• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

‘ಶತಮಾನದ ಹಗರಣ’ ಆಗಲಿರುವ ‘ಪಶ್ಚಿಮವಾಹಿನಿ’ ಕಿಂಡಿ ಅಣೆಕಟ್ಟುಗಳು.!

ರಾಜರಾಮ್ ತಲ್ಲೂರ್ by ರಾಜರಾಮ್ ತಲ್ಲೂರ್
August 19, 2021
in ಅಭಿಮತ, ಕರ್ನಾಟಕ
0
‘ಶತಮಾನದ ಹಗರಣ’ ಆಗಲಿರುವ ‘ಪಶ್ಚಿಮವಾಹಿನಿ’ ಕಿಂಡಿ ಅಣೆಕಟ್ಟುಗಳು.!
Share on WhatsAppShare on FacebookShare on Telegram

ADVERTISEMENT

ಇತ್ತೀಚೆಗೆ ರಾಜ್ಯದ ಕಿರುನೀರಾವರಿ ಸಚಿವರು 1400 ಕಿರು ಅಣೆಕಟ್ಟುಗಳನ್ನು ರಾಜ್ಯದಲ್ಲಿ ನಿರ್ಮಿಸುವ ಬಗ್ಗೆ ಹೇಳಿದ್ದಾರೆ. ಆ ಯೋಜನೆ ಏಕೆ ಅಪಾಯಕಾರಿ ಎಂಬ ಕುರಿತು ಇನ್ನೊಂದಿಷ್ಟು ಪೂರಕ ಸಂಗತಿಗಳನ್ನು ಇಲ್ಲಿ ಕರಾವಳಿಯಲ್ಲಿ “ಪಶ್ಚಿಮವಾಹಿನಿ” ಯೋಜನೆಯಲ್ಲಾಗುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ವಿವರಿಸುತ್ತೇನೆ. ಅಗತ್ಯ ಬಿದ್ದಲ್ಲಿ ಅಂಕಿಅಂಶಗಳ ಸಹಿತ ಇದನ್ನು ವಿವರಿಸಬಹುದು.

ಕರಾವಳಿಯಲ್ಲಿ “ಗುತ್ತಿಗೆದಾರರ ಪ್ರೀತಿಯ ಸ್ಕೀಮು” ಸಮುದ್ರಕೊರೆತದ ವೇಳೆ ಸಮುದ್ರಕ್ಕೆ ಕಲ್ಲು ಹಾಕುವುದು. ಹಾಕಿದ ಕಲ್ಲಿಗೆ ಲೆಕ್ಕ ಇಲ್ಲದಿರುವುದೇ ಇಲ್ಲಿ ಗುತ್ತಿಗೆದಾರರ ಅತ್ಯಂತ ಪ್ರೀತಿಯ ಸಂಗತಿ. ಹತ್ತು ವರ್ಷಗಳ ಹಿಂದೆ ಇದರ ಬೆನ್ನು ಹಿಡಿದು ಹೋಗಿ ಮಾಹಿತಿ ಹಕ್ಕಿನಡಿ ಸಾಕಷ್ಟು ಸಾಕ್ಶ್ಯಾಧಾರಗಳನ್ನು ಸಂಗ್ರಹಿಸಿದ್ದೆ. ಆದರೆ ಆಗ ನಾನು ಕೆಲಸ ಮಾಡುತ್ತಿದ್ದ ಪತ್ರಿಕೆಯ “ಡಿಸೈನರ್” ಸಂಪಾದಕರಿಗೆ ಅದು ಬೇಡವಾಗಿತ್ತು. ಹಾಗಾಗಿ ಅದು ವರದಿಯಾಗಿ ಹೊರಬರಲಿಲ್ಲ. ಹೋಗ್ಲಿಬಿಡಿ.

ಈಗ ಪಶ್ಚಿಮವಾಹಿನಿಯ ಬಗ್ಗೆ ಹೇಳ್ತೇನೆ. ಈ ಯೋಜನೆಯಲ್ಲೊಂದು ಹಣ ಹೊಡೆಯುವ ಪ್ಯಾಟರ್ನ್ ಇದೆ.

ಇವೆಲ್ಲ ಗುತ್ತಿಗೆ ಕಾರ್ಟೆಲ್ ಮೂಲಕ ನಡೆಯುವ ಯೋಜನೆಗಳಾಗಿರುವುದರಿಂದ ಆ ಕಾರ್ಟೆಲ್ ಮತ್ತು ಅಧಿಕಾರಿಗಳ ಮಟ್ಟದಲ್ಲಿ ಇದು ಪಾರದರ್ಶಕವಾಗಿಯೇ ನಡೆಯುತ್ತದೆ!

ಒಂದು ಯೋಜನೆಗೆ ಇಲಾಖೆ ತಾಂತ್ರಿಕ ಮಂಜೂರಾತಿ ಕೊಡುತ್ತದೆ.

ಆ ಯೋಜನೆಗೆ ಗುತ್ತಿಗೆದಾರರ ಕಾರ್ಟೆಲ್ ಒಳಗಿನವರೇ ಟೆಂಡರಿಗೆ ನಿಂತು, ತಾಂತ್ರಿಕವಾಗಿ ಮಂಜೂರಾದ ಮೊತ್ತಕ್ಕಿಂತ ಹೆಚ್ಚೇ ದರಕ್ಕೆ ಟೆಂಡರ್ ಆಗಿ ಪ್ರಕ್ರಿಯೆ ಮುಗಿದು ಗುತ್ತಿಗೆದಾರರಿಗೆ ಕೆಲಸ ಸಿಗುತ್ತದೆ. ಈ ಟೆಂಡರು ಕೂಡ ಒಂದೊಂದೇ ಕಾಮಗಾರಿ ಅಲ್ಲ; ಬದಲಾಗಿ ಐದಾರು ಕಾಮಗಾರಿಗಳ ಒಟ್ಟು ಪ್ಯಾಕೇಜು!

ಕೆಲಸ ಆದ ಬಳಿಕ, ಅದರ ಪರಿಶೀಲನೆ ಸುಸೂತ್ರ ನಡೆಯುವುದಿಲ್ಲ. ಏಕೆಂದರೆ ಪರಿಶೀಲಿಸುವ ಅಧಿಕಾರಿಗೆ ನೀರಿನಡಿ ಏನು ನಡೆದಿದೆ ಎಂಬುದು ಕಾಣಿಸುವುದಿಲ್ಲ! ಅಣೆಕಟ್ಟು ನೀರಿನಡಿ ನೆಲಮಟ್ಟದಿಂದ ಇಂತಿಷ್ಟು ಆಳದಿಂದ ಆರಂಭ ಆಗಬೇಕೆಂದಿದ್ದರೆ ಅದರ ಕಾಲಂಶ ಆಳದಿಂದಲೂ ಆರಂಭ ಆಗಿರುವುದಿಲ್ಲ. ಇದನ್ನು ಪರಿಶೀಲಿಸುವುದೂ ಇಲ್ಲ. ಈ ಯೋಜನೆಯ ಅತ್ಯಂತ ಲಾಭದಾಯಕ ಭಾಗ ಇದು. ಆಮೇಲೆ ಕಾಮಗಾರಿ ಎಷ್ಟು ಕಳಪೆ ಎಂಬ ಬಗ್ಗೆ ನಾನು ಹೇಳಬೇಕೆಂದಿಲ್ಲ.

ಕೆಲಸ ಮುಗಿದ ಮೇಲೆ ನಮಗೆ ನೀರಿನಡಿ ಕೆಲಸ ಮಾಡುವುದು ಅಷ್ಟು ಕಷ್ಟವಾಯಿತು-ಇಷ್ಟು ತೊಂದರೆಯಾಯಿತು ಎಂದು ಹೇಳಿ ಹೆಚ್ಚುವರಿ ಆರ್ಥಿಕ ವೆಚ್ಚದ ಲೆಕ್ಕ (ಇದನ್ನು ತಾಂತ್ರಿಕ ಭಾಷೆಯಲ್ಲಿ Extra Financial Implications -EFI ಅನ್ನುತ್ತಾರೆ!) ತೋರಿಸಿ ಇಲಾಖೆಗೆ ಹೆಚ್ಚುವರಿ ಹಣ ಬಿಡುಗಡೆ ಮಾಡಲು ಕೋರಲಾಗುತ್ತದೆ. ಇಲಾಖೆಯಂತೂ ಅದಕ್ಕೆ ತಯಾರಾಗಿ ಕುಳಿತಿದ್ದು, ತಕ್ಷಣ ಮಂಜೂರಾತಿ ಮಾಡುತ್ತದೆ!

ಇಲ್ಲಿಗೆ ಯೋಜನೆ ಅಂದಾಜು ವೆಚ್ಚದ ಮೂರು-ನಾಲ್ಕು ಪಾಲು ಹೆಚ್ಚು ಹಣ ಸರ್ಕಾರದ ಬೊಕ್ಕಸದಿಂದ ಗುತ್ತಿಗೆದಾರರಿಗೆ ತಲುಪಿ, ಅಲ್ಲಿಂದ ಎಲ್ಲೆಲ್ಲಿಗೆ ತಲುಪಬೇಕೋ ಅಲ್ಲಿಗೆಲ್ಲ ತಲುಪುವುದು ಸಂಪ್ರದಾಯ ಎಂದು ಈ ಬಗ್ಗೆ ಗೊತ್ತಿರುವವರ ಮಾಹಿತಿ!

