ಪ್ರತ್ಯೇಕ್ಷದರ್ಶಿಯೊಬ್ಬನ ಮೊಬೈಲ್ ನಲ್ಲಿದ್ದ ಫೋಟೋ ಪೊಲೀಸರಿಗೆ ಸಿಕ್ಕಿದ್ದೇಗೆ ಗೊತ್ತಾ? ಹೈದಾರಬಾದ್ ನಲ್ಲಿ ಆಗದ ರಿಟ್ರೀವ್ ಬೆಂಗಳೂರು ಎಫ್.ಎಸ್.ಎಲ್ ನಲ್ಲಿ ಸಕ್ಸಸ್

ಕೊಲೆಯಾದ ಸ್ಥಳದಲ್ಲೇ ಇತರೆ ಆರೋಪಿಗಳ ಜೊತೆ ದರ್ಶನ್ ಫೋಟೋಗೆ ಪೋಸ್ ಕೊಟ್ಟಿದ್ರು, ಅದರಲ್ಲಿ ಆರಂಭದಲ್ಲಿ ಕೆಲ ಫೋಟೋಗಳು ರಿಟ್ರೀವ್ ಆಗಿದ್ವು ಆದರೆ ಪ್ರತ್ಯೇಕ್ಷದರ್ಶಿಯೊಬ್ಬನ ಮೊಬೈಲ್ ನಲ್ಲಿ ತೆಗೆದ ಫೋಟೋಗಳು ರಿಟ್ರೀವ್ ಆಗಿರಲಿಲ್ಲ ಆ ಫೋಟೋಗಳನ್ನ ಡಿಲೀಟ್ ಮಾಡಿದ್ದಾಗಿಯೂ ಆತ ಒಪ್ಪಿಕೊಂಡಿದ್ದ ಹೈದಾರಬಾದ್ ನ ಸಿಎಫ್ಎಸ್ಎಲ್ ಗೆ ಮೊಬೈಲ್ ಕಳುಹಿಸಿದ್ದ ಪೊಲೀಸರು.
ಎಲ್ಲಾ ಆರೋಪಿಗಳು ಸೇರಿ ಪ್ರತ್ಯೇಕ್ಷ ದರ್ಶಿ ಮೊಬೈಲ್ ಕೂಡ ರಿಟ್ರೀವ್ ಗೆ ಕಳಿಸಲಾಗಿತ್ತು, ಆದರೆ ಐಫೋನ್ ಗಳು ರಿಟ್ರೀವ್ ಆಗ್ತಿಲ್ಲ ಅಂತ ವಾಪಸ್ ಕಳುಹಿಸಿದ್ದ ಸಿಎಫ್.ಎಸ್.ಎಲ್ ಆಗ ಬೆಂಗಳೂರಿನ ಎಫ್.ಎಸ್.ಎಲ್ ಅಧಿಕಾರಿಗಳ ಜೊತೆ ಈ ಬಗ್ಗೆ ಪೊಲೀಸರ ಚರ್ಚೆ. ನಮಗೆ ಕಳುಹಿಸಿಕೊಡಿ ಟ್ರೈ ಮಾಡ್ತೀವಿ ಎಂದಿದ್ದ ಬೆಂಗಳೂರು ಎಫ್.ಎಸ್.ಎಲ್ ಅಧಿಕಾರಿಗಳು ಆಗ ಪ್ರತ್ಯೇಕ್ಷದರ್ಶಿ ಐಪೋನ್ ನಿಂದ ಫೋಟೋ ರಿಟ್ರೀವ್ ನಲ್ಲಿ ಸಕ್ಸಸ್ ಆದ FSL ಅಧಿಕಾರಿಗಳು ಬರೊಬ್ಬರಿ 1500 ಫೋಟೋ ರಿಟ್ರೀವ್ ಮಾಡಿ ತನಿಖಾಧಿಕಾರಿಗಳಿಗೆ ಕೊಡ್ತಾರೆ ಆದರೆ ಯಾವ ಫೋಟೋ ರಿಟ್ರೀವ್ ಆಗಿದೆ ಅಂತ ಚೆಕ್ ಮಾಡದ FSL ಅಧಿಕಾರಿಗಳು.

ರಿಟ್ರೀವ್ ಆದ ಡೇಟಾ ತಂದು ಎಸಿಪಿ ಚಂದನ್ ಕಚೇರಿಯಲ್ಲಿ ಇಡಲಾಗುತ್ತೆ, ಆಗ ಅಲ್ಲಿನ ಇಬ್ಬರು ಸಿಬ್ಬಂದಿ ಒಂದೊಂದೆ ಫೋಟೋ ಚೆಕ್ ಮಾಡುವಾಗ ಫೋಟೊ ಸಿಕ್ಕಿವೆ ದಾಸನ ಜೊತೆ A6 ಜಗದೀಶ್, A7 ಅನುಕುಮಾರ್, A8 ರವಿಶಂಕರ್ ತೆಗೆಸಿಕೊಂಡ ಫೋಟೋ ಸಿಕ್ಕಿವೆ ಬ್ಲೂ ಕಲರ್ ಟೀ ಶರ್ಟ್ ಹಾಗೂ ಬ್ಲಾಕ್ ಕಲರ್ ಪ್ಯಾಂಟ್ ಹಾಕ್ಕೊಂಡು ಪೋಸ್ ಕೊಟ್ಟಿದ್ದ ದಾಸ ತಕ್ಷಣ ದರ್ಶನ್ ಫೋಸ್ ಕೊಟ್ಟಿದ್ದ ಫೋಟೋ ಬಗ್ಗೆ ತನಿಖಾಧಿಕಾರಿ ಗಮನಕ್ಕೆ ತಂದ ಸಿಬ್ಬಂದಿ ರಿಟ್ರೀವ್ ಆದ ಫೋಟೋ ಬಗ್ಗೆ ಡಿಸಿಪಿಗೆ ಮಾಹಿತಿ ನೀಡುವ ಎಸಿಪಿ ಅದನ್ನು ಅಡಿಷನಲ್ ಚಾರ್ಜ್ ಶೀಟ್ ನಲ್ಲಿ ಸೇರಿಸಿ ಕೋರ್ಟ್ ಗೆ ಸಲ್ಲಿಕೆ ಒಂದ್ವೆಳೆ ಆ ಇಬ್ಬರು ಸಿಬ್ಬಂದಿ ನೋಡಿಲ್ಲ ಅಂದಿದ್ರೆ ಆ ಫೋಟೋಗಳು ಪೊಲೀಸರಿಗೆ ಸಿಗ್ತಿರಲಿಲ್ಲ..
ನಟ ದರ್ಶನ ಬೆಲ್ ಅರ್ಜಿ ಅರಂಭ..
ರೇಣುಕಾಸ್ವಾಮಿ ಕಳುಹಿಸಿದ್ದ ಸಂದೇಶಗಳನ್ನು ಓದುತ್ತಿರುವ ವಕೀಲ ಸಿವಿ ನಾಗೇಶ್.. ಪೂರ್ಣ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ತಂದ ತನಿಖಾಧಿಕಾರಿ ದರ್ಶನ್ ಪರ ಸಿವಿ ನಾಗೇಶ್ ವಾದ ಆರಂಭ, ಎಷ್ಟು ವಾಲ್ಯೂಮ್ ಚಾರ್ಜ್ ಶೀಟ್ ಇದೆ- ಜಡ್ಜ್ ನನಗೆ ಗೊತ್ತಿಲ್ಲ- ಸಿವಿ ನಾಗೇಶ್.

ಹಾಗಾದ್ರೆ ಯಾರು ಫುಲ್ ಚಾರ್ಜ್ ಶೀಟ್ ಓದಿಲ್ಲ – ಜಡ್ಜ್
ಶಾರದೆ ಸರಸ್ವತಿ ಇರೋ ನಾಡಲ್ಲಿ ಆತ ಕೆಟ್ಟದಾಗಿ ಮೆಸೇಜ್ ಮಾಡ್ತಿದ್ದ. ರೇಣುಕಾಸ್ವಾಮಿ ಮಾಡಿರೊ ಮೆಸೇಜ್ ಗಮನಿಸಲು ಜಡ್ಜ್ ಗೆ ಮನವಿ, ಫೆಬ್ರವರಿಯಲ್ಲಿ ಪವಿತ್ರಾಗೆ ರೇಣುಕಾಸ್ವಾಮಿ ಮೆಸೇಜ್ ಮಾಡಲು ಶುರುಮಾಡಿದ್ದ ತುಂಬಾ ಕೆಟ್ಟ ಪದ ಬಳಸಿ ಆತ ಮೆಸೇಜ್ ಮಾಡಿದ್ದಾನೆ. ರೇಣುಕಾಸ್ವಾಮಿ ಮೊದಲ ಆರೋಪಿಗೆ ಈ ರೀತಿ ಮೆಸೇಜ್ ಮಾಡಿಲ್ಲ ಸಾಕಷ್ಟು ಮಹಿಳೆಯರಿಗೆ ಇದೇ ರೀತಿ ಮೆಸೇಜ್ ಮಾಡಿದ್ದಾನೆ
ಸಿವಿ ನಾಗೇಶ್
ನಿಮಗೆ ತೋರಿಸುತ್ತಿರೊ ಮೆಸೇಜ್ ಕೇವಲ ಸ್ಯಾಂಪಲ್ ಅಷ್ಟೆ. ರೇಣುಕಾಸ್ವಾಮಿಗೆ ಮಹಿಳೆಯರ ಬಗ್ಗೆ ಯಾವುದೇ ಗೌರವವಿಲ್ಲ.. ರೇಣುಕಾಸ್ವಾಮಿ ಯನ್ನ ಜೂನ್ 8 ಕ್ಕೆ ಕಿಡ್ನಾಪ್ ಮಾಡಲಾಗಿದೆ ಜಯಣ್ಣ ಶೆಡ್ ಗೆ ಆತನನ್ನ ಕರೆತರಲಾಗಿದೆ. ಮರುದಿನ ಬೆಳಿಗ್ಗೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಮೃತದೇಹ ಸಿಕ್ಕಿದೆ. ಸೆಕ್ಯೂರಿಟಿ ಕಾರ್ಡ್ ಕರೆ ಮಾಡಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು.

ಕಾಮಾಕ್ಷಿಪಾಳ್ಯ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು
ಚಾರ್ಜ್ ಶೀಟ್ ಕಾಫಿಯಲ್ಲಿರುವ ಬ್ಲಾಕ್ ಅಂಡ್ ವೈಟ್ ಟೆಕ್ಸ್ಟ್ ಸರಿಯಾಗಿ ಕಾಣುತ್ತಿಲ್ಲ ಎಂದ ಜಡ್ಜ್ ಒರಿಜಿನಲ್ಲ ಕಾಪಿ ಜಡ್ಜ್ ಗೆ ಕೊಟ್ಟ ಎಸ್ಪಿಪಿ, ದರ್ಶನ್ ಸಮಾಜದಲ್ಲಿ ಗೌರವ ಇರುವ ವ್ಯಕ್ತಿ ದರ್ಶನ್ ರಿಯಲ್ ಲೈಫ್ ನಲ್ಲೂ ಹೀರೋ ಆಗಿರುವವನು ಹಲ್ಲೆ /ಕೊಲೆನೆಡೆದಿರುವುದು ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೃತ ದೇಹ ಸಿಕ್ಕಿರೋದು ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಾರ್ಟ್ ಮೆಂಟ್ ಸೆಕ್ಯುರಿಟಿ ಗಾರ್ಡ್ ಮಾಹಿತಿ ಆಧರಿಸಿ ಕೇಸ್ ದಾಖಲಾಗಿದೆ.
ರೇಣುಕಾ ಸ್ವಾಮಿ ಮೃತದೇಹವನ್ನ ಶವಾಗಾರದಲ್ಲಿ ಇಟ್ಟಿದ್ರು, ಇದರಿಂದ ಸಾವಿನ ನಿಖರ ಸಮಯ ಗೊತ್ತಿಲ್ಲ ಶವದ ಪೊಟೋ ಆಧಾರದ ಮೇಲೆ ಸಾವಿನ ಸಮಯ ಅಂದಾಜಿಸಿದ್ದಾರೆ ಶವಪರೀಕ್ಷೆ ವರದಿ ಒಂದು ತಿಂಗಳು ತಡವಾಗಿ ಬಂದಿದೆ.. ದರ್ಶನ್ ವಿರುದ್ದ ಕಿಡ್ನಾಪ್ ಮತ್ತು ಮರ್ಡರ್ ಆರೋಪ ಹೊರಿಸಲಾಗಿದೆ

ಸಿವಿ ನಾಗೇಶ್
ಆದರೆ 302 ಸೆಕ್ಷನ್ ಅಡಿ ಕೊಲೆ ಕೇಸ್ ದಾಖಲು ಮಾಡಿಕೊಂಡಿದ್ದರು. ಆದರೆ 9,10 ರಂದು ಫೋಸ್ಟ್ ಮಾರ್ಟಮ್ ಮಾಡಿಲ್ಲ. ಸಾವಿನ ಸರಿಯಾದ ಸಮಯ ಕೂಡ ಗೊತ್ತಾಗಿತಲಿಲ್ಲ ಒಂದು ತಿಂಗಳ ನಂತರ ಪೋಸ್ಟ್ ಮಾರ್ಟಮ್ ವರದಿ ಬಂದಿದೆ ಆಗ ಸಾವಿನ ಸಮಯ ಗೊತ್ತಾಗಿದೆ.. ಇಲ್ಲಿ ಕಿಡ್ನಾಪ್,ಸಾಕ್ಷಿನಾಶ,ಹಲ್ಲೆ ಹಾಗು ಕೊಲೆ ಆರೋಪಗಳನ್ನ ಮಾಡಲಾಗಿದೆ ಇದರಲ್ಲಿ 355,201 ಜಾಮೀನು ನೀಡಬಹುದಾದ ಸೆಕ್ಷನ್ ಗಳು. ಹೀಗಾಗಿ ಶರತ್ತು ಬದ್ದ ಜಾಮೀನು ಕೇಳ್ತಾ ಇದ್ದೇವೆ, ಇಲ್ಲಿ ಕಿಡ್ನಾಪ್ ಅನ್ವಯ ಆಗೋದಿಲ್ಲ.. ಅವರನ್ನು ಕೊಲೆ ಮಾಡೊ ಉದ್ದೇಶದಿಂದ ಇಲ್ಲಿ ಕರೆತಂದಿರಲಿಲ್ಲ. ಒತ್ತಡ ಹೇರಿ ವ್ಯಕ್ತಿಯನ್ನ ಕರೆತಂದರೆ ಅದು ಕಿಡ್ನಾಪ್, ಆದರೆ ಇಲ್ಲಿ ರೇಣುಕಾಸ್ವಾಮಿಯನ್ನ ಒತ್ತಡ ಹೇರಿ ಕರೆತಂದಿರೋದಕ್ಕೆ ಸಾಕ್ಷಿಗಳಿಲ್ಲ ದರ್ಶನ್ ವಿರುದ್ದ ಪ್ರಮುಖವಾಗಿ 4 ಆರೋಪ ಮಾಡಲಾಗಿದೆ
ಕೊಲೆ ಉದ್ದೇಶದಿಂದ ಕಿಡ್ನಾಪ್
ಸಾಕ್ಷಿ ನಾಶದ ಆರೋಪ. ಹಲ್ಲೆಮಾಡಿರುವ ಆರೋಪ. ಕೊಲೆ ಆರೋಪ ಮಾಡಲಾಗಿದೆ, ದರ್ಶನ್ ಕಿಡ್ನಾಪ್ ನಲ್ಲಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷಿ ಇಲ್ಲ, ಕಿಡ್ನಾಪ್ ಆಗಬೇಕಾದರೆ ಕಾನೂನು ಬದ್ದ ಪೋಷಕರಿಂದ ಕರೆದ್ಯೊಯುವುದು, ಅಥವಾ ವಿದೇಶಕ್ಕೆ ಕೆರೆದ್ಯುಯುವುದು, ಹೀಗಾಗಿ ಕಿಡ್ನಾಪ್ ಮಾಡಿಲ್ಲ ಆತನನ್ನು ಯಾವುದೇ ಬಲಪ್ರಯೋಗ ಮಾಡಿಲ್ಲ..

ದರ್ಶನ್ ಪರ ಸಿವಿ ಎನ್ ವಾದ
ಮೃತದೇಹ ಸಿಕ್ಕ ತಕ್ಷಣ ಪೊಲೀಸರು ಎಫ್ ಐ ಆರ್ ದಾಖಲಿಸಿಲಿಲ್ಲ. ಬಾಡಿಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಿದ್ರು. ಜೂನ್ 9 ಕ್ಕೆ ಮೃತ ದೇಹ ಸಿಕ್ಕರೂ 11ರಂದು ಪೋಸ್ಟ್ ಮಾರ್ಟಂ ಮಂಡಿಸಿದ್ದಾರೆ. ಪಿ ಎಂ ರಿಪೋರ್ಟ್ ನ್ಲದಿ ಸಾವಿನ ಸಮಯ ತಿಳಿಸಿಲ್ಲ ಮೃತದೇಹದ ಫೋಟೋ ಆಧರಿಸಿ ವ್ಯಕ್ತಿ ಯ ಸಾವಿನಸಮಯ ತಿಳಿಸಿದ್ದಾರೆ.. ಪಿಎಂ ನೆಡೆದು ಒಂದು ತಿಂಗಳ ನಂತರ ವೈಧ್ಯರು ಸಾವಿನ ಸಮಯದ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ..
ನಾನು ಸ್ನೇಹಿತರ ಜೊತೆ ಹೋಗುತ್ತಿರೋದಾಗಿ ರೇಣುಕಾಸ್ವಾಮಿ ತನ್ನ ತಾಯಿ ಬಳಿ ಹೇಳಿದ್ದಾನೆ. ಊಟಕ್ಕೆ ಹೋಗುತ್ತಿದ್ದು ಸಂಜೆ ಬರುತ್ತೆನೆ ಎಂದು ಹೇಳಿದ್ದಾನೆ. ಇದನ್ನ ರೇಣುಕಾಸ್ವಾಮಿ ತಾಯಿ ಕೊಟ್ಟ ಸ್ಟೇಟ್ ಮೆಂಟ್ ನಲ್ಲಿ ಇದೆ. 640 ರೂ ಹಣವನ್ನು ರೇಣುಕಾಸ್ವಾಮಿ ಫೋನ್ ಪೇ ಮಾಡಿ ಮದ್ಯ ಖರೀದಿ ಮಾಡಿದ್ದ. ಒಂದು ವೇಳೆ ದೇಹವನ್ನು ಸುಟ್ಟಿದ್ರೆ ಅದು ಸಾಕ್ಷಿ ನಾಶ, ಮೃತದೇಹ ಒಂದು ಕಡೆಯಿಂದ ಇನ್ನೋಂದು ಕಡೆ ಕೊಂಡೊಯ್ದರೆ ಅದು ಸಾಕ್ಷಿ ನಾಶ ಅಲ್ಲ.. ಅಲ್ಲಿ ಎರಡು ಮರದ ಕೋಲನ್ನ ಸೀಜ್ ಮಾಡಿದ್ದಾರೆ. ಹಳ್ಳಿ ಕಡೆ ದನ ಕುರಿ ಓಡಿಸಲು ಬಳಸುತ್ತಾರಲ್ಲ ಅದು ಹಲ್ಲೆಗೆ ಬಳಸಿದ ಎರಡು ಮರದ ಕೊಂಬೆಯನ್ನ ರಿಕವರಿ ಮಾಡಿದ್ದಾರೆ ಒಂದು ಹಗ್ಗ ರಿಕವರಿಯಲ್ಲಿ ತೋರಿಸಿದ್ದಾರೆ..
ಹಗ್ಗದಲ್ಲಿ ಕಟ್ಟಿಹಾಕಲಾಗಿತ್ತ.ಜಡ್ಜ್

ಇಲ್ಲ ಹಗ್ಗ ದಲ್ಲಿಹೊಡೆದಿದ್ದಾರೆ ಎಂದು ಆರೋಪ ಮಾಡಲಾಗಿದೆ
ಜೂನ್ 9ರಂದೆ ಶೆಡ್ ವಶಕ್ಕೆ ಪಡೆದರೂ 12ರಂದು ಮಹಜರು ಹಾಗೂ ಸೀಜ್ ಮಾಡಲಾಗಿದೆ, ತಮಗೆ ಬೇಕಾದ ರೀತಿ ಸಾಕ್ಷಿ ಸೃಷ್ಟಿ ಮಾಡಿರುವುದಾಗಿ ವಕೀಲ ಸಿ.ವಿ.ನಾಗೇಶ್ ಆರೋಪಿಸಿ ವಾದ, ಪ್ರತ್ಯಕ್ಷದರ್ಶಿ ಸಾಕ್ಷಿ ಹೇಳಿಕೆ ಆಧರಿಸಿ ವಾದ..
ಘಟನೆ ನಡೆದ ಮರುದಿನ ಶೆಡ್ ಸೀಜ್ ಮಾಡಿ, ತಮ್ಮ ವಿಚಾರಣೆ ಮಾಡಿದ್ದಾರೆ, ಮರುದಿನ ಅಂದ್ರೆ ಮಂಗಳವಾರ ಎಂದು ಬರೆದುಕೊಳ್ಳಲಾಗಿದೆ.. ಈ ರೀತಿ ಗೊಂದಲ ಸೃಷ್ಟಿಸಿ ಅದರ ಲಾಭ ಪಡೆದುಕೊಳ್ಳಲು ಪ್ರಾಸಿಕ್ಯೂಷನ್ ಮುಂದಾಗಿದೆ..

ಸಿಆರ್ಪಿಸಿ 164 ಅಡಿಯಲ್ಲಿ ದಾಖಲಾಗಿದೆ..
ಇದು 164 ಸ್ಟೇಟ್ಮೆಂಟ್ ನಲ್ಲಿ ಹೇಳಲಾಗಿದೆ ರಾಘವೇಂದ್ರ, ನಿಖಿಲ್,ಕೇಶವ್ ಹಾಗು ಕಾರ್ತಿಕ್ ಸ್ವಚ್ಚಾ ಹೇಳಿಕೆ ಆಧರಿಸಿ ವಾದ.. ಜೂ. 10ರಂದು ಪೊಲೀಸರು ಹೇಳಿಕೆದಾಖಲು ಮಾಡಿದ್ದಾರೆ ಅಂದರೆ ಜೂನ್ 10ರಂದೇ ಎಲ್ಲವೂ ಗೊತ್ತಿತ್ತು.. ಆ ಹೇಳಿಕೆಯಲ್ಲಿ ಪಟ್ಟಣಗೆರೆ ಶೆಡ್ ಬಗ್ಗೆ ಗೊತ್ತಿತ್ತು.. ಹಲ್ಲೆ ನೆಡೆದ ಜಾಗ ಘಟನೆ ನೆಡೆದ ಬಗ್ಗೆ ಪೊಲೀಸರಿಗೆ ಗೊತ್ತಿತ್ತು..
ಶೆಡ್ ಅನ್ನು ವಶಕ್ಕೆ ಪಡೆದು ಸಾಕ್ಷಿ ನಾಶಪಡಿಸಿದ್ದಾರೆ..
ರಾಘವೇಂದ್ರ, ನಿಖಿಲ್, ಕೇಶವ್ ಹಾಗೂ ಕಾರ್ತೀಕ್ ಸ್ವ-ಇಚ್ಛಾ ಹೇಳಿಕೆ ಆಧರಿಸಿ ವಾದ, ಜೂ.10ರಂದು ಪೊಲೀಸರು ಹೇಳಿಕೆ ದಾಖಲು ಮಾಡಿದ್ದಾರೆ ಅಂದ್ರೆ ಜೂನ್ 10ರಂದೇ ಎಲ್ಲವೂ ಗೊತ್ತಿತ್ತು ಆ ಹೇಳಿಕೆಯಲ್ಲಿ ಪಟ್ಟಣಗೆರೆ ಶೆಡ್ ಬಗ್ಗೆ ಗೊತ್ತಿತ್ತು.. ಹಲ್ಲೆ ನಡೆದ ಜಾಗ ಹಾಗೂ ಘಟನೆ ಬಗ್ಗೆ ಪೊಲೀಸರಿಗೆ ಗೊತ್ತಿತ್ತು.. ಶೆಡ್ ಅನ್ನು ವಶಕ್ಕೆ ಪಡೆದು ಸಾಕ್ಷಿ ನಾಶಪಡಿಸಿದ್ದಾರೆ.. ಮರು ದಿನ ಅಂದ್ರೆ ಮಂಗಳವಾರ ಎಂದು ಹೇಳಿದ್ದಾರಲ್ಲ.
ಆರೋಪಿಗಳು ಅರೆಸ್ಟ್ ಆಗಲೇ ಅಲ್ವಾ ಪೊಲೀಸರಿಗೆ ಗೊತ್ತಾಗುವುದು – ಜಡ್ಜ್

ಆದ್ರೆ ಇಲ್ಲಿ ಸಾಕ್ಷಿ ನಾಶ ಹಾಗೂ ನಾಕ್ಷ್ಯ ಸೃಷ್ಟಿ ಮಾಡಿದ್ದಾರೆ – ಸಿ.ವಿ.ಎನ್, ಅದರೆ ಜೊತೆಗೆ ಎ14 ಪ್ರದೂಷ್ಗೆ ಪಿಎಸ್ಐ ವಿನಯ್ ಕಳುಹಿಸಿದ್ದಾನೆ.. ಆ ವಿಡಿಯೋ ರಿಟ್ರಿವ್ ಮಾಡಿದ್ದಾರಾ? ಜಡ್ಜ್, ಈ ವಿಡಿಯೋ ರಿಕವರಿ ಮಾಡಿಲ್ಲ. ಆದ್ರೆ ತಮಗೆ ಬೇಕಾದದ್ದನ್ನ ಮಾತ್ರ ಪೊಲೀಸರು ರಿಟ್ರೀವ್ ಮಾಡಿದ್ದಾರೆ, ನಮ್ಮ ಕಕ್ಷಿದಾರರ ಮೊಬೈಲ್ ಮಾತ್ರ ರಿಕವರಿ ಮಾಡಿದ್ದಾರೆ – ಸಿ.ವಿ.ಎನ್.. ಘಟನೆ ಬಗ್ಗೆ ಪಿಎಸ್ ಐ ಗೆ ಜೂ. 9 ರಂದು ರಾತ್ರಿ ಗೊತ್ತಿತ್ತು, ಈ ವಿಚಾರ ಇನ್ಸ್ಪೆಕ್ಟರ್ ಗೆ ತಿಳಿಸಿರುತ್ತಾರೆ.
ಅವರ ಬಗ್ಗೆ ಮಾಹಿತಿ ಪಡೆಯಲು ಇನ್ಸ್ಪೆಕ್ಟರ್ ಹೇಳಿದ್ದರು.
ಕೇರಳ ಬಂದಿದ್ದ ಪಿಎಸ್ಐ ಪ್ರದೋಷ್ ಬಳಿ ನಿರಂತರ ವಾಗಿ ಟಚ್ ನಲ್ಲಿದ್ದ. ನಂತರ ಸಿಸಿಟಿವಿ ವಿಡಿಯೋ ಯನ್ನ ಪಿಎಸ್ಐ ಪ್ರದೂಷ್ ಗೆ ನೀಡಿದ್ದಾರೆ, ಆದ್ರೆ ಈ ವಿಡಿಯೋ ರಿಕವರಿ ಆಗಿಲ್ಲ ಸಾಕ್ಷ್ಯ ನಾಶ ಹಾಗೂ ಸೃಷ್ಟಿ ಗೂ ಒಂದು ಲಿಮಿಟ್ ಇರತ್ತೆ ಈ ಕೇಸಲ್ಲಿ ಪೊಲಿಸರು ಅತಿಯಾಗಿ ಮಾಡಿದ್ದಾರೆ ಕೇವಲ ಇಬ್ಬರು ಮಾತ್ರ ಎಂದು ಹೇಳುತ್ತಿದ್ದಾರೆ, ಆದರೆ ಬಹಳ ಜನ ಇದ್ದಾರೆ ಎಂದು ಹೇಳಿದಾಗ ಮತ್ತಷ್ಟು ಜನರ ಸರೆಂಡರ್ ಬಗ್ಗೆ ಹೇಳಿದ್ದಾನೆ

ಅವರು ದರ್ಶನ್ ಅಭಿಮಾನಿಗಳು ಆಗಿದ್ದು, ಈ ವಿಚಾರ ಮಾಧ್ಯಗಳಿಗೆ ಗೊತ್ತಾದರೆ ದರ್ಶನ್ ಹೆಸರು ಬರತ್ತೆ ಎಂದಿದ್ದ.. 12/06/2024 ರಂದು ಪಂಚನಾಮೆಯನ್ನು ಮಧ್ಯಾಹ್ನದಿಂದ ಮಾಡಲಾಗಿದೆ ಇದೊಂದು ಕ್ರಿಯೇಟ್ ಪ್ಯಾಬ್ರಿಕೇಟ್ ಮಾಡಿರುವ ಪಂಚನಾಮ ರಕ್ತದ ಕಲೆ ಇರೋ ಲಾಠಿ, ವಾಟರ್ ಬಾಟಲ್, ಮರದ ಕೊಂಬೆ, ಸೀಜ್ ಮಾಡ್ತಾರೆ ರಕ್ತದ ಕಲೆ ಇರೋ ನೈಲಾನ್ ಹಗ್ಗ ಸೀಜ್ ಮಾಡ್ತಾರೆ, ಇವೆಲ್ಲವೂ ಪ್ಯಾಬ್ರಿಕೇಟ್ ಮಾಡಿರೋದು ಎವಿಡೆನ್ಸ್ ಗಳು.
ಸೆಕ್ಯುರಿಟಿ ಗಾರ್ಡ್ ಹೇಳಿಕೆ ಓದುತ್ತಿರುವ ಸಿವಿ ನಾಗೇಶ್
10/06/24 ರಂದು ಕೆಲವರು ಸರೆಂಡರ್ ಆಗ್ತಾರೆ, ಅವರು ವಾಲೆಂಟರಿ ಸ್ಟೇಟ್ ಮೆಂಟ್ ಕೂಡ ನೀಡ್ತಾರೆ A4, A15,A16 ಹಾಗೂ A17 ಸರೆಂಡರ್ ಅಗ್ತಾರೆ ಸರೆಂಡರ್ ಆದ ನಾಲ್ವರು ಆರೋಪಿಗಳ ಸ್ವ ಇಚ್ಚಾ ಹೇಳಿಕೆ ಓದಿತ್ತಿರೋ ಸಿವಿ ನಾಗೇಶ್ ಆರೋಪಿ 4 ರ ಹೇಳಿಕೆ 10 ನೇ ತಾರೀಖು ದಾಖಲು ಮಾಡಲಾಗಿದೆ ಅವತ್ತೆ ಪೊಲೀಸರಿಗೆ ಘಟನಾ ಸ್ಥಳ ಗೊತ್ತಾಗಿದೆ

ಆದರೆ 12 ನೇ ತಾರೀಖಿನ ವರೆಗೂ ಇವರು ಮಹಜರು ಮಾಡಿಲ್ಲ, ಜೂ.11ರಂದು ಸ್ವ ಇಚ್ಚಾ ಹೇಳಿಕೆ ಪಡೆದಿದ್ದಾರೆ. ಆದರೆ ಮನೆಯ ಮಹಜರನ್ನು ಜೂ. 14 ರಂದು ಮಾಡಿದ್ದಾರೆ.. ನಾನು ಬಳಸಿದ ಬಟ್ಟೆ ಚಪ್ಪಲಿ ಗಳನ್ನು ತೋರಿಸುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ.. ಬಟ್ಟೆ ಹಾಗು ಚಪ್ಪಲಿ ಗಳ ಬಗ್ಗೆ ಪವನ್ ಗೆ ಗೊತ್ತಿದೆ ಎಂದು ಹೇಳಿದ್ದಾನೆ. ಘಟನೆ ಯಲ್ಲಿ ಶೂಕಾಲಲ್ಲಿ ಹೊಡೆದ್ದಿದ್ದಾನೆ ಎಂದು ಬರೆದುಕೊಳ್ಳಲಾಗಿದೆ.
ಹೀಗಾಗಿ ಚಪ್ಪಲಿ ಬದಲಿಗೆ ಶೂ ರಿಕವರಿ ಮಾಡಲಾಗಿದೆ
ದರ್ಶನ್ ಜಾಮೀಜು ಅರ್ಜಿ ವಿಚಾರಣೆ ಮುಂದೂಡಿಕೆ, ಇಂದು ಸಂಜೆ ನಾಲ್ಕು ಗಂಟೆಗೆ ವಿಚಾರಣೆ ಮುಂದೂಡಿಕೆ





