ಇಡೀ ರಾಜ್ಯ ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ 2023ರ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಈಗಾಗಲೇ ರಾಜ್ಯಾದ್ಯಂತ ಮತಎಣಿಕೆ ಆರಂಭಗೊಂಡಿದ್ದು, ಹಲವೆಡೆ ಕಾಂಗ್ರೆಸ್ ಬಹುತೇಕ ಮುನ್ನಡೆ ಸಾಧಿಸಿದೆ. ಈ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಅಭ್ಯರ್ಥಿಗಳು ಧೃತಿಗೆಡಬಾರದು. ರಾಜ್ಯದ ಜನತೆಯ ತೀರ್ಪನ್ನ ಗೌರವದಿಂದ ಸ್ವೀಕರಿಸುತ್ತೇವೆ ಅಂತ ಹೇಳಿಕೆ ನೀಡಿದ್ರು. ಬಳಿಕ ಮಾತ್ನಾಡಿದ ಬಿಎಸ್ವೈ, ಕಾಂಗ್ರೆಸ್ ಪಕ್ಷ ನೀಡಿರುವ ಭರವಸೆಗಳನ್ನ ಈಡೇರಿಸಬೇಕು ಅಂತ ಮಾಜಿ ಸಿಎಂ ಯಡಿಯೂರಪ್ಪ ಒತ್ತಾಯಿಸಿದರು.
ಜನಿವಾರ ಜಟಾಪಟಿ.. ಸರ್ಕಾರದಿಂದ ಸಸ್ಪೆಂಡ್.. ಕಾಲೇಜಿನಿಂದ ವಜಾ
ಜನಿವಾರ ಧರಿಸಿದ ಕಾರಣಕ್ಕೆ ಕೆ-ಸಿಇಟಿ ಪರೀಕ್ಷೆಯಿಂದ ಬೀದರ್ನ ವಿದ್ಯಾರ್ಥಿ ವಂಚಿತ ಆಗಿದ್ದ ಪ್ರಕರಣದಲ್ಲಿ ಇಬ್ಬರನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶಿಸಿದೆ. ಆದರೆ ಕಾಲೇಜು ಟ್ರಸ್ಟ್ ಬೀದರ್ನ ಸಾಯಿ...
Read moreDetails