ಒಲಿಂಪಿಕ್ಸ್ನಲ್ಲಿ ಫೈನಲ್ ಪ್ರವೇಶ ಮಾಡಿ ಚಿನ್ನದ ಪದಕದ ಭರವಸೆ ಮೂಡಿಸಿದ್ದ ಕುಸ್ತಿಪಟು ವಿನೇಶ್ ಫೋಗಟ್(Wrestler Vinesh Phogat, who entered the finals in the Olympics and made a promise of a gold medal), ಫೈನಲ್ ಪಂದ್ಯಕ್ಕೂ ಮುನ್ನ ಸ್ಪರ್ಧೆಯಿಂದಲೇ ಹೊರಬಿದ್ದಿದ್ದಾರೆ. ಸ್ಪರ್ಧೆಯಿಂದ ಅನರ್ಹಗೊಂಡಿರುವ ವಿಚಾರವನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ವಿಷಾದದಿಂದ ಹಂಚಿಕೊಂಡಿದೆ. 50 ಕೆಜಿ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದ ವಿನಿಶ್ ಪೊಗಟ್ ತೂಕದಲ್ಲಿ 100 ಗ್ರಾಮ್ ಹೆಚ್ಚಾಗಿದ್ದರಿಂದ ಸ್ಪರ್ಧೆಯಿಂದ ಹೊರ ಹಾಕಲಾಗಿದೆ. ಈ ವಿಚಾರದಲ್ಲಿ ವಿನಿಶ್ ಪೊಗಟ್ ಖಾಸಗೀತನ ಗೌರವಿಸುವಂತೆ ಭಾರತೀಯ ತಂಡ ಮನವಿ ಮಾಡಿದೆ. ಆದರೆ ಚಿನ್ನದ ಪದಕದ ಭರವಸೆ ಮೂಡಿಸಿದ್ದ ವಿನಿಶ್ ಪೊಗಟ್ ಸ್ಪರ್ಧೆಯಿಂದ ಅನರ್ಹಗೊಂಡಿರುವ ವಿಚಾರ ರಾಜಕಾರಣ ನಡೆದಿರುವ ಅನುಮಾನ ಮೂಡಿಸಿದೆ.
ಬಿಜೆಪಿ ನಾಯಕ ಬ್ರಿಜ್ ಭೂಷಣ್ (BJP Leader Brij Bhushan) ಲೈಂಗಿಕ ಕಿರುಕುಳದಿಂದ ಹೋರಾಟಕಕ್ಕೆ ಇಳಿದಿದ್ದ, 2023ರಲ್ಲಿ ದೊಡ್ಡ ಹೋರಾಟ ನಡೆದಿತ್ತು. ಈ ವೇಳೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕ್ರೀಡಾಪಟುಗಳು ನಿರಂತರ ಹೋರಾಟ ಮಾಡಿದ್ದರು. ಬಾಕ್ಸರ್ ವಿಜಯೇಂದ್ರ ಸಿಂಗ್(Boxer Vijayendra Singh), ವಿನೇಶ್ ಫೋಗಟ್ ಸೇರಿದಂತೆ ಮಹಿಳಾ ಕುಸ್ತಿಪಟುಗಳು ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಪದಕಗಳನ್ನು ಬಿಸಾಡಿದ್ದರು. ಪ್ರಶಸ್ತಿ ಮಾಡುವ ಪ್ರಕ್ರಿಯೆಯೂ ನಡೆದಿತ್ತು. ಆದರೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಬ್ರಿಜ್ ಭೂಷನ್ ವಿರುದ್ಧ ಕ್ರಮವೇ ಆಗಲಿಲ್ಲ. ಹೋರಾಟ ತೀವ್ರವಾಯ್ತು, ದೆಹಲಿಯ ರಸ್ತೆಗಳಲ್ಲಿ ಕ್ರೀಡಾಪಟುಗಳನ್ನು ಎಳೆದಾಡಲಾಯ್ತು. ಆದರೂ ಮೋದಿ ಸರ್ಕಾರ ಕ್ರಮ ಜರುಗಿಸಲಿಲ್ಲ. ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸುವಂತೆ ಮಾಡಿ ಮತ್ತೆ ಅದೇ ಸ್ಥಾನಕ್ಕೆ ಮರು ನೇಮಕ ಮಾಡಲಾಯ್ತು.
ವಿನೇಶ್ ಫೋಗಟ್(Vinesh Phogat Enter to Final) ಫೈನಲ್ ಪ್ರವೇಶ ಮಾಡುತ್ತಿದ್ದಂತೆ ಭಾರತದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಕಳೆದ ವರ್ಷ ಇದೇ ಕೇಂದ್ರ ಸರ್ಕಾರ, ವಿನೇಶ್ ಫೋಗಟ್ ಸೇರಿದಂತೆ ಮಹಿಳಾ ಕುಸ್ತಿಪಟುಗಳನ್ನು ಯಾವ ರೀತಿ ನಡೆಸಿಕೊಂಡಿತ್ತು. ಇದೀಗ ಅದೇ ಹುಡುಗಿ ಎಂಥಹ ಸಾಧನೆ ಮಾಡಿದ್ದಾಳೆ ಎಂದು ಎರಡೂ ದೃಶ್ಯಗಳನ್ನು ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಯ್ತು. ಇದೆಲ್ಲವೂ ಕ್ಷಣಿಕ ಎನ್ನುವಂತೆ ಕೆಲವೇ ಗಂಟೆಗಳಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಿಂದಲೇ ಹೊರಹಾಕಲಾಗಿದೆ. ಕೇವಲ 100 ಗ್ರಾಂ ತೂಕ ಹೆಚ್ಚಾಗಿದೆ(100gram more weight) ಅನ್ನೋ ಕಾರಣಕ್ಕೆ ಫೈನಲ್ ಪಂದ್ಯ ಆಡದಂತೆ ಹೊರ ಹಾಕಲಾಗಿದೆ. ಇದು ಉದ್ದೇಶ ಪೂರ್ವಕ. ಇಲ್ಲಿ ಏನೋ ಕುತಂತ್ರ ನಡೆದಿದೆ. ವಿನೇಶ್ ಫೋಗಟ್ (Vinesh Phogat) ಫೈನಲ್ನಲ್ಲಿ ಚಿನ್ನ ಗೆದ್ದು ಬಂದರೆ ಮತ್ತಷ್ಟು ಆಕ್ರೋಶ ಭುಗಿಲೇಳುತ್ತದೆ ಅನ್ನೋ ಕಾರಣಕ್ಕೆ ಹೀಗೆಲ್ಲಾ ಮಾಡಿದ್ದಾರೆ ಅನ್ನೋ ಚರ್ಚೆಗಳು ಶುರುವಾಗಿವೆ.
ತೂಕ ಇಳಿಸಲು ನಿರಂತರ ಸೈಕ್ಲಿಂಗ್(Cycling), ಜಾಗಿಂಗ್(Jogging) ಕಸರತ್ತು ಮಾಡಿ ದಣಿದಿರುವ ವಿನೇಶ್ ಪೋಗಟ್ ನಿರ್ಜಲೀಕರಣದಿಂದ ಅಸ್ವಸ್ಥರಾಗಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ವಿನೇಶ್ ಫೋಗಟ್ ಪಂದ್ಯದಿಂದ ಅನರ್ಹಗೊಂಡ ಬಗ್ಗೆ ವಿನೇಶ್ ಫೋಗಟ್ ಚಿಕ್ಕಪ್ಪ ಮಹಾವೀರ್ ಫೋಗಟ್ (Mahaveer Poghat) ಬೇಸರ ವ್ಯಕ್ತಪಡಿಸಿದ್ದಾರೆ.. ಈ ಬಗ್ಗೆ ಮಾತನಾಡಿದ ಮಹಾವೀರ್ ಫೋಗಟ್, ನಾನು ಹೇಳಲು ಏನು ಇಲ್ಲ, ಜನರೇ ಹತಾಶರಾಗಬೇಡಿ, ಒಂದಲ್ಲ ಒಂದು ದಿನ ಅವಳು ಖಂಡಿತವಾಗಿಯೂ ಪದಕವನ್ನ ಗೆಲ್ಲುತ್ತಾಳೆ ಎಂದಿದ್ದಾರೆ.. ಪ್ರಧಾನಿ ನರೇಂದ್ರ ಮೋದಿ (PM Narendra Modi) ಧೈರ್ಯ ತುಂಬಿದ್ದು, ನೀವು ಚಾಂಪಿಯನ್ಗಳ ಚಾಂಪಿಯನ್. ನೀವು ಭಾರತದ ಹೆಮ್ಮೆ. ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ. ಇಂದಿನ ನಿಮ್ಮ ಹಿನ್ನಡೆ ನೋವು ತಂದಿದೆ. ಧೈರ್ಯವಾಗಿ ಹೊರ ಬನ್ನಿ. ನಿಮ್ಮೊಂದಿಗೆ ನಾವಿದ್ದೇವೆ ಎಂದಿದ್ದಾರೆ.
ಕೃಷ್ಣಮಣಿ