• Home
  • About Us
  • ಕರ್ನಾಟಕ
Saturday, June 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಇದೀಗ

ಕರ್ನಾಟಕ, ಕೇರಳ ಗಡಿಯುದ್ದಕ್ಕೂ ನಡೆಯುತ್ತಿದೆ ತ್ಯಾಜ್ಯ ದಂಧೆ

ಪ್ರತಿಧ್ವನಿ by ಪ್ರತಿಧ್ವನಿ
August 20, 2023
in ಇದೀಗ, ಕರ್ನಾಟಕ
0
ತ್ಯಾಜ್ಯ ದಂಧೆ

ತ್ಯಾಜ್ಯ ದಂಧೆ ಬಗ್ಗೆ ಪರಿಶೀಲನೆ ನಡೆಸುತ್ತಿರುವುದು

Share on WhatsAppShare on FacebookShare on Telegram

ಹಣದ ಆಸೆಗಾಗಿ ಕೆಲವು ಜನ ಯಾವ ಲೆವೆಲ್ಗೂ ಇಳಿತಾರೆ ಅನ್ನೋದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೊಂದು ಉದಾಹರಣೆ ದೊರೆತಿದ್ದು ಮಂಗಳೂರು ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಗ್ರಾಮದ ಕುದ್ದುಪದವು ಎನ್ನುವಲ್ಲಿ ವ್ಯಕ್ತಿಯೋರ್ವ ಕೇರಳ ರಾಜ್ಯದ ಆಸ್ಪತ್ರೆಗಳ ದ್ರವ ತ್ಯಾಜ್ಯವನ್ನು ಕರ್ನಾಟಕದ ಪ್ರದೇಶಗಳಲ್ಲಿ ಸುರಿಯುವ ಮೂಲಕ ಹಣ ಪಡೆದು ತ್ಯಾಜ್ಯ ದಂಧೆ ನಡೆಸುತ್ತಿದ್ದಾನೆ.

ADVERTISEMENT

ಈತನ ಈ ಕೃತ್ಯದಿಂದಾಗಿ ಊರಿಗೆ ಊರೇ ದುರ್ನಾತ ಬೀರುತ್ತಿದೆ. ಈ ಸಂಬಂಧ ಸ್ಥಳೀಯ ಗ್ರಾಮಪಂಚಾಯತ್ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಈ ಪ್ರದೇಶಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಮೂಲಗಳ ಪರಿಶೀಲನೆಯನ್ನು ನಡೆಸಿದ್ದು, ಕೆಲವು ಬಾವಿಗಳಲ್ಲಿ ಈ ತ್ಯಾಜ್ಯದ ಅಂಶಗಳು ಪತ್ತೆಯಾಗಿವೆ.

ತ್ಯಾಜ್ಯ ದಂಧೆ
ತ್ಯಾಜ್ಯ ದಂಧೆ ಪರಿಶೀಲನೆ

ಬಂಟ್ವಾಳ ತಾಲೂಕಿನ ಕುದ್ದುಪದವು ನಿವಾಸಿ ಗೋಪಾಲ ಪಾಟಾಳಿ ಎನ್ನುವ ವ್ಯಕ್ತಿಯ ವಿರುದ್ಧ ಗ್ರಾಮಸ್ಥರು ತ್ಯಾಜ್ಯ ದಂಧೆ ಆರೋಪವನ್ನು ಹೊರಿಸಿದ್ದು, ದ್ರವ ತ್ಯಾಜ್ಯಗಳನ್ನು ತರುವ ಟ್ಯಾಂಕರ್ ಅನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೋಲೀಸರಿಗೂ ಒಪ್ಪಿಸಿದ್ದಾರೆ. ಆದರೆ ಈ ಕೃತ್ಯವನ್ನು ಮುಂದುವರಿಸಿರುವ ಗೋಪಾಲ ಪಾಟಾಳಿ ಇದೀಗ ದ್ರವ ತ್ಯಾಜ್ಯವನ್ನು ತನ್ನ ತೋಟಗಳಿಗೆ ಬಿಡುವ ಜೊತೆಗೆ ಪಕ್ಕದಲ್ಲೇ ಹರಿಯುವ ಸಣ್ಣ ತೋಡಿಗೂ ಬಿಡಲಾರಂಭಿಸಿದ್ದಾರೆ ಅನ್ನೋದು ಗ್ರಾಮಸ್ಥರ ಆರೋಪವಾಗಿದೆ.

