• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಲಾಕ್ ಡೌನ್ ಸಮಯದಲ್ಲಿ ನಿರ್ಗತಿಕ ಕುಟುಂಬಗಳ ಒಕ್ಕಲೆಬ್ಬಿಸಲು ನೋಟೀಸ್ ನೀಡಿದ ವೀರಾಜಪೇಟೆ ತಹಶೀಲ್ದಾರ್..!

Any Mind by Any Mind
May 7, 2021
in ಕರ್ನಾಟಕ
0
ಲಾಕ್ ಡೌನ್ ಸಮಯದಲ್ಲಿ ನಿರ್ಗತಿಕ ಕುಟುಂಬಗಳ ಒಕ್ಕಲೆಬ್ಬಿಸಲು ನೋಟೀಸ್ ನೀಡಿದ ವೀರಾಜಪೇಟೆ ತಹಶೀಲ್ದಾರ್..!
Share on WhatsAppShare on FacebookShare on Telegram

ADVERTISEMENT

ಇಡೀ ದೇಶದಲ್ಲಿ ಕೋವಿಡ್ ಸೋಂಕು ದಿನೇ ದಿನೇ ಹರಡುತ್ತಿದೆ. ಜೊತೆಗೆ ನಿತ್ಯವೂ ಸಾವಿನ ಸಂಖ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗುತ್ತಿವೆ.  ರಾಜ್ಯ ಕರೋನಾ ಸೋಂಕಿನ ನಿಯಂತ್ರಣಕ್ಕೆ ಕಟ್ಟುನಿಟ್ಟಿನ  ನಿಯಮ ಜಾರಿ ಮಾಡಿದೆ ಹಾಗು ಸರ್ಕಾರ   ರಾಜ್ಯದಲ್ಲಿ ಕರ್ಫ್ಯೂ ಜಾರಿ ಮಾಡಿ  ಬಿಗಿ   ಕ್ರಮ ಕೈಗೊಂಡಿದೆ. ಯಾರೂ ಕೂಡ ರಸ್ತೆಗೆ ಇಳಿಯದಂತೆ ನೋಡಿಕೊಳ್ಳಬೇಕು ಎಂದು ಇಡೀ ಆಡಳಿತ ವರ್ಗಕ್ಕೆ ಸೂಚನೆ ನೀಡಿದೆ. ಆದರೆ ಕೊಡಗು ಜಿಲ್ಲೆಯ ಅಧಿಕಾರಿಗಳಿಗೆ ಅದೇನಾಗಿದೆಯೋ ಗೊತ್ತಿಲ್ಲ. ವಿರಾಜಪೇಟೆ ತಾಲ್ಲೂಕಿನ ಬಾಳುಗೋಡು ಗ್ರಾಮದ ಸರ್ಕಾರಿ ಪೈಸಾರಿ ಜಾಗದಲ್ಲಿರುವ 21 ಕುಟುಂಬಗಳನ್ನು ಅವರಿರುವ ಶೆಡ್ಗಳಿಂದ ಆಚೆಗೆ ದಬ್ಬಲು ಸಿದ್ಧವಾಗಿದೆ.