ನಮ್ಮದೇ ಜಿಲ್ಲೆಯಲ್ಲಿ ಆಗಿರುವ (2017-18) ಒಂದು ಕಾಮಗಾರಿ (ಊರು,ಹೆಸರು ಇತ್ಯಾದಿ ಮಾಹಿತಿ ಬೇಡ)ಯ ಹಣಕಾಸಿನ ಲೆಕ್ಕ ನೋಡಿ. ಇದು ಒಂದು ಕಿಂಡಿ ಅಣೆಕಟ್ಟು. ಇದರ ಮಂಜೂರಾದ ಮೊತ್ತ: 5 ಕೋಟಿ. ಇದು ಟೆಂಡರ್ ಆದಾಗ ಬಿಡ್ಡುದಾರರಿಗೆ ಮಂಜೂರಾದ ಮೊತ್ತ ಅಂದಾಜು: 6.50 ಕೋಟಿ. ಇದಾದ ಬಳಿಕ EFI ಅಡಿ ಇಲಾಖೆ ಮಂಜೂರು ಮಾಡಿದ ಹೆಚ್ಚುವರಿ ಮೊತ್ತ: 90ಲಕ್ಷ. ಅಂದರೆ ಇಲಾಖೆಯ ಲೆಕ್ಕಾಚಾರಗಳ ಪ್ರಕಾರ ಐದು ಕೋಟಿ ಖರ್ಚು ಬರಬೇಕಾದ ಯೋಜನೆ ಅನುಷ್ಠಾನ ಆಗುವಾಗ ಸರ್ಕಾರದ ಬೊಕ್ಕಸಕ್ಕೆ ಬಿದ್ದ ಒಟ್ಟು ಖರ್ಚು 7.40ಕೋಟಿ! ಅಂದರೆ ಸರ್ಕಾರಿ ಅಂದಾಜಿಗಿಂತ 2.4 ಕೋಟಿ ರೂ. ಹೆಚ್ಚು!!

ಈ EFI ಎಲ್ಲೋ ಒಂದೆರಡು ಯೋಜನೆಯಲ್ಲಿ ಆಗಿದ್ದರೆ, ಹೌದಪ್ಪ ಇರಬಹುದು ಎಂದು ನಂಬಬಹುದು. ಆದರೆ ನಡೆದ ಪ್ರತಿಯೊಂದೂ ಯೋಜನೆಯಲ್ಲಿ ಇದೊಂದು ಪ್ಯಾಟರ್ನ್ ಆಗಿ ಹಣ ಮಂಜೂರು ಆಗುತ್ತಿದ್ದರೆ ಇದನ್ನು ಏನೆಂದು ಕರೆಯಬೇಕು?

ಈಗ ಲೆಕ್ಕಾಚಾರ ಮಾಡಿ. ರಾಜ್ಯದಲ್ಲಿ 1400 ಕಿಂಡಿ ಅಣೆಕಟ್ಟುಗಳು ನಿರ್ಮಾಣ ಆದರೆ, ಒಟ್ಟು ನಡೆಯಬಹುದಾದ ಬೊಕ್ಕಸ ಲೂಟಿ ಎಷ್ಟು?!! ಕರಾವಳಿಯಲ್ಲಿ ಇದೇ ಮಾದರಿಯಲ್ಲಿ ಈಗಾಗಲೇ ನೂರಾರು ಕಾಮಗಾರಿಗಳು ನಡೆದಿವೆ!!

ಅತ್ತ ಪರಿಸರವೂ ನಾಶವಾಗುವ ಇತ್ತ ಸರ್ಕಾರಿ ಬೊಕ್ಕಸವೂ ಲೂಟಿ ಆಗುವ ಈ ಯೋಜನೆಗಳು ಜನದ್ರೋಹಿ ಯೋಜನೆಗಳೆಂಬುದಕ್ಕೆ ಸ್ವಲ್ಪವೂ ಸಂಶಯ ಬೇಡ. ಅದಲ್ಲ ಎಂದಾದರೆ, ಕರಾವಳಿಯಲ್ಲಿ ಈಗಾಗಲೇ ಆಗಿರುವ ಎಲ್ಲ ಕಾಮಗಾರಿಗಳ ಗುಣಮಟ್ಟ ತಪಾಸಣೆಗೆ ಆದೇಶ ಆಗಲಿ.

Tags: ಕಿರುನೀರಾವರಿ ಸಚಿವ
Previous Post

ಸೆ. 13 ರಿಂದ ಸೆ. 24 ವರೆಗೆ ವಿಧಾನಮಂಡಲ ಅಧಿವೇಶನ –ಜೆ ಸಿ ಮಾಧುಸ್ವಾಮಿ

Next Post

ತಮಿಳುನಾಡು: ಸರಕಾರ ಪೆಟ್ರೋಲ್ ಬೆಲೆಯಲ್ಲಿ ರೂ- 3 ಇಳಿಸುತ್ತೇವೆ ಎಂದಿದ್ದು ಮಾತ್ರ.ಇನ್ನೂ ಇಳಿಸಿಲ್ಲ–ಬಿಜೆಪಿ ನಾಯಕ ಮುರುಗನ್‌

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
Next Post

ತಮಿಳುನಾಡು: ಸರಕಾರ ಪೆಟ್ರೋಲ್ ಬೆಲೆಯಲ್ಲಿ ರೂ- 3 ಇಳಿಸುತ್ತೇವೆ ಎಂದಿದ್ದು ಮಾತ್ರ.ಇನ್ನೂ ಇಳಿಸಿಲ್ಲ–ಬಿಜೆಪಿ ನಾಯಕ ಮುರುಗನ್‌

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada