ರಾಜ್ಯ ಕಾಂಗ್ರೆಸ್ನಲ್ಲಿ ಚುನಾವಣೆಗೆ 3 ತಿಂಗಳು ಇರುವಾಗಲೇ ಸಿಎಂ ಕೂಗು ಮತ್ತೆ ಜೋರಾಗಿದೆ.
ಈ ಬಾರಿಯು ಮತ್ತೆ ಸಿಎಂ ಕೂಗು ಎಬ್ಬಿಸಿದ ಸಿದ್ದರಾಮಯ್ಯ ಟೀಂ ಮತ್ತೆ ಆಟ ಶುರು ಮಾಡಿದೆ. ಚುನಾವಣಾ ಹೊಸ್ತಿಲಲ್ಲೇ ಮತ್ತೆ ಕಾಂಗ್ರೆಸ್ನಲ್ಲಿ ಸಿಎಂ ಕದನ ಜೋರಾಗುವ ಲಕ್ಷಣ ಕಾಣಿಸುತ್ತಿದೆ
ಅಂದು ಜಮೀರ್ ಅಹಮ್ಮದ್ ಇಂದು ರಮೇಶ್ ಕುಮಾರ್, ಬಾಹ್ಯ ಯುದ್ಧಕ್ಕಿಂತ ಕಾಂಗ್ರೆಸ್ನಲ್ಲಿ ದಾಯಾದಿ ಕಲಹದ ಅಂತರ್ ಯುದ್ಧವೇ ಜೋರಾಗುತ್ತಾ ಎಂಬ ಅನುಮಾನ ಮೂಡುವಂತಿದೆ. ಈ ಬಾರಿಯು ಮತ್ತೆ ಸಿಎಂ ಕೂಗು ಎಬ್ಬಿಸಿದ ಸಿದ್ದರಾಮಯ್ಯ ಟೀಂ ರಾಜಕೀಯ ದಾಳ ಉರುಳಿಸಿದಂತೆ ಕಾಣುತ್ತಿದೆ.
ಅಂದು ಜಮೀರ್ ಅಹಮ್ಮದ್ ಸಿದ್ದರಾಮಯ್ಯ ಪರವಾಗಿ ಸಿಎಂ ದಾಳ ಉರುಳಿಸಿದ್ದರು. ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಯಾರು ಹೇಳಿದರು ಕೇಳದೆ ಕೊನೆಗೆ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ ಸಿಎಂ ಗಲಾಟೆಗೆ ಬ್ರೇಕ್ ಹಾಕಿತ್ತು. ಎಲ್ಲವೂ ತಣ್ಣಗಾಯ್ತು ಎನ್ನುವಾಗಲೇ ಈಗ ರಮೇಶ್ ಕುಮಾರ್ ಅಖಾಡಕ್ಕೆ ಇಳಿದಿದ್ದಾರೆ. ಬಾಹ್ಯ ಯುದ್ಧಕ್ಕಿಂತ ಕಾಂಗ್ರೆಸ್ನಲ್ಲಿ ದಾಯಾದಿ ಕಲಹದ ಅಂತರ್ ಯುದ್ಧವೇ ಜೋರಾಗುವ ಲಕ್ಷಣಗಳು ಕಾಣುತ್ತಿವೆ. ಒಟ್ಟಾರೆ ಕೈ ಪಾಳಯದಲ್ಲಿ ಟಿಕೆಟ್ ಘೋಷಣೆಗೆ ಮೊದಲೇ ಸಿಎಂ ಕುರ್ಚಿ ಕದನ ಇನ್ನೊಂದು ಸುತ್ತು ಜೋರಾಗುವ ಲಕ್ಷಣಗಳು ಜೋರಾಗಿದೆ