• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಮೂರು ಪರ್ಸೆಂಟ್ ಮನುವಾದಿಗಳು ಹಂಸಲೇಖರನ್ನ ಕ್ಷಮೆ ಕೇಳಿಸಿದ್ದು ನಮಗೆ ಹಿನ್ನಡೆ: ಡಿಎಸ್ಎಸ್ ಮುಖಂಡರಿಂದ ವಾಗ್ದಾಳಿ

Any Mind by Any Mind
November 16, 2021
in ಕರ್ನಾಟಕ
0
ಮೂರು ಪರ್ಸೆಂಟ್ ಮನುವಾದಿಗಳು ಹಂಸಲೇಖರನ್ನ ಕ್ಷಮೆ ಕೇಳಿಸಿದ್ದು ನಮಗೆ ಹಿನ್ನಡೆ: ಡಿಎಸ್ಎಸ್ ಮುಖಂಡರಿಂದ ವಾಗ್ದಾಳಿ
Share on WhatsAppShare on FacebookShare on Telegram

ದಲಿತರ ಮನೆಯಲ್ಲಿ ವಾಸ್ತವ್ಯ ಹೂಡುವುದಕ್ಕಿಂತ ದಲಿತರನ್ನೇ ತಮ್ಮ ಮನೆಗೆ ಕರೆಯಿಸಿ ಊಟ ಹಾಕಿಸಲಿ ಎಂಬ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಹೇಳಿಕೆ ಅತ್ಯಂತ ಸಮಂಜಸವಾಗಿದೆ ಮತ್ತು ಅರ್ಥಪೂರ್ಣವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಈ ದೇಶದಲ್ಲಿ ಭಗವದ್ಗೀತೆ ಯಾರಿಗೆ ಒಳ್ಳೆಯದು ಮಾಡಿದೆಯೋ ಗೊತ್ತಿಲ್ಲ, ಆದ್ರೆ ಬಡವರ ಗೀತೆಯಾಗಿರುವ ಸಂವಿಧಾನದಿಂದ ಎಲ್ಲರಿಗೂ ಸಮಾನತೆ ಸಿಕ್ಕಿದೆ. ಕೆಲವು ಜಾತಿವಾದಿಗಳು ಹಂಸಲೇಖರ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡಿದೆ. ಈ ದೇಶದಲ್ಲಿ ಮೂರು ಪರ್ಸೆಂಟ್ ಇರುವ ಮನುವಾದಿಗಳು ಹಂಸಲೇಖರು ಕ್ಷಮೆ ಕೇಳೋದಕ್ಕೆ ಸಾಮಾಜಿಕ ಜಾಲತಾಣವನ್ನು ಒಂದು ವೇದಿಕೆಯನ್ನಾಗಿ ಮಾಡಿಕೊಂಡರು. ಆದರೆ ೮೫ ಪರ್ಸೆಂಟ್ ಇರುವ ಜನ ಅದನ್ನು ಪ್ರತಿಭಟಿಸುವಲ್ಲಿ ಸೋತಿದ್ದಾರೆ ಎಂದು ಹೇಳಿದರು.

ಮೈಸೂರಿನಲ್ಲಿ ಹಂಸಲೇಖ ಮಾತನಾಡಿದ ವಿಡಿಯೋದಲ್ಲಿ ಸತ್ಯಾಂಶವಿದೆ. ಆದರೆ ಕೆಲವು ಜಾತಿ ವಾದಿಗಳು ಹಂಸಲೇಖ ವಿರುದ್ಧ ಮುಗಿಬಿದ್ದರು. ಕ್ಷಮೆ ಕೇಳುವ ತನಕ ಬಿಡಲಿಲ್ಲ. ಬಲಾಢ್ಯರ ನಡುವೆ ನಾವು ಸೋತಿದ್ದೇವೆ ಎಂದೇ ಅರ್ಥ.

