ಬೆಂಗಳೂರು : 2026 ರ ಟಿ20 ವಿಶ್ವಕಪ್ ಪಂದ್ಯಾವಳಿಯು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಡುವಿನ ಸಂಘರ್ಷ ವಿಕೋಪಕ್ಕೆ ತೆರಳುತ್ತಿದೆ. ಇದರ ಪರಿಣಾಮ ಐಸಿಸಿಯು ಈಗ ವಿಶ್ವ ಕ್ರಿಕೆಟ್ನ ಚಿತ್ರಣವನ್ನೇ ಶಾಶ್ವತವಾಗಿ ಬದಲಾಯಿಸಬಹುದಾದ ಸಭೆಗೆ ಸಿದ್ಧತೆ ನಡೆಸುತ್ತಿದೆ.

ಪಿಸಿಬಿಯನ್ನು ಸಂಪೂರ್ಣವಾಗಿ ಹೊರಗಿಡುವ ಕಠಿಣ ತೀರ್ಮಾನಕ್ಕೆ ಆಡಳಿತ ಮಂಡಳಿಯು ಬರುವ ಲಕ್ಷಣಗಳು ದಟ್ಟವಾಗಿವೆ. ಫೆಬ್ರವರಿ 15 ರಂದು ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕ್ ಘೋಷಿಸಿದ ನಂತರ, ಪಾಕಿಸ್ತಾನದ ಮೇಲೆ ತೀವ್ರ ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಐಸಿಸಿ ಅಧ್ಯಕ್ಷ ಜಯ್ ಶಾ ನೇತೃತ್ವದ ಸಮಿತಿ ಚಿಂತನೆಯಲ್ಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ : Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್
ಪಂದ್ಯದಲ್ಲಿ ಭಾಗವಹಿಸದಂತೆ ಶೆಬಹಾಜ್ ಸರ್ಕಾರದ ತಾಕೀತು..!
ಬಾಂಗ್ಲಾದೇಶವನ್ನು ಕೈಬಿಟ್ಟ ಬಳಿಕ ಕುದಿಯುತ್ತಿದ್ದ ಪಾಕ್ ಉದ್ವಿಗ್ನತೆಯು ತನ್ನದೇ ಆದ ಮೊಂಡುತನದಿಂದ ಇನ್ನಷ್ಟು ಹೆಚ್ಚುವಂತಾಗಿದೆ. ಪಾಕಿಸ್ತಾನ ಸರ್ಕಾರವು ತನ್ನ ತಂಡವನ್ನು ಶ್ರೀಲಂಕಾಕ್ಕೆ ಕಳುಹಿಸಿಕೊಡಲು ಅನುಮತಿಸಿದೆ. ಆದರೆ “ಆಯ್ದ ತಂಡಗಳೊಂದಿಗೆ ಭಾಗವಹಿಸುವ ಮಾತನ್ನಾಡಿತ್ತು. ಅಲ್ಲದೆ ಪಾಕ್ ತಂಡವು ವಿಶ್ವಕಪ್ ಕ್ರಿಕೆಟ್ನಲ್ಲಿ ಭಾಗಿಯಾಗದಂತೆ ದ್ರೋಹಿ ರಾಷ್ಟ್ರದ ಶೆಹಬಾಜ್ ಶರೀಫ್ ಸರ್ಕಾರ ನಿರ್ಬಂಧವಿಧಿಸಿದೆ.

ಭಾರತದಿಂದ ಪಂದ್ಯಗಳನ್ನು ಸ್ಥಳಾಂತರಿಸುವ ಬಾಂಗ್ಲಾದೇಶದ ವಿನಂತಿಯನ್ನು ಐಸಿಸಿ ತಿರಸ್ಕರಿಸಿತ್ತು. ಇದು ಪಾಕಿಸ್ತಾನವು ಬಾಂಗ್ಲಾದೇಶದ ವಿಚಾರದಲ್ಲಿ ಒಗ್ಗಟ್ಟಿನ ನಿಲುವು ತಾಳಿದ್ದಾಗಿ ತೋರಿಸಿಕೊಂಡಿತ್ತು. ಭಯೋತ್ಪಾದಕ ದಾಳಿಗಳ ಹಾಗೂ ರಾಜಕೀಯ ಉದ್ವಿಗ್ನತೆಗಳ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸುವಂತೆ ಭಾರತ ತಂಡವು ಸಾಕಷ್ಟು ಒತ್ತಡವನ್ನು ಎದುರಿಸಿದೆ.
ಇದರ ಹೊರತಾಗಿಯೂ, ಭಾರತ ತಂಡವು ಪಾಕಿಸ್ತಾನದಲ್ಲಿ 2025 ರ ಏಷ್ಯಾ ಕಪ್ ಪಂದ್ಯದಲ್ಲಿ ಭಾಗವಹಿಸಿತ್ತು, ಬಿಸಿಸಿಐನ ಸಮಾನ ಸದಸ್ಯ ರಾಷ್ಟ್ರಗಳ ಬಾಂಧವ್ಯ ಮತ್ತು ಜಾಗತಿಕ ಆಟಕ್ಕೆ ಆದ್ಯತೆ ನೀಡಿತ್ತು. ಆದರೆ ಇದೇ ರೀತಿಯಾಗಿ ಜವಾಬ್ದಾರಿ ಮೆರೆಯಬೇಕಿದ್ದ ಪಾಕಿಸ್ತಾನವು ಕ್ರೀಡೆಯನ್ನು ಕ್ರೀಡೆಯಂತೆ ನೋಡಿಕೊಳ್ಳದೇ ನಮಗೆ ರಾಜಕೀಯವೇ, ಸಂಘರ್ಷವೇ ಮುಖ್ಯ ಎಂದು ಅಪಾಯಕಾರಿ ಹೆಜ್ಜೆಗೆ ಮುಂದಾಗಿದ್ದು, ಇದು ಪಾಕ್ಗೆ ಮುಟ್ಟಿ ನೋಡಿಕೊಳ್ಳುವ ಉತ್ತರಕ್ಕೆ ಕಾರಣವಾಗಲಿದೆ.













