ಬಿಗ್ ಬಾಸ್ ಸೀಸನ್ 10 (ಬಿಗ್ಬಾಸ್ ಸೀಸನ್ 10) ಖ್ಯಾತಿಯ ಹಾಸ್ಯ ಕಲಾವಿದ ತುಕಾಲಿ ಸಂತೋಷ್ (tukali Santosh) ಅವರ ಕಾರು ಅಪಘಾತವಾಗಿದೆ(Accident). ಕಾರ್ಯಕ್ರಮ ಒಂದರ ನಿಮಿತ್ತ ತುಮಕೂರಿಗೆ (Tumkur) ಪ್ರಯಾಣ ಬೆಳೆಸಿದ್ದ ತುಕಾಲಿ ಸಂತೋಷ್ ಮತ್ತು ಅವರ ಪತ್ನಿ ಕಾರ್ಯಕ್ರಮ ಮುಗಿದ ನಂತರ ತುಮಕೂರಿಂದ ಕುಣಿಗಲ್ (Kunigal) ಕಡೆಗೆ ಪ್ರಯಾಣ ಬೆಳೆಸಿದ್ದಾರೆ . ಹೊಳೆನರಸೀಪುರ (Hole narasipura) ತಾಲೂಕಿನಲ್ಲಿರುವ ಅವರ ಸ್ವಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ರಸ್ತೆ ಮಧ್ಯೆ ಈ ಅಪಘಾತ(accident) ಸಂಭವಿಸಿದೆ.
![](https://pratidhvani.com/wp-content/uploads/2024/03/IMG_5908.jpeg)
ತುಕಾಲಿ ಸಂತೋಷ್ ಬಿಗ್ ಬಾಸ್ ಸೀಸನ್ 10 ಟಾಪ್ ೬ (top 6) ಕಂಟೆಸ್ಟೆಂಟ್ಗಳ (contestants)ಪೈಕಿ ಒಬ್ಬರಾಗಿದ್ದರು. ಬಡತನದಿಂದ ಬಂದಂತಹ ಹಾಸ್ಯ ಕಲಾವಿದ ತುಕಾಲಿ ಸಂತೋಷ್ಗೆ ಬಿಗ್ ಬಾಸ್ (Bigboss) ನಿಂದ ಬಂದ ಹಣ , ಹೊರಬಂದ ನಂತರ ಇತರೆ ಕಾರ್ಯಕ್ರಮಗಳಲ್ಲಿ ಸಿಕ್ಕ ಸಂಭಾವನೆ ಎಲ್ಲವನ್ನು ಒಟ್ಟು ಮಾಡಿ ಒಂದು ಹೊಸ ಕಾರ್ (New car) ತಗೊಂಡಿದ್ರು. ಆದರೆ ವಿಪರ್ಯಾಸ ಈಗ ಇದೇ ಹೊಸ ಕಾರು ಅಪಘಾತಕ್ಕೀಡಾಗಿದೆ.
![](https://pratidhvani.com/wp-content/uploads/2024/03/IMG_5907.jpeg)
ಈ ಘಟನೆಗೆ ಸಂಬಂಧಪಟ್ಟ ಹಾಗೆ ತುಕಾಲಿ ಸಂತೋಷ್ ನೀಡಿರುವ ಹೇಳಿಕೆ ಪ್ರಕಾರ ಕುಡಿದು ಗಾಡಿ ಓಡಿಸುತ್ತಿದ್ದಂತಹ (Drink and drive) ಮತ್ತೊಂದು ಗಾಡಿಯ ಚಾಲಕ ಇದ್ದಕ್ಕಿದ್ದ ಹಾಗೆ ನಮ್ಮ ಗಾಡಿಗೆ ಬಂದು ಗುದ್ದಿದಾರೆ. ಅದರಿಂದ ಈ ಅಪಘಾತ ಸಂಭವಿಸಿದೆ . ಪೊಲೀಸರು (police) ತಕ್ಷಣ ಸ್ಥಳಕ್ಕೆ ಬಂದು ಅವರ ಆಲ್ಕೋಹಾಲಿಕ್ ಟೆಸ್ಟ್ (alcoholic test ) ಕೂಡ ತೆಗೆದುಕೊಂಡಿದ್ದಾರೆ ,ರಿಪೋರ್ಟ್ (Report) ನಲ್ಲೂ ಆ ವ್ಯಕ್ತಿ ಮಧ್ಯಪಾನ ಮಾಡಿದ್ರು ಅನ್ನೋದು ಸಾಬೀತಾಗಿದೆ . ಇದನ್ನ ಹೊರತುಪಡಿಸಿದರೆ ನಮ್ಮ ಕಾರಿನಲ್ಲಿ ಇದ್ದವರಿಗಾಗಲಿ ಅವರ ಕಾರಿನಲ್ಲಿದ್ದವರಿಗಾಗಲೀ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