• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕೋಮುಧ್ರುವೀಕರಣದ ರಾಜಕಾರಣ ಓಟು ತಂದುಕೊಡಬಹುದೇ ಹೊರತು ನಿರುದ್ಯೋಗ ಪರಿಹಾರವಾಗದು

ಫಾತಿಮಾ by ಫಾತಿಮಾ
January 31, 2022
in ದೇಶ
0
ಕೋಮುಧ್ರುವೀಕರಣದ ರಾಜಕಾರಣ ಓಟು ತಂದುಕೊಡಬಹುದೇ ಹೊರತು ನಿರುದ್ಯೋಗ ಪರಿಹಾರವಾಗದು
Share on WhatsAppShare on FacebookShare on Telegram

2004ರ ನಂತರ ಭಾರತದ ಚುನಾವಾಣಾ ಪರಿಕಲ್ಪನೆಯು ಒಂದು ಹೊಸ ಮಜಲಿನತ್ತ ಹೊರಳಿತ್ತು. ಜಾತಿ ರಾಜಕಾರಣದ ಅಗಾಧ ಬೆಂಬಲವಿದ್ದೂ 2005ರಲ್ಲಿ ಬಿಹಾರದಲ್ಲಿ ಲಾಲೂ ಪ್ರಸಾದ್ ಸೋತು ನಿತೀಶ್ ಕುಮಾರ್ ಅಧಿಕಾರಕ್ಕೇರಿದ್ದರು. ಚುನಾವಣಾ ಪ್ರಚಾರದಲ್ಲಿ ನಿತೀಶ್, ಲಾಠಿಗಳಿಗಿಂತ ದೊಡ್ಡ ಆಯುಧ ಪೆನ್. ಸ್ಪಷ್ಟ ಇಂಗ್ಲಿಷ್, ಉನ್ನತ ಶಿಕ್ಷಣ ನಿಮ್ಮ ಬದುಕನ್ನು ಉತ್ತಮಗೊಳಿಸಬಹುದು, ಹೊಡೆದಾಟವಲ್ಲ ಎಂದಾಗ ರಾಜಕೀಯ ಪಂಡಿತರು ಬಿಹಾರದಂತಹ ಹಿಂದುಳಿದ, ಒರಟರ ರಾಜ್ಯದಲ್ಲಿ ನಿತೀಶ್ ಈ ರೀತಿ ಮಾತಾಡಿ ಈಗಿರುವ ಓಟನ್ನು ಕಳೆದುಕೊಳ್ಳುತ್ತಾರೆ ಎಂದು ನಗೆಯಾಡಿದ್ದರು. ಆದರೆ ಅನಕ್ಷರಸ್ಥ, ಜಾತಿವಾದಿ ಎಂದು ಪ್ರಜ್ಞಾವಂತರಿಂದ ಕರೆಸಿಕೊಳ್ಳುವ ಬಿಹಾರಿಗಳು ನಿತೀಶ್ ಕುಮಾರ್ ಅವರನ್ನು ಗೆಲ್ಲಿಸಿದ್ದರು. ಆ ಚುನಾವಣೆಯಲ್ಲಿ ಪೆನ್ ಲಾಠಿಯ ಮೇಲೆ ಮೇಲುಗೈ ಸಾಧಿಸಿತ್ತು. ಭಾರತ ಅಭಿವೃದ್ಧಿಯ ಹೊಸ ರಾಜಕೀಯ ಶಕೆಯೊಂದಕ್ಕೆ ಕಾಲಿಡುತ್ತಿದೆಯೇನೋ ಎನ್ನುವ ಭಾವ ಮೂಡಿತ್ತು. ಅದಾದ ನಂತರ 2009ರಲ್ಲಿ ಯುಪಿಎ 2004 ಕ್ಕಿಂತ ಹೆಚ್ಚಿನ ಸೀಟ್ನೊಂದಿಗೆ ಅಧಿಕಾರಕ್ಕೆ ಬಂತು. ಮಹತ್ವಾಕಾಂಕ್ಷೆಯ ಭಾರತದ ಉದಯದ ಆಸೆ ಮತ್ತೊಮ್ಮೆ ಗರಿಗೆದರಿತು.

ADVERTISEMENT

ಆದರೆ ಈಗ ನಾವು ವರ್ಷದಿಂದ ವರ್ಷಕ್ಕೆ ಹಿಂದಕ್ಕೆ ಚಲಿಸುತ್ತಿದ್ದೇವೆ. ಚುನಾವಣಾ ರಾಜಕಾರಣದಲ್ಲಿ ದೊಡ್ಡ ವಿಚಾರ ಆಗಬಾರದಿದ್ದ ವಿಚಾರಗಳು ಮಹತ್ವ ಪಡೆದುಕೊಳ್ಳುತ್ತಿವೆ. ಶಿಕ್ಷಣ, ನಿರುದ್ಯೋಗ, ಬೆಲೆ ಏರಿಕೆ, ಹಣ ದುಬ್ಬರ, ಆರ್ಥಿಕ ಸಂಕಷ್ಟ ಮುಂತಾದ ವಿಚಾರಗಳು ಹಿನ್ನೆಲೆಗೆ ಸರಿದು ಧರ್ಮ, ಮಂದಿರ, ಮಸೀದಿಗಳು ಅಧಿಕಾರ ಯಾರು ಹಿಡಿಯಬೇಕು ಎಂಬುವುದನ್ನು ನಿರ್ಧರಿಸುವ ಅಂಶಗಳಾಗಿವೆ.

ಇತ್ತೀಚೆಗಷ್ಟೇ ಬಿಹಾರ ಮತ್ತು ಉತ್ತರ ಪ್ರದೇಶದ ಉದ್ಯೋಗಾಕಾಂಕ್ಷಿ ಯುವಕರು ಸರ್ಕಾರಿ ಆಸ್ತಿಗಳನ್ನು ಸುಟ್ಟು ಹಾಕಿದ್ದರು. ರೈಲ್ವೆ ನೇಮಕಾತಿ ಮಂಡಳಿಯು ಟ್ರಾಫಿಕ್ ಅಸಿಸ್ಟೆಂಟ್, ಗೂಡ್ಸ್ ಗಾರ್ಡ್ ಗಳಂತಹ ನಾನ್ ಟೆಕ್ನಿಕಲ್ ಹುದ್ದೆಗಳಿಗೆ ಪರೀಕ್ಷೆ ನಡೆಸಿತ್ತು. ಕೇವಲ 35,000 ಹುದ್ದೆಗಳಿಗೆ ಸುಮಾರು 1.25 ಕೋಟಿ ಮಂದಿ ಅರ್ಜಿ ಸಲ್ಲಿಸಿದ್ದರು ಮತ್ತು 60 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರರ್ಥ ಪ್ರತಿ ಒಂದು ಹುದ್ದೆಗೆ 354 ಮಂದಿ ಅರ್ಜಿ ಸಲ್ಲಿಸಿದಂತೆ ಮತ್ತು ಒಬ್ಬ ಅಭ್ಯರ್ಥಿ ಆಯ್ಕೆಯಾಗುವುದೆಂದರೆ ಉಳಿದ 353 ಮಂದಿಗೆ ಕೆಲಸ ಇಲ್ಲ ಎಂದು. 2004ರಲ್ಲಿ ಬಿಹಾರದಲ್ಲಿದ್ದ ಟ್ರೆಂಡ್ ಮುಂದುವರಿದಿದ್ದರೆ, ನಿರುದ್ಯೋಗ ಮತ್ತು ಉದ್ಯೋಗದ ಅಭದ್ರತೆ ಇಷ್ಟು ಭೀಕರವಾಗಿರುವ ದೇಶವೊಂದರಲ್ಲಿ ಇದೇ ಮುಖ್ಯ ಚುನಾವಣಾ ವಿಚಾರವಾಗಬೇಕಿತ್ತು. ಸುಶಿಕ್ಷಿತ ಯುವ ಸಮುದಾಯಕ್ಕೆ ಉದ್ಯೋಗ ಒದಗಿಸುವುದರ ಬಗ್ಗೆ ಈ ದೇಶದ ರಾಜಕಾರಣಿಗಳು ಮಾತಾಡಬೇಕಿತ್ತು.

ಆದರೆ ಎಲ್ಲಾ ಬಿಟ್ಟು ಯ.ಪಿ ಮುಖ್ಯಮಂತ್ರಿ ಶುಕ್ರವಾರ “ಅವರು ಜಿನ್ನಾ ಅವರ ಆರಾಧಕರು, ನಾವು ಸರ್ದಾರ್ ಪಟೇಲ್ ಅವರನ್ನು ಪ್ರಾರ್ಥಿಸುತ್ತೇವೆ. ಅವರು ಪಾಕಿಸ್ತಾನವನ್ನು ಆರಾಧಿಸುತ್ತಾರೆ, ನಾವು ಭಾರತ ಮಾತೆಯನ್ನು ಪ್ರೀತಿಸುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಂದೆಡೆ ಚುನಾವಣಾ ಪ್ರಚಾರ ಸಭೆಯಲ್ಲಿ ಗೃಹ ಮಂತ್ರಿ ಅಮಿತ್ ಶಾ “ನೀವು ಎಸ್ಪಿಯ ಜಯಂತ್ ಅವರಿಗೆ ಓಟು ಹಾಕಿದರೆ ಗೆದ್ದ ನಂತರ ಆಜಂ ಖಾನ್ ನಿಮ್ಮ ಶಾಸಕರಾಗುತ್ತಾರೆ” ಎಂದು ನೇರವಾಗಿ ಕೋಮು ಧ್ರುವೀಕರಣದ ಮಾತನಾಡುತ್ತಾರೆ.

ಉದ್ಯೋಗ, ಭದ್ರತೆಯನ್ನು ಕೇಳುವವರ ಮುಂದೆ ಈ ದೇಶದ 95% ಮತದಾರರು ಹುಟ್ಟುವ ಮೊದಲೇ ಮರಣ ಹೊಂದಿದ ಜಿನ್ನಾ ಮತ್ತು ಪಟೇಲರ ನಡುವೆ ಒಬ್ಬರನ್ನು ಆಯ್ದುಕೊಳ್ಳಬೇಕಾದ ಅವಕಾಶ ಇಡಲಾಗುತ್ತಿದೆ. ‘ನೀವು ನಿರುದ್ಯೋಗಿಗಳು ಎನ್ನುವುದು ನಮಗೊತ್ತು, ನೀವು ಹತಾಶರಾಗಿದ್ದೀರಿ ಎನ್ನುವುದೂ ಗೊತ್ತು, ನಿಮಗೆ ನಮ್ಮ ಮೇಲೆ ಆಕ್ರೋಶವಿದೆ ಎನ್ನುವುದೂ ನಮಗೆ ಗೊತ್ತು. ನಿಮ್ಮ ಹಿರಿಯರು ಕಳೆದ ಎಪ್ಪತ್ತು ವರ್ಷಗಳಲ್ಲಿ ಮಾಡಿದ ತಪ್ಪಿನ ಫಲವನ್ನು ನಿಮ್ಮ ಮೇಲೆ ಹೊರಿಸುತ್ತಿದ್ದೇವೆ. ನಿಮಗೆ ಉದ್ಯೋಗ ಒದಗಿಸಿಕೊಡಲು ನಮ್ಮಿಂದ ಸಾಧ್ಯವಿಲ್ಲ. ಆದರೆ ದೇಶಕ್ಕಾಗಿ, ಧರ್ಮಕ್ಕಾಗಿ ನಮ್ಮನ್ನು ಸಹಿಸಿಕೊಳ್ಳಲಾರಿರಾ?’ ಎಂದು ಮತದಾರರನ್ನು ಕೇಳುವಂತಿದೆ ರಾಜಕಾರಣಿಗಳ ವರಸೆ.

ರಾಷ್ಟ್ರವೊಂದರ ಅಥವಾ ನಾಗರಿಕತೆಯೊಂದರ ಭವಿಷ್ಯವು ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದರ ಮೂಲಕ ನಿರ್ಧರಿಸಲ್ಪಡುವುದಿಲ್ಲ. ಪ್ರಜೆಗಳು, ವಿಶೇಷವಾಗಿ ಅದರ ಯುವಜನರು ಏನು ಯೋಚಿಸುತ್ತಿದ್ದಾರೆ ಎಂಬುದರ ಮೂಲಕ ಇದನ್ನು ವ್ಯಾಖ್ಯಾನಿಸಲಾಗುತ್ತದೆ. ಭವಿಷ್ಯದ ಆಕಾಂಕ್ಷೆಗಳ ಬಗ್ಗೆ ಯೋಚಿಸಬೇಕೇ ಅಥವಾ ಭೂತಕಾಲದ ಬಗ್ಗೆ ಕೊರಗಬೇಕೇ ಎನ್ನುವುದನ್ನು ಯುವ ಸಮೂಹವೇ ಯೋಚಿಸಬೇಕು. ಈಗೀಗ ದೇಶದ ಹಳ್ಳಿಹಳ್ಳಿಗಳಲ್ಲೂ ಮೊಬೈಲ್ನತ್ತ ಕಣ್ಣು ನೆಟ್ಟು ಕೂತ ಯುವ ಸಮುದಾಯವನ್ನು ಕಾಣಬಹುದು. ಅರಿವಿನ, ಮಾಹಿತಿಯ ಆಗರವಾಗಬೇಕಿದ್ದ ಇಂಟರ್ನೆಟ್ ಸುಳ್ಳು ಸುದ್ದಿ ಹಬ್ಬಲು, ದ್ವೇಷವನ್ನು ಮತ್ತಷ್ಟು ತೀವ್ರವಾಗಿ ಪ್ರಚುರಪಡಿಸಲು ಬಳಕೆಯಾಗುತ್ತದೆ. ಅಮಾಯಕರು ‘ಧರ್ಮ ಮತ್ತು ದೇಶದ ಒಳಿತಿ’ಗಾಗಿ ಎನ್ನುವ ಭ್ರಮೆಯಲ್ಲಿ ಜ್ವಲಂತ ಸಮಸ್ಯೆಗಳಿಗೆ ಗಮನ ಕೊಡದೆ ಭವಿಷ್ಯದಲ್ಲಿ ಧರ್ಮದ ಮೇಲೆ ಆಗಬಹುದಾದ ದಾಳಿಯ ಬಗ್ಗೆ ತಲೆಕೆಡಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಕೋಮುಧ್ರುವೀಕರಣವು ತಾತ್ಕಾಲಿಕವಾಗಿ ಪಕ್ಷಗಳಿಗೆ ಓಟು ತಂದುಕೊಡಲಿವೆಯಾದರೂ ನಿರುದ್ಯೋಗದ ಪ್ರಮಾಣ ಇದೇ ರೀತಿ ಉಳಿಯುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಸಾಮೂಹಿಕ ಹತಾಶೆಯು ಧರ್ಮ ತೊಂದರೆಯಲ್ಲಿರುವ ಕಾಲ್ಪನಿಕ ಭಯದ ಅಣೆಕಟ್ಟನ್ನು ಒಂದು ದಿನ ಖಂಡಿತ ಒಡೆಯಲಿದೆ, ಆಗ ಧರ್ಮ ರಾಜಕಾರಣಕ್ಕೆ ಬೆಂಬಲವಾಗಿ ನಿಂತವರೆಲ್ಲಾ ತಕ್ಕ ಬೆಲೆ ತೆರೆ ತೆರಲೇಬೇಕಾಗುತ್ತದೆ. ಇತಿಹಾಸಕ್ಕೆ ಯಾರು ಯಾವ ಚುನಾವಣೆಯಲ್ಲಿ ಗೆದ್ದರು ಎಂಬುವುದು ಮುಖ್ಯವಾಗುವುದಿಲ್ಲ, ಬದಲಾಗಿ ಸೌಹಾರ್ದದಂತಹ ಈ ಮಣ್ಣಿನ ಸಹಜ ಗುಣವನ್ನು ಉಳಿಸುವಲ್ಲಿ ಯಾರು ಎಷ್ಟು ಮುತುವರ್ಜಿ ವಹಿಸಿದರು ಎನ್ನುವುದು ಮಾತ್ರ ಮುಖ್ಯವಾಗುತ್ತದೆ.

Tags: BJPCongress PartyCovid 19ಕೋಮುಧ್ರುವೀಕರಣನರೇಂದ್ರ ಮೋದಿನಿರುದ್ಯೋಗಬಿಜೆಪಿ
Previous Post

ಪುನೀತ್ ರಾಜ್‍ಕುಮಾರ್ ಆದರ್ಶದ ಜೀವನವನ್ನು ಮುಂದಿನ ಪೀಳಿಗೆಗೆ ತಿಳಿಯಬೇಕು : ಸಚಿವ ವಿ.ಸೋಮಣ್ಣ

Next Post

ಮೈಸೂರು ಮಹಾರಾಜರು ಒಡವೆ ಮಾರಿ KRS ಕಟ್ಟಿಸಿದ್ರು, ಇವರೇನ್ ಮಾಡಿದಾರೆ : ಶಾಸಕ ನಾಗೇಂದ್ರ ಗರಂ

Related Posts

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
0

ಪ್ರಮುಖಪಾತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ, "ಬಿಗ್ ಬಾಸ್" ಖ್ಯಾತಿಯ ತನಿಷಾ ಕುಪ್ಪಂಡ ಹಾಗೂ ಕಿಶನ್ ನಟನೆ . ಆರ್ ಹೆಚ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್ ಹನುಮಂತರಾಜು...

Read moreDetails
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
ವಿಮಾನ ದುರಂತ; ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

ವಿಮಾನ ದುರಂತ; ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

June 15, 2025
ಈ ಸಾವು ನ್ಯಾಯವೇ??

ಈ ಸಾವು ನ್ಯಾಯವೇ??

June 15, 2025

ವಿಮಾನ ದುರಂತ; ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

June 14, 2025
Next Post
ಮೈಸೂರು ಮಹಾರಾಜರು ಒಡವೆ ಮಾರಿ KRS ಕಟ್ಟಿಸಿದ್ರು, ಇವರೇನ್ ಮಾಡಿದಾರೆ : ಶಾಸಕ ನಾಗೇಂದ್ರ ಗರಂ

ಮೈಸೂರು ಮಹಾರಾಜರು ಒಡವೆ ಮಾರಿ KRS ಕಟ್ಟಿಸಿದ್ರು, ಇವರೇನ್ ಮಾಡಿದಾರೆ : ಶಾಸಕ ನಾಗೇಂದ್ರ ಗರಂ

Please login to join discussion

Recent News

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ
Top Story

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

by ಪ್ರತಿಧ್ವನಿ
June 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada