ಶಿವಮೊಗ್ಗದಲ್ಲಿ (shivamogga) ಸೋಮವಾರ ನಡೆದ 26 ವರ್ಷದ ಬಜರಂಗ ದಳ (Bajarang Dal) ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ಒಂಬತ್ತು ಮಂದಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅಲ್ಲದೆ, ಶಿವಮೊಗ್ಗ ಜಿಲ್ಲೆಯಲ್ಲಿ ಗಲಭೆ, ಬೆಂಕಿ ಹಚ್ಚುವಿಕೆ ಮತ್ತು ಸಿಆರ್ಪಿಸಿ 144 ಉಲ್ಲಂಘನೆ ವಿರುದ್ಧ ಒಂಬತ್ತು ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಶಂಕಿತರ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (state Home Minister Araga Jnandra) ಮಂಗಳವಾರ ತಿಳಿಸಿದ್ದಾರೆ.
ಹರ್ಷ ನಾಗರಾಜ್ (Harsha Nagaraj) ಅಲಿಯಾಸ್ ಹಿಂದೂ ಹರ್ಷ (Harsha Hindu) ಅಲಿಯಾಸ್ ಬಟ್ಟೆ ಮಾರ್ಕೆಟ್ ಹರ್ಷ ಎಂಬುವವರು ಸೀಗೆಹಳ್ಳಿಯ ಮೊಬೈಲ್ ಸರ್ವಿಸ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ. ಭಾನುವಾರ ರಾತ್ರಿ ಮನೆಯಿಂದ ಹೊರಗಡೆ ಬಂದಾಗ ಯುವಕರ ತಂಡ ಹಲ್ಲೆ ನಡೆಸಿದೆ ತೀರ್ವ ಹಲ್ಲೆಗೊಳಗಾದ ಹರ್ಷ ಆಸ್ಪತ್ರೆಗೆ ತೆರಳುವ ಮುನ್ನವೇ ಮೃತಪಟ್ಟಿದ್ದಾರೆ.
ಏತನ್ಮಧ್ಯೆ, ರಾಜ್ಯದಲ್ಲಿ ಹಿಜಾಬ್ (Hijab) ನಿಯಮದ ಕುರಿತು ಪ್ರತಿಭಟನೆಗಳು ಮುಂದುವರೆದಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಪೊಲೀಸರು (Bengaluru Police) ಮುಂದಿನ ಎರಡು ವಾರಗಳವರೆಗೆ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಮಾರ್ಚ್ 8 ರವರೆಗೆ ನಿಷೇಧಾಜ್ಞೆ ವಿಸ್ತರಿಸಿದ್ದಾರೆ.