ಕೇರಳದಲ್ಲಿ ತ್ಯಾಜ್ಯಗಳನ್ನು ಸಾರ್ವಜನಿಕವಾಗಿ ಎಸೆಯಲು ನಿಷೇಧ ಹೇರಿರುವ ಕಾರಣ ಅಲ್ಲಿನ ತ್ಯಾಜ್ಯಗಳನ್ನು ಕರ್ನಾಟಕದ ಪ್ರದೇಶಗಳಲ್ಲಿ ಡಂಪ್ ಮಾಡುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಗಡಿ ಭಾಗದಲ್ಲಿ ಕೇರಳದಿಂದ ತರುವ ಕೋಳಿ ತ್ಯಾಜ್ಯ, ಆಸ್ಪತ್ರೆಯ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯೋದು ಸಾಮಾನ್ಯವಾಗಿದ್ದು, ಈ ಸಂಬಂಧ ಹಲವು ಕಡೆಗಳಲ್ಲಿ ಗ್ರಾಮಸ್ಥರು ಈ ಪ್ರಕ್ರಿಯೆಗಳನ್ನು ತಡೆದು ಪ್ರತಿಭಟಿಸಿದ ಘಟನೆಗಳೂ ನಡೆದಿವೆ.

ತ್ಯಾಜ್ಯ ದಂಧೆ
ತ್ಯಾಜ್ಯ ದಂಧೆ ಪರಿಶೀಲನೆ

ತ್ಯಾಜ್ಯ ದಂಧೆ ಮೂಲಕ ಕುದ್ದುಪದವಿನಲ್ಲಿ ಶೌಚಾಲಯದ ತ್ಯಾಜ್ಯ ಸುರಿಯುವ ವ್ಯಕ್ತಿ ಒಂದು ಟ್ಯಾಂಕರ್ ಗೆ ಹತ್ತು ಸಾವಿರ ರೂಪಾಯಿ ಪಡೆಸುಕೊಳ್ಳುತ್ತಿದ್ದಾರೆ ಎನ್ನುವ ಆರೋಪವೂ ಇದೆ. ರಾಸಾಯನಿಕ ಮಿಶ್ರಿತ ಈ ತ್ಯಾಜ್ಯದ ಸಂಪರ್ಕದಿಂದಾಗಿ ಗ್ರಾಮಸ್ಥರಲ್ಲಿ ದೇಹದಲ್ಲಿ ತುರಿಕೆಯಂತಹ ಲಕ್ಷಣಗಳೂ ಕಂಡು ಬಂದಿದೆ.

ಈ ಸುದ್ದಿ ಓದಿದ್ದೀರಾ? ವಿಧಾನ ಪರಿಷತ್ ಸದಸ್ಯರಾಗಿ ಮೂವರ ನಾಮನಿರ್ದೇಶನ; ಅಂಕಿತ ಹಾಕಿದ ರಾಜ್ಯಪಾಲರು

ಈ ಸಂಬಂಧ ಗ್ರಾಮಸ್ಥರು ಸ್ಥಳೀಯ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿಯನ್ನೂ ನೀಡಿದ್ದು, ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳೂ ದ್ರವತ್ಯಾಜ್ಯ ಎಸೆದ ಸ್ಥಳದ ಪರಿಶೀಲನೆಯನ್ನೂ ನಡೆಸಿದ್ದಾರೆ. ಅಲ್ಲದೆ ತ್ಯಾಜ್ಯ ಸುರಿಯುವವರ ವಿರುದ್ಧ ಪೋಲೀಸ್ ದೂರನ್ನೂ ನೀಡಿದ್ದಾರೆ.

ರಾಸಾಯನಿಕಯುಕ್ತ ತ್ಯಾಜ್ಯದ ನೀರು ಗ್ರಾಮದ ಹಲವು ಬಾವಿಗಳಿಗೂ ಸೇರಿರುವ ಸಂಶಯ ವ್ಯಕ್ತವಾಗಿದ್ದು, ಹಲವು ಬಾವಿಗಳ ನೀರಿನ ಪರೀಕ್ಷೆಯನ್ನೂ ನಡೆಸಲಾಗಿದೆ. ಪರೀಕ್ಷೆಯಲ್ಲಿ ಕೆಲವು ಬಾವಿಗಳ ನೀರು ಕುಡಿಯಲು ಯೋಗ್ಯವಲ್ಲ ಎನ್ನುವ ವರದಿಗಳೂ ಬಂದಿದ್ದು, ಜನ ಕುಡಿಯುವ ನೀರಿಗಾಗಿಯೂ ಪರದಾಟ ನಡೆಸಬೇಕಾದ ಸ್ಥಿತಿ ಬಂದೊದಗಿದೆ. ತ್ಯಾಜ್ಯ ಸುರಿಯುವ ಟ್ಯಾಂಕರ್ ಅನ್ನು ಒಂದು ಬಾರಿ ಹಿಡಿದು ಪೋಲೀಸರಿಗೆ ಒಪ್ಪಿಸಿದ್ದರೂ, ಕರ್ನಾಟಕದ ನೊಂದಾಯಿತ ಟ್ಯಾಂಕರ್ ಗಳಲ್ಲಿ ತ್ಯಾಜ್ಯ ನೀರನ್ನು ಸುರಿಯುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದರೂ, ಪೋಲೀಸ್ ಇಲಾಖೆ ಮತ್ತು ಸ್ಥಳೀಯ ಪಂಚಾಯತ್ ತ್ಯಾಜ್ಯ ದಂಧೆ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿಲ್ಲ ಅನ್ನೋ ಆರೋಪವೂ ಗ್ರಾಮಸ್ಥರದ್ದಾಗಿದೆ.

Tags: KarnatakaKeralaMangaloreWaste Traffickingಕರ್ನಾಟಕಕೇರಳತ್ಯಾಜ್ಯ ದಂಧೆ
Previous Post

ರಾಜೀವ್‌ ಗಾಂಧಿ ದೇಶದ ಸಮಗ್ರತೆಗೆ ದುಡಿದರು: ಸಿಎಂ ಸಿದ್ದರಾಮಯ್ಯ

Next Post

ಪ್ರಾಣಿಗಳಿಗೆ ವಿಷವಿಕ್ಕಿಲ್ಲ: ದೈವದೆದುರು ಆಣೆಗೂ ಸಿದ್ದ ಎಂದ ಖಾದರ್

Related Posts

Top Story

Santhosh Lad: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿದ ಸಂತೋಷ ಲಾಡ್..

by ಪ್ರತಿಧ್ವನಿ
June 13, 2025
0

ಅತಿವೃಷ್ಟಿಯಿಂದ ಹಾನಿಗೊಳಗಾದ ಕುಂದಗೋಳ ತಾಲೂಕಿನ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ, ಪರಿಶೀಲನೆ, ಜಿಲ್ಲೆಯ 130 ಮನೆಗಳಿಗೆ ಭಾಗಶಃ ಹಾನಿ, ಜಿಲ್ಲಾಡಳಿತದಿಂದ ತ್ವರಿತ ಪರಿಹಾರ...

Read moreDetails

M B Patil: ಎರಡು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ

June 13, 2025

16ನೇ ಹಣಕಾಸು ಆಯೋಗಕ್ಕೆ ಸಲ್ಲಿಸಿದ ರಾಜ್ಯದ ಶಿಫಾರಸ್ಸುಗಳ ಕುರಿತು ಮುಖ್ಯಮಂತ್ರಿಗಳು ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

June 13, 2025

ಮಳೆ ಹಾನಿ ಪ್ರದೇಶಗಳಿಗೆ ಸಚಿವ ಸಂತೋಷ್‌ ಲಾಡ್‌ ಭೇಟಿ..

June 13, 2025

ಬಹು ನಿರೀಕ್ಷಿತ “45” ಚಿತ್ರದ ಹಾಡಿಗೆ ಉಗಾಂಡದಿಂದ ಬಂದ ನೃತ್ಯಗಾರರು..

June 13, 2025
Next Post
ಖಾದರ್

ಪ್ರಾಣಿಗಳಿಗೆ ವಿಷವಿಕ್ಕಿಲ್ಲ: ದೈವದೆದುರು ಆಣೆಗೂ ಸಿದ್ದ ಎಂದ ಖಾದರ್

Please login to join discussion

Recent News

ಆಧುನಿಕ ನಾಗರಿಕತೆಯ ಕರಾಳ ಚಹರೆಯ ಅನಾವರಣ
Top Story

ಆಧುನಿಕ ನಾಗರಿಕತೆಯ ಕರಾಳ ಚಹರೆಯ ಅನಾವರಣ

by ನಾ ದಿವಾಕರ
June 14, 2025
Top Story

Santhosh Lad: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿದ ಸಂತೋಷ ಲಾಡ್..

by ಪ್ರತಿಧ್ವನಿ
June 13, 2025
Top Story

M B Patil: ಎರಡು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ

by ಪ್ರತಿಧ್ವನಿ
June 13, 2025
Top Story

16ನೇ ಹಣಕಾಸು ಆಯೋಗಕ್ಕೆ ಸಲ್ಲಿಸಿದ ರಾಜ್ಯದ ಶಿಫಾರಸ್ಸುಗಳ ಕುರಿತು ಮುಖ್ಯಮಂತ್ರಿಗಳು ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

by ಪ್ರತಿಧ್ವನಿ
June 13, 2025
Top Story

ಮಳೆ ಹಾನಿ ಪ್ರದೇಶಗಳಿಗೆ ಸಚಿವ ಸಂತೋಷ್‌ ಲಾಡ್‌ ಭೇಟಿ..

by ಪ್ರತಿಧ್ವನಿ
June 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಆಧುನಿಕ ನಾಗರಿಕತೆಯ ಕರಾಳ ಚಹರೆಯ ಅನಾವರಣ

ಆಧುನಿಕ ನಾಗರಿಕತೆಯ ಕರಾಳ ಚಹರೆಯ ಅನಾವರಣ

June 14, 2025

Santhosh Lad: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿದ ಸಂತೋಷ ಲಾಡ್..

June 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada