ಮೈಸೂರು ದಸರಾ ಕಾರ್ಯಕ್ರಮದಲ್ಲಿ ಸಿಎಂ ಮಾತನಾಡಿರುವ ಮಾತು ಸಿಎಂ ಸಿದ್ದರಾಮಯ್ಯಅಭಿಮಾನಿಗಳು ಹಾಗು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಾಕಷ್ಟು ಅನುಮಾನಗಳು ಶುರುವಾಗಿವೆ. ನಮ್ಮ ಸರ್ಕಾರ ಐದು ವರ್ಷ ಇರುತ್ತದೆ. ಅಭಿವೃದ್ಧಿ ಮಾಡ್ತೇವೆ ಎಂದಿದ್ದರು.

ಪ್ರಜಾಪ್ರಭುತ್ವದ ಬುಡವನ್ನ ಅಲುಗಾಡಿಸಬಾರದು. ನಾವು 136 ಸೀಟ್ ಗೆದ್ದು ಸರ್ಕಾರ ಮಾಡಿದ್ದೇವೆ. 5 ವರ್ಷ ಆಡಳಿತ ಮಾಡಿಯೇ ಮಾಡುತ್ತೇನೆ. ಎಷ್ಟೇ ಕಷ್ಟ ಬಂದ್ರೂ ನನಗೆ ದೇವಿ ಆಶೀರ್ವಾದ ಇದೆ. ಜನರ ಆಶೀರ್ವಾದ ಇದ್ರೆ ಏನೂ ಮಾಡಲು ಆಗಲ್ಲ. ಈ ಸಿದ್ದರಾಮಯ್ಯನನ್ನು ಏನೂ ಮಾಡಲು ಆಗಲ್ಲ. ನಾನು ಯಾವ ತಪ್ಪನ್ನೂ ಮಾಡಿಲ್ಲ ಎಂದಿದ್ದಾರೆ.

ದಸರಾ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತೊಂದು ಹೇಳಿಕೆ ನೀಡಿದ್ದು, ಮುಂದಿನ 1 ವರ್ಷ ದೇವಿ ನಮಗೆ ಆಶೀರ್ವಾದ ಮಾಡುತ್ತಾಳೆ. ದೇವಿ ಇನ್ನೊಂದು ವರ್ಷದ ತನಕ ಆಶೀರ್ವಾದ ಮಾಡಲಿ. ಇನ್ನೊಂದು ವರ್ಷದ ತನಕ ಕೆಲಸ ಮಾಡಲು ಶಕ್ತಿ ಕೊಡಲಿ ಎಂದು ದೇವಿ ಚಾಮುಂಡಿಗೆ ಬೇಡಿಕೊಳ್ಳುತ್ತೇನೆ ಎಂದಿರುವ ಮಾತು ಹಲವರಲ್ಲಿ ಅಚ್ಚರಿಗೆ ಕಾರಣವಾಗಿದೆ.

ದಸರಾ ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯ ಉಲ್ಲೇಖಿಸಿದ ಮಾತಿನಿಂದ ಸಿಎಂ ಸ್ಥಾನ ಹಂಚಿಕೆ ಬಗ್ಗೆ ಮಾತುಗಳು ಶುರುವಾಗಿವೆ. ದಸರಾ ಭಾಷಣದಲ್ಲಿ ಸಿಎಂ ಮಾತು ಮಾತಿಗೂ ಚಾಮುಂಡಿಯನ್ನ ನೆನೆದಿದ್ದಾರೆ. ಇನ್ನು ಒಂದು ವರ್ಷ ಶಕ್ತಿ ನೀಡಲಿ ಎನ್ನುವ ಮೂಲಕ ಅಧಿಕಾರ ಬಿಟ್ಟು ಕೊಡುವ ಸುಳಿವು ನೀಡಿದ್ರಾ..? ಅದನ್ನೇ ಭಾಷಣದ ಕೊನೆಯಲ್ಲಿ ಹೇಳುವ ಮೂಲಕ ಕುತೂಹಲ ಮೂಡಿಸಿದ್ರಾ..? ಅನ್ನೋ ಪ್ರಶ್ನೆ ಕಾಡ್ತಿದೆ.

ಆದರೆ ಸಿಎಂ ಸಿದ್ದರಾಮಯ್ಯ ಮುಂದಿನ ವರ್ಷದ ದಸರಾಗೆ ಮತ್ತೆ ಬರ್ತೇವೆ. ಈ ವರ್ಷ ನಮ್ಮನ್ನು ಕಾಯುವ ಭಾರ ಚಾಮುಂಡಿ ಮೇಲೆ ಇದೆ ಎನ್ನುವುದನ್ನು ಹೇಳುವುದಕ್ಕೆ ಈ ರೀತಿ ಹೇಳಿದ್ದಾರೆ. ಭಾಷಣ ಮಾಡುವಾಗ ಕೆಲವೊಮ್ಮೆ ಪದಗಳು ಹಿಂದೆ ಮುಂದೆ ಆಗುವುದು ಸಹಜ ಎನ್ನುತ್ತಿವೆ ಸಿಎಂ ಆಪ್ತ ಮೂಲಗಳು.