ಉಕ್ರೇನ್-ರಷ್ಯಾ ನಡುವಿನ ಬಿಕ್ಕಟ್ಟಿನಿಂದ ಯಾವಾಗ ಬೇಕಾದರು ರಷ್ಯ ಉಕ್ರೇನಗ ಮೇಲೆ ಆಕ್ರಮಣ ಮಾಡಬಹುದು ಎಂಬ ಭೀತಿ ಹಿನ್ನೆಲೆಯಲ್ಲಿ ತನ್ನ ಪ್ರಜೆಗಳನ್ನು ಕರೆತರಲು ಭಾರತ ಮುಂದಾಗಿದೆ.
ಭಾರತೀಯನ್ನು ಕರೆತರಲು ಮೂರು ವಿಶೇಷ ವಿಮಾಣ ಕಾರ್ಯಚರಣೆಗೆ ಕೇಂದ್ರ ನಿಯೋಜಿಸಿದೆ. ಅದರಂತೆ ಏರ್ ಇಂಡಿಯಾ ವಿಶೇಷ ವಿಮಾನವು ಇಂದು ಬೆಳಿಗ್ಗೆ ಭಾರತೀಯ ಪ್ರಜೆಗಳನ್ನು ಕರೆತರಲು ಭಾರತದಿಂದ ಉಕ್ರೇನ್ ಗೆ ಹೊರಟಿದೆ.
200 ಆಸನಗಳ ಸಾಮರ್ಥ್ಯವಿರುವ ಈ ಏರ್ ಇಂಡಿಯಾ ಡ್ರೀಮ್ಲೈನರ್ ಬೋಯಿಂಗ್ B-787 ವಿಮಾನವು ಇಂದು ಮಂಗಳವಾರ ರಾತ್ರೆ ಬಂದಿಳಿಯಲಿದೆ. “ಏರ್ ಇಂಡಿಯಾ ಫೆಬ್ರವರಿ 22, 24 ಮತ್ತು 26 ರಂದು ಭಾರತ ಮತ್ತು ಉಕ್ರೇನ್ ನಡುವೆ ಮೂರು ವಿಮಾನಗಳು ಕಾರ್ಯಚರಣೆ ನಡೆಸಲಿದೆ ” ಎಂದು ಏರ್ ಇಂಡಿಯಾ ಎಎನ್ಐಗೆ ತಿಳಿಸಿದೆ.
ಉಕ್ರೇನ್ಗೆ ವಿಶೇಷ ಕಾರ್ಯಾಚರಣೆಯ ಭಾಗವಾಗಿ ದೆಹಲಿಯಿಂದ ಬೋಯಿಂಗ್ ಡ್ರೀಮ್ಲೈನರ್ ಎಐ-1947 ವಿಮಾನವು ಟೇಕ್ ಆಫ್ ಆಗಿದೆ. ಇದು 200 ಕ್ಕೂ ಹೆಚ್ಚು ಆಸನಗಳ ಸಾಮರ್ಥ್ಯವನ್ನು ಹೊಂದಿದೆ.
“ಡ್ರೀಮ್ಲೈನರ್ ಬೋಯಿಂಗ್ B-787 ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದಿಂದ ಉಕ್ರೇನ್ (ಬೋರಿಸ್ಪಿಲ್) ಗೆ ಹೊರಟಿತು” ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ANI ಗೆ ತಿಳಿಸಿದ್ದಾರೆ.
ರಷ್ಯಾದೊಂದಿಗೆ ಉಕ್ರೇನ್ ಗಡಿಯಲ್ಲಿ ಉಲ್ಬಣಗೊಳ್ಳುತ್ತಿರುವ ಉದ್ವಿಗ್ನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ ಮಂಗಳವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಶೇಷ ಸಭೆಯಲ್ಲಿ ಪರಸ್ಪರ ಸೌಹಾರ್ದಯುತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕಡೆಯವರು ಅತ್ಯಂತ ಸಂಯಮ ಮತ್ತು ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸುವ ಅಗತ್ಯವನ್ನು ಬಲವಾಗಿ ಒತ್ತಿಹೇಳಿತು. .
ಟಿಕೆಟ್ ಬುಕಿಂಗ್ ಕಚೇರಿಗಳು, ವೆಬ್ಸೈಟ್, ಕಾಲ್ ಸೆಂಟರ್ ಮತ್ತು ಅಧಿಕೃತ ಟ್ರಾವೆಲ್ ಏಜೆಂಟ್ಗಳ ಮೂಲಕ ಬುಕಿಂಗ್ ತೆರೆದಿರುವುದಾಗಿ ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಯಾವಾಗ ಬೇಕಾದರು ರಷ್ಯ ಉಕ್ರೇನಗ ಮೇಲೆ ಆಕ್ರಮಣ ಮಾಡಬಹುದು ಈ ಹಿನ್ನೆ ಲೆಯಲ್ಲಿ ಭಾರತೀಯರು ಯಾವುದೇ ವಾಣಿಜ್ಯ ವಿಮಾನ / ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ಹಿಂದಿರುಗಬಹುದು ಎಂದು ಉಕ್ರೇ ನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಇತ್ತೀ ಚಿಗೆ ಹೇಳಿತ್ತು .