ಯಾರು ದಲಿತರ ಪರವಾಗಿ ಧ್ವನಿ ಎತ್ತುತ್ತಾರೋ ಅಂತವರ ದ್ವನಿ ಅಡಗಿಸುವ ಕೆಲಸ ಈ ಮೂರು ಪರ್ಸೆಂಟ್ ಇರುವ ಜನರು ಮಾಡುತ್ತಿದ್ದಾರೆ. ಬಸವಣ್ಣ,ಬುದ್ದ,ಗೌತಮರಿಂದ ಹಿಡಿದು ಗೌರಿ ,ಕಲ್ಬುರ್ಗಿ, ಪನ್ಸಾರೆ ಹಾದಿಯಾಗಿ ಎಲ್ಲರೂ ದಲಿತರ ಪರವಾಗಿ ಧ್ವನಿ ಎತ್ತಿದವರೇ. ದಲಿತರ ವಿರುದ್ಧ ದಲಿತರು ಮಾತನಾಡಿದರೆ ಅದು ದೊಡ್ಡದಾಗುವುದಿಲ್ಲ. ಆದ್ರೆ ಅನ್ಯಜಾತಿಯನು ದಲಿತರ ಪರವಾಗಿ ಮಾತನಾಡಿದ್ರೆ, ಅವರ ಧ್ವನಿ ಅಡಗಿಸುವ ಕೆಲಸ ಮನುವಾದಿಗಳಿಂದ ನಡೆಯುತ್ತಿದೆ ಎಂದರು.  ಆ ಕಾರಣಕ್ಕಾಗಿಯೇ ಹಂಸಲೇಖ ಹೇಳಿದ್ದು, ಈ ದೇಶದಲ್ಲಿ ಡೆಮಾಕ್ರಸಿ ಹೋಗಿ ಧರ್ಮಾಕ್ರಸಿ ಬರುತ್ತಿದೆ. ಹೀಗೇನಾದರೂ ಆದರೆ ನಾವು ಮೂಲ ಭಗವದ್ಗೀತೆ ಕಾಲಕ್ಕೆ ಹೋಗಬೇಕಾಗುತ್ತೆ.  ಹೀಗಾಗಿ ಸಂವಿಧಾನ ಕಾಪಾಡಬೇಕಾಗಿದೆ. ಎಚ್ಚರಿಕೆ ಹೆಜ್ಜೆ ಇಡಬೇಕಾಗಿದೆ. ಇಲ್ಲವಾದಲ್ಲಿ ಆತಂಕದ ದಿನಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಹಂಸಲೇಖರವರು ನೀಡಿರುವ ಹೇಳಿಕೆಯನ್ನು ಡಿಎಸ್‌ಎಸ್ ಸಮರ್ಥಿಸುತ್ತದೆ ಎಂದ ಗುರುಮೂರ್ತಿ ಅವರು, ಹಂಸಲೇಖರು ದೃತಿಗೆಡುವ ಅವಶ್ಯಕತೆಯಿಲ್ಲ,ಅವರ ಪರವಾಗಿ ಡಿಎಸ್‌ಎಸ್ ಕೆಲಸ ಮಾಡುತ್ತದೆ ಎಂದರು.

ADVERTISEMENT

ಇದುವರೆಗೆ ದಲಿತರ ವಿರುದ್ಧ ನಿಂದನೆಗಾಗಿ ಯಾವುದೇ ಅಧಿಕಾರಿ ಮೇಲೆ ನಿಂದನೆ ಕಾಯ್ದೆ ( ಅಟ್ರಾಸಿಟಿ ಆಕ್ಟ್‌) ಜಾರಿಯಾಗಿಲ್ಲ. ಹಾಗಾದರೆ ಈ ಕಾನೂನಿನ ಅವಶ್ಯಕತೆಯೇನಿದೆ..?  ಪುಕ್ಸಟ್ಟೆ ಪ್ರಚಾರಕ್ಕೆ ದಲಿತ ಪರ ಮಾತಾಡ್ತೀರಾ.

ಸಂಸದ ಪ್ರತಾಪ್ ಸಿಂಹ ಕೂಡ ಪ್ರಿಯಾಂಕ ಖರ್ಗೆಯವರು ದಲಿತ ಎಂಬ ಕಾರಣಕ್ಕೆ ಅವರನ್ನು ಗಂಡಸೋ ಹೆಂಗಸೋ ಎಂದು ಪ್ರಶ್ನಿಸಿದ್ದಾರೆ. ಹಾಗಿದ್ರೆ  ಇವನ ಹೆಸರು ಕೂಡ ಪ್ರತಾಪಸಿಂಹ ಎಂದಿದೆ. ಹಾಗಾದರೆ ಈತ ಮೃಗದ ಜಾತಿಗೆ ಸೇರಿದ್ದಾನೆ ಎಂದು ಅರ್ಥವಲ್ಲವೇ. ಖರ್ಗೆ ದಲಿತ ಎಂಬ ಕಾರಣಕ್ಕಾಗಿ ಈ ಹೇಳಿಕೆ ನೀಡಿದ್ದ ಸಿಂಹ ಕೂಡ ಕ್ಷಮೆ ಕೇಳಬೇಕು  ಎಂದು  ಗುರುಮೂರ್ತಿ ಪ್ರಶ್ನಿಸಿದರು. ಇಂತಹ ಮೃಗಗಳ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ ಎಂದು ಜನರಿಗೆ ಕರೆ ನೀಡಿದರು.  ಮುಂಬರುವ ದಾವಣಗೆರೆ ದಲಿತ ಸಭೆಯಲ್ಲಿ ಈ ಎಲ್ಲಾ ವಿಷಗಳನ್ನಿಟ್ಟುಕೊಂಡು ಹೋರಾಟ ರೂಪಿಸುತ್ತೇವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು. 

Tags: controversialControversyHamsalekhapejawarashreePratap Simhastatement on dalits
Previous Post

ಕನ್ನಡದ ಖ್ಯಾತ ನಟಿ ಭಾವನಾ ಕಾಂಗ್ರೆಸ್ ಸೇರ್ಪಡೆ – ಶುಭಾಶಯ ತಿಳಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ

Next Post

ಸಾಧನೆಯೇ ಇಲ್ಲದ ಬಿಜೆಪಿ ಸಾಧನಾ ಸಮಾವೇಶ: ಬಾಕಿ ಪರಿಹಾರಕ್ಕೆ ರೈತ ಸಂಘ ಆಗ್ರಹ

Related Posts

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ
Serial

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

by ಪ್ರತಿಧ್ವನಿ
October 13, 2025
0

ಸಾಮಾಜಿಕ  ಅನ್ಯಾಯ ದೌರ್ಜನ್ಯ ತಾರತಮ್ಯಗಳಿಗೆ ಸ್ಪಂದಿಸುವುದು ನಾಗರಿಕತೆಯ ಲಕ್ಷಣ ನಾ ದಿವಾಕರ  ಜಗತ್ತಿನ ಇತಿಹಾಸದಲ್ಲಿ ಸಂಭವಿಸಿರುವ ಬಹುತೇಕ ವಿಪ್ಲವಗಳಲ್ಲಿ ಪ್ರಧಾನ ಪಾತ್ರ ವಹಿಸಿರುವುದು ಆಯಾ ಸಮಾಜಗಳಲ್ಲಿ ಕ್ರಿಯಾಶೀಲವಾಗಿ,...

Read moreDetails

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025
Next Post
ಸಾಧನೆಯೇ ಇಲ್ಲದ ಬಿಜೆಪಿ ಸಾಧನಾ ಸಮಾವೇಶ: ಬಾಕಿ ಪರಿಹಾರಕ್ಕೆ ರೈತ ಸಂಘ ಆಗ್ರಹ

ಸಾಧನೆಯೇ ಇಲ್ಲದ ಬಿಜೆಪಿ ಸಾಧನಾ ಸಮಾವೇಶ: ಬಾಕಿ ಪರಿಹಾರಕ್ಕೆ ರೈತ ಸಂಘ ಆಗ್ರಹ

Please login to join discussion

Recent News

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
Top Story

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada