ಈ ಬಾರಿಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಡಿಕೆ ಬ್ರದರ್ಸ್ನ ಬಿಜೆಪಿ ಹೈಕಮಾಂಡ್ ನಾಯಕರು ಟಾರ್ಗೆಟ್ ಮಾಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇತ್ತೀಚೆಗೆ ರಾಜ್ಯದಲ್ಲಿ ಅತ್ಯಂತ ಹೆಚ್ಚು ಡಿಕೆ ಬ್ರದರ್ಸ್ ಶಕ್ತಿಶಾಲಿಗಳಾಗುತ್ತಿದ್ದಾರೆ. ಅವರನ್ನು ಈಗ ಟಾರ್ಗೆಟ್ ಮಾಡಲೇಬೇಕು. ಅವರಿಗೆ ಸೋಲಿನ ರುಚಿ ತೋರುವ ಮೂಲಕ ಪಾಠ ಕಲಿಸಬೇಕೆಂದು ಬಿಜೆಪಿ ಹೈಕಮಾಂಡ್ ನಾಯಕರು ನಿರ್ಧರಿಸಿದ್ದಾರೆ.

ಕಳೆದ ಬಾರಿ ಖರ್ಗೆ, ಈ ಬಾರಿ ಡಿಕೆ ಬ್ರದರ್ಸ್!
ಇನ್ನು 2019 ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಖಾಡದಲ್ಲಿ ಸೋಲಿಸುವ ಮೂಲಕ, ಅವರಿಗೆ ದೊಡ್ಡ ಪ್ರಮಾಣದಲ್ಲಿ ಮುಜುಗರ ತರಿಸಿದ್ದ ಬಿಜೆಪಿ ಹೈಕಮಾಂಡ್ ನಾಯಕರು, ಈ ಬಾರಿ ಡಿಕೆ ಬ್ರದರ್ಸ್ನ ಟಾರ್ಗೆಟ್ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಖಾಡದಲ್ಲಿ ಬಿಜೆಪಿ ಚಿಹ್ನೆಯಡಿಯಲ್ಲಿ ಡಾ.ಸಿ. ಎನ್.ಮಂಜುನಾಥ್ ರಂಗಪ್ರವೇಶ ಮಾಡಿದ್ದಾರೆ. ಕಳೆದ ಮೂರ್ನಾಲ್ಕು ದಶಕಗಳಿಂದ ಡಾ.ಸಿ.ಎನ್. ಮಂಜುನಾಥ್ ಆರೋಗ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಅವರಿಂದಲೂ ಡಿಕೆ ಬ್ರದರ್ಸ್ನ ಕಟ್ಟಿ ಹಾಕುವುದು ಹೈಕಮಾಂಡ್ ನಾಯಕರ ತಂತ್ರವಾಗಿದೆ.

ಇನ್ನು ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಬದಲಾವಣೆಯಾಗಿದ್ದು, ಆರ್.ಅಶೋಕ್ ಬದಲಿಗೆ ಡಾ.ಸಿ. ಎನ್. ಅಶ್ವತ್ಥ್ನಾರಾಯಣ್ ಅವರಿಗೆ ಬಿಜೆಪಿ ಹೈಕಮಾಂಡ್ ನಾಯಕರು ಮಣೆ ಹಾಕಿದ್ದಾರೆ. ಈ ಮೂಲಕ ಕಳೆದ ಬಾರಿ ಖರ್ಗೆ, ಈ ಬಾರಿ ಡಿಕೆ ಬ್ರದರ್ಸ್ನ ಹೆಣೆಯುವುದು ಬಿಜೆಪಿ ನಾಯಕರ ಒನ್ಲೈನ್ ಅಜೆಂಡಾ ಆಗಿದೆ ಎನ್ನಲಾಗಿದೆ.
