧಾರವನ್ನ ರೈತರು, ರಾಜಕೀಯ ಮುಖಂಡರು ಸ್ವಾಗತಿಸಿದ್ದಾರೆ. ಮಳೆ, ಬೆಳೆಯಿಲ್ಲದೆ ಬರಗಾಲದಲ್ಲೇ ಜೀವನ ಮಾಡ್ತಿದ್ದ ಚಿತ್ರದುರ್ಗದ ಜನರಿಗೆ ನೀರಾವರಿ ಯೋಜನೆಗಳು ಯಾವುದೂ ಇಲ್ಲ. ಚಿತ್ರದುರ್ಗದ ರೈತರ ಬದುಕು ಅಯೋಮಯ ಎನ್ನುವಂತಾಗಿತ್ತು. ಹೀಗಾಗಿಯೇ ಕಳೆದ 3 ದಶಕಗಳಿಂದ ಹೋರಾಟ ನಡೆಯುತ್ತಿತ್ತು. 3 ದಶಕಗಳ ಹೋರಾಟದ ಫಲ ಭದ್ರಾ ಮೇಲ್ದಂಡೆ ಯೋಜನೆ ಘೋಷಣೆ ಎನ್ನಲಾಗ್ತಿದೆ. ಭದ್ರಾ ಮೇಲ್ದಂಡೆ ಯೋಜನೆ ಸಂಪೂರ್ಣ ಅನುಷ್ಟಾಮನ ಆದರೆ ಬರ ಪೀಡಿತ ಪ್ರದೇಶದ ಜನರ ಬಾಳು ಹಸನಾಗುವ ಸಂತಸದಲ್ಲಿ ಚಿತ್ರದುರ್ಗದ ಜನರಿದ್ದಾರೆ. ಮೋದಿ ಸರ್ಕಾರ ಕರ್ನಾಟಕಕ್ಕೆ ಘೋಷಣೆ ಮಾಡಿರುವ ಇದೊಂದೇ ಯೋಜನೆಯನ್ನು ಹಿಡಿದುಕೊಂಡು ಭಾರತೀಯ ಜನತಾ ಪಾರ್ಟಿ ಕೇಂದ್ರ ಸರ್ಕಾರವನ್ನು ಸಮರ್ಥನೆ ಮಾಡಿಕೊಳ್ತಿದೆ.

ಧಾರವಾಡದಿಂದಲೇ ರವಾನೆ ಆಗಿತ್ತು ಕಾಟನ್​ ಸೀರೆ..!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡನೆ ವೇಳೆ ಉಟ್ಟಿದ್ದ ಸೀರೆ ನಮ್ಮ ಕರ್ನಾಟಕದ ಧಾರವಾಡದ್ದು ಎನ್ನುವುದು ಹೆಮ್ಮೆಯ ಸಂಗತಿ. ಸಾಮಾನ್ಯ ಒಂದು ಸೀರೆಯಂತೆ ಉಟ್ಟು ಬಂದಿದ್ದ ಸೀರೆ ಸಾಮಾನ್ಯ ಜನರು ಧರಿಸುವಂತಹದ್ದು ಅಲ್ಲ. ಆ ಸೀತೆಯ ಮೇಲೆ ಕಸೂತಿ ಕೆಲಸ ಮಾಡಲಾಗಿತ್ತು. ಸಾಂಪ್ರದಾಯಿಕ ಕಸೂತಿ ಕಲೆಯ ಚಿತ್ರಗಳನ್ನು ಬಿಡಿಸಿದ್ದು ಧಾರವಾಡದ ನಾರಾಯಣಪುರದಲ್ಲಿರುವ ಆರತಿ ಕ್ರಾಫ್ಟ್​​ ಸಂಸ್ಥೆ. ನಿರ್ಮಲಾ ಸೀತಾರಾಮನ್​ ಅವರು ಧರಿಸಿದ್ದ ಸೀರೆಯ ಮೇಲೆ ಇದ್ದ ಕಸೂತಿ ಕಲೆ ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ. ಕೈಮಗ್ಗದಿಂದ ತಯಾರಿಸಿದ್ದ ಇಳಕಲ್​ ರೇಷ್ಮೆ ಸೀರೆಯ ಮೇಲೆ ಆರತಿ ಕ್ರಾಫ್ಟ್​ನ ಮಹಿಳ ಉದ್ಯೋಗಿಗಳು ತೇರು, ಗೋಪುರ, ನವಿಲು, ಕಮಲದ ಚಿತ್ರಗಳನ್ನು ಕಸೂತಿ ಹಾಕಿದ್ದರು. ಕೈಮಗ್ಗ ಉದ್ಯಮಕ್ಕೆ ಪ್ರೋತ್ಸಾಹಿಸುವ ಮತ್ತು ಸ್ವಯಂ ಉದ್ಯೋಗ ನಿರತ ಮಹಿಳೆಯರನ್ನು ಬೆನ್ನು ತಟ್ಟುವ ಉದ್ದೇಶದಿಂದ ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿಯವರಿಗೆ ಹೇಳಿ ಸೀರೆಯನ್ನು ತರಿಸಿಕೊಂಡಿದ್ದಾರೆ.

ಬರೀ ರಾಜ್ಯಸಭೆಗೆ ಗೆಲುವು, ಸೀರೆ ಕೊಂಡರೆ ಸಾಕೇ..?

ಕೇಂದ್ರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್​ ಅವರು ನಮ್ಮ ಕರ್ನಾಟಕದಿಂದ ಆಯ್ಕೆ ಆಗಿದ್ದಾರೆ ಎನ್ನುವುದು ಸಂತೋಷದ ವಿಚಾರವೇ ಸರಿ. ಇನ್ನು ಧಾರವಾಡದ ಕಸೂತಿ ಕಲೆಯ ಮೇಲೆ ಆಕರ್ಷಿತರಾಗಿ ಧಾರವಾಡದಿಂದ ಇಳಕಲ್​ ರೇಷ್ಮೆ ಸೀರೆಗೆ ಕಸೂತಿ ಮಾಡಿಸುಕೊಂದು ಉಡುತ್ತಾರೆ ಎನ್ನುವುದು ನಮ್ಮ ಕರ್ನಾಟಕದ ಹೆಮ್ಮೆಯ ಸಂಗತಿ. ಕನ್ನಡಿರಾಗಿ ನಾವು ನಿರ್ಮಲಾ ಸೀತಾರಾಮನ್​ ಬಗ್ಗೆ ಇಷ್ಟೊಂದು ಹೆಮ್ಮೆ ವ್ಯಕ್ತಪಡಿಸುವಾಗ ನಿರ್ಮಲಾ ಅವರಿಗೂ ಕನ್ನಡಿಗರ ಮೇಲೆ ಕಿಂಚಿತ್ತು ವಿಶ್ವಾಸ ಇರಬಾರದೇ..? ಎನ್ನುವುದು ಕನ್ನಡಿಗರ ಪ್ರಶ್ನೆ. ಭದ್ರಾ ಮೇಲ್ದಂಡೆ ಯೋಜನೆ ಒಂದನ್ನು ಬಿಟ್ಟರೆ ರಾಜ್ಯಕ್ಕೆ ಒಂದೇ ಒಂದು ಯೋಜನೆಯನ್ನೂ ಕೊಟ್ಟಿಲ್ಲ. ಬೆಂಗಳೂರಿಗೂ ಯಾವುದೇ ಯೋಜನೆ ಬಂದಿಲ್ಲ. ಅಂದರೆ ಕೇಂದ್ರ ಸರ್ಕಾರದ ಬಳಿ ಹಣ ಇಲ್ಲವೋ..? ಅಥವಾ ಬಜೆಟ್​ ಎಂದರೆ ಇದೇ ರೀತಿ ಇರಬೇಕು. ಯೋಜನೆಗಳನ್ನು ರಾಜ್ಯ ಸರ್ಕಾರವೇ ಮಾಡಬೇಕು ಅನ್ನೋ ಕಾರಣಕ್ಕೆ ಹೀಗೆ ಮಾಡಿದ್ದಾರೋ ಎನ್ನುವುದನ್ನ ಜನರೇ ನಿರ್ಧಾರ ಮಾಡಿಕೊಳ್ಳಬೇಕಿದೆ.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

Dr.RAJU : ಯಾವ ಹಣ್ಣು ಸೇವಿಸಿದ್ರೆ ಶುಗರ್‌ ಹೆಚ್ಚಾಗುತ್ತೆ..ಯಾವ ಹಣ್ಣು ತಿನ್ನಲೇಬಾರದು..? #PRATIDHAVNI
ಇದೀಗ

Dr.RAJU : ಯಾವ ಹಣ್ಣು ಸೇವಿಸಿದ್ರೆ ಶುಗರ್‌ ಹೆಚ್ಚಾಗುತ್ತೆ..ಯಾವ ಹಣ್ಣು ತಿನ್ನಲೇಬಾರದು..? #PRATIDHAVNI

by ಪ್ರತಿಧ್ವನಿ
March 25, 2023
ANTIBIOTIC | ಆಂಟಿಬಯಾಟಿಕ್ ಟ್ಯಾಬ್ಲೆಟ್ ಅರೋಗ್ಯಕೆ ಒಳ್ಳೆಯದಲ್ಲ #PRATIDHVANI
ಇದೀಗ

ANTIBIOTIC | ಆಂಟಿಬಯಾಟಿಕ್ ಟ್ಯಾಬ್ಲೆಟ್ ಅರೋಗ್ಯಕೆ ಒಳ್ಳೆಯದಲ್ಲ #PRATIDHVANI

by ಪ್ರತಿಧ್ವನಿ
March 23, 2023
₹7.20 ಲಕ್ಷ ಮೌಲ್ಯದ 14 ಬೈಕ್‌ಗಳು ವಶಪಡಿಸಿಕೊಂಡ ಬೀದರ್‌ ಪೊಲೀಸರು : Bidar police seized 14 bikes worth ₹7.20 lakh
Top Story

₹7.20 ಲಕ್ಷ ಮೌಲ್ಯದ 14 ಬೈಕ್‌ಗಳು ವಶಪಡಿಸಿಕೊಂಡ ಬೀದರ್‌ ಪೊಲೀಸರು : Bidar police seized 14 bikes worth ₹7.20 lakh

by ಪ್ರತಿಧ್ವನಿ
March 20, 2023
Siddaramaiah | ಬಿಜೆಪಿಯಲ್ಲಿ ಎಲ್ರು ಭ್ರಷ್ಟರೇ..ಇವ್ರ ಮುಖ ಜನ್ರಿಗೆ ತೋರಿಸಲು ಇವ್ರಿಗೆ ಆಗ್ತಿಲ್ಲ..!
ಇದೀಗ

Siddaramaiah | ಬಿಜೆಪಿಯಲ್ಲಿ ಎಲ್ರು ಭ್ರಷ್ಟರೇ..ಇವ್ರ ಮುಖ ಜನ್ರಿಗೆ ತೋರಿಸಲು ಇವ್ರಿಗೆ ಆಗ್ತಿಲ್ಲ..!

by ಪ್ರತಿಧ್ವನಿ
March 21, 2023
ಕಾಂಗ್ರೆಸ್​ ಸೇರಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡರಿಗೆ ಮುಳ್ಳಾಗುತ್ತಾ ಆಡಿಯೋ..!? : Araseikere MLA Shivlinge Gowda
Top Story

ಕಾಂಗ್ರೆಸ್​ ಸೇರಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡರಿಗೆ ಮುಳ್ಳಾಗುತ್ತಾ ಆಡಿಯೋ..!? : Araseikere MLA Shivlinge Gowda

by ಕೃಷ್ಣ ಮಣಿ
March 21, 2023
Next Post
ಡಿಕೆಶಿ ವಿರುದ್ಧ ಸೋನಿಯಾ ಗಾಂಧಿಗೆ ಸಿದ್ದರಾಮಯ್ಯ ಹೆಸರಿನಲ್ಲಿ ನಕಲಿ ಪತ್ರ.!

ಡಿಕೆಶಿ ವಿರುದ್ಧ ಸೋನಿಯಾ ಗಾಂಧಿಗೆ ಸಿದ್ದರಾಮಯ್ಯ ಹೆಸರಿನಲ್ಲಿ ನಕಲಿ ಪತ್ರ.!

T67 ಶೀರ್ಷಿಕೆ ಘೋಷಣೆಗೆ ಸಿದ್ಧತೆ: ಟ್ವಿಟರ್‌ನಲ್ಲಿ ಟ್ರೆಂಡ್‌ ಆಯ್ತು ʼEAGLEʼ.!

T67 ಶೀರ್ಷಿಕೆ ಘೋಷಣೆಗೆ ಸಿದ್ಧತೆ: ಟ್ವಿಟರ್‌ನಲ್ಲಿ ಟ್ರೆಂಡ್‌ ಆಯ್ತು ʼEAGLEʼ.!

ನನಗೆ ಸಿದ್ದರಾಮಯ್ಯ ಅವರೇ ಎದುರಾಳಿ ಆಗ್ಬೇಕಿತ್ತು.. ರಾಜಕೀಯ ಅಖಾಡಕ್ಕೆ ಆಹ್ವಾನ..!

ನನಗೆ ಸಿದ್ದರಾಮಯ್ಯ ಅವರೇ ಎದುರಾಳಿ ಆಗ್ಬೇಕಿತ್ತು.. ರಾಜಕೀಯ ಅಖಾಡಕ್ಕೆ ಆಹ್ವಾನ..!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist