• Home
  • About Us
  • ಕರ್ನಾಟಕ
Sunday, October 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಪಿಎಂ ಕಿಸಾನ್ ಯೋಜನೆ ನಿಜವಾಗಿ ರೈತರಿಗೆ ತಲುಪಲು ಸರ್ಕಾರದ ಆದೇಶಗಳೆ ಅಡ್ಡಿ!

ರಾಕೇಶ್ ಬಿಜಾಪುರ್ by ರಾಕೇಶ್ ಬಿಜಾಪುರ್
January 22, 2022
in ಕರ್ನಾಟಕ, ದೇಶ
0
ಪಿಎಂ ಕಿಸಾನ್ ಯೋಜನೆ ನಿಜವಾಗಿ ರೈತರಿಗೆ ತಲುಪಲು ಸರ್ಕಾರದ ಆದೇಶಗಳೆ ಅಡ್ಡಿ!
Share on WhatsAppShare on FacebookShare on Telegram

ಹವಾಮಾನ ವೈಪರೀತ್ಯ ಹಾಗೂ ಸೂಕ್ತ ಮಾರುಕಟ್ಟೆ ದೊರೆಯದ ಕಾರಣ ರೈತರು ಪ್ರತಿವರ್ಷ ಸಂಕಷ್ಟ ಅನುಭವಿಸುತ್ತಾರೆ. ಇದನ್ನ ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪೈಕಿ ಪಿಎಂ ಕಿಸಾನ್ ಯೋಜನೆ ಕೂಡ ಒಂದಾಗಿದೆ. ಆದರೆ ಈ ಯೋಜನೆ ನಿಜವಾಗಿ ರೈತರಿಗೆ ತಲುಪಲು ಸರ್ಕಾರದ ಆದೇಶಗಳೆ ಅಡ್ಡಿಯಾಗಿ. ಅಧಿಕಾರಿಗಳ ನಿರ್ಲಕ್ಷ್ಯ, ಕೆಳ ಹಂತದ ಸಿಬ್ಬಂದಿಗೆ ರೈತರ ಪರವಾಗಿ ಇಚ್ಛಾಶಕ್ತಿ ಇಲ್ಲದಿರೋದೆ ಈ ಯೋಜನೆ ರೈತರಿಗೆ ಸರಿಯಾಗಿ ದೊರೆಯದಂತೆ ಮಾಡಿದೆ.

ADVERTISEMENT

ಯೋಜನೆ 2019 ರಲ್ಲಿ ಈ ಯೋಜನೆ ಜಾರಿಯಾಗಿದೆ. ಪ್ರತಿ ವರ್ಷ ರೈತರಿಗೆ 12 ಸಾವಿರ ರೂಪಾಯಿ ನೀಡಲು ಸರ್ಕಾರ ಯೋಚನೆ ಮಾಡಿಕೊಂಡು ಯೋಜನೆ ಹಾಕಿದೆ. ಆದರೆ ಇದುವರೆಗೂ ಎಲ್ಲ ರೈತರಿಗೆ ಇದರ ಲಾಭ ದೊರೆತಿಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರೈತರಿಗೆ ಸಮಯಕ್ಕೆ ಸರಿಯಾಗಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಹಣ ದೊರೆಯುತ್ತಿಲ್ಲ. ಪ್ರತಿ ವರ್ಷ ಮೂರು ಕಂತುಗಳಲ್ಲಿ ಸರ್ಕಾರ ರೈತರ ಖಾತೆಗೆ ಹಣ ಹಾಕುತ್ತದೆ. ಕೆಲವು ರೈತರಿಗೆ ಒಂದು ಕಂತು ಹಣ, ಮತ್ತೆ ಕೆಲವು ರೈತರಿಗೆ ಎರಡು ಕಂತು ಹಣ ಜಮಾ ಆಗಿದೆ. ಆದರೆ ಕೆಲ ತಿಂಗಳುಗಳಿಂದ ಉಳಿದ ಕಂತಿನ ಹಣ ಬ್ಯಾಂಕ್ ಖಾತೆಗೆ ಜಮೆ ಆಗದೇ ಇರುವುದರಿಂದ ರೈತರು ನಿತ್ಯ ಕೃಷಿ ಇಲಾಖೆ, ಬ್ಯಾಂಕ್ ಗಳಿಗೆ ಅಲೆದಾಡಿ, ಸದ್ಯ ಸಿಎಸ್ಸಿ ಕೇಂದ್ರಗಳತ್ತ ಮುಖ ಮಾಡುವಂತಾಗಿದೆ. ವಿಜಯಪುರ ಜಿಲ್ಲೆಯೊಂದರಲ್ಲೇ ಒಟ್ಟು 2,55,306 ರೈತರು ಪಿ.ಎಂ.ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಜನವರಿ ಮೊದಲ ವಾರದಲ್ಲಿ ಬಿಡುಗಡೆಗೊಳಿಸಿದ್ದ ಕಂತಿನ ಹಣ ಕೇವಲ 1,57,011 ರೈತರ ಖಾತೆಗೆ ಜಮೆ ಆಗಿದೆ. ಉಳಿದ ಹಣ ಇನ್ನೂ ರೈತರ ಕೈ ಸೇರಿಲ್ಲ. ತಾಂತ್ರಿಕ ಕಾರಣ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ರೈತರನ್ನು ಹೈರಾಣಾಗಿಸಿದೆ.

ಇ-ಕೆವೈಸಿ ಆಗದೆ ಇರುವುದು, ಎನ್.ಸಿ.ಸಿ.ಐ- ಆಧಾರ್ ಹೊಂದಾಣಿಕೆ ಆಗದೇ ಇರುವುದು, ಜಮೀನು ಪತ್ರ ಮತ್ತಿತರ ಕಾರಣಗಳಿಂದ ಹಣ ಜಮೆ ಆಗುತ್ತಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸುತ್ತಿದ್ದಾರೆ. ರೈತರು ಈ ಸಮಸ್ಯೆ ಪರಿಹಾರಕ್ಕೆ ಕೆಲಸ ಕಾರ್ಯ ಬಿಟ್ಟು ಅಲೆಯುವಂತಾಗಿದೆ. ರೈತರು ತಮಗೆ ಹಣ ಬಾರದ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಲು ಹೋದರೆ ದಾಖಲೆ ಸರಿಯಾಗಿ ನೀಡಿಲ್ಲ ಎನ್ನುತ್ತಿದ್ದಾರೆ. ಅಧಿಕಾರಿಗಳು ಹೇಳಿದ ದಾಖಲೆ ಪಡೆಯಲು ರೈತ ಸಂಪರ್ಕ ಕೇಂದ್ರದಲ್ಲಿ ವಿಚಾರಿಸಲು ಹೋದರೆ ಸರ್ವರ್ ಇಲ್ಲ ಅಂತ ವಾಪಸ್ ಕಳಿಸಿ ಬಿಡುತ್ತಾರೆ. ಬ್ಯಾಂಕಿನಲ್ಲಿ ಆಧಾರ್ ಲಿಂಕ್ ಮಾಡಿಸಲು ಹೋದರೆ ಈಗಾಗಲೇ ಲಿಂಕ್ ಇರುವುದಾಗಿ ಹೇಳುತ್ತಾರೆ. ಎಲ್ಲಿ ಹೋದರೂ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಹೀಗಾಗಿ ರೈತರಲ್ಲಿ ಯೋಜನೆಯ ಪ್ರಯೋಜನ ಪಡೆಯೋದು ಹೇಗೆ, ಸರ್ಕಾರ ದಿನಕ್ಕೊಂದು ನಿಯಮ ಬದಲಿಸಿದರೆ ಅದು ರೈತರಿಗೆ ತಲುಪೋದು ಯಾವಾಗಾ ಎಂಬ ಪ್ರಶ್ನೆ ಮೂಡಿದೆ. ಅಷ್ಟೇ ಅಲ್ಲ ಈ ಹಿಂದಿನ ಕಂತುಗಳ ಹಣವೇ ಪಾವತಿಯಾಗಿಲ್ಲ, ಮುಂದಿನ ಕಂತುಗಳಾದ್ರು ಬರುತ್ತವೋ ಇಲ್ಲವೋ ಎಂಬ ಆತಂಕ ರೈತರಿಗೆ ಕಾಡುತ್ತಿದೆ. ಅಧಿಕಾರಿಗಳು ಸಹ ರೈತರಿಗೆ ಸರಿಯಾದ ಮಾಹಿತಿ ನೀಡಿ ಯೋಜನೆ ರೈತರ ಖಾತೆಗೆ ತಲುಪುವಂತೆ ಮಾಡಬೇಕಾಗಿದೆ.

“ಯೋಜನೆ ಆರಂಭವಾದ ಮೊದಲ ಕಂತಿನಿಂದ ಪ್ರತಿ ಬಾರಿ ಖಾತೆಗೆ 2 ಸಾವಿರ ಜಮಾ ಆಗಿದೆ. ಈ ಹಣದಿಂದ ಸಂಸಾರ ಸಾಗಿದೆ. ಆದರೆ, ಎರಡ್ಮೂರು ಕಂತುಗಳ ಹಣ ಬಂದೇ ಇಲ್ಲ. ಬ್ಯಾಂಕಿನಲ್ಲಿ ಕೇಳಿದರೆ ಹಣ ಜಮಾ ಆಗಿಲ್ಲ ಎಂದು ಕೇಳಿ ಕಳಿಸುತ್ತಾರೆ. ಆಧಾರ್ ಲಿಂಕ್ ಮಾಡಿಸಿದರೆ ಬರುತ್ತದೆ ಎಂದಿದ್ದಕ್ಕೆ ಬ್ಯಾಂಕಿಗೆ ತೆರಳಿದ್ದೆ. ಅಲ್ಲಿ ಕಂಪ್ಯೂಟರ್ ಕೇಂದ್ರಕ್ಕೆ ಹೋಗಲು ಹೇಳಿದರು. ಅಲ್ಲಿ ಸರ್ವರ್ ಇಲ್ಲ ಅಂತ ಹೇಳುತ್ತಿದ್ದಾರೆ. ಏನು ಮಾಡಬೇಕೆಂದು ತಿಳಿತಿಲ್ಲ” ಎನ್ನುತ್ತಾರೆ ರೈತ ರವಿಂದ್ ಪಾಟೀಲ್.

Tags: BJPCongress PartyFarmersThe PM Kisan Scheme is actually a disruption of government orders to reach the farmersಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಯದುವೀರನಾಗಿ ನಿಖಿಲ್ ಕುಮಾರಸ್ವಾಮಿ!

Next Post

Goa | ಟಿಕೆಟ್ ನಿರಾಕರಣೆ ಬಿಜೆಪಿ ತೊರೆದ ಪ್ರಮುಖ ನಾಯಕರು

Related Posts

Top Story

DK Shivakumar: ಜೆ.ಪಿ. ಪಾರ್ಕ್ ನಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಪುತ್ಥಳಿ ‌ಮರುಸ್ಥಾಪನೆ ಭರವಸೆ..!!

by ಪ್ರತಿಧ್ವನಿ
October 12, 2025
0

ಉದ್ಯಾನದ ಮೂಲಸೌಕರ್ಯ ಸಮಸ್ಯೆಗಳಿಗೆ ಶೀಘ್ರ ಪರಿಹಾರ. ಜಿಬಿಎ ವ್ಯಾಪ್ತಿಯ ಕುಂದುಕೊರತೆ, ಸಮಸ್ಯೆಗಳಿಗೆ 1533 ಸಹಾಯವಾಣಿಗೆ ದೂರು ನೀಡಿ "ಜೆ.ಪಿ ಉದ್ಯಾನದಲ್ಲಿ ಜಯಪ್ರಕಾಶ್ ನಾರಾಯಣ ಅವರ ಪುತ್ಥಳಿ ಮರು...

Read moreDetails

Santhosh Lad: ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

October 11, 2025

CM Siddaramaiah: ಹಂಪನಾ ಅವರು ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ: ಸಿ.ಎಂ.ಸಿದ್ದರಾಮಯ್ಯ

October 11, 2025
Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!

Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!

October 11, 2025

ಅವಹೇಳನಕಾರಿ ಕಾಮೆಂಟ್‌ ಹಾಕಿದ ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ಮೇಲೆ ಬಿತ್ತು ಕೇಸ್..

October 11, 2025
Next Post
Goa | ಟಿಕೆಟ್ ನಿರಾಕರಣೆ ಬಿಜೆಪಿ ತೊರೆದ ಪ್ರಮುಖ ನಾಯಕರು

Goa | ಟಿಕೆಟ್ ನಿರಾಕರಣೆ ಬಿಜೆಪಿ ತೊರೆದ ಪ್ರಮುಖ ನಾಯಕರು

Please login to join discussion

Recent News

Top Story

DK Shivakumar: ಜೆ.ಪಿ. ಪಾರ್ಕ್ ನಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಪುತ್ಥಳಿ ‌ಮರುಸ್ಥಾಪನೆ ಭರವಸೆ..!!

by ಪ್ರತಿಧ್ವನಿ
October 12, 2025
Top Story

Santhosh Lad: ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

by ಪ್ರತಿಧ್ವನಿ
October 11, 2025
Top Story

CM Siddaramaiah: ಹಂಪನಾ ಅವರು ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
October 11, 2025
Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!
Top Story

Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!

by ಪ್ರತಿಧ್ವನಿ
October 11, 2025
Top Story

ಅವಹೇಳನಕಾರಿ ಕಾಮೆಂಟ್‌ ಹಾಕಿದ ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ಮೇಲೆ ಬಿತ್ತು ಕೇಸ್..

by ಪ್ರತಿಧ್ವನಿ
October 11, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar: ಜೆ.ಪಿ. ಪಾರ್ಕ್ ನಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಪುತ್ಥಳಿ ‌ಮರುಸ್ಥಾಪನೆ ಭರವಸೆ..!!

October 12, 2025

Santhosh Lad: ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

October 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada