ಮಂಡ್ಯ : ಇದು ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ಸಿದ್ದು ಮನೆ ದೇವರು ರಾಜಕೀಯ ಭವಿಷ್ಯ ನುಡಿದಿದೆ.ಒಂದೇ ಕಡೆ ನಿಂತ್ರೆ ಬಲವಿಲ್ಲ, ಎರಡು ಕಡೆ ನಿಲ್ಲಲು ದೇವಿ ಸೂಚನೆ ನೀಡಿದೆ. ಸಿದ್ದು ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಮುಂದೆ ಮನೆದೇವರ ಭವಿಷ್ಯ ನುಡಿದಿದೆ.
ಚಿಕ್ಕತಾಯಮ್ಮ ದೇವಿ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನುಡಿದಿದೆ. ಚಿಕ್ಕಮ್ಮತಾಯಿ ದೇವಿ ದೇವರ ಗುಡ್ಡಪ್ಪನ ಮೈಮೇಲೆ ಬಂದಿದ್ದು, ಎರಡು ಕಡೆ ನಿಲ್ಲುವಂತೆ ಸಿದ್ರಾಮಯ್ಯ ಪುತ್ರನಿಗೆ ಆದೇಶ ನೀಡಿದೆ.
ಸಿದ್ದರಾಮಯ್ಯ ಅವರ ಮನೆಯ ದೇವರು ಚಿಕ್ಕಮ್ಮದೇವಿ ತಾಯಿಯಾಗಿದ್ಧಾರೆ. ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿಯ ಚಿಕ್ಕಮ್ಮ ತಾಯಿ. ದೇಗುಲದ ಅರ್ಚಕ ಲಿಂಗಣ್ಣನ ಮೇಲೆ ಶಕ್ತಿ ದೇವತೆ ಆವಾಹನೆಯಾಗಿದ್ದು, ಒಂದೇ ಕಡೆ ನಿಂತ್ರೆ ಗೆಲುವು ಕಷ್ಟ.. ಪ್ರಬಲ ಶಕ್ತಿಗಳ ವಿರೋಧವಿದೆ.
ಎರಡು ಕಡೆ ಬಾಹುಬಲ ಚಾಚಬೇಕು..ಎರಡು ಭುಜಬಲದಲ್ಲಿ ನಿಲ್ಲಬೇಕು. ಪ್ರತಿವರ್ಷ ಬಂದು ನನ್ನ ದರ್ಶನ ಪಡೆಯಬೇಕು ಎಂದು ದೇವಿ ಆದೇಶ ನೀಡಿದೆ. ಡಾ.ಯತೀಂದ್ರ ಮಾಜಿ ಸಚಿವ ನರೇಂದ್ರಸ್ವಾಮಿ ಜೊತೆ ಪೂಜೆಗೆ ಬಂದಿದ್ದರು. ದೇವಿ ಕಳೆದ ಬಾರಿ ಚುನಾವಣೆಯಲ್ಲೂ 2 ಕ್ಷೇತ್ರ ಆರಿಸಿಕೊಳ್ಳಲು ಸೂಚಿಸಿದ್ದಳು. ಮನೆ ದೇವರ ಆದೇಶ ಪಾಲಿಸ್ತಾರಾ ಸಿದ್ದರಾಮಯ್ಯ..? 2023ರ ಅಸೆಂಬ್ಲಿಗೂ ಎರಡು ಕಡೆ ನಿಲ್ತಾರಾ ಸಿದ್ದರಾಮಯ್ಯ..?