ಬಿ.ಸಿ ಪಾಟೀಲ್ (Bc Patil) ಅಳಿಯ ಆತ್ಮಹತ್ಯೆ ಪ್ರಕರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಎಷ್ಟೇ ಪ್ರಯತ್ನ ಪಟ್ಟರೂ ಬಿಸಿ ಪಾಟೀಲ್ ಅಳಿಯನನ್ನ ಉಳಿಸಿಕೊಳ್ಳಲು ಸಾಧ್ಯವಾಗದೆ, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಳಿಯ ಪ್ರತಾಪ್ ಕುಮಾರ್ (Prathap kumar) ಆತ್ಮ ಹತ್ಯೆ ಪ್ರಯತ್ನದ ವಿಚಾರ ಗೊತ್ತಾಗ್ತಿದ್ದಂತೆ , ಅವರ ಕುಟುಂಬಸ್ಥರು ಬಿ. ಸಿ ಪಾಟೀಲ್ ರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.ಕೂಡಲೇ ಪೊಲೀಸ್ರಿಗೆ ಕರೆ ಮಾಡಿ ಅಳಿಯನ ಮೊಬೈಲ್ ನಂಬರ್ (Mobile number) ಹಾಗೂ ಕಾರು ನಂಬರ್ (Car number) ತಿಳಿಸಿದ್ದ ಬಿ.ಸಿ ಪಾಟೀಲ್ ವಿಷಯ ಮುಟ್ಟಿಸಿದ್ದರು.
ತಮ್ಮ ಅಳಿಯ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ದಾರೆ, ಅಳಿಯನನ್ನ ತಕ್ಷಣ ಪತ್ತೆಹಚ್ಚುವಂತೆ ಮನವಿ ಮಾಡಿ,ಕೂಡಲೇ ಕಾರ್ ನಂಬರ್ ಹಾಗೂ ಮೊಬೈಲ್ ನಂಬರ್ ನ ಶಿವಮೊಗ್ಗ ಪೊಲೀಸ್ರು ಟ್ರೇಸ್ ಮಾಡಿದ್ದರು.
ಮಧ್ಯಾಹ್ನ 3 ಘಂಟೆ ಸುಮಾರಿಗೆ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ಕಾರು ಪತ್ತೆಯಾಗಿದ್ದು, ಕಾರಿನಲ್ಲಿ ವಿಷ ಸೇವಿಸಿ ನರಳಾಡುತ್ತಿದ್ದ ಸ್ಥಿತಿಯಲ್ಲಿ ಪ್ರತಾಪ್ ಕುಮಾರ್ ಪತ್ತೆಯಾಗಿದ್ದರು.ಕೂಡಲೇ ಪೊಲೀಸ್ರು (Police) ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ಪ್ರತಾಪ್ ರನ್ನ ದಾಖಲಿಸಿದ್ದಾರೆ.
ಅವರ ಸ್ಥಿತಿ ಕ್ರಿಟಿಕಲ್ ಕಂಡಿಷನ್ (Critical condition) ಇದ್ದಿದ್ರಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಪ್ರತಾಪ್ ಕುಮಾರ್ ಸಾವನ್ನಪ್ಪಿದ್ದಾರೆ.