 ಬಾಳುಗೋಡಿನ ಸರ್ಕಾರಿ ಜಾಗದಲ್ಲಿ ನಿರ್ಗತಿಕ 21 ಕುಟುಂಬಗಳು ಕಳೆದ ಎರಡು ವರ್ಷಗಳಿಂದ ಶೆಡ್ ಹಾಕಿಕೊಂಡು ಬದುಕು ನಡೆಸುತ್ತಿದ್ದವು. ಆದರೆ ಆ ಜಾಗವನ್ನು ಅಭಿವೃದ್ಧಿಗೊಳಿಸಬೇಕೆಂಬ ನೆಪವೊಡ್ಡಿ ಅಲ್ಲಿನ ತಾಲ್ಲೂಕು ಆಡಳಿತ 21 ಕುಟುಂಬಗಳಿಗೆ ನೋಟಿಸ್ ಜಾರಿ ಮಾಡಿ ಜಾಗ ತೆರವಿಗೆ ಆದೇಶಿಸಿದೆ. ಅಷ್ಟೇ ಅಲ್ಲ ನೋಟಿಸ್ ತಲುಪಿದ 7 ದಿನಗಳ ಒಳಗಾಗಿ ಶೆಡ್ಗಳನ್ನು ತೆರವು ಮಾಡಿ ಜಾಗ ಖಾಲಿ ಮಾಡದಿದ್ದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ. ಕಾಫಿ ತೋಟದ ಮಾಲೀಕರ ಮನೆಗಳಲ್ಲಿ ಜೀತ ಮಾಡಿಕೊಂಡು ಬದುಕುತ್ತಿದ್ದ ಕುಟುಂಬಗಳು ಸ್ವಂತ ಸೂರು ಹೊಂದಬೇಕೆಂದು ಶೆಡ್ ನಿರ್ಮಿಸಿಕೊಂಡಿದ್ದ ಕನಸು ಭಗ್ನವಾಗಿದೆ. ಆದರೆ ಈ ಲಾಕ್ ಡೌನ್ ಸಮಯದಲ್ಲಿ ಶೆಡ್ ಖಾಲಿ ಮಾಡಿ ಎಲ್ಲಿಗೆ ಹೋಗಬೇಕೆಂದು ಈ 21 ಕುಟುಂಬಗಳು ದಿಕ್ಕು ತೋಚದೆ ಕಂಗಾಲಾಗಿವೆ.

ಮತ್ತೊಂದೆಡೆ  ಬಾಳುಗೋಡು ಆರ್ಜಿ ಗ್ರಾಮ ಪಂಚಾಯಿತಿಯ ಪಿಡಿಓ ಕೂಡ ನೋಟಿಸ್ ಗಳನ್ನು ಜಾರಿ ಮಾಡಿದ ಮರುದಿನವೇ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಐವತ್ತಕ್ಕೂ ಹೆಚ್ಚು ಜನರನ್ನು ಸೇರಿಸಿ ಸಭೆ ಮಾಡಿದ್ದಾರೆ. ನೀವು ಜಾಗ ಖಾಲಿ ಮಾಡಬೇಕು. ಎಲ್ಲಾ ಗ್ರಾಮ ಪಂಚಾಯಿತಿಗಳ ಹಾಗೆ ನಮ್ಮ ಪಂಚಾಯಿತಿಯನ್ನು ಸ್ವಚ್ಛವಾಗಿ ಇಡಬೇಕಾದರೆ ನಾವು ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಈ ಜಾಗ ಬೇಕು ಎಂದು ಸೂಚನೆ ನೀಡಿದ್ದಾರೆ.

ಈ ಕುರಿತು ವಿರಾಜಪೇಟೆ ತಹಸೀಲ್ದಾರ್ ಯೋಗಾನಂದ್ ಅವರು ನಿವೇಶನ ರಹಿತರಿಗಾಗಿಯೇ ಈ ಸ್ಥಳದಲ್ಲಿ ಬಡಾವಣೆ ಮಾಡಲು ತಯಾರಿದ್ದೇವೆ. ಅವರು ಈ ಜಾಗ ತೆರವು ಮಾಡಿಕೊಟ್ಟಲ್ಲಿ ಮಾತ್ರವೇ ಬಡಾವಣೆ ಅಭಿವೃದ್ಧಿ ಪಡಿಸಲು ಸಾಧ್ಯ ಎಂದಿದ್ದಾರೆ. ಅಷ್ಟಕ್ಕೂ ಲಾಕ್ ಡೌನ್ ಗೂ ಮೊದಲೇ ನಾವು ನೊಟೀಸ್ ನೀಡಿದ್ದೆವು. ಆದರೆ ಈಗ ಲಾಕ್ಡೌನ್ ಇರುವುದರಿಂದ ನಾವು ಸದ್ಯ ತೆರವು ಮಾಡಲು ಹೋಗುವುದಿಲ್ಲ. ಆ ನಂತರವಾದರೂ ಅವರು ಜಾಗ ತೆರವು ಮಾಡಿಕೊಟ್ಟಲ್ಲಿ ಬಡಾವಣೆ ಅಭಿವೃದ್ಧಿ ಮಾಡಿ ನಿರಾಶ್ರಿತರಿಗೆ ನಿವೇಶನ ಹಂಚುತ್ತೇವೆ ಎಂದಿದ್ದಾರೆ. ಆದರೆ ಅಲ್ಲಿರುವ ನಿರಾಶ್ರಿತರು ಮಾತ್ರ ಯಾವುದೇ ಕಾರಣಕ್ಕೂ ನಾವು ಇಲ್ಲಿಂದ ಜಾಗ ಖಾಲಿ ಮಾಡುವುದಿಲ್ಲ. ಒಂದು ವೇಳೆ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ತೆರವು ಮಾಡಿಸಲು ಮುಂದಾದಲ್ಲಿ ಅವರೇ ನಮ್ಮನ್ನು ಮತ್ತೆ ಜೀತಕ್ಕೆ ಕಳುಹಿಸಲಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೊಡಗಿನಲ್ಲಿ ಶ್ರೀಮಂತ ಕಾಫಿ ಬೆಳೆಗಾರರು ನೂರಾರು ಎಕರೆ ಪೈಸಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ತೋಟ ಮಾಡಿಕೊಂಡಿದ್ದಾರೆ. ಅವರನ್ನು ತೆರವುಗೊಳಿಸಿ  ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿಕೊಡಲು ರಾಜ್ಯ ಸರ್ಕಾರ ಮುಂದಾಗಬೇಕಿದೆ.

ಕೊಡಗು ಜಿಲ್ಲೆಯ  ಪರಿಶಿಷ್ಟ ಪಂಗಡಕ್ಕೆ ಸೇರಿದ ಆದಿವಾಸಿಗಳದ್ದು ಈಗಲೂ ಕೂಡ ಕಷ್ಟಕರವಾದ ಬದುಕು. ಅರಣ್ಯದೊಳಗೇ ಹುಟ್ಟಿ ಬೆಳೆದ ಈ ಕುಟುಂಬಗಳು  ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಅನೇಕ ಕಡೆಗಳಲ್ಲಿ ಅರಣ್ಯ ಅಧಿಕಾರಿಗಳೇ ಅರಣ್ಯದಿಂದ ಒಕ್ಕಲೆಬ್ಬಿಸಿ ಹೊರಗೆ ಕಳಿಸಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯನ್ವಯ ಅರಣ್ಯದೊಳಗೇ ಅವರಿಗೆ ಭೂಮಿ ನೀಡಿ  ನೆಲೆ ಕಲ್ಪಿಸಬೇಕಿತ್ತು. ಆದರೆ  ಎಲ್ಲಾ ಗಿರಿಜನರಿಗೆ ಅವರು ಅರ್ಹರಿದ್ದರೂ ಆ ಸೌಲಭ್ಯ ಸಿಗಲಿಲ್ಲ. ರಾಜ್ಯ ಸರ್ಕಾರ   ಗಿರಿಜನರಿಗೆ ನೀಡುವ ಸೌಲಭ್ಯಗಳೆಲ್ಲ    ಅಧಿಕಾರಿಗಳ ಮೂಲಕವೇ ತಲುಪಬೇಕಿದೆ.  ಆದರೆ ಅವರು  ತಮ್ಮ ಪಾಲಿನ ಕಮಿಷನ್ ಇಲ್ಲದೆ  ಸೌಲಭ್ಯ ಒದಗಿಸುವುದಿಲ್ಲ. ಕೊಡಗಿನ ಗಿರಿಜನ ಹಾಡಿಗಳು ಬಹುತೇಕ ವೀರಾಜಪೇಟೆ ತಾಲ್ಲೂಕಿನಲ್ಲಿಯೇ ಇದ್ದು  ನಾಲ್ಕು ವರ್ಷಗಳ ಹಿಂದೆ ಒಂದು ಸೂರಿಗಾಗಿ  ಆದಿವಾಸಿಗಳು ನಡೆಸಿದ ಹೋರಾಟ ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಯೇ ಆಗಿತ್ತು.  ಇದಾದ ನಂತರ ಸರ್ಕಾರ ಅವರಿಗೆ ಬಸವನಳ್ಳಿ , ಮದಲಾಪುರದಲ್ಲಿ ಸುಮಾರು 1000 ಮನೆಗಳನ್ನು ಕಟ್ಟಿಸಿಕೊಟ್ಟು ಪುನರ್ವಸತಿ ಕಲ್ಪಿಸಿಕೊಟ್ಟಿದೆ. ಆದರೆ ಇವರಿಗೆ ನೀಡಿರುವ ಅಂಗೈ ಅಗಲದ ಮನೆಗಳು ಕೇವಲ  600 ಚದರ ಅಡಿಗಳಷ್ಟು ಮಾತ್ರಾ ವಿಸ್ತೀರ್ಣವಿದ್ದು ಇದರಲ್ಲಿ ಇವರು ತಮ್ಮ ಸಾಂಪ್ರದಾಯಿಕ ಕಸಬುಗಳಾದ ಕೋಳಿ, ಕುರಿ , ಹಂದಿ ಸಾಕಾಣಿಕೆ ಮಾಡಲು ಸಾಧ್ಯವೇ ಇಲ್ಲ.  ಒಟ್ಟಿನಲ್ಲಿ ಈ ಆದಿವಾಸಿಗಳದ್ದು  ಕಷ್ಟಕರ ಬದುಕು. ಯಾವ ಸರ್ಕಾರವೇ ಅರಿಸಿ ಬರಲಿ ಇವರು ಮಾತ್ರ ಹಾಗೇ ಇರುವುದು ನಾಡಿದ ದುರಂತ.

Previous Post

ಕರ್ನಾಟಕಕ್ಕೆ ಹೆಚ್ಚುವರಿ ಆಮ್ಲಜನಕ ಪೂರೈಕೆ ಆದೇಶ: ಸುಪ್ರೀಂ ಮೊರೆ ಹೋದ ಕೇಂದ್ರಕ್ಕೆ ಹಿನ್ನೆಡೆ

Next Post

ಕನ್ನಡಿಗರ ಜೀವಗಳು ಅಗ್ಗವೇ..? ಆಮ್ಲಜನಕ ಪೂರೈಕೆ ಸಾಧ್ಯವಿಲ್ಲವೆಂದ ಕೇಂದ್ರವನ್ನು ತರಾಟೆಗೆ ಎಳೆದ ಕೆ.ಜೆ ಜಾರ್ಜ್‌

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025
Next Post
ಕನ್ನಡಿಗರ ಜೀವಗಳು ಅಗ್ಗವೇ..? ಆಮ್ಲಜನಕ ಪೂರೈಕೆ ಸಾಧ್ಯವಿಲ್ಲವೆಂದ ಕೇಂದ್ರವನ್ನು ತರಾಟೆಗೆ ಎಳೆದ ಕೆ.ಜೆ ಜಾರ್ಜ್‌

ಕನ್ನಡಿಗರ ಜೀವಗಳು ಅಗ್ಗವೇ..? ಆಮ್ಲಜನಕ ಪೂರೈಕೆ ಸಾಧ್ಯವಿಲ್ಲವೆಂದ ಕೇಂದ್ರವನ್ನು ತರಾಟೆಗೆ ಎಳೆದ ಕೆ.ಜೆ ಜಾರ್ಜ್‌

Please login to join discussion

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada