
ಈ ವರ್ಷದ ಅಮರನಾಥ ಯಾತ್ರೆ (Amaranath yathra) ಜುಲೈ 3 ಕ್ಕೆ ಆರಂಭವಾಗಿ ಆಗಸ್ಟ್ 8 ರವರೆಗೆ ನಡೆಯಲಿದೆ.ಪ್ರತಿ ವರ್ಷ ಈ ಅಮರನಾಥ ಯಾತ್ರೆಗೆ ಲಕ್ಷಾಂತರ ಸಂಖ್ಯೆಯಲ್ಲೂ ಯಾತ್ರಾರ್ಥಿಗಳು ಆಗಮಿಸುತ್ತಾರೆ. ಆದ್ರೆ ಈ ಬಾರಿ ಪಹಲ್ಗಾಮ್ ದಾಳಿಯ (Pahalgam terror attack) ಪರಿಣಾಮ, ಅಮರನಾಥ ಯಾತ್ರೆಗೆ ಕುರಿತು ಆತಂಕ ಮನೆ ಮಾಡಿದೆ.

ಈ ಭಾರಿಯ ಅಮರನಾಥ ಯಾತ್ರೆಗೆ ಅತಿ ಹೆಚ್ಚಿನ ಬಿಗಿ ಬಂದೋಬಸ್ತ್ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕಾರಣಕ್ಕಾಗಿ 2 ದಿನಗಳ ಕಾಲ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಕಾಶ್ಮೀರ ಪ್ರವಾಸದಲ್ಲಿದ್ದಾರೆ.ಈ ವೇಳೆ ಅಮರನಾಥ ಯಾತ್ರೆಯ ಬಂದೋಬಸ್ತ್ ಬಗ್ಗೆ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪರಿಶೀಲನೆ ನಡೆಸಿದ್ದಾರೆ ಮತ್ತು ಜಮ್ಮು ಕಾಶ್ಮೀರದಲ್ಲಿ ಯಾತ್ರೆಯ ಭದ್ರತೆಯ ಬಗ್ಗೆ ಸಭೆ ನಡೆಸಿದ್ದಾರೆ.

ಅಮರನಾಥ ಯಾತ್ರೆಯಲ್ಲಿ ಯಾತ್ರಾರ್ಥಿಗಳ ಭದ್ರತೆಗಾಗಿ ಪ್ಯಾರಾ ಮಿಲಿಟರಿ ಪಡೆಯ 42 ಸಾವಿರ ಯೋಧರ ನಿಯೋಜನೆ ಮಾಡಲಾಗುತ್ತಿದೆ. ಭಾರತ ನಡೆಸಿದ್ದ ಅಪರೇಷನ್ ಸಿಂಧೂರ್ ಗೆ ನಿಯೋಜನೆಗೊಂಡಿದ್ದ ಯೋಧರನ್ನೇ ಯಾತ್ರೆಗೆ ನಿಯೋಜನೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಮರನಾಥ ಯಾತ್ರೆಗೆ ಯಾವುದೇ ತೊಂದರೆಯಾಗದಂತೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮವಾಗಿ ಭದ್ರತೆ ಆಯೋಜನೆ ಮಾಡಲಾಗುತ್ತಿದ್ದೆ.ಕಳೆದ ವರ್ಷ 5.12 ಲಕ್ಷ ಯಾತ್ರಾರ್ಥಿಗಳು ಅಮರನಾಥ ಯಾತ್ರೆ ಕೈಗೊಂಡಿದ್ದರು.ಈ ವರ್ಷದ ಯಾತ್ರೆಗೆ ಈಗಾಗಲೇ ರಿಜಿಸ್ಟ್ರೇಷನ್ ಆರಂಭಗೊಂಡಿದೆ.







