ಮೈಸೂರು : ಹೈವೋಲ್ಟೇಜ್ ಕ್ಷೇತ್ರ ವರುಣದಲ್ಲಿ ಸಿದ್ದರಾಮಯ್ಯ ಚಕ್ರವ್ಯೂಹ ಬೇಧಿಸಲು ಸೋಮಣ್ಣ ರಣತಂತ್ರ ರೂಪಿಸಿದ್ದಾರೆ. ವರುಣ ಕ್ಷೇತ್ರದಲ್ಲಿ ಗೆಲುವು ಸುಲಭ ಎನ್ನುತ್ತಿದ್ದ ಸಿದ್ದರಾಮಯ್ಯರ ನಿದ್ದೆಯನ್ನು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕೆಡಿಸಿದ್ದಾರೆ. ಮಿಂಚಿನ ಸಂಚಾರ ಮೂಲಕ ವರುಣ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಸೋಮಣ್ಣ ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಈ ಬಾರಿ ಸಿದ್ದರಾಮಯ್ಯ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದು, ತವರು ಕ್ಷೇತ್ರದಲ್ಲಿಯೇ ಅವರನ್ನ ಮಣಿಸಲು ವಿಪಕ್ಷಗಳು ಪ್ಲ್ಯಾನ್ ನಡೆಸಿವೆ. ಸೋಮಣ್ಣ ಹಾಗೂ ಸಿದ್ದರಾಮಯ್ಯ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.

ಕ್ಯಾಂಪೇನ್ ವೇಳೆ ಹೈಡ್ರಾಮಾ..!
ಸೋಮಣ್ಣ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡ್ತಿದ್ದಾರೆ . ಭಾನುವಾರ ಪ್ರಚಾರಕ್ಕೆ ತೆರಳಿದ್ದ ಸಚಿವ ಸೋಮಣ್ಣ ಅವರ ಕಾರಿಗೆ ಮುತ್ತಿಗೆ ಹಾಕಿದ ಸಿದ್ದರಾಮಯ್ಯ ಬೆಂಬಲಿಗರು, ಸಿದ್ದರಾಮಯ್ಯ ಪರ ಘೋಷಣೆ ಕೂಗಿದ್ದಾರೆ. ಇಲ್ಲಿಗೆ ಯಾಕೆ ಪ್ರಚಾರಕ್ಕೆ ಬಂದಿರಿ..? ನಮ್ಮ ವೋಟ್ ಸಿದ್ದರಾಮಯ್ಯ ಅವರಿಗೆ ಎಂದು ಘೇರಾವ್ ಹಾಕುವ ಯತ್ನ ಮಾಡಿದ್ದಾರೆ. ಈ ಘಟನೆ ಮೈಸೂರು ತಾಲೂಕಿನ ಭುಗತಗಳ್ಳಿ ಗ್ರಾಮದಲ್ಲಿ ನಡೆದಿದೆ. ಎಲ್ಲಾ ಗೊಂದಲದ ಮಧ್ಯೆ ಅರ್ಧಗಂಟೆಗೂ ಹೆಚ್ಚು ಕಾಲ ಪ್ರಚಾರ ನಡೆಸಿ ಸೋಮಣ್ಣ ಸ್ಥಳದಿಂದ ಹೊರಟರು.
ಅಷ್ಟಕ್ಕೂ ಆಗಿದ್ದೇನು..?
ಭುಗತಗಳ್ಳಿ ಗ್ರಾಮದಲ್ಲಿ ವಿ.ಸೋಮಣ್ಣ ಪ್ರಚಾರವನ್ನು ತಡೆಯಲು ಯುವಕರು ಯತ್ನಿಸಿದ್ದಾರೆ. ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಚ್ಪಾರ್ಚನೆ ಮಾಡಿ ಸೋಮಣ್ಣ ಭಾಷಣ ಮಾಡುವ ಮಧ್ಯೆ ಯುವಕನೋರ್ವ ಪ್ರಶ್ನೆ ಮಾಡಲು ಮುಂದಾಗಿದ್ದ. ಈ ವೇಳೆ ಭಾಷಣ ಮುಗಿಯುವ ತನಕ ಕಾಯುವಂತೆ ಸೋಮಣ್ಣ ಮನವಿ ಮಾಡಿದ್ರು. ಇನ್ನ ಭಾಷಣ ಮುಗಿಯುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪರ ಘೋಷಣೆ ಕೂಗಿದ ಯುವಕರು ಸೋಮಣ್ಣಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದರು. ಮತ್ತೊಂದು ಯುವಕರ ಗುಂಪು ಸೋಮಣ್ಣ ಮತ್ತು ಬಿಜೆಪಿ ಪರ ಘೋಷಣೆ ಕೂಗಿದ್ರು. ಇದ್ರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಪೊಲೀಸರು ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತಂದರು.
ಉತ್ತಮ ರೆಸ್ಪಾನ್ಸ್ ಎಂದ ಸೋಮಣ್ಣ..
ವರುಣ ಕ್ಷೇತ್ರದಲ್ಲಿ ಆರಂಭದಲ್ಲಿದ್ದ ಉತ್ಸಾಹ ಇದೀಗ ಇಮ್ಮಡಿಯಾಗಿದೆ. ಈ ಬಾರಿ ವರುಣ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ. ನಾವು ಹೋದೆಡೆಯೆಲ್ಲಾ ಜನ ಬದಲಾವಣೆ ಬಯಸಿರುವುದು ಗೊತ್ತಾಗ್ತಿದೆ. ವರುಣ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ರು. ಅಲ್ದೇ ಲಿಂಗಾಯತರು ಭ್ರಷ್ಟರು ಎಂದು ಹೇಳಿಕೆ ಕೊಟ್ಟಿರೋ ಸಿದ್ದರಾಮಯ್ಯ ಆತುರದಲ್ಲಿ ಹೇಳಿಕೆಕೊಟ್ಟು ನಂತರ ನುಣುಚಿಕೊಳ್ತಾರೆ . ಈ ವಿಚಾರದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ.ಆವೇಶದಲ್ಲಿ ಮಾತ್ನಾಡಿ ಕ್ಷಣಾರ್ಧದಲ್ಲಿ ಆ ರೀತಿ ಹೇಳಿಲ್ಲ ಎಂದಿದ್ದಾರೆ
ರಾಜ್ಯದ ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ .ಇದೆಲ್ಲದ್ದಕ್ಕೆ ಮೇ.10ರಂದು ಜನರು ತಕ್ಕ ಉತ್ತರ ಕೊಡಲಿದ್ದಾರೆ ಎಂದರು. ವರುಣಕ್ಕೆ ಸೋಮಣ್ಣ ಕೊಡುಗೆ ಏನು ಎಂಬ ಸಿದ್ದು ಹೇಳಿಕೆಗೂ ಸೋಮಣ್ಣ ಪ್ರತಿಕ್ರಿಯೆ ನೀಡಿದ್ರು .ಸಿದ್ದರಾಮಯ್ಯ ಕೊಪ್ಪಳಕ್ಕೆ ಹೋಗಿ ಚುನಾವಣೆಗೆ ನಿಂತಿದ್ದರು.ಕಳೆದ ಬಾರಿ ಚಾಮುಂಡೇಶ್ವರಿ ಜೊತೆ ಬಾದಾಮಿಯಲ್ಲೂ ಸ್ಪರ್ಧಿಸಿದ್ರು.ನನ್ನನ್ನ ಹೊರಗಿನವನು ಎನ್ನುತ್ತಿರುವ ಅವರು ವಿವೇಚನೆಯಿಂದ ಮಾತ್ನಾಡಲಿ ಎಂದು ತಿಳಿಸಿದ್ರು